56ನೇ ವರ್ಷದಲ್ಲಿ ಎಂಎಸ್ಸಿ ಪಾಸ್, ಸರ್ಕಾರ ಮನೆ ಕೊಟ್ರೆ ಮದುವೆಯಾಗ್ತೀನಿ ಎಂದ ವ್ಯಕ್ತಿ

56 ವರ್ಷದ ವ್ಯಕ್ತಿಯೊಬ್ಬರು ಮದುವೆಯ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಜಬಲ್​ಪುರದ ವ್ಯಕ್ತಿ 23 ಬಾರಿ ಅನುತ್ತೀರ್ಣರಾಗಿ ಅಂತೂ ಈಗ ಎಂಎಸ್ಸಿ ಪೂರೈಸಿದ್ದಾರೆ. ಇದೀಗ ಮನೆ ನೀಡುವಂತೆ ಸರ್ಕಾರದ ಬಳಿ ಮನವಿ ಮಾಡಿದ್ದಾರೆ. ಮನೆ ನಿರ್ಮಾಣಕ್ಕೆ ಸರ್ಕಾರ ನೆರವು ನೀಡಿದರೆ ಈ ವಯಸ್ಸಿನಲ್ಲಿ ಮದುವೆಯಾಗಲು ಸಿದ್ಧ ಎಂದರು. ಸಂಗೀತದಲ್ಲಿ ಆಸಕ್ತಿ ಇದ್ದರೆ 10ನೇ ತರಗತಿ ಪಾಸಾಗಿರುವ ಹುಡುಗಿಯನ್ನಾದರೂ ಮದುವೆಯಾಗಲು ಸಿದ್ಧ ಎಂದು ಹೇಳಿದ್ದಾರೆ.

56ನೇ ವರ್ಷದಲ್ಲಿ ಎಂಎಸ್ಸಿ ಪಾಸ್, ಸರ್ಕಾರ ಮನೆ ಕೊಟ್ರೆ ಮದುವೆಯಾಗ್ತೀನಿ ಎಂದ ವ್ಯಕ್ತಿ
ರಾಜ್​ಕರಣ್​

Updated on: Nov 30, 2023 | 3:25 PM

56 ವರ್ಷದ ವ್ಯಕ್ತಿಯೊಬ್ಬರು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಜಬಲ್​ಪುರದ ವ್ಯಕ್ತಿ 23 ಬಾರಿ ಅನುತ್ತೀರ್ಣರಾಗಿ ಅಂತೂ ಈಗ ಎಂಎಸ್ಸಿ ಪೂರೈಸಿದ್ದಾರೆ. ಇದೀಗ ಮನೆ ನೀಡುವಂತೆ ಸರ್ಕಾರದ ಬಳಿ ಮನವಿ ಮಾಡಿದ್ದಾರೆ. ಮನೆ ನಿರ್ಮಾಣಕ್ಕೆ ಸರ್ಕಾರ ನೆರವು ನೀಡಿದರೆ ಈ ವಯಸ್ಸಿನಲ್ಲಿ ಮದುವೆಯಾಗಲು ಸಿದ್ಧ ಎಂದರು. ಸಂಗೀತದಲ್ಲಿ ಆಸಕ್ತಿ ಇದ್ದರೆ 10ನೇ ತರಗತಿ ಪಾಸಾಗಿರುವ ಹುಡುಗಿಯನ್ನಾದರೂ ಮದುವೆಯಾಗಲು ಸಿದ್ಧ ಎಂದು ಹೇಳಿದ್ದಾರೆ.

ಜಬಲ್​ಪುರ ನಿವಾಸಿ ರಾಜ್​ಕರಣ್​ ಅವರ ಕಥೆ ಇದು, ರಾಜ್​ಕರಣ್​ 1997ರಲ್ಲಿ ಎಂಎಸ್​ಸಿ ಗಣಿತ ಮಾಡಲು ನಿರ್ಧರಿಸಿದರು. ಮೊದಲ ವರ್ಷದ ಪರೀಕ್ಷೆಗೆ ಹಾಜರಾಗಿದ್ದರು. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರೂ ಧೈರ್ಯಗುಂದದೆ 23 ಬಾರಿ ಪರೀಕ್ಷೆಗೆ ಹಾಜರಾಗಿ ಕೊರೊನಾ ಸಮಯದಲ್ಲಿ ಪರೀಕ್ಷೆ ಇಲ್ಲದೆಯೇ ಕೊನೆಗೂ ಉತ್ತೀರ್ಣರಾಗಿದ್ದಾರೆ.

56 ವರ್ಷದ ರಾಜ್​ಕರಣ್ ಈಗ ಮದುವೆಯಾಗಲು ಬಯಸಿದ್ದಾರೆ. ಸ್ವಂತ ಮನೆ ಇಲ್ಲದ ಕಾರಣಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಸರ್ಕಾರ ಮನೆ ಕೊಟ್ಟರೆ ನೆಲೆಯೂರಲು ಸಿದ್ಧ ಎಂದಿದ್ದಾರೆ.

1996ರಲ್ಲಿ ಜೀವನೋಪಾಯಕ್ಕಾಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಹೋಗಿದ್ದರು. ಅಲ್ಲಿ ಅವರು ಗಣಿತ ಕಲಿಸುವ ರೀತಿ ಬಹಳ ಮೆಚ್ಚುಗೆಗೆ ಪಾತ್ರವಾಯಿತು. ಅದೇ ಸಮಯಕ್ಕೆ ಗಣಿತದಲ್ಲಿ ಎಂಎಸ್ಸಿ ಮಾಡಿದರೆ ಗಣಿತ ಶಿಕ್ಷಕರ ಕೆಲಸ ಸಿಗುತ್ತದೆ ಎಂಬ ಮಾತು ಅವರ ಮನಸ್ಸಿಗೆ ಬಂದಿತ್ತು. ರಾಣಿ ದುರ್ಗಾವತಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ಗೆ ಅರ್ಜಿ ಸಲ್ಲಿಸಿದರು. ವಿಶ್ವವಿದ್ಯಾನಿಲಯವು ಗಣಿತವನ್ನು ಪ್ರಮುಖ ವಿಷಯವಾಗಿ ಪರಿಗಣಿಸಿ ಪ್ರವೇಶವನ್ನು ನೀಡಿತು.

ಇದಾದ ನಂತರ 1997ರಲ್ಲಿ ರಾಜ್‌ಕರನ್‌ ಪ್ರಥಮ ವರ್ಷದ ಪರೀಕ್ಷೆಯನ್ನು ನೀಡಿದರೂ ಅನುತ್ತೀರ್ಣರಾದರು. ಇದರ ಹೊರತಾಗಿಯೂ, ಅವರು ಧೈರ್ಯವನ್ನು ಕಳೆದುಕೊಳ್ಳಲಿಲ್ಲ ಮತ್ತು 2020 ರಲ್ಲಿ ಕೊರೊನಾ ಅವಧಿಯಲ್ಲಿ, ಅವರು ಸಾಮಾನ್ಯ ಬಡ್ತಿ ಅಡಿಯಲ್ಲಿ MSc ಮೊದಲ ವರ್ಷದ ಪರೀಕ್ಷೆ ಮತ್ತು 2021 ರಲ್ಲಿ MSc ಎರಡನೇ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಈ 25 ವರ್ಷಗಳ ಹೋರಾಟದ ನಂತರ ಎಂಎಸ್ಸಿ ಪದವಿ ಪಡೆದು ಈಗ ಮದುವೆಯಾಗಿ ಸಂಸಾರ ಸಾಗಿಸಬೇಕೆಂಬುದು  ಅವರ ಆಸೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us