AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರಾದ್ಯಂತ ಇಂದಿನಿಂದ ರೆಸಿಡೆಂಟ್​ ವೈದ್ಯರ ಮುಷ್ಕರ; ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾದರೆ ನಾವು ಹೊಣೆಯಲ್ಲ ಎಂದ ಡಾಕ್ಟರ್ಸ್​

ರೆಸಿಡೆಂಟ್​ ವೈದ್ಯರು, ನೀಟ್​ ಪಿಜಿ ಕೌನ್ಸೆಲಿಂಗ್​ ಮತ್ತು ಪ್ರವೇಶಾತಿಯಲ್ಲಿ ಆಗುತ್ತಿರುವ ವಿಳಂಬವನ್ನು ವಿರೋಧಿಸಿ ಮುಷ್ಕರ ಶುರು ಮಾಡಿಕೊಂಡಿದ್ದಾರೆ. ನೀಟ್​ ಪಿಜಿ ಸ್ನಾತಕೋತ್ತರ ಮಟ್ಟದ ಪರೀಕ್ಷೆಯಾಗಿದ್ದು, ವೈದ್ಯರು ಸ್ನಾತಕೋತ್ತರ ಶಿಕ್ಷಣ ಮಾಡಲು ಈ ಪರೀಕ್ಷೆ ಬರೆಯಬೇಕು.

ರಾಷ್ಟ್ರಾದ್ಯಂತ ಇಂದಿನಿಂದ ರೆಸಿಡೆಂಟ್​ ವೈದ್ಯರ ಮುಷ್ಕರ; ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾದರೆ ನಾವು ಹೊಣೆಯಲ್ಲ ಎಂದ ಡಾಕ್ಟರ್ಸ್​
ದೆಹಲಿಯಲ್ಲಿ ರೆಸಿಡೆಂಟ್​ ವೈದ್ಯರ ಮುಷ್ಕರ (ಫೋಟೋ-ಎಎನ್​ಐ)
Follow us
TV9 Web
| Updated By: Lakshmi Hegde

Updated on:Nov 27, 2021 | 3:45 PM

ಇಂದಿನಿಂದ ರಾಷ್ಟ್ರವ್ಯಾಪಿ ರೆಸಿಡೆಂಟ್​ ವೈದ್ಯರುಗಳ ಮುಷ್ಕರ ಪ್ರಾರಂಭವಾಗಿದ್ದು, ಹೊರರೋಗಿಗಳ ಸೇವೆ(OPD)ಯಿಂದ ಹಿಂದೆ ಸರಿಯಲು ಅವರು ನಿರ್ಧಾರ ಮಾಡಿದ್ದಾರೆ.  ಇಂದಿನಿಂದ ಮುಷ್ಕರ ಶುರು ಮಾಡಲು ಕರೆ ನೀಡಿರುವ  ರೆಸಿಡೆಂಟ್​ ಡಾಕ್ಟರ್ಸ್ ಅಸೋಸಿಯೇಶನ್​  ಇಂಡಿಯಾ, ನಮ್ಮ ಮುಷ್ಕರಿಂದ ಆರೋಗ್ಯ ಸೇವೆಯಲ್ಲಿ ಉಂಟಾಗುವ ತೊಡಕು, ವ್ಯತ್ಯಯಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಎಂದು ಹೇಳಿದ್ದಾರೆ. 

ಅಂದಹಾಗೆ ರೆಸಿಡೆಂಟ್​ ವೈದ್ಯರು, ನೀಟ್​ ಪಿಜಿ ಕೌನ್ಸೆಲಿಂಗ್​ ಮತ್ತು ಪ್ರವೇಶಾತಿಯಲ್ಲಿ ಆಗುತ್ತಿರುವ ವಿಳಂಬವನ್ನು ವಿರೋಧಿಸಿ ಮುಷ್ಕರ ಶುರು ಮಾಡಿಕೊಂಡಿದ್ದಾರೆ. ನೀಟ್​ ಪಿಜಿ ಸ್ನಾತಕೋತ್ತರ ಮಟ್ಟದ ಪರೀಕ್ಷೆಯಾಗಿದ್ದು, ವೈದ್ಯರು ಸ್ನಾತಕೋತ್ತರ ಶಿಕ್ಷಣ ಮಾಡಲು ಈ ಪರೀಕ್ಷೆ ಬರೆಯಬೇಕು. ಈಗ ರೆಸಿಡೆಂಟ್ ವೈದ್ಯರು ಪರೀಕ್ಷೆ ಬರೆದಿದ್ದರೂ ಕೌನ್ಸಲಿಂಗ್​ ವಿಳಂಬ ಮಾಡುತ್ತಿರುವ ಕಾರಣ ಅವರಿಗೆ ಪ್ರವೇಶಾತಿ ವಿಳಂಬವಾಗುತ್ತಿದೆ. ಈ ಕೌನ್ಸೆಲಿಂಗ್​ನ್ನು ಅಕ್ಟೋಬರ್ 25ರಿಂದ ನಡೆಸಲು ನಿಗದಿಪಡಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್​ ಆದೇಶದ ಮೇರೆಗೆ ನಡೆಯಲಿಲ್ಲ.

ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗ (EWS)ದ ಕ್ವೋಟಾ ಕುರಿತಾದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಇಡಬ್ಲ್ಯೂಎಸ್​ ವಿಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಶೇ.10 ಪರ್ಸಂಟ್​ ಸೀಟ್​ಗಳ ಮೀಸಲಾತಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ.  ಆದರೆ ಈ ಇವಿಎಸ್​ ವರ್ಗಕ್ಕೆ ಸೇರಿದವರು ಎಂದು ಗುರುತಿಸಲು ಕೇಂದ್ರ ಸರ್ಕಾರ ಹಾಕಿರುವ 8 ಲಕ್ಷ ರೂಪಾಯಿ ಆದಾಯದ ಮಿತಿಯ ಬಗ್ಗೆಯೂ ಸುಪ್ರೀಂಕೋರ್ಟ್ ಅನುಮಾನಿಸಿದೆ.  ಹಾಗಾಗಿ ಕೇಂದ್ರ ಸರ್ಕಾರ ಒಂದು ಕಮಿಟಿ ರಚಿಸಿ, ಇನ್ನು ನಾಲ್ಕು ವಾರಗಳಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಣಯ ನೀಡುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ.

ಇನ್ನು ನಾಲ್ಕು ವಾರ ಎಂದರೆ ಒಂದು ತಿಂಗಳಂತೂ ಬೇಕು. ಅಂದಮೇಲೆ ಜನವರಿಯವರೆಗೂ ನೀಟ್ ಪಿಜಿ ಕೌನ್ಸೆಲಿಂಗ್ ನಡೆಯುವುದಿಲ್ಲ. ಕೌನ್ಸೆಲಿಂಗ್ ಆಗದೆ ಪ್ರವೇಶಾತಿಯೂ ಸಿಗುವುದಿಲ್ಲ. ಇನ್ನು ಆರ್ಥಿಕ ದುರ್ಬಲ ವರ್ಗ ಎಂದು ಪರಿಗಣಿಸಲು ಸದ್ಯ ಇರುವ ಕುಟುಂಬ ಆದಾಯದ ಮಿತಿಯಲ್ಲಿ ಬದಲು ಮಾಡಿದರೆ ಒಂದೋ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಈ ಸೌಲಭ್ಯದಡಿ ಬರುತ್ತಾರೆ..ಇಲ್ಲವೇ ಇನ್ನೂ ಕಡಿಮೆ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರೆಯಲಿದೆ. ಕೇಂದ್ರ ಸರ್ಕಾರ ಆದಾಯದ ಮಿತಿಯನ್ನು ಹೆಚ್ಚಿಸುತ್ತದೆಯೋ..ಕಡಿಮೆ ಮಾಡುತ್ತದೆಯೋ ಎಂಬುದರ ಮೇಲೆ ಇದು ನಿರ್ಣಯವಾಗಲಿದೆ. ಇಷ್ಟೆಲ್ಲ ಗೊಂದಲ ಕಳೆದಂತೂ ಪ್ರವೇಶಾತಿ ಇರುವುದಿಲ್ಲ.

ಇದನ್ನೂ ಓದಿ: Oppo Reno 7 5G: ಒಪ್ಪೋ ರೆನೋ 7 ಸರಣಿ ಲಾಂಚ್: ಸದ್ಯದಲ್ಲೇ ಭಾರತದಲ್ಲೂ ರಿಲೀಸ್: ಇದರ ಫೀಚರ್ಸ್ ನೋಡಿ

Published On - 3:44 pm, Sat, 27 November 21

ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ