ದೇಶದಲ್ಲಿ 2ನೇ ಬುಲೆಟ್ ಟ್ರೇನ್ ನಿರ್ಮಾಣ, ಬೆಂಗಳೂರು-ಮೈಸೂರು ನಡುವೆಯೂ ಬುಲೆಟ್!

ದೇಶದಲ್ಲಿ 2ನೇ ಬುಲೆಟ್ ಟ್ರೇನ್ ಮಾರ್ಗ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ತಕ್ಷಣಕ್ಕೆ ದೆಹಲಿ-ವಾರಾಣಸಿ ಮಧ್ಯೆ ಬುಲೆಟ್ ಟ್ರೇನ್ ಮಾರ್ಗ ನಿರ್ಮಾಣವಾಗಲಿದೆ. ಇದೇ ರೀತಿ ದೇಶದಲ್ಲಿ 6 ಮಾರ್ಗದಲ್ಲಿ ಬುಲೆಟ್ ಟ್ರೇನ್ ಸಂಚರಿಸಲಿದೆ. 6 ಮಾರ್ಗದಲ್ಲಿ ಬುಲೆಟ್ ಟ್ರೇನ್ ಮಾರ್ಗ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿದ್ದು, ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವೂ ಇದರಲ್ಲಿ ಸೇರಿದೆ. ವಾರಾಣಸಿ ಕ್ಷೇತ್ರಕ್ಕೆ ಸೌಲಭ್ಯ ಕಲ್ಪಿಸಲು ಮೋದಿ ನಿರ್ಧಾರ ಮಾಡಿದ್ದು, ಮೋದಿ ಪ್ರತಿನಿಧಿಸುವ ವಾರಾಣಸಿ ಕ್ಷೇತ್ರಕ್ಕೆ ಬುಲೆಟ್ ಟ್ರೇನ್ ಪ್ರವೇಶಿಸಲಿದೆ. ನ್ಯಾಷನಲ್ ಹೈಸ್ಪೀಡ್ ರೈಲು ಕಾರ್ಪೊರೇಷನ್​ನಿಂದ ಇದರ ವಿನ್ಯಾಸ […]

ದೇಶದಲ್ಲಿ 2ನೇ ಬುಲೆಟ್ ಟ್ರೇನ್ ನಿರ್ಮಾಣ, ಬೆಂಗಳೂರು-ಮೈಸೂರು ನಡುವೆಯೂ ಬುಲೆಟ್!
ಸಾಧು ಶ್ರೀನಾಥ್​

Updated on: Jul 03, 2020 | 5:04 PM

ದೇಶದಲ್ಲಿ 2ನೇ ಬುಲೆಟ್ ಟ್ರೇನ್ ಮಾರ್ಗ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ತಕ್ಷಣಕ್ಕೆ ದೆಹಲಿ-ವಾರಾಣಸಿ ಮಧ್ಯೆ ಬುಲೆಟ್ ಟ್ರೇನ್ ಮಾರ್ಗ ನಿರ್ಮಾಣವಾಗಲಿದೆ. ಇದೇ ರೀತಿ ದೇಶದಲ್ಲಿ 6 ಮಾರ್ಗದಲ್ಲಿ ಬುಲೆಟ್ ಟ್ರೇನ್ ಸಂಚರಿಸಲಿದೆ. 6 ಮಾರ್ಗದಲ್ಲಿ ಬುಲೆಟ್ ಟ್ರೇನ್ ಮಾರ್ಗ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿದ್ದು, ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವೂ ಇದರಲ್ಲಿ ಸೇರಿದೆ.

ವಾರಾಣಸಿ ಕ್ಷೇತ್ರಕ್ಕೆ ಸೌಲಭ್ಯ ಕಲ್ಪಿಸಲು ಮೋದಿ ನಿರ್ಧಾರ ಮಾಡಿದ್ದು, ಮೋದಿ ಪ್ರತಿನಿಧಿಸುವ ವಾರಾಣಸಿ ಕ್ಷೇತ್ರಕ್ಕೆ ಬುಲೆಟ್ ಟ್ರೇನ್ ಪ್ರವೇಶಿಸಲಿದೆ. ನ್ಯಾಷನಲ್ ಹೈಸ್ಪೀಡ್ ರೈಲು ಕಾರ್ಪೊರೇಷನ್​ನಿಂದ ಇದರ ವಿನ್ಯಾಸ ಆಗಲಿದೆ. ಡಿಪಿಆರ್ ಸಿದ್ಧಪಡಿಸಲು ಬಿಡ್ ಆಹ್ವಾನ ಮಾಡಲಾಗಿದೆ.

ಸದ್ಯಕ್ಕೆ ದೆಹಲಿ-ವಾರಾಣಸಿ ಮಧ್ಯೆ ವಂದೇ ಭಾರತ್ ಸಂಚಾರವಾಗುತ್ತಿದೆ. ದೆಹಲಿ-ವಾರಾಣಸಿ ಮಧ್ಯೆ 865 ಕಿ.ಮೀ. ಅಂತರ ಇದೆ. ವಾರಾಣಸಿ ತಲುಪಲು ವಂದೇ ಭಾರತ್ ರೈಲಿಗೆ 8 ಗಂಟೆ ಸಮಯಾವಕಾಶ ತಗಲುತ್ತದೆ.  ಆದರೆ ಬುಲೆಟ್ ಟ್ರೇನ್ 4.5 ಗಂಟೆಯಲ್ಲಿ ಈ ದೂರವನ್ನು ಕ್ರಮಿಸಲಿದೆ. ಮಾರ್ಗ ಮಧ್ಯೆ ನೋಯ್ಡಾ, ಆಗ್ರಾ, ಕಾನ್ಪುರ, ಲಖನೌನಲ್ಲಿ ನಿಲ್ದಾಣಗಳು ನಿರ್ಮಾಣವಾಗಲಿವೆ.

Published On - 5:03 pm, Fri, 3 July 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us