Electrocution: ಬೆಳೆ ಕಟಾವು ಮಾಡುವಾಗ ಮುರಿದುಬಿದ್ದ ವಿದ್ಯುತ್ ತಂತಿ -ಆರು ರೈತ ಕಾರ್ಮಿಕರ ಸಾವು

ಅನಂತಪುರ ಜಿಲ್ಲೆಯಲ್ಲಿ ಘೋರ ದುರಂತವೊಂದು ನಡೆದಿದೆ. ಘಟನೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಆರು ಮಂದಿ ಸಾವನ್ನಪ್ಪಿದ್ದಾರೆ. ಇತರರು ಗಾಯಗೊಂಡಿದ್ದಾರೆ. ಬೊಮ್ಮನಹಾಳ್ ಮಂಡಲ ದರ್ಗಾ ಹೆಣ್ಣೂರಿನಲ್ಲಿ ಈ ಘಟನೆ ನಡೆದಿದೆ.

Electrocution: ಬೆಳೆ ಕಟಾವು ಮಾಡುವಾಗ ಮುರಿದುಬಿದ್ದ ವಿದ್ಯುತ್ ತಂತಿ -ಆರು ರೈತ ಕಾರ್ಮಿಕರ ಸಾವು
ಬೆಳೆ ಕಟಾವು ಮಾಡುವಾಗ ಮುರಿದುಬಿದ್ದ ವಿದ್ಯುತ್ ತಂತಿ -ಆರು ರೈತ ಕಾರ್ಮಿಕರ ಸಾವು
Updated By: ಸಾಧು ಶ್ರೀನಾಥ್​

Updated on: Nov 02, 2022 | 4:21 PM

ಅನಂತಪುರ ಜಿಲ್ಲೆಯಲ್ಲಿ ಘೋರ ದುರಂತವೊಂದು ನಡೆದಿದೆ. ಘಟನೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಆರು ಮಂದಿ ಸಾವನ್ನಪ್ಪಿದ್ದಾರೆ. ಇತರರು ಗಾಯಗೊಂಡಿದ್ದಾರೆ. ಬೊಮ್ಮನಹಾಳ್ ಮಂಡಲ ದರ್ಗಾ ಹೆಣ್ಣೂರಿನಲ್ಲಿ ಈ ಘಟನೆ ನಡೆದಿದೆ.

ಅನಂತಪುರ ಜಿಲ್ಲೆಯಲ್ಲಿ ಘೋರ ದುರಂತವೊಂದು ನಡೆದಿದೆ. ಘಟನೆಯಲ್ಲಿ ವಿದ್ಯುತ್ ತಂತಿ ತುಂಡಾಗಿ, ಅದು ಯಮಪಾಶವಾಗಿ (Electrocution) ಆರು ಮಂದಿ ಸಾವನ್ನಪ್ಪಿದ್ದಾರೆ. ಇತರರು ಗಾಯಗೊಂಡಿದ್ದಾರೆ. ಬೊಮ್ಮನಹಾಳ್ ಮಂಡಲದ ದರ್ಗಾ ಹೆಣ್ಣೂರು ಎಂಬಲ್ಲಿ ಈ ಘಟನೆ ನಡೆದಿದೆ. ಬೆಳೆ ಕಟಾವು ಮಾಡುವಾಗ ವಿದ್ಯುತ್ ತಂತಿಗಳು ತುಂಡಾಗಿವೆ. ದೊಡ್ಡ ತಂತಿ ತಗುಲಿ ಆರು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಕೂಡಲೇ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ದೌಡಾಯಿಸಿದ ಮೇಲಧಿಕಾರಿಗಳು ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ವೇಳೆ.. ಹೊಲಕ್ಕೆ ಕೆಲಸಕ್ಕೆಂದು ಹೋದವರು ಅನಿರೀಕ್ಷಿತ ಅಪಘಾತಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದು, ಇದರಿಂದ ಮೃತರ ಕುಟುಂಬಸ್ಥರು ತೀವ್ರ ದುಃಖಿತರಾಗಿದ್ದಾರೆ.

To read more click below:

Andhra Pradesh: విద్యుత్ తీగే యమపాశమైంది.. కరెంట్ వైర్ తెగి ఆరుగురు మృతి..

Published On - 4:14 pm, Wed, 2 November 22