AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಕ್ಕು ಕೂಲಿಗಾಗಿ ಇಸ್ರೊ ಟ್ರಕ್ ತಡೆದರು: ಕೇರಳಕ್ಕೆ ಕಳಂಕ ತರುತ್ತಿರುವ ನೊಕ್ಕು ಕೂಲಿ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ

ಈ ಪದ್ಧತಿಯನ್ನು ಕೇರಳದಲ್ಲಿ ಈಗಾಗಲೇ ನಿಷೇಧಿಸಲಾಗಿದೆ. ಆದರೂ ಸರ್ಕಾರಿ ಸ್ವಾಮ್ಯದ ಪ್ರಭಾವಿ ಸಂಸ್ಥೆಯ ವಿರುದ್ಧವೇ ಇಂಥ ಬೆದರಿಕೆ ಒಡ್ಡಿರುವುದನ್ನು ಕೇರಳ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ನೋಕ್ಕು ಕೂಲಿಗಾಗಿ ಇಸ್ರೊ ಟ್ರಕ್ ತಡೆದರು: ಕೇರಳಕ್ಕೆ ಕಳಂಕ ತರುತ್ತಿರುವ ನೊಕ್ಕು ಕೂಲಿ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ
ಇಸ್ರೋ - ISRO (ಸಾಂದರ್ಭಿಕ ಚಿತ್ರ)
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Sep 06, 2021 | 9:59 AM

Share

ಕೊಚ್ಚಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (Indian Space Research Organisation – ISRO) ಸೇರಿದ್ದ ಟ್ರಕ್ ಒಂದನ್ನು ಸ್ಥಳೀಯರು ತಡೆದು, ಅದರಲ್ಲಿದ್ದ ಸರಕು ಇಳಿಸುವ ಮುನ್ನ ತಮಗೆ ‘ನೋಕ್ಕು ಕೂಲಿ’ (ನೋಡಿಕೊಂಡು ಸುಮ್ಮನಿರಲು ಕೂಲಿ) ಕೊಡಬೇಕೆಂದು ತಾಕೀತು ಮಾಡಿದ ಅವಮಾನಕಾರಿ ಘಟನೆ ಭಾನುವಾರ ನಡೆದಿದೆ. ಈ ಪದ್ಧತಿಯನ್ನು ಕೇರಳದಲ್ಲಿ ಈಗಾಗಲೇ ನಿಷೇಧಿಸಲಾಗಿದೆ. ಆದರೂ ಸರ್ಕಾರಿ ಸ್ವಾಮ್ಯದ ಪ್ರಭಾವಿ ಸಂಸ್ಥೆಯ ವಿರುದ್ಧವೇ ಇಂಥ ಬೆದರಿಕೆ ಒಡ್ಡಿರುವುದನ್ನು ಕೇರಳ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ತಿರುವನಂಪುರಂನ ತುಂಬಾ ಎಂಬಲ್ಲಿರುವ ಇಸ್ರೊ ಕೇಂದ್ರಕ್ಕೆ ಟ್ರಕ್ ಒಂದರಲ್ಲಿ ಕೆಲ ವಸ್ತುಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಒಂದಿಷ್ಟು ಜನರು ರಸ್ತೆಯ ಮೇಲೆ ಸೇರಿ ಟ್ರಕ್​ ಅಡ್ಡಗಟ್ಟಿದರು. ಟ್ರಕ್​ ಅನ್​ಲೋಡ್ ಮಾಡುವ ಮೊದಲು ‘ನೋಕ್ಕು ಕೂಲಿ’ ಕೊಡಬೇಕು ಎಂದು ಒತ್ತಾಯಿಸಿದರು ಎಂದು ಇಸ್ರೊ ಅಧಿಕಾರಿ ರಾಜೇಶ್ವರಿ ಎಂಬುವವರನ್ನು ಉಲ್ಲೇಖಿಸಿ ಎನ್​ಡಿಟಿವಿ ವರದಿ ಮಾಡಿದೆ. ಕೇವಲ ಎರಡು ದಿನಗಳ ಹಿಂದಷ್ಟೇ ಕೇರಳ ಹೈಕೋರ್ಟ್ ಈ ಪದ್ಧತಿಗೆ ಸಂಪೂರ್ಣ ಇತಿಶ್ರೀ ಹಾಕುವಂತೆ ಸೂಚಿಸಿತ್ತು. ಆದರೆ ಭಾನುವಾರ ಮತ್ತೆ ಒಂದಿಷ್ಟು ಜನರು ಬೀದಿಗಳಿದು ‘ನೋಕ್ಕು ಕೂಲಿ’ ಕೊಡುವಂತೆ ಆಗ್ರಹಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಜನರನ್ನು ಚೆದುರಿಸಿದ ನಂತರ ಟ್ರಕ್ ಇಸ್ರೊ ಪ್ರಾಂಗಣದೊಳಗೆ ಪ್ರವೇಶಿಸಲು ಸಾಧ್ಯವಾಯಿತು.

ತುಂಬಾ ಪ್ರದೇಶದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ (Vikram Sarabhai Space Centre – VSSC) ಟ್ರಕ್ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಇಸ್ರೊ ಅಧಿಕಾರಿಗಳು ದೂರು ಸಲ್ಲಿಸಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸ್ವತಃ ಪೊಲೀಸ್ ಕಮಿಷನರ್ ಸ್ಥಳಕ್ಕೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿ, ಗುಂಪು ಚೆದುರಿಸಿದರು. ವಿವಾದ ಬಗೆಹರಿದ ನಂತರ ಕೂಲಿ ಕಾರ್ಮಿಕರು ಮತ್ತು ಇತರ ಸಾರ್ವಜನಿಕರು ಅಲ್ಲಿಂದ ತೆರಳಿದರು ಎಂದು ತುಂಬಾ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

ಟ್ರಕ್​ನಲ್ಲಿ ಒಟ್ಟು 184 ಟನ್ ಸರಕು ಇತ್ತು. ಬಾಹ್ಯಾಕಾಶ ಕೇಂದ್ರದ ಬಾಗಿಲಿನಲ್ಲಿ ಟ್ರಕ್ ನಿಲ್ಲಿಸಿದ್ದ ಕೂಲಿಕಾರ್ಮಿಕರು ಪ್ರತಿ ಟನ್​ಗೆ ₹ 2,000 ನೀಡಬೇಕು ಎಂದು ಆಗ್ರಹಿಸುತ್ತಿದ್ದರು. ಟ್ರಕ್​ನಲ್ಲಿದ್ದ ಸರಕು ಇಳಿಸಲು ಟಾಟಾ ಕಂಪನಿಯೊಂದಿಗೆ ಇಸ್ರೋ ಒಪ್ಪಂದ ಮಾಡಿಕೊಂಡಿತ್ತು. ಹೆಚ್ಚು ತೂಕ ಮತ್ತು ಹೆಚ್ಚು ಸೂಕ್ಷ್ಮ ರೀತಿಯ ಯಂತ್ರೋಪಕರಣಗಳನ್ನು ಟ್ರಕ್​ನಿಂದ ಇಳಿಸಲು ಕ್ರೇನ್ ಮತ್ತು ಇತರ ಉಪಕರಣಗಳು ಬೇಕಿತ್ತು. ಇದನ್ನು ಮಾನವಶ್ರಮದಿಂದ ಮಾಡಲು ಆಗುತ್ತಿರಲಿಲ್ಲ. ಇದೀಗ ಟ್ರಕ್ ಬಾಹ್ಯಾಕಾಶ ಕೇಂದ್ರದ ಒಳಗೆ ಬಂದಿದೆ. ಆದರೆ ಸೋಮವಾರದಿಂದ ಮತ್ತಷ್ಟು ಗೊಂದಲ ಉಂಟಾಗಬಹುದು ಎಂದು ಹೆಸರು ಹೇಳಲು ಇಚ್ಛಿಸದ ಇಸ್ರೊ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ದಿ ನ್ಯೂಸ್ ಮಿನಟ್ ವರದಿ ಮಾಡಿದೆ.

ಬಾಹ್ಯಾಕಾಶ ಕೇಂದ್ರವನ್ನು ಸ್ಥಾಪಿಸಲು ಸ್ಥಳೀಯರಿಂದ ಭೂಮಿ ಪಡೆದುಕೊಳ್ಳುವಾಗ ಅವರಿಗೆ ಉದ್ಯೋಗ ಕೊಡುವ ಭರವಸೆ ನೀಡಲಾಗಿತ್ತು. ಆದರೆ ಹಲವು ವರ್ಷಗಳ ನಂತರವೂ ಈ ಭರವಸೆ ಈಡೇರಿಲ್ಲ. ಹೀಗಾಗಿಯೇ ಅವರು ಯಂತ್ರೋಪಕರಣಗಳನ್ನು ಬಳಸಿ ಸರಕು ಇಳಿಸುವುದನ್ನು ವಿರೋಧಿಸುತ್ತಿದ್ದಾರೆ. ಸರಕು ಇಳಿಸಲು ಯಂತ್ರೋಪಕರಣ ಬಳಕೆ ಅನಿವಾರ್ಯವಾಗಿದ್ದರೆ ನೊಕ್ಕು ಕೂಲಿ ಕೊಡಬೇಕು ಎಂದು ಆಗ್ರಹಿಸುತ್ತಾರೆ. ಟ್ರಕ್ ತಡೆದವರ ವಿರುದ್ಧ ಕ್ರಮ ಜರುಗಿಸುವಂತೆ ಕೇರಳ ಸರ್ಕಾರದ ಕಾರ್ಮಿಕ ಸಚಿವ ವಿ.ಶಿವನ್​ಕುಟ್ಟಿ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಸೂಚಿಸಿದ್ದಾರೆ.

ಸರಕು ಇಳಿಸುವುದನ್ನು ಸುಮ್ಮನೆ ನೋಡುತ್ತಾ ಇರಲು ಹಮಾನಿಗಳು ನೊಕ್ಕು ಕೂಲಿ ಕೊಡಬೇಕು ಎಂದು ಆಗ್ರಹಿಸುತ್ತಾರೆ. ಸಂಘಟಿತ ಕಾರ್ಮಿಕ ಒಕ್ಕೂಟಗಳು ಈ ಪದ್ಧತಿಯನ್ನು ಸುಲಿಗೆಯ ಮಾರ್ಗವನ್ನಾಗಿಸಿಕೊಂಡಿವೆ ಎಂಬ ಆರೋಪಗಳೂ ಈಚೆಗೆ ಕೇಳಿ ಬಂದಿತ್ತು. ಈ ಪದ್ಧತಿಯಿಂದ ತಮಗೆ ಆಗುತ್ತಿರುವ ತೊಂದರೆಯ ಬಗ್ಗೆ ಕೊಲ್ಲಮ್ ಮೂಲದ ಉದ್ಯಮಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರನೆಗೆ ಅಂಗೀಕರಿಸಿತ್ತು.

‘ನೋಕ್ಕುಕೂಲಿ ಪದ್ಧತಿಯು ಕೇರಳದ ಚಿತ್ರಣವನ್ನೇ ಹಾಳು ಮಾಡುತ್ತಿದೆ. ಇದನ್ನು ನಿರ್ಮೂಲನ ಮಾಡಬೇಕು. ಇದೇ ವೇಳೆ ಕೂಲಿ ಕಾರ್ಮಿಕರ ಹಕ್ಕುಗಳನ್ನು ಕಾನೂನು ಬದ್ಧವಾಗಿ ರಕ್ಷಿಸಬೇಕು’ ಎಂದು ನ್ಯಾಯಾಲಯವು ಹೇಳಿತ್ತು. ಮೇ 1, 2018ರಂದು ರಾಜ್ಯ ಸರ್ಕಾರವು ಈ ಪದ್ಧತಿಯನ್ನು ನಿಷೇಧಿಸಿತ್ತು. ಕೊವಿಡ್-19ರ ವೇಳೆ ನೊಕ್ಕುಕೂಲಿಯಿಂದ ತೊಂದರೆಗಳಾಗಿದ್ದು ವರದಿಯಾದಾಗ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹ ಈ ಪದ್ಧತಿಯನ್ನು ಖಂಡಿಸಿದ್ದರು.

(Residents of Thumba Stop ISRO Truck for NokkuKooli or gawking wages Government Intervenes)

ಇದನ್ನೂ ಓದಿ: ಚಂದ್ರಯಾನ -2ರ ನಂತರ ಆಗಸ್ಟ್ 12ರಂದು ಇಒಎಸ್3 ಉಪಗ್ರಹ ಉಡಾವಣೆ ಮಾಡಲಿದೆ ಇಸ್ರೊ

ಇದನ್ನೂ ಓದಿ: Chandrayaan 2 ಜುಲೈ 22 ಇಸ್ರೊಗೆ ಐತಿಹಾಸಿಕ ದಿನ; ಚಂದ್ರಯಾನ-2 ಬಗ್ಗೆ ಇಲ್ಲಿದೆ ಆಸಕ್ತಿಕರ ಸಂಗತಿ

Published On - 10:01 pm, Sun, 5 September 21

Follow Us
TV9 Web
TV9 Web

TV9 Kannada

Read More
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು