Ratan Tata: ಪೋಷಕರ ವಿಚ್ಛೇದನ, ತಂದೆಯೊಂದಿಗೆ ಭಿನ್ನಾಭಿಪ್ರಾಯ, ಅಂದು ರತನ್ ಪಾಲಿಗೆ ಇದ್ದಿದ್ದು ಅಜ್ಜಿಯೊಬ್ಬರೇ

ಹಿರಿಯ ಉದ್ಯಮಿ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ಅವರ ವೈಯಕ್ತಿಕ ಬದುಕು, ಅನುಭವಿಸಿದ ಕಷ್ಟಗಳ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ, ಸಾಮಾನ್ಯವಾಗಿ ಪ್ರಸಿದ್ಧ ವ್ಯಕ್ತಿಗಳು ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕಗೊಳಿಸುವುದಿಲ್ಲ ಆದರೆ ರತನ್ ಹಾಗಿರಲಿಲ್ಲ. ಒಮ್ಮೆ ರತನ್ ಟಾಟಾ ತಮ್ಮ ವೈಯಕ್ತಿಕ ಜೀವನದ ಕುತೂಹಲಕಾರಿ ವಿವರಗಳನ್ನು ಬಹಿರಂಗಪಡಿಸಿದ್ದರು.

Ratan Tata: ಪೋಷಕರ ವಿಚ್ಛೇದನ, ತಂದೆಯೊಂದಿಗೆ ಭಿನ್ನಾಭಿಪ್ರಾಯ, ಅಂದು ರತನ್ ಪಾಲಿಗೆ ಇದ್ದಿದ್ದು ಅಜ್ಜಿಯೊಬ್ಬರೇ
ರತನ್ ಟಾಟಾImage Credit source: Getty Images
Follow us
|

Updated on:Oct 10, 2024 | 8:52 AM

ಹಿರಿಯ ಉದ್ಯಮಿ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ಅವರ ವೈಯಕ್ತಿಕ ಬದುಕು, ಅನುಭವಿಸಿದ ಕಷ್ಟಗಳ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ, ಸಾಮಾನ್ಯವಾಗಿ ಪ್ರಸಿದ್ಧ ವ್ಯಕ್ತಿಗಳು ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕಗೊಳಿಸುವುದಿಲ್ಲ ಆದರೆ ರತನ್ ಹಾಗಿರಲಿಲ್ಲ. ಒಮ್ಮೆ ರತನ್ ಟಾಟಾ ತಮ್ಮ ವೈಯಕ್ತಿಕ ಜೀವನದ ಕುತೂಹಲಕಾರಿ ವಿವರಗಳನ್ನು ಬಹಿರಂಗಪಡಿಸಿದ್ದರು.

ಅವರು ಹ್ಯೂಮನ್ಸ್​ ಆಫ್ ಬಾಂಬೆಗೆ ನೀಡಿದ ಸಂವಾದದಲ್ಲಿ ತಮ್ಮ ಪೋಷಕರ ವಿಚ್ಛೇದನವು ತಮ್ಮ ಹಾಗೂ ಸಹೋದರನ ಮೇಲೆ ಯಾವ ರೀತಿ ಪರಿಣಾಮ ಬೀರಿತ್ತು ಎಂಬುದನ್ನು ಹೇಳಿದ್ದರು. ರತನ್ ಟಾಟಾ ತಂದೆಯೊಂದಿಗೆ ಏಕೆ ಭಿನ್ನಾಭಿಪ್ರಾಯ ಹೊಂದಿದ್ದರು, ತಮ್ಮ ಜೀವನದುದ್ದಕ್ಕೂ ಅಜ್ಜಿಯ ಆಸ್ರಯದಲ್ಲೇ ಬೆಳೆದಿದ್ದೇಕೆ ಎಂಬುದರ ಬಗ್ಗೆ ಮಾತನಾಡಿದ್ದರು.

ರತನ್ ಟಾಟಾ ಬಾಲ್ಯ ಹೇಗಿತ್ತು? ತಮ್ಮ ಬಾಲ್ಯವನ್ನು ಸಂತೋಷದಿಂದ ಕಳೆದಿದ್ದೇನೆ, ಆದರೆ ದೊಡ್ಡವರಾಗುತ್ತಿದ್ದಂತೆ ಪೋಷಕರ ವಿಚ್ಛೇದನದಿಂದಾಗಿ ಅವರು ಹಾಗೂ ಅವರ ಸಹೋದರ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಯಿತು, ಅಂದಿನ ಕಾಲದಲ್ಲಿ ವಿಚ್ಛೇದನ ಇಷ್ಟು ಸಾಮಾನ್ಯವಾಗಿರಲಿಲ್ಲ ಎಂದು ಹೇಳಿದ್ದರು.

ರತನ್ ಟಾಟಾ ಅವರನ್ನು ಅವರ ಅಜ್ಜಿ ಎಲ್ಲಾ ರೀತಿಯಲ್ಲೂ ಬೆಂಬಲಿಸಿದ್ದರು, ಯಾವ ಬೆಲೆ ತೆತ್ತಾದರೂ ಆತ್ಮಗೌರವ ಕಾಪಾಡಬೇಕು ಎಂಬುದನ್ನು ಅಜ್ಜಿ ಕಲಿಸಿಕೊಟ್ಟಿದ್ದಾಗಿ ಹೇಳಿದ್ದರು.

ಶಾಲೆಯಲ್ಲಿ ಮಕ್ಕಳು ಕಿರುಕುಳ ನೀಡುತ್ತಿದ್ದರು ತನ್ನ ತಾಯಿ ಎರಡನೇ ಮದುವೆಯಾದ ಬಳಿಕ ಇದೇ ವಿಚಾರವಿಟ್ಟುಕೊಂಡು ಶಾಲೆಯಲ್ಲಿ ಸಹಪಾಠಿಗಳು ಕಿರುಕುಳ ಕೊಡುತ್ತಿದ್ದರು, ನಾವು ಹೇಗಾದರೂ ಆ ಪರಿಸ್ಥಿತಿಯಿಂದ ಹೊರಬರಬೇಕೆಂದು ಬಯಸಿದ್ದೆವು, ಆದರೆ, ನಾವು ಆ ಸಂದರ್ಭಗಳನ್ನು ಮೆಟ್ಟಿ ನಿಂತಿದ್ದೆವು ಎಂದಿದ್ದರು.

ಮತ್ತಷ್ಟು ಓದಿ: Ratan Tata: ಸಾಕು ನಾಯಿಗೋಸ್ಕರ ಬ್ರಿಟನ್ ರಾಜಮನೆತನದ ಪ್ರತಿಷ್ಠಿತ ಪ್ರಶಸ್ತಿ ತಿರಸ್ಕರಿಸಿದ್ದ ರತನ್ ಟಾಟಾ

ಎರಡನೇ ಮಹಾಯುದ್ಧದ ನಂತರ ಅವಳು ನನ್ನನ್ನು ಮತ್ತು ನನ್ನ ಸಹೋದರನನ್ನು ಬೇಸಿಗೆ ರಜೆಗೆ ಲಂಡನ್‌ಗೆ ಕರೆದೊಯ್ದಿದ್ದಳು, ಅಲ್ಲಿ ನಮ್ಮ ಸ್ವಾಭಿಮಾನಕ್ಕೆ ಮತ್ತಷ್ಟು ಘಾಸಿಯುಂಟಾಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದರು.

ರತನ್ ಟಾಟಾ ಅವರ ತಂದೆಯೊಂದಿಗೆ ಭಿನ್ನಾಭಿಪ್ರಾಯಗಳು ರತನ್ ಟಾಟಾ ಕೂಡ ತಮ್ಮ ತಂದೆಯೊಂದಿಗಿನ ಭಿನ್ನಾಭಿಪ್ರಾಯದ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ, ನಾನು ಪಿಟೀಲು ನುಡಿಸುವುದನ್ನು ಕಲಿಯಲು ಬಯಸಿದ್ದೆ, ಆದರೆ ನನ್ನ ತಂದೆ ನನಗೆ ಪಿಯಾನೋ ಕಲಿಯಲು ಹೇಳಿದ್ದರು. ನಾನು ಅಮೆರಿಕಾದಲ್ಲಿ ಕಾಲೇಜಿಗೆ ಹೋಗಲು ಬಯಸಿದ್ದೆ, ಆದರೆ ಅವರು ನನ್ನನ್ನು ಯುಕೆಗೆ ಹೋಗುವಂತೆ ಒತ್ತಾಯಿಸಿದರು. ನಾನು ವಾಸ್ತುಶಿಲ್ಪಿಯಾಗಬೇಕೆಂದು ಬಯಸಿದ್ದೆ, ಆದರೆ ಅವರು ನನ್ನನ್ನು ಎಂಜಿನಿಯರ್ ಆಗುವಂತೆ ಒತ್ತಾಯಿಸಿದರು.

ಅಜ್ಜಿಯ ಒತ್ತಾಸೆಯಿಂದಾಗಿ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಸಿಕ್ಕಿತು ಎಂದು ಸ್ಮರಿಸಿದರು. ಇದು ತನ್ನ ಅಜ್ಜಿಯ ಬೆಂಬಲ ಎಂದು ಟಾಟಾ ಹೇಳಿದರು, ಇದರಿಂದಾಗಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ಗೆ ಪ್ರವೇಶ ಪಡೆದರೂ, ಅವರು ತಮ್ಮ ಕೋರ್ಸ್ ಅನ್ನು ಆರ್ಕಿಟೆಕ್ಚರ್‌ಗೆ ಬದಲಾಯಿಸಿದರು.

ಕಾಲೇಜು ಮುಗಿಸಿದ ನಂತರ ರತನ್ ಟಾಟಾ ಲಾಸ್ ಏಂಜಲೀಸ್ ನ ಆರ್ಕಿಟೆಕ್ಚರ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡರು. ಇಲ್ಲಿ ಅವರು ಎರಡು ವರ್ಷಗಳ ಕಾಲ ಕೆಲಸ ಮಾಡಿದರು. ಈ ನಗರದಲ್ಲಿಯೇ ಹುಡುಗಿಯೊಬ್ಬಳನ್ನು ಅವರು ಪ್ರೀತಿಸುತ್ತಿದ್ದರು. ಆದರೆ 1962 ರ ಭಾರತ-ಚೀನಾ ಯುದ್ಧದ ಕಾರಣ, ಆಕೆಯ ಕುಟುಂಬವು ಅವಳನ್ನು ಭಾರತಕ್ಕೆ ಕಳುಹಿಸಲು ಬಯಸಲಿಲ್ಲ ಮತ್ತು ಇಲ್ಲಿಯೇ ಸಂಬಂಧ ಕೊನೆಗೊಂಡಿತ್ತು ಎಂದು ಭಾವುಕರಾಗಿ ಹೇಳಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:26 am, Thu, 10 October 24

Navaratri 2024: ನವರಾತ್ರಿ 8ನೇ ದಿನ ಪೂಜಿಸಲಾಗುವ ಮಹಾಗೌರಿ ಮಹತ್ವವೇನು?
Navaratri 2024: ನವರಾತ್ರಿ 8ನೇ ದಿನ ಪೂಜಿಸಲಾಗುವ ಮಹಾಗೌರಿ ಮಹತ್ವವೇನು?
ಈ ರಾಶಿಯವರಿಗೆ ಮರೆವಿನ ಕಾರಣಕ್ಕೆ ಉದ್ಯೋಗದಲ್ಲಿ ಹಿನ್ನಡೆಯೆನಿಸುವುದು
ಈ ರಾಶಿಯವರಿಗೆ ಮರೆವಿನ ಕಾರಣಕ್ಕೆ ಉದ್ಯೋಗದಲ್ಲಿ ಹಿನ್ನಡೆಯೆನಿಸುವುದು
ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದ ಭಾರತೀಯರು: ಇಲ್ಲಿದೆ ನೋಡಿ ಹೈಲೈಟ್ಸ್
ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದ ಭಾರತೀಯರು: ಇಲ್ಲಿದೆ ನೋಡಿ ಹೈಲೈಟ್ಸ್
ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ
ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ
ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್