ಸಿಯಾಚಿನ್ ಯುದ್ಧ ಭೂಮಿ: ಪ್ರವಾಸಿಗರಿಗೆ ತೆರೆಯಿತು ಸ್ವರ್ಗದ ಬಾಗಿಲು

ದೆಹಲಿ:ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್​ಗೆ ಇನ್ನು ನೀವು ಕೂಡ ಭೇಟಿ ನೀಡಬಹುದು. ಯಾಕಂದ್ರೆ, ಸಿಯಾಚಿನ್​ನನ್ನ ಪ್ರವಾಸಿ ತಾಣವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ. ಎತ್ತರದ ಯುದ್ಧಭೂಮಿಗೆ ಪ್ರವಾಸಿಗರ ಎಂಟ್ರಿ..! ಸಿಯಾಚಿನ್ ಭಾರತಕ್ಕೆ ಬಹುಮುಖ್ಯವಾದ ಪ್ರದೇಶ. ಯಾಕಂದ್ರೆ ಪಾಪಿ ಪಾಕಿಸ್ತಾನ ಹಾಗೂ ಡ್ರ್ಯಾಗನ್ ಚೀನಾ ಎದುರಿಸಲು ಸಿಯಾಚಿನ್ ಅಮೂಲ್ಯವಾದ ಜಾಗ. ಹೀಗಾಗಿ ಸಿಯಾಚಿನ್ ಬಗ್ಗೆ ಮುತುವರ್ಜಿ ವಹಿಸಲಾಗುತ್ತೆ. ಮೈನಸ್ -40 ಡಿಗ್ರಿಯಷ್ಟು ಸರಾಸರಿ ಉಷ್ಣಾಂಶ ಇರುವ ಪ್ರದೇಶದಲ್ಲಿ ಸೈನಿಕರು ದೇಶದ ಗಡಿ ಕಾಯಬೇಕು. ವೈರಿ […]

ಸಿಯಾಚಿನ್ ಯುದ್ಧ ಭೂಮಿ: ಪ್ರವಾಸಿಗರಿಗೆ ತೆರೆಯಿತು ಸ್ವರ್ಗದ ಬಾಗಿಲು
ಸಾಧು ಶ್ರೀನಾಥ್​

Updated on: Oct 22, 2019 | 12:18 PM

ದೆಹಲಿ:ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್​ಗೆ ಇನ್ನು ನೀವು ಕೂಡ ಭೇಟಿ ನೀಡಬಹುದು. ಯಾಕಂದ್ರೆ, ಸಿಯಾಚಿನ್​ನನ್ನ ಪ್ರವಾಸಿ ತಾಣವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ.

ಎತ್ತರದ ಯುದ್ಧಭೂಮಿಗೆ ಪ್ರವಾಸಿಗರ ಎಂಟ್ರಿ..!
ಸಿಯಾಚಿನ್ ಭಾರತಕ್ಕೆ ಬಹುಮುಖ್ಯವಾದ ಪ್ರದೇಶ. ಯಾಕಂದ್ರೆ ಪಾಪಿ ಪಾಕಿಸ್ತಾನ ಹಾಗೂ ಡ್ರ್ಯಾಗನ್ ಚೀನಾ ಎದುರಿಸಲು ಸಿಯಾಚಿನ್ ಅಮೂಲ್ಯವಾದ ಜಾಗ. ಹೀಗಾಗಿ ಸಿಯಾಚಿನ್ ಬಗ್ಗೆ ಮುತುವರ್ಜಿ ವಹಿಸಲಾಗುತ್ತೆ. ಮೈನಸ್ -40 ಡಿಗ್ರಿಯಷ್ಟು ಸರಾಸರಿ ಉಷ್ಣಾಂಶ ಇರುವ ಪ್ರದೇಶದಲ್ಲಿ ಸೈನಿಕರು ದೇಶದ ಗಡಿ ಕಾಯಬೇಕು. ವೈರಿ ಪಡೆಗಳಿಂದ ದೇಶ ರಕ್ಷಿಸಲು ಭಾರತೀಯ ಯೋಧರು ಅಕ್ಷರಶಃ ನರಕಯಾತನೆ ಅನುಭವಿಸ್ತಾರೆ.

ಆದ್ರೆ ಈ ಜಾಗವನ್ನ ಪ್ರವಾಸಿಗರಿಗೆ ಮುಕ್ತಗೊಳಿಸಬೇಕು ಅನ್ನೋ ಒತ್ತಾಯ ಬಹು ಹಿಂದಿನಿಂದಲೂ ಕೇಳಿಬರುತ್ತಿತ್ತು. ಮನವಿಗೆ ಸ್ಪಂದಿಸಿರುವ ಮೋದಿ ಸರ್ಕಾರ, ವಿಶ್ವದ ಎತ್ತರದ ಯುದ್ಧಭೂಮಿಯಲ್ಲೂ ಪ್ರವಾಸೋದ್ಯಮದ ಬಾಗಿಲು ತೆರೆಸಿದೆ. ಹೀಗೆ ಸಾವಿರಾರು ಅಡಿ ಎತ್ತರದಲ್ಲೂ ಟೂರಿಸ್ಟ್​ಗಳು ಚಲಿಸಬಹುದಾಗಿದೆ. ದಶಕಗಳ ಬೇಡಿಕೆಗೆ ಕಡೆಗೂ ಗ್ರೀನ್ ಸಿಗ್ನಲ್ ಸಿಕ್ಕಿರೋದು ಸಾಹಸಿಗರ ದಿಲ್ ಖುಷ್ ಮಾಡಿದೆ.

ಪ್ರವಾಸಿಗರ ಸ್ವರ್ಗದ ಬಾಗಿಲು
ಸಿಯಾಚಿನ್ ಪ್ರವಾಸೋದ್ಯಮಕ್ಕೆ ಮುಕ್ತವಾಗಿದೆ. ಲಡಾಖ್ ಪ್ರವಾಸಿಗರನ್ನು ಸೇಳೆಯುವ ಸಾಮರ್ಥ್ಯ ಹೊಂದಿದೆ. ಈ ಪ್ರದೇಶದಲ್ಲಿರುವ ಉತ್ತಮ ಸಂಪರ್ಕ ಕೂಡ ಟೂರಿಸ್ಟ್​ಗಳಿಗೆ ಅನುಕೂಲಕರವಾಗಿದೆ. ಹೀಗಾಗಿ ಸಿಯಾಚಿನ್‍ ಮೂಲ ಶಿಬಿರದಿಂದ ಕುಮಾರ್ ಪೋಸ್ಟ್​ವರೆಗಿನ ಜಾಗವನ್ನು ಪ್ರವಾಸೋದ್ಯಮ ಉದ್ದೇಶಗಳಿಗೆ ಮುಕ್ತಗೊಳಿಸಲಾಗಿದೆ. ಎಂದು
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ವಿಶ್ವದ ಕೇಂದ್ರಬಿಂದು ಸಿಯಾಚಿನ್ ಕಣ್ತುಂಬಿಕೊಳ್ಳಲು ಇನ್ಮುಂದೆ ಪ್ರವಾಸಿಗರಿಗೂ ಸಾಧ್ಯವಾಗಲಿದೆ. ಅಲ್ಲದೆ ಸಿಯಾಚಿನ್ ವಾತಾವರಣ, ಜೀವನ ಶೈಲಿ ಅಧ್ಯಯನಕ್ಕೂ ಸಹಾಯಕವಾಗಲಿದೆ. ಮತ್ತೊಂದ್ಕಡೆ ವೈಜ್ಞಾನಿಕ ಆವಿಷ್ಕಾರಕ್ಕೂ ಕೇಂದ್ರ ಸರ್ಕಾರದ ಈ ನಿರ್ಧಾರ ದೊಡ್ಡ ಅವಕಾಶ ನೀಡಲಿದೆ. ಇದು ಭಾರತದ ಬದ್ಧ ವೈರಿ ಪಾಪಿ ಪಾಕಿಸ್ತಾನ ಮತ್ತು ಚೀನಾಗೆ ಬೇಸರ ತಂದಿದೆ.

Published On - 6:55 am, Tue, 22 October 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us