AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಹುಲ್​ ಚೋಕ್ಸಿಯನ್ನು ಕರೆತರಲು ಭಾರತಕ್ಕೆ ಕಾನೂನು ತೊಡಕು?-ಅತ್ತ ಡೊಮಿನಿಕಾ ಪ್ರತಿಪಕ್ಷ ನಾಯಕನಿಗೆ ಹಣದಾಸೆ ತೋರಿದ ಚೋಕ್ಸಿ ಸೋದರ !

ಚೋಕ್ಸಿ ಡೊಮಿನಿಕಾದಲ್ಲಿ ಬಂಧಿತರಾಗಿ, ಕಾನೂನು ಪ್ರಕ್ರಿಯೆಗಳು ಶುರುವಾದ ಬೆನ್ನಲ್ಲೇ ಅವರ ಅಣ್ಣ ಚೇತನ್​ ಚಿನು ಭಾಯ್​ ಚೋಕ್ಸಿ ಫೀಲ್ಡ್​​ಗೆ ಇಳಿದಿದ್ದಾರೆ. ಮೇ 29ರಂದು ಖಾಸಗಿ ಜೆಟ್​​ನಲ್ಲಿ ಡೊಮಿನಿಕಾವವನ್ನು ತಲುಪಿದ್ದಾರೆ.

ಮೆಹುಲ್​ ಚೋಕ್ಸಿಯನ್ನು ಕರೆತರಲು ಭಾರತಕ್ಕೆ ಕಾನೂನು ತೊಡಕು?-ಅತ್ತ ಡೊಮಿನಿಕಾ ಪ್ರತಿಪಕ್ಷ ನಾಯಕನಿಗೆ ಹಣದಾಸೆ ತೋರಿದ ಚೋಕ್ಸಿ ಸೋದರ !
ಮೆಹುಲ್ ಚೋಸ್ಕಿ
Lakshmi Hegde
|

Updated on: Jun 02, 2021 | 4:35 PM

Share

ಡೊಮಿನಿಕಾದಲ್ಲಿ ಬಂಧಿತನಾಗಿರುವ ಮೆಹುಲ್​ ಚೋಕ್ಸಿ ಗಡೀಪಾರಿಗೆ ಸಂಬಂಧಪಟ್ಟ ಪ್ರಕರಣದ ಅರ್ಜಿ ವಿಚಾರಣೆ ಇಂದು ಪೂರ್ವ ಕೆರಿಬಿಯನ್​ ಸುಪ್ರಿಂಕೋರ್ಟ್​ನಲ್ಲಿ ಇಂದು ನಡೆಯುವುದಿತ್ತು. ಭಾರತದ ಪಾಲಿಗೆ ದೇಶಭ್ರಷ್ಟ ವಜ್ರದ ವ್ಯಾಪಾರಿಯಾಗಿರುವ ಚೋಕ್ಸಿ, ಇಲ್ಲಿಂದ ಆಂಟಿಗುವಾಕ್ಕೆ ಹೋಗಿ, ತಮ್ಮ ವಿರುದ್ಧ ಕಾನೂನು ಪ್ರಕ್ರಿಯೆಗಳು ಶುರುವಾಗುತ್ತಿದ್ದಂತೆ ಅಲ್ಲಿಂದ ಗುಟ್ಟಾಗಿ ಡೊಮಿನಿಕಾಗೆ ನುಸುಳಿದ್ದರು. ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಹಗರಣದ ತನಿಖೆಯನ್ನು ಸಿಬಿಐ ಶುರುಮಾಡುವುದಕ್ಕೂ ಒಂದು ವಾರ ಮೊದಲು ಆಂಟಿಗುವಾಕ್ಕೆ ತೆರಳಿದ್ದ ಚೋಕ್ಸಿ, 2017ರ ನವೆಂಬರ್​ನಲ್ಲಿ ಅಲ್ಲಿನ ಹೂಡಿಕೆ ಮೂಲಕ ಪೌರತ್ವ ಪಡೆಯುವ (CIP) ಕಾರ್ಯಕ್ರಮದ ಮೂಲಕ ಆಂಟಿಗುವಾ ಪೌರತ್ವ ಪಡೆದಿದ್ದರು.

ಡೊಮಿನಿಕಾದಲ್ಲಿ ಚೋಕ್ಸಿ ಬಂಧಿತರಾಗುತ್ತಿದ್ದಂತೆ ಭಾರತ ಅಲ್ಲಿಗೆ ಎಂಟು ಜನ ಅಧಿಕಾರಿಗಳ ತಂಡವನ್ನು ಕಳಿಸಿದೆ. ಚೋಕ್ಸಿಯನ್ನು ಕಾನೂನು ಪ್ರಕ್ರಿಯೆ ಮೂಲಕ ಕರೆತರಲು ಈ ತಂಡ ತೆರಳಿದ್ದು, ಶಾರದಾ ರಾವತ್​ ಎಂಬ ಮಹಿಳಾ ಸಿಬಿಐ ಅಧಿಕಾರಿ ತಂಡದ ನೇತೃತ್ವ ವಹಿಸಿದ್ದಾರೆ. ಆದರೆ ಚೋಕ್ಸಿಯ ಪರ ವಕೀಲರ ಮನವಿಯ ಮೇರೆಗೆ ಚೋಕ್ಸಿಯನ್ನು ಭಾರತಕ್ಕೆ ಕಳಿಸಲು ಸದ್ಯದ ಮಟ್ಟಿಗೆ ಪೂರ್ವ ಕೆರಿಬಿಯನ್​ ಸುಪ್ರೀಂಕೋರ್ಟ್​ ತಡೆ ನೀಡಿದೆ.

ಇನ್ನು ಚೋಕ್ಸಿಯನ್ನು ಭಾರತಕ್ಕೆ ಕಳಿಸದಂತೆ ತಡೆಯಲು ಅವರ ಪರ ಲಂಡನ್​ನ ನಾಲ್ವರು ವಕೀಲರು ಕೆಲಸ ಮಾಡುತ್ತಿದ್ದಾರೆ. ಚೋಕ್ಸಿಗೆ ಕಳೆದ 6ತಿಂಗಳಿಂದ ಪರಿಚಯವಿದ್ದ ಯುವತಿಯೊಬ್ಬಳು ಅವರನ್ನು ಹನಿಟ್ರ್ಯಾಪ್​ ಮಾಡಿದ್ದಾಳೆ. ಆಂಟಿಗುವಾದಲ್ಲಿ ಆ ಯುವತಿ ಮೆಹುಲ್​ ಚೋಕ್ಸಿಯನ್ನು ಭೇಟಿಗಾಗಿ ಕರೆದಿದ್ದಳು. ಅಲ್ಲಿಂದ ಅವರನ್ನು ಪುರುಷರ ಗುಂಪೊಂದು ಅಪಹರಿಸಿ ಕರೆದುಕೊಂಡು ಹೋಗಿದೆ ಎಂದು ವಕೀಲರ ತಂಡ ಕೋರ್ಟ್​ಗೆ ಹೇಳಿದೆ. ಅಷ್ಟೇ ಅಲ್ಲ, ಅವರು ಭಾರತದ ಪ್ರಜೆ ಅಲ್ಲ, ಆಂಟಿಗುವಾ ಪ್ರಜೆ ಎಂಬುದರ ದಾಖಲೆಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದೆ. ಹೀಗಾಗಿ ಭಾರತಕ್ಕೆ ಚೋಕ್ಸಿಯನ್ನು ಅಷ್ಟು ಸುಲಭಕ್ಕೆ ಕರೆತರುವುದು ಸಾಧ್ಯವಿಲ್ಲ. ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆಯಾಗಲೇಬೇಕಾಗಿದೆ.

ಭಾರತದ ಪೌರತ್ವ ರದ್ದಾಗಿಲ್ಲ ಮೆಹುಲ್​ ಚೋಕ್ಸಿ ಇಲ್ಲಿಯೂ ಒಂದು ಎಡವಟ್ಟು ಮಾಡಿದ್ದಾರೆ. ಅವರು ಆಂಟಿಗುವಾ ಪೌರತ್ವ ಪಡೆದುಕೊಂಡಿದ್ದರೂ, ಭಾರತದ ಪೌರತ್ವವನ್ನು ರದ್ದು ಮಾಡಿಕೊಂಡಿಲ್ಲ. ಇದು ಚೋಕ್ಸಿಯನ್ನು ಭಾರತಕ್ಕೆ ಕರೆತರುವ ಪ್ರಯತ್ನಕ್ಕೆ ಮುನ್ನಡೆ ಕೊಡುವ ಅಂಶವಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದ್ದಾಗಿ ಹಿಂದೂಸ್ತಾನ್ ಟೈಮ್ಸ್​ ವರದಿ ಮಾಡಿದೆ. ಆದರೆ ಎರಡು ಪೌರತ್ವವನ್ನು ಭಾರತ ಅನುಮತಿಸುವುದಿಲ್ಲ. 1955ರ ಪೌರತ್ವ ಕಾಯ್ದೆ ಸೆಕ್ಷನ್​ 9ರ ಪ್ರಕಾರ ಚೋಕ್ಸಿ ಆಂಟಿಗುವಾ ಪೌರತ್ವ ಪಡೆಯುತ್ತಿದ್ದಂತೆ ಭಾರತದ ಪೌರತ್ವವನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಈ ವಿಚಾರದಲ್ಲಿ ಭಾರತಕ್ಕೆ ವಾದಮಂಡನೆ ತುಸು ಕಷ್ಟವೇ ಆಗಬಹುದು.

ಇನ್ನೊಂದು ವಿಚಾರ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ಸಹಾಯ ಮಾಡಬಹುದು. ಮೆಹುಲ್​ ಚೋಕ್ಸಿ ಮಾಡಿದ್ದು ಆರ್ಥಿಕ ಅಪರಾಧ. ಆತನ ವಿರುದ್ಧ ರೆಡ್​ ಇಂಟರ್​​ಪೋಲ್​ ನೋಟಿಸ್​ ಜಾರಿಯಾಗಿತ್ತು. ಈ ಇಂಟರ್​ಪೋಲ್​ ನೋಟಿಸ್ ಜಾರಿಯಾದಾಗಿಯೂ ಚೋಕ್ಸಿ ದೇಶಬಿಟ್ಟು ಹೋಗಿದ್ದಾರೆ. ಇದು ಕಾನೂನು ಪ್ರಕಾರ ತಪ್ಪು ಎಂಬುದನ್ನು ಭಾರತ ಡೊಮಿನಿಕಾ ಕೋರ್ಟ್​ಗೆ ಮನವರಿಕೆ ಮಾಡಿಸಿಕೊಡಬೇಕಾಗುತ್ತದೆ. ಇಂಟರ್​ಪೋಲ್​ ನೋಟಿಸ್​ ಅನ್ವಯ ಡೊಮಿನಿಕಾ ನ್ಯಾಯಾಲಯ ಯಾವುದೇ ಸಮಯದಲ್ಲಾದರೂ ಚೋಕ್ಸಿಯನ್ನು ಭಾರತಕ್ಕೆ ಕಳಿಸಬಹುದು. ಆದರೆ ಚೋಕ್ಸಿ ಹನಿಟ್ರ್ಯಾಪ್​ ಆಗಿದ್ದಕ್ಕೆ ಬಲವಾದ ಸಾಕ್ಷಿ ಸಿಕ್ಕರೆ ಕೋರ್ಟ್​ ಖಂಡಿತ ಚೋಕ್ಸಿಯನ್ನು ಆಂಟಿಗುವಾಕ್ಕೆ ಕಳಿಸುತ್ತದೆ ಎಂದು ಸಿಬಿಐ ನಿರ್ದೇಶಕ ಎಪಿ ಸಿಂಗ್​ ಹೇಳಿದ್ದಾರೆ.

ಡೊಮಿನಿಕಾ ಪ್ರತಿಪಕ್ಷ ನಾಯಕನ ಭೇಟಿ ಮಾಡಿದ ಚೋಕ್ಸಿ ಅಣ್ಣ ಚೋಕ್ಸಿ ಡೊಮಿನಿಕಾದಲ್ಲಿ ಬಂಧಿತರಾಗಿ, ಕಾನೂನು ಪ್ರಕ್ರಿಯೆಗಳು ಶುರುವಾದ ಬೆನ್ನಲ್ಲೇ ಅವರ ಅಣ್ಣ ಚೇತನ್​ ಚಿನು ಭಾಯ್​ ಚೋಕ್ಸಿ ಫೀಲ್ಡ್​​ಗೆ ಇಳಿದಿದ್ದಾರೆ. ಮೇ 29ರಂದು ಖಾಸಗಿ ಜೆಟ್​​ನಲ್ಲಿ ಡೊಮಿನಿಕಾವನ್ನು ತಲುಪಿರುವ ಅವರು, ಅಲ್ಲಿನ ಪ್ರತಿಪಕ್ಷ ನಾಯಕ ಲೆನಾಕ್ಸ್​ ಲಿಂಟಿನ್​​ರನ್ನು ಭೇಟಿಯಾಗಿ ಒಪ್ಪಂದವೊಂದಕ್ಕೆ ಬಂದಿದ್ದಾರೆ. ಚೋಕ್ಸಿ ಬಂಧನ, ಅವರನ್ನು ಥಳಿಸಿದ ಬಗ್ಗೆ ನೀವು ಸಂಸತ್ತಿನಲ್ಲಿ ಧ್ವನಿಯೆತ್ತಿ, ನಮಗೆ ಸಹಾಯ ಮಾಡಿ. ಅದಕ್ಕೆ ಪ್ರತಿಯಾಗಿ ನಾನು ನಿಮಗೆ ಚುನಾವಣೆಗೆ ಧನ ಸಹಾಯ ಮಾಡುತ್ತೇನೆ ಎಂದು ವ್ಯವಹಾರ ಕುದುರಿಸಿದ್ದಾಗಿ ಕೆರಿಬಿಯನ್​ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ: ಕನ್ನಡದಲ್ಲಿ ಬರ್ತಿದೆ ನೇತಾಜಿ ಸುಭಾಷ್​ ಚಂದ್ರ ಬೋಸ್​ ಬಗ್ಗೆ ಧಾರಾವಾಹಿ; ಜೂನ್​ 7ರಿಂದ ಶುರು

Some leagal issues in bringing Fugitive jeweller Mehul Choksi back to India

Follow Us
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು