ಆದಿತ್ಯ ಠಾಕ್ರೆ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ; ಇದು ಸಂಚು ಎಂದು ಆರೋಪಿಸಿದ ಶಿವಸೇನಾ ನಾಯಕ

ಘಟನೆಯ ನಂತರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಣಕ್ಕೆ ಸೇರಿದ ಮತ್ತು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ದಾನ್ವೆ ಅವರು ಭದ್ರತಾ ಲೋಪಗಳ ಬಗ್ಗೆ ದೂರು ನೀಡಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ

ಆದಿತ್ಯ ಠಾಕ್ರೆ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ; ಇದು ಸಂಚು ಎಂದು ಆರೋಪಿಸಿದ ಶಿವಸೇನಾ ನಾಯಕ
ಆದಿತ್ಯ ಠಾಕ್ರೆ
ರಶ್ಮಿ ಕಲ್ಲಕಟ್ಟ

Updated on: Feb 08, 2023 | 3:23 PM

ಮಹಾರಾಷ್ಟ್ರದ (Maharashtra) ಔರಂಗಾಬಾದ್‌ನಲ್ಲಿ ನಿನ್ನೆ ರಾತ್ರಿ ನಡೆದ ಸಭೆಯಲ್ಲಿ ಶಿವಸೇನಾ (Shiv Sena) ನಾಯಕ ಆದಿತ್ಯ ಠಾಕ್ರೆ (Aaditya Thackeray) ಅವರ ಕಾರಿನ ಮೇಲೆ ಕಲ್ಲು ತೂರಲಾಗಿದೆ ಎಂದು ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಬುಧವಾರ ಹೇಳಿದ್ದಾರೆ. ಮಹಲ್ಗಾಂವ್ ಗ್ರಾಮದಲ್ಲಿ ಠಾಕ್ರೆಯವರ ಶಿವಸಂವಾದ ಯಾತ್ರೆಯ ಸಂದರ್ಭದಲ್ಲಿ ರಮಾಬಾಯಿ ಅಂಬೇಡ್ಕರ್ ಜನ್ಮದಿನದ ಆಚರಣೆಯೊಂದಿಗೆ ಅವರ ಕಾರ್ಯಕ್ರಮ ಘರ್ಷಣೆಯಾದಾಗ ಈ ಘಟನೆ ಸಂಭವಿಸಿದೆ ಎಂದು ಎಎನ್ಐ ವರದಿ ಮಾಡಿದೆ.

ಘಟನೆಯ ನಂತರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಣಕ್ಕೆ ಸೇರಿದ ಮತ್ತು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ದಾನ್ವೆ ಅವರು ಭದ್ರತಾ ಲೋಪಗಳ ಬಗ್ಗೆ ದೂರು ನೀಡಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಎರಡು ಗುಂಪುಗಳ ನಡುವೆ ಬಿರುಕು ಮೂಡಿಸುವ ಉದ್ದೇಶದಿಂದ ‘ಸಮಾಜ ವಿರೋಧಿ’ಗಳು ಕಲ್ಲುಗಳನ್ನು ಎಸೆದಿದ್ದಾರೆ ಎಂದು ದಾನ್ವೆ ಹೇಳಿದ್ದಾರೆ.

ಮಂಗಳವಾರ ಔರಂಗಾಬಾದ್‌ನ ಗ್ರಾಮಾಂತರ ಪ್ರದೇಶದಲ್ಲಿ ಆದಿತ್ಯ ಅವರ ವಾಹನದ ಮೇಲೆ ಕಲ್ಲು ತೂರಾಟ ನಡೆದಿದೆ. ದಯವಿಟ್ಟು ಇದನ್ನು ಪರಿಶೀಲಿಸಿ. ಆದಿತ್ಯ ಠಾಕ್ರೆ ಅವರ ಭದ್ರತೆಯನ್ನು ಬಿಗಿಗೊಳಿಸುವ ಅಗತ್ಯವಿದೆಎಂದು ಅವರು ಹೇಳಿದರು. ಠಾಕ್ರೆ ಅವರ ಬೆಂಗಾವಲು ಪಡೆ ಹೊರಡುವಾಗ ಒಂದು ಕಲ್ಲು ಕಾರ್ಯಕ್ರಮ ನಡೆಯುವಲ್ಲಿಗೆ ಬಿದ್ದಿದೆ. ಸ್ಥಳೀಯ ಶಾಸಕ ರಮೇಶ ಬೋರ್ನಾರೆ ಅವರನ್ನು ಬೆಂಬಲಿಸಿ ಜನಸಂದಣಿ ಘೋಷಣೆಗಳನ್ನು ಕೂಗಿದೆ. ಇದು ಗುಂಪು ಘರ್ಷಣೆಗೆ ಸಮಾಜ ವಿರೋಧಿಗಳ ಪ್ರಯತ್ನವಾಗಿದೆ ಎಂದು ದಾನ್ವೆ ಹೇಳಿದ್ದಾರೆ.

ಇದನ್ನೂ ಓದಿ: ಅದಾನಿ ವಿಚಾರದಲ್ಲಿ ಮೇಲ್ಮನೆಯಲ್ಲಿ ಗದ್ದಲ; ರಾಜ್ಯಸಭೆಯಲ್ಲಿ ಮೋದಿಯನ್ನು ಮೌನಿ ಬಾಬಾ ಎಂದ ಮಲ್ಲಿಕಾರ್ಜುನ ಖರ್ಗೆ

ಪೊಲೀಸರು ತಮ್ಮ ಕಾರ್ಯಕ್ರಮ ಮತ್ತು ಮೆರವಣಿಗೆಯನ್ನು ನಿಲ್ಲಿಸುವಂತೆ ಕೇಳಿಕೊಂಡ ನಂತರ ಜನಸಮೂಹ ಸಿಟ್ಟುಗೊಂಡಿದೆ ಎಂದು ದಾನ್ವೆ ಹೇಳಿದ್ದಾರೆ.

ಪರಿಸ್ಥಿತಿಯನ್ನು ಅವಲೋಕಿಸಿದ ಠಾಕ್ರೆ ವೇದಿಕೆಯಿಂದ ಕೆಳಗಿಳಿದು ಭಾಷಣ ಮಾಡಿದ್ದು ಅನಾನುಕೂಲತೆಗಾಗಿ ಪ್ರೇಕ್ಷಕರಲ್ಲಿ ಕ್ಷಮೆಯಾಚಿಸಿದರು. ಅವರು ಡಿಜೆ ನುಡಿಸಲು ಮತ್ತು ಮೆರವಣಿಗೆಯನ್ನು ನಡೆಸಲು ಬಯಸಿದರೆ ಅದನ್ನು ಮಾಡಬಹುದು ಎಂದು ಠಾಕ್ರೆ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.ಠಾಕ್ರೆಯವರ ಕಾರನ್ನು ತಡೆಯಲು ಜನರು ಪ್ರಯತ್ನಿಸಿದರು ಎಂದು ದಾನ್ವೆ ಆರೋಪಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:13 pm, Wed, 8 February 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us