AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದಲ್ಲಿ ಅಪರೂಪದ ಅಮೆರಿಕನ್ ಬಾರ್ನ್​ ಗೂಬೆಯ ರಕ್ಷಣೆ

ಬಿಹಾರದ ಸಪೌಲ್​ನ ಗ್ರಾಮವೊಂದರಲ್ಲಿ ಅಪರೂಪದ ಅಮೆರಿಕನ್ ಬಾರ್ನ್​ ಗೂಬೆಯನ್ನು ರಕ್ಷಿಸಲಾಗಿದೆ. ಕಾಗೆಗಳ ಗುಂಪು ಈ ಪಕ್ಷಿಯ ಮೇಲೆ ದಾಳಿ ನಡೆಸುತ್ತಿದ್ದ ವೇಳೆ ಸಪೌಲ್​ ಬಳಿಯ ದಪರಾಖಾ ಎನ್ನುವ ಗ್ರಾಮದ ಗ್ರಾಮಸ್ಥರು ಪಕ್ಷಿಯನ್ನು ರಕ್ಷಿಸಿದ್ದಾರೆ. 

ಬಿಹಾರದಲ್ಲಿ ಅಪರೂಪದ ಅಮೆರಿಕನ್ ಬಾರ್ನ್​ ಗೂಬೆಯ ರಕ್ಷಣೆ
ಅಮೆರಿಕನ್ ಬಾರ್ನ್ ಗೂಬೆ
TV9 Web
| Edited By: |

Updated on:Dec 16, 2021 | 4:36 PM

Share

ಬಿಹಾರ: ಬಿಹಾರದ ಸಪೌಲ್​ನ ಗ್ರಾಮವೊಂದರಲ್ಲಿ ಅಪರೂಪದ ಅಮೆರಿಕನ್ ಬಾರ್ನ್​ ಗೂಬೆಯನ್ನು (American barn owl) ರಕ್ಷಿಸಲಾಗಿದೆ. ಕಾಗೆಗಳ ಗುಂಪು ಈ ಪಕ್ಷಿಯ ಮೇಲೆ ದಾಳಿ ನಡೆಸುತ್ತಿದ್ದ ವೇಳೆ ಸಪೌಲ್​ ಬಳಿಯ ದಪರಾಖಾ ಎನ್ನುವ ಗ್ರಾಮದ ಗ್ರಾಮಸ್ಥರು ಪಕ್ಷಿಯನ್ನು ರಕ್ಷಿಸಿದ್ದಾರೆತ್ರಿವೇಣಿ ಗಂಜ್​ ಪೊಲೀಸ್​ ಠಾಣೆಯಲ್ಲಿ ಈ ಅಪರೂಪದ ಗೂಬೆ ಕಾಣಿಸಿಕೊಂಡಿದೆ. ದಪರಾಖಾ ಗ್ರಾಮದ ರಾಹುಲ್​ ಎನ್ನುವವರು ಮನೆಯಿಂದ ಹೊರಗೆ ಹೋಗಿದ್ದಾಗ ಕಾಗೆಗಳ ಗುಂಪು ಗೂಬೆಯ ಮೇಲೆ ಅಟ್ಯಾಕ್ ಮಾಡಿದ್ದು, ಇದನ್ನು ಕಂಡು ರಾಹುಲ್ ಕಾಗೆಗಳಿಂದ ​ಗೂಬೆಯನ್ನು ರಕ್ಷಿಸಿ ತಮ್ಮ ಮನೆಗೆ ತಂದು ಸ್ಥಳೀಯ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದರು.

ಭಾರತದಲ್ಲಿ ಕಾಣಿಸಿಕೊಂಡ ಅಪರೂಪದ ಈ ಗೂಬೆಯ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಪುಣೆಯ ಹಿರಿಯ ವನ್ಯಜೀವಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕನ್ ಬಾರ್ನ್​ ಗೂಬೆ ಸಾಮಾನ್ಯವಾಗಿ ದಕ್ಷಿಣ ಮತ್ತು ಉತ್ತರ ಅಮೆರಿಕ ಭಾಗಗಳಲ್ಲಿ ಕಂಡುಬರುವ ಪಕ್ಷಿಯಾಗಿದೆ. ಇದರ ಕೆಲವು ಉಪಜಾತಿಗಳು ಇಂಗ್ಲೆಂಡ್​ ಮತ್ತು ಯುರೋಪ್​ನ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬರುತ್ತವೆ. ಹೀಗಾಗಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಅಚಾನಕ್ಕಾಗಿ ಸಿಕ್ಕಿದೆ. ಅಮೆರಿಕನ್ ಬಾರ್ನ್​ ಗೂಬೆಯ ಉದ್ದನೆಯ ರೆಕ್ಕೆ ಮತ್ತು ಅಗಲವಾದ ಮುಖ ವಿಶೇಷ ಆಕರ್ಷಣೆಯಾಗಿದೆ. ಈ ಪಕ್ಷಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆಯಿದೆ. ಹೀಗಾಗಿ ಇದೀಗ ಬಿಹಾರದಲ್ಲಿ ಸೆರೆಸಿಕ್ಕ ಪಕ್ಷಿಯ ರಕ್ಷಣೆ ಮಾಡಬೇಕಿದೆ.

ಕೆಲವು ದಿನಗಳ ಹಿಂದೆ 120 ವರ್ಷಗಳ ಬಳಿಕ ಮಾಂಡರಿಯನ್​ ಬಾತುಕೋಳಿ ಕಾಣಿಸಿಕೊಂಡಿತ್ತು. ತಿನ್ಸುಕಿಯಾ ಜಿಲ್ಲೆಯ ಪಕ್ಷಿಪ್ರೇಮಿ ಮಾದಬ್​ ಗೋಗಯ್​ ಅವರು ಈ ಬಾತುಕೋಳಿಯನ್ನು ಗುರುತಿಸಿದ್ದರು. ಮಾಂಡರಿಯನ್​ ಬಾತುಕೋಳಿ ಜಗತ್ತಿನ ಅತ್ಯಂತ ಸುಂದರ ಬಾತುಕೋಳಿ ಅಗಿದೆ.

ಇದನ್ನೂ ಓದಿ:

Aadhar- Voter ID Link: ಸ್ವತಃ ನೀವೇ ಆಧಾರ್ ಮತ್ತು ವೋಟರ್​ ಐಡಿಯನ್ನು ಲಿಂಕ್ ಮಾಡಬಹುದು; ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ

Metro Man Sreedharan ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಿದ ಕೇರಳದ ಮೆಟ್ರೊಮ್ಯಾನ್ ಇ ಶ್ರೀಧರನ್

Published On - 4:34 pm, Thu, 16 December 21

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್