AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಬಿಐ ಘೋಷಣೆ: ಮಾರ್ಚ್​ ನಂತರ ನಡೆಯಲ್ಲ 100, 10 ಮತ್ತು 5 ರೂಪಾಯಿಯ ಹಳೆಯ ನೋಟು!

ನೋಟು ಅಮಾನ್ಯೀಕರಣದ ಅನುಭವದ ಹಿನ್ನೆಲೆಯಲ್ಲಿ ಈಗ ರಿಸರ್ವ ಬ್ಯಾಂಕ್​ ಹಳೆಯ ಪದ್ಧತಿ ಅನುಕರಿಸಲು ಮುಂದೆ ಬಂದಿದೆ. ಆ ಪ್ರಕಾರ 100, 10 ಹಾಗೂ 5 ರೂಪಾಯಿ ಮುಖ ಬೆಲೆಯ ನೋಟುಗಳ ಬದಲಾವಣೆಗೆ ಮಾರ್ಚ ಕೊನೆವರೆಗೆ ಅವಕಾಶವಿದೆ.

ಆರ್​ಬಿಐ ಘೋಷಣೆ: ಮಾರ್ಚ್​ ನಂತರ ನಡೆಯಲ್ಲ 100, 10 ಮತ್ತು 5 ರೂಪಾಯಿಯ ಹಳೆಯ ನೋಟು!
ಪ್ರಾತಿನಿಧಿಕ ಚಿತ್ರ
ಡಾ. ಭಾಸ್ಕರ ಹೆಗಡೆ
| Updated By: ರಾಜೇಶ್ ದುಗ್ಗುಮನೆ|

Updated on:Jan 23, 2021 | 6:56 PM

Share

ರಿಸರ್ವ ಬ್ಯಾಂಕ್​ (Reserve Bank of India) ಒಂದು ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದೆ. ಅದರ ಪ್ರಕಾರ 100, 10 ಮತ್ತು 5 ರೂಪಾಯಿ ಮುಖ ಬೆಲೆಯ ಹಳೆಯ ನೋಟುಗಳು ಮಾರ್ಚ ಮತ್ತು ಏಪ್ರಿಲ್​ ನಂತರ, ಚಲಾವಣೆಯಿಂದ ಹೊರಹೋಗಲಿವೆ.  ಹೀಗಾಗಿ, ಹಳೇ ನೋಟುಗಳನ್ನು ಈಗಲೇ ಬದಲಾಯಿಸಿಕೊಳ್ಳಲು ಆರ್​ಬಿಐ ಸೂಚಿಸಿದೆ.  ಆರ್​ಬಿಐ ನ ಪ್ರಧಾನ ವ್ಯವಸ್ಥಾಪಕ (General Manager), ಬಿ. ಮಹೇಶ್ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಆರ್​ಬಿಐ ಈ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಯೋಜನೆಯನ್ನು ಜಾರಿಗೊಳಿಸುವಲ್ಲಿ ಕಾರ್ಯಪ್ರವೃತ್ತವಾಗಿದೆ.

ಆರ್​ಬಿಐ ಅಂದುಕೊಳ್ಳುವಂತೆ ಎಲ್ಲವೂ ನಡೆದಲ್ಲಿ, 100, 10 ಮತ್ತು 5 ರೂ. ಹಳೇ ನೋಟುಗಳನ್ನು ಬ್ಯಾಂಕುಗಳಿಗೆ ಹಿಂತಿರುಗಿಸಲು ಮಾರ್ಚ ತನಕ ಅವಕಾಶವಿದೆ. ಜನ ತಮ್ಮ ಬಳಿ ಇರುವ ಹಳೇ ನೋಟುಗಳನ್ನು ಆದಷ್ಟು ಬೇಗ ಬ್ಯಾಂಕ್​​ಗಳಿಗೆ ಸಲ್ಲಿಸಿ ಹೊಸ ನೋಟುಗಳನ್ನು ತೆಗೆದುಕೊಳ್ಳಬಹುದಾಗಿದೆ. 2019 ರಲ್ಲಿ ಹೊಸ ರೂಪದ ರೂ. 100ರ ನೋಟುಗಳು ಈಗಾಗಲೇ ಜಾರಿಗೆ ಬಂದಿವೆ. ಅಂದರೆ, ಹೊಸ ವಿನ್ಯಾಸದಲ್ಲಿ ಚಲಾವಣೆಗೆ ಬಂದಿರುವ 100 ರೂಪಾಯಿಯ ನೋಟುಗಳು ಇನ್ನು ಚಲಾವಣೆಯಲ್ಲಿರುತ್ತವೆ.

2016ರ ನವೆಂಬರ್​ 8ರಂದು  500 ರೂ ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದಾಗ ಅಲ್ಲೋಲ ಕಲ್ಲೋಲವಾಗಿತ್ತು. ಜನ ಬ್ಯಾಂಕ್​ಗಳ ಮುಂದೆ ಸಾಲಿನಲ್ಲಿ ನಿಂತು ಹಳೇ ನೋಟುಗಳ ಬದಲಾವಣೆಗೆ ಬೆವರಿಳಿಸಿಕೊಂಡಿದ್ದರು. ಎಷ್ಟೋ ಜನ ಹಳೇ ನೋಟು ಬದಲಾವಣೆ ಮಾಡಲಾಗದೇ, ಹಣ ಕಳೆದುಕೊಂಡವರಿದ್ದಾರೆ. ಆ ಅನುಭವದ ಹಿನ್ನೆಲೆಯಲ್ಲಿ, ಈ ಬಾರಿ ನೋಟು ಅಮಾನ್ಯೀಕರಣದ ನಿರ್ಣಯಯವನ್ನು ಆರ್​ಬಿಐ ತೆಗೆದುಕೊಂಡಿಲ್ಲ. ಅದಕ್ಕೆ ಬದಲಾಗಿ, ಹಳೇ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಿದೆ.

10 ರೂ ನ ನಾಣ್ಯಗಳು ಮಾರುಕಟ್ಟೆಗೆ ಬಂದು ವರ್ಷಗಳೇ ಕಳೆದರೂ, ಸಣ್ಣ ವ್ಯಾಪಾರಿಗಳು ಅದನ್ನು ತೆಗೆದುಕೊಳ್ಳುತ್ತಿಲ್ಲ. ಇದು ಆರ್​ಬಿಐಗೆ ತಲೆನೋವಾಗಿ ಪರಿಣಮಿಸಿದೆ.

ನಕಲಿ ನೋಟು ಜಾಲ ಪತ್ತೆ : ಮೂವರು ಆರೋಪಿಗಳ ಬಂಧನ

Published On - 4:25 pm, Sat, 23 January 21

ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್
ಯಾವ ನೈತಿಕತೆಯೊಂದಿಗೆ ಯತ್ನಾಳ್ ಮಾತಾಡುತ್ತಾರೆ? ಶಿವರಾಜ್ ತಂಗಡಿಗಿ
ಯಾವ ನೈತಿಕತೆಯೊಂದಿಗೆ ಯತ್ನಾಳ್ ಮಾತಾಡುತ್ತಾರೆ? ಶಿವರಾಜ್ ತಂಗಡಿಗಿ
ಷರಿಯತ್ ಮತ್ತು ತರೀಖತ್ ಬಗ್ಗೆ ಪ್ರಶ್ನೆ ಎತ್ತಿದ್ದಕ್ಕೆ ದೂರು: ಇಶ್ರತ್
ಷರಿಯತ್ ಮತ್ತು ತರೀಖತ್ ಬಗ್ಗೆ ಪ್ರಶ್ನೆ ಎತ್ತಿದ್ದಕ್ಕೆ ದೂರು: ಇಶ್ರತ್
ದೇಶದ್ರೋಹ ಆರೋಪ: ಮುಸ್ಲಿಂ ಮಹಿಳೆ ವಿರುದ್ಧ ಮುಸ್ಲಿಂ ಮುಖಂಡರಿಂದಲೇ ದೂರು
ದೇಶದ್ರೋಹ ಆರೋಪ: ಮುಸ್ಲಿಂ ಮಹಿಳೆ ವಿರುದ್ಧ ಮುಸ್ಲಿಂ ಮುಖಂಡರಿಂದಲೇ ದೂರು
VIDEO: ದುಬೈನಲ್ಲಿ ‘ಸು ಫ್ರಮ್ ಸೋ’ ತಂಡಕ್ಕೆ ಹೇಗಿತ್ತು ನೋಡಿ ಸ್ವಾಗತ
VIDEO: ದುಬೈನಲ್ಲಿ ‘ಸು ಫ್ರಮ್ ಸೋ’ ತಂಡಕ್ಕೆ ಹೇಗಿತ್ತು ನೋಡಿ ಸ್ವಾಗತ
ವಿಧಾನಸಭೆಯಲ್ಲಿ ಆರ್​ಎಸ್​ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆಯಾಚಿಸಿದ ಡಿಕೆಶಿ
ವಿಧಾನಸಭೆಯಲ್ಲಿ ಆರ್​ಎಸ್​ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆಯಾಚಿಸಿದ ಡಿಕೆಶಿ
ಚಿನ್ನಯ್ಯ ಕೆಲದಿನಗಳ ಕಾಲ ತಿಮರೋಡಿ ಮನೆಯಲ್ಲಿ ಆಶ್ರಯ ಪಡೆದಿದ್ದ
ಚಿನ್ನಯ್ಯ ಕೆಲದಿನಗಳ ಕಾಲ ತಿಮರೋಡಿ ಮನೆಯಲ್ಲಿ ಆಶ್ರಯ ಪಡೆದಿದ್ದ