AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್‌ಡಿಎಯಿಂದ ಹೊರನಡೆದ ನಂತರ ಎಐಎಡಿಎಂಕೆ ಮುಖ್ಯಸ್ಥ ಇಪಿಎಸ್​​ನ್ನು ಮೂರ್ಖ ರಾಜನಾಗಿ ಚಿತ್ರಿಸಿದ ಬಿಜೆಪಿ

ಸನಾತನ ರಕ್ಷಣೆಗೆ ಕೇಸರಿ ಪಡೆಗಳು ಸಿದ್ಧವಾಗಿವೆ!! ಹುಲಿಗಳಂತಹ ನಾಯಕರಿರುವ ನಮಗೆ ಪುಲಿಕೇಶಿಯ ಬೆಂಬಲ ಏಕೆ ಬೇಕು? ಎಂದು ಪೋಸ್ಟರ್​​​ನಲ್ಲಿ ಬರೆದಿದೆ. ಬಿಜೆಪಿಯ ಮಧುರೈ ಘಟಕ ಹಾಗೂ ಜಿಲ್ಲಾ ಕಾರ್ಯದರ್ಶಿ ರಾಜ್‌ಕುಮಾರ್‌ ಅವರ ಪರವಾಗಿ ಈ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ‘ಕಿಂಗ್ ಮೇಕರ್’ ಎಂದು ಬಿಂಬಿಸಿ ಎಐಎಡಿಎಂಕೆ ಹಾಕಿರುವ ಪೋಸ್ಟರ್‌ಗಳ ಪಕ್ಕದಲ್ಲಿ ಈ ಪೋಸ್ಟರ್‌ಗಳನ್ನು ಅಂಟಿಸಿ ಟಾಂಗ್ ನೀಡಲಾಗಿದೆ.

ಎನ್‌ಡಿಎಯಿಂದ ಹೊರನಡೆದ ನಂತರ ಎಐಎಡಿಎಂಕೆ ಮುಖ್ಯಸ್ಥ ಇಪಿಎಸ್​​ನ್ನು ಮೂರ್ಖ ರಾಜನಾಗಿ ಚಿತ್ರಿಸಿದ ಬಿಜೆಪಿ
ಬಿಜೆಪಿ ಪೋಸ್ಟರ್Image Credit source: News9
ರಶ್ಮಿ ಕಲ್ಲಕಟ್ಟ
|

Updated on:Sep 26, 2023 | 6:14 PM

Share

ಮಧುರೈ ಸೆಪ್ಟೆಂಬರ್ 26: ಎಐಎಡಿಎಂಕೆ (AIADMK) ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್​​​ನಿಂದ (NDA) ಹೊರನಡೆದ ಒಂದು ದಿನದ ನಂತರ ಮಂಗಳವಾರ ತಮಿಳುನಾಡಿನ ಮಧುರೈನಲ್ಲಿ ಎಡಪ್ಪಾಡಿ ಕೆ ಪಳನಿಸ್ವಾಮಿ (EPS) ಅವರನ್ನು ಟೀಕಿಸುವ ವಾಲ್ ಪೋಸ್ಟರ್‌ಗಳನ್ನು ಬಿಜೆಪಿ ಹಾಕಿದೆ. ಪೋಸ್ಟರ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಜ್ಯ ಮುಖ್ಯಸ್ಥ ಕೆ ಅಣ್ಣಾಮಲೈ ಮತ್ತು ಬಿಜೆಪಿ ಸ್ಥಳೀಯ ನಾಯಕರು ಇದ್ದು, ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು 23 ನೇ ಪುಲಿಕೇಸಿ (ತಮಿಳಿನ ಜನಪ್ರಿಯ ನಟ ವಡಿವೇಲು ಪಾತ್ರ ನಿರ್ವಹಿಸಿದ ಇಮಸೈ ಅರಸನ್ ಇರುಪತ್ತಿಮೂನಾಂ ಪುಲಿಕೇಸಿ ಎಂಬ ತಮಿಳು ಚಲನಚಿತ್ರದ ಮೂರ್ಖ ರಾಜ) ಎಂದು ಚಿತ್ರಿಸಿದ್ದಾರೆ.

ಸನಾತನ ರಕ್ಷಣೆಗೆ ಕೇಸರಿ ಪಡೆಗಳು ಸಿದ್ಧವಾಗಿವೆ!! ಹುಲಿಗಳಂತಹ ನಾಯಕರಿರುವ ನಮಗೆ ಪುಲಿಕೇಶಿಯ ಬೆಂಬಲ ಏಕೆ ಬೇಕು? ಎಂದು ಪೋಸ್ಟರ್​​​ನಲ್ಲಿ ಬರೆದಿದೆ. ಬಿಜೆಪಿಯ ಮಧುರೈ ಘಟಕ ಹಾಗೂ ಜಿಲ್ಲಾ ಕಾರ್ಯದರ್ಶಿ ರಾಜ್‌ಕುಮಾರ್‌ ಅವರ ಪರವಾಗಿ ಈ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ‘ಕಿಂಗ್ ಮೇಕರ್’ ಎಂದು ಬಿಂಬಿಸಿ ಎಐಎಡಿಎಂಕೆ ಹಾಕಿರುವ ಪೋಸ್ಟರ್‌ಗಳ ಪಕ್ಕದಲ್ಲಿ ಈ ಪೋಸ್ಟರ್‌ಗಳನ್ನು ಅಂಟಿಸಿ ಟಾಂಗ್ ನೀಡಲಾಗಿದೆ.

2024 ರ ಲೋಕಸಭೆ ಚುನಾವಣೆಗಾಗಿ ಸೋಮವಾರ ಬಿಜೆಪಿ ಜತೆಗಿನ ಸಂಬಂಧವನ್ನು ಎಐಎಡಿಎಂಕೆ ರದ್ದುಗೊಳಿಸಿದೆ. ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವ ಪಕ್ಷದ ನಿರ್ಧಾರದ ನಂತರ ಚೆನ್ನೈನಲ್ಲಿರುವ ಎಐಎಡಿಎಂಕೆ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು. ಪಕ್ಷದ ಉನ್ನತ ಮಟ್ಟದ ಸಭೆಯು ಎಐಎಡಿಎಂಕೆ ನಾಯಕರು ಮತ್ತು ಸಿದ್ಧಾಂತದ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿರುವ ಬಿಜೆಪಿ ತಮಿಳುನಾಡು ಘಟಕವನ್ನು ಟೀಕಿಸುವ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು.

ಇದನ್ನೂ ಓದಿ: AIADMK: ಬಿಜೆಪಿ ಜೊತೆಗಿಲ್ಲ ಎಐಎಡಿಎಂಕೆ; ಎನ್​​ಡಿಎ ಮೈತ್ರಿಯಿಂದ ಹೊರಬರಲು ನಿರ್ಧಾರ

ಈ ಎಲ್ಲ ಬೆಳವಣಿಗೆಗಳ ಮಧ್ಯೆ. ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಪ್ರತಿಕ್ರಿಯಿಸಿದ್ದು, ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರದ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕತ್ವವು ಪ್ರತಿಕ್ರಿಯಿಸುತ್ತದೆ ಎಂದು ಹೇಳಿದ್ದಾರೆ. ಇದೊಂದು ಕಾರ್ಯವಿಧಾನ, ಈ ಬಗ್ಗೆ ನಾನು ಆಮೇಲೆ ಮಾತಾನಾಡುವೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Tue, 26 September 23

ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ