AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಮೂಲದ ಶ್ರವಣ್​ ಅಯ್ಯರ್​ ಕ್ಲಿಕ್ಕಿಸಿದ ಫೋಟೊಗೆ ವಿಶ್ವಸಂಸ್ಥೆಯ WMO 2021 ಪ್ರಶಸ್ತಿ

ಮಡಗಾಸ್ಕರ್​ನ ಮಳೆಗಾಲದ ಸಮಯ ಎನ್ನುವ ಶೀರ್ಷಿಕೆ ಬರಹದೊಂದಿಗೆ ಈ ಫೋಟೊ ಪ್ರಕಟಗೊಂಡಿತ್ತು. 13 ವಿಜೇತ ಫೋಟೊಗಳಲ್ಲಿ ಇದು ಕೂಡ ಒಂದಾಗಿದೆ. ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ 2021ರ ಕ್ಯಾಲೆಂಡರ್​ನಲ್ಲಿ ಈ ಫೋಟೋ ಡಿಸ್​ಪ್ಲೇ ಆಗಲಿದೆ.

ಭಾರತ ಮೂಲದ ಶ್ರವಣ್​ ಅಯ್ಯರ್​ ಕ್ಲಿಕ್ಕಿಸಿದ ಫೋಟೊಗೆ ವಿಶ್ವಸಂಸ್ಥೆಯ WMO 2021 ಪ್ರಶಸ್ತಿ
ಶ್ರವಣ್​ ಕ್ಲಿಕ್ಕಿಸಿದ ಮಡಗಾಸ್ಕರ್​ ಚಿತ್ರ
ರಾಜೇಶ್ ದುಗ್ಗುಮನೆ
| Edited By: |

Updated on:Jan 04, 2021 | 3:44 PM

Share

ಬೆಂಗಳೂರು: ನಗರದ ಹವ್ಯಾಸಿ ಛಾಯಾಗ್ರಾಹಕ ಶ್ರವಣ್​ ಅಯ್ಯರ್​ ಕ್ಲಿಕ್ಕಿಸಿದ ಫೋಟೊಗೆ ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ (WMO) ನೀಡುವ 2021ರ ಸಾಲಿನ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಇವರು ಆಫ್ರಿಕಾದ ಮಡಗಾಸ್ಕರ್​ನ ಮೊರೊಂಡವದಲ್ಲಿ ಹವಾಮಾನದ ನಾಟಕೀಯ ವಿದ್ಯಮಾನವನ್ನು ಇವರು ಕ್ಲಿಕ್ಕಿಸಿದ್ದರು.

‘ಮಡಗಾಸ್ಕರ್​ನ ಮಳೆಗಾಲದ ಸಮಯ’ ಎನ್ನುವ ಶೀರ್ಷಿಕೆ ಬರಹದೊಂದಿಗೆ ಈ ಫೋಟೋ ಪ್ರಕಟಗೊಂಡಿತ್ತು. 13 ವಿಜೇತ ಫೋಟೋಗಳಲ್ಲಿ ಇದು ಕೂಡ ಒಂದಾಗಿದೆ. ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ 2021ರ ಕ್ಯಾಲೆಂಡರ್​ನಲ್ಲಿ ಈ ಫೋಟೊ ಪ್ರಕಟವಾಗಲಿದೆ.

ವಿಶ್ವದ ನಾನಾ ಕಡೆಗಳಿಂದ ಒಟ್ಟೂ 1100 ಫೋಟೋಗಳು ಸ್ಪರ್ಧೆಯಲ್ಲಿದ್ದವು. ಈ ಪೈಕಿ 70 ಚಿತ್ರಗಳನ್ನು ಶಾರ್ಟ್​ಲಿಸ್ಟ್​ ಮಾಡಲಾಗಿತ್ತು. ಈ ಪೈಕಿ WMOನ ಜ್ಯೂರಿಗಳು 13 ಫೋಟೊಗಳನ್ನು ಆಯ್ಕೆ ಮಾಡಿದ್ದರು. ಇದರಲ್ಲಿ ಶ್ರವಣ್​ ಅಯ್ಯರ್​ ಕ್ಲಿಕ್ಕಿಸಿದ ಫೋಟೊ ಕೂಡ ಇದೆ.

ಸ್ಥಳೀಯರೊಂದಿಗೆ ಹವ್ಯಾಸಿ ಛಾಯಾಗ್ರಾಹಕ ಶ್ರವಣ್

ಆಫ್ರಿಕಾದ ದ್ವೀಪ ರಾಷ್ಟ್ರ ಮಡಗಾಸ್ಕರ್​ನ ಮಳೆಗಾಲದ ಸಮಯದಲ್ಲಿ ನಾನು ಈ ಫೋಟೊ ಕ್ಲಿಕ್​ ಮಾಡಿದ್ದೇನೆ. ಈ ಭಾಗದಲ್ಲಿ ಇತ್ತೀಚೆಗೆ ತಾಪಮಾನ ಹೆಚ್ಚುತ್ತಿದೆ. ಈ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ ಎಂದಿದ್ದಾರೆ ಶರವಣ್.

ಮಡಗಾಸ್ಕರ್​ ಅಲ್ಲದೆ, ಭೂತಾನ್​, ಕಪಾನ್​ನ ಪೂರ್ವ ಕರಾವಳಿ, ಸಿಂಗಾಪುರ, ಮಲೇಷಿಯಾ, ಥೈಲೆಂಡ್​, ಶ್ರೀಲಂಕಾ ಭಾರತ ಹಾಗೂ ಅಮೆರಿಕದಲ್ಲೂ ಇವರು ಫೋಟೋಗ್ರಫಿ​ ಮಾಡಿದ್ದಾರೆ.

Forbes ವಿಜ್ಞಾನ ಪ್ರಶಸ್ತಿ 2020: ವಾಣಿಜ್ಯ ಬಾಹ್ಯಾಕಾಶ ಉದ್ಯಮದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಗರಿ

Published On - 3:28 pm, Mon, 4 January 21

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?