AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದಲ್ಲಿ ಅಪರೂಪದ ಅಮೆರಿಕನ್ ಬಾರ್ನ್​ ಗೂಬೆಯ ರಕ್ಷಣೆ

ಬಿಹಾರದ ಸಪೌಲ್​ನ ಗ್ರಾಮವೊಂದರಲ್ಲಿ ಅಪರೂಪದ ಅಮೆರಿಕನ್ ಬಾರ್ನ್​ ಗೂಬೆಯನ್ನು ರಕ್ಷಿಸಲಾಗಿದೆ. ಕಾಗೆಗಳ ಗುಂಪು ಈ ಪಕ್ಷಿಯ ಮೇಲೆ ದಾಳಿ ನಡೆಸುತ್ತಿದ್ದ ವೇಳೆ ಸಪೌಲ್​ ಬಳಿಯ ದಪರಾಖಾ ಎನ್ನುವ ಗ್ರಾಮದ ಗ್ರಾಮಸ್ಥರು ಪಕ್ಷಿಯನ್ನು ರಕ್ಷಿಸಿದ್ದಾರೆ. 

ಬಿಹಾರದಲ್ಲಿ ಅಪರೂಪದ ಅಮೆರಿಕನ್ ಬಾರ್ನ್​ ಗೂಬೆಯ ರಕ್ಷಣೆ
ಅಮೆರಿಕನ್ ಬಾರ್ನ್ ಗೂಬೆ
TV9 Web
| Edited By: |

Updated on:Dec 16, 2021 | 4:36 PM

Share

ಬಿಹಾರ: ಬಿಹಾರದ ಸಪೌಲ್​ನ ಗ್ರಾಮವೊಂದರಲ್ಲಿ ಅಪರೂಪದ ಅಮೆರಿಕನ್ ಬಾರ್ನ್​ ಗೂಬೆಯನ್ನು (American barn owl) ರಕ್ಷಿಸಲಾಗಿದೆ. ಕಾಗೆಗಳ ಗುಂಪು ಈ ಪಕ್ಷಿಯ ಮೇಲೆ ದಾಳಿ ನಡೆಸುತ್ತಿದ್ದ ವೇಳೆ ಸಪೌಲ್​ ಬಳಿಯ ದಪರಾಖಾ ಎನ್ನುವ ಗ್ರಾಮದ ಗ್ರಾಮಸ್ಥರು ಪಕ್ಷಿಯನ್ನು ರಕ್ಷಿಸಿದ್ದಾರೆತ್ರಿವೇಣಿ ಗಂಜ್​ ಪೊಲೀಸ್​ ಠಾಣೆಯಲ್ಲಿ ಈ ಅಪರೂಪದ ಗೂಬೆ ಕಾಣಿಸಿಕೊಂಡಿದೆ. ದಪರಾಖಾ ಗ್ರಾಮದ ರಾಹುಲ್​ ಎನ್ನುವವರು ಮನೆಯಿಂದ ಹೊರಗೆ ಹೋಗಿದ್ದಾಗ ಕಾಗೆಗಳ ಗುಂಪು ಗೂಬೆಯ ಮೇಲೆ ಅಟ್ಯಾಕ್ ಮಾಡಿದ್ದು, ಇದನ್ನು ಕಂಡು ರಾಹುಲ್ ಕಾಗೆಗಳಿಂದ ​ಗೂಬೆಯನ್ನು ರಕ್ಷಿಸಿ ತಮ್ಮ ಮನೆಗೆ ತಂದು ಸ್ಥಳೀಯ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದರು.

ಭಾರತದಲ್ಲಿ ಕಾಣಿಸಿಕೊಂಡ ಅಪರೂಪದ ಈ ಗೂಬೆಯ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಪುಣೆಯ ಹಿರಿಯ ವನ್ಯಜೀವಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕನ್ ಬಾರ್ನ್​ ಗೂಬೆ ಸಾಮಾನ್ಯವಾಗಿ ದಕ್ಷಿಣ ಮತ್ತು ಉತ್ತರ ಅಮೆರಿಕ ಭಾಗಗಳಲ್ಲಿ ಕಂಡುಬರುವ ಪಕ್ಷಿಯಾಗಿದೆ. ಇದರ ಕೆಲವು ಉಪಜಾತಿಗಳು ಇಂಗ್ಲೆಂಡ್​ ಮತ್ತು ಯುರೋಪ್​ನ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬರುತ್ತವೆ. ಹೀಗಾಗಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಅಚಾನಕ್ಕಾಗಿ ಸಿಕ್ಕಿದೆ. ಅಮೆರಿಕನ್ ಬಾರ್ನ್​ ಗೂಬೆಯ ಉದ್ದನೆಯ ರೆಕ್ಕೆ ಮತ್ತು ಅಗಲವಾದ ಮುಖ ವಿಶೇಷ ಆಕರ್ಷಣೆಯಾಗಿದೆ. ಈ ಪಕ್ಷಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆಯಿದೆ. ಹೀಗಾಗಿ ಇದೀಗ ಬಿಹಾರದಲ್ಲಿ ಸೆರೆಸಿಕ್ಕ ಪಕ್ಷಿಯ ರಕ್ಷಣೆ ಮಾಡಬೇಕಿದೆ.

ಕೆಲವು ದಿನಗಳ ಹಿಂದೆ 120 ವರ್ಷಗಳ ಬಳಿಕ ಮಾಂಡರಿಯನ್​ ಬಾತುಕೋಳಿ ಕಾಣಿಸಿಕೊಂಡಿತ್ತು. ತಿನ್ಸುಕಿಯಾ ಜಿಲ್ಲೆಯ ಪಕ್ಷಿಪ್ರೇಮಿ ಮಾದಬ್​ ಗೋಗಯ್​ ಅವರು ಈ ಬಾತುಕೋಳಿಯನ್ನು ಗುರುತಿಸಿದ್ದರು. ಮಾಂಡರಿಯನ್​ ಬಾತುಕೋಳಿ ಜಗತ್ತಿನ ಅತ್ಯಂತ ಸುಂದರ ಬಾತುಕೋಳಿ ಅಗಿದೆ.

ಇದನ್ನೂ ಓದಿ:

Aadhar- Voter ID Link: ಸ್ವತಃ ನೀವೇ ಆಧಾರ್ ಮತ್ತು ವೋಟರ್​ ಐಡಿಯನ್ನು ಲಿಂಕ್ ಮಾಡಬಹುದು; ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ

Metro Man Sreedharan ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಿದ ಕೇರಳದ ಮೆಟ್ರೊಮ್ಯಾನ್ ಇ ಶ್ರೀಧರನ್

Published On - 4:34 pm, Thu, 16 December 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ