AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭರದಿಂದ ಸಾಗುತ್ತಿದೆ ಶ್ರೀರಾಮಂದಿರ ನಿರ್ಮಾಣ ಕಾರ್ಯ; ಸ್ಥಳದ ಚಿತ್ರಣ ತೋರಿಸುವ ಸೆಟಲೈಟ್ ಫೋಟೋ ಬಿಡುಗಡೆ

ಅಯೋಧ್ಯೆ ರಾಮಮಂದಿರದ ಸ್ಥಳದಲ್ಲಿ ಭರದ ಕಾಮಗಾರಿ ನಡೆಯುತ್ತಿದೆ. ಅವಶೇಷಗಳನ್ನು ಸ್ವಚ್ಛಗೊಳಿಸಿ, ಕಾಂಕ್ರೀಟ್​ ಹಾಕಲು ನೆಲವನ್ನು ಸಮತಟ್ಟು ಮಾಡುವ ಕೆಲಸ ನಡೆಯುತ್ತಿರುವುದು ಸೆಟಲೈಟ್​ ಫೋಟೋದಿಂದ ಕಾಣುತ್ತಿದೆ.

ಭರದಿಂದ ಸಾಗುತ್ತಿದೆ ಶ್ರೀರಾಮಂದಿರ ನಿರ್ಮಾಣ ಕಾರ್ಯ; ಸ್ಥಳದ ಚಿತ್ರಣ ತೋರಿಸುವ ಸೆಟಲೈಟ್ ಫೋಟೋ ಬಿಡುಗಡೆ
ಕಲಾವಿದನ ಕಲ್ಪನೆಯಲ್ಲಿ ಅಯೋದ್ಯೆ ರಾಮಮಂದಿರ
TV9 Web
| Edited By: |

Updated on: Jun 30, 2021 | 4:01 PM

Share

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಕೊವಿಡ್​ 19 ಎರಡನೇ ಅಲೆ ಹೊತ್ತಲ್ಲೂ ಕಾಮಗಾರಿ ನಿಂತಿಲ್ಲ. ಅಲ್ಲೀಗ ಚಿತ್ರಣವೇ ಬದಲಾಗಿದ್ದು, ಅದರ ಸೆಟಲೈಟ್​ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ರಾಮಮಂದಿರವಿದ್ದ ಸ್ಥಳ ಮೊದಲು ಹೇಗಿತ್ತು? ಈಗ ಹೇಗಾಗಿದೆ ಎಂಬುದರ ಸ್ಪಷ್ಟ ಬದಲಾವಣೆಯನ್ನು ಫೋಟೋದಲ್ಲಿ ಕಾಣಬಹುದು.

ಅಯೋಧ್ಯೆ ರಾಮಮಂದಿರದ ಸ್ಥಳದಲ್ಲಿ ಭರದ ಕಾಮಗಾರಿ ನಡೆಯುತ್ತಿದೆ. ಅವಶೇಷಗಳನ್ನು ಸ್ವಚ್ಛಗೊಳಿಸಿ, ಕಾಂಕ್ರೀಟ್​ ಹಾಕಲು ನೆಲವನ್ನು ಸಮತಟ್ಟು ಮಾಡುವ ಕೆಲಸ ನಡೆಯುತ್ತಿರುವುದು ಸೆಟಲೈಟ್​ ಫೋಟೋದಿಂದ ಕಾಣುತ್ತಿದೆ. ಅಲ್ಲೆಲ್ಲ ಕೆಲಸಗಾರರು, ಇಂಜನಿಯರ್​ಗಳು ಇದ್ದಾರೆ. ತಜ್ಞರ ಸಲಹೆಯಂತೆ ಮಂದಿರಕ್ಕೆ ಅಡಿಪಾಯ ಹಾಕುವಾಗ ಹೆಚ್ಚುವರಿಯಾಗಿ ಕಾಂಕ್ರೀಟ್ ಪದರಗಳನ್ನು ಹಾಕಲು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಸಂಬಂಧಪಟ್ಟ ಇಂಜಿನಿಯರ್​ಗಳಿಗೆ ಸೂಚಿಸಿದೆ.

ಶ್ರೀರಾಮಮಂದಿರಕ್ಕೆ ರೋಲರ್​ ಕಾಂಪ್ಯಾಕ್ಟೆಡ್​ ಕಾಂಕ್ರೀಟ್​​ (ಆರ್​ಸಿಸಿ)ನ ಅಡಿಪಾಯ ಹಾಕಲಾಗುವುದು. ಇದರ ಅನ್ವಯ 1,20,000 ಚದರ ಅಡಿ ಪ್ರದೇಶದಲ್ಲಿ 40-45 ಪದರ ಕಾಂಕ್ರೀಟ್ ಹಾಕಲಾಗುವುದು. ಅದರಲ್ಲಿ 4 ಲೇಯರ್​​ಗಳಷ್ಟೇ ಮುಗಿದಿದೆ ಎಂದೂ ಟ್ರಸ್ಟ್ ಮೇ 31ರಂದು ಮಾಹಿತಿ ನೀಡಿತ್ತು. ಈಗಾಗಲೇ 1,20,000 ಘನ ಮೀಟರ್​ ಪ್ರದೇಶಗಳಲ್ಲಿ ಮಣ್ಣು ಅಗೆಯಲಾಗಿದ್ದು, ಅದನ್ನೆಲ್ಲ ತೆರವುಗೊಳಿಸಲಾಗಿದೆ. ಅಕ್ಟೋಬರ್ ಅಷ್ಟೊತ್ತಿಗೆ 45 ಪದರಗಳ ಕಾಂಕ್ರೀಟ್ ಹಾಕುವ ಕೆಲಸ ಮುಗಿಯಬಹುದು ಎಂದೂ ಟ್ರಸ್ಟ್​ ತಿಳಿಸಿದೆ. ಇಲ್ಲಿದೆ ನೋಡಿ ಸೆಟಲೈಟ್​​ ಮೂಲಕ ಸೆರೆ ಹಿಡಿಯಲಾದ ಶ್ರೀರಾಮಮಂದಿರ ಸ್ಥಳದ ಚಿತ್ರ..

Shreeram Temple

ಸೆಟಲೈಟ್​ ಚಿತ್ರ

ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು