AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ; ಮೋದಿಯವರ ದೃಢ ನಿಲುವು ಆಗಿತ್ತು ಅದು

Narendra Modi: ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅಲ್ಲಿಯವರೆಗೆ ದೇಶದ ಜನಸಂಖ್ಯೆಯ ಶೇಕಡಾ 50 ರಷ್ಟಿದ್ದ ಮಹಿಳೆಯರನ್ನು ಒಳಗೊಳ್ಳಲು ಇದು ಅತ್ಯುತ್ತಮ ವ್ಯವಸ್ಥೆಯಾಗಿತ್ತು. ಆದಾಗ್ಯೂ, ನಾಗರಿಕ ಸಂಸ್ಥೆಗಳು ಮತ್ತು ಪಂಚಾಯತ್‌ಗಳಲ್ಲಿ ಈಗಿರುವ ಶೇಕಡಾ 33 ರ ಮೀಸಲಾತಿಯನ್ನು ಮುಂದುವರಿಸಬೇಕು ಎಂದು ಮೋದಿ ಪ್ರತಿಪಾದಿಸಿದರು ಎಂದು ಈ ಸುದ್ದಿಯಲ್ಲಿದೆ

ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ; ಮೋದಿಯವರ ದೃಢ ನಿಲುವು ಆಗಿತ್ತು ಅದು
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Sep 26, 2023 | 8:24 PM

ದೆಹಲಿ ಸೆಪ್ಟೆಂಬರ್ 26: ಲೋಕಸಭೆ (Lok sabha) ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳನ್ನು ನೀಡುವ ಮಹಿಳಾ ಮೀಸಲಾತಿ ಮಸೂದೆ (Women’s Reservation Bill) ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಈ ಮಸೂದೆ ಅಂಗೀಕಾರವಾದ ನಂತರ ಮಾತನಾಡಿದ್ದ ಪ್ರಧಾನಿ ಮೋದಿ (PM Modi), ನಾನು ದೇಶದ ಎಲ್ಲ ಹೆಣ್ಣು ಮಕ್ಕಳನ್ನು ಅಭಿನಂದಿಸುತ್ತೇನೆ. ಸೆಪ್ಟೆಂಬರ್ 21 ಮತ್ತು 22ರಂದು ನಾವು ಹೊಸ ಇತಿಹಾಸ ರಚಿಸಿದ್ದೇವೆ.ಮಹಿಳಾ ಮೀಸಲಾತಿ ಬರೀ ಕಾನೂನು ಅಲ್ಲ ಅದು ನವ ಭಾರತದ ಹೊಸ ಶಕ್ತಿ ಎಂದು ಹೇಳಿದ್ದರು.

ಅಂದಹಾಗೆ ಪ್ರಧಾನಿ ಮೋದಿ ಯಾವತ್ತೂ ನೀತಿ ರಚನೆಯಲ್ಲಿ  ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂಬ ನಿಲುವು ಹೊಂದಿದವರು ಆಗಿದ್ದರು. ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ, ಮೋದಿ ಆರ್ಕೈವ್ ಖಾತೆ ಎರಡು ನ್ಯೂಸ್ ಪೇಪರ್ ಕಟ್ಟಿಂಗ್​​​ಗಳನ್ನು ಹಂಚಿಕೊಂಡಿದ್ದು, ಮೋದಿ ಮಹಿಳಾ ಪ್ರಾತಿನಿಧ್ಯದ ಪರ ಇದ್ದರು ಎಂಬುದನ್ನು ಇದು ತೋರಿಸುತ್ತದೆ.

ಪಿಎಂ ನರೇಂದ್ರ ಮೋದಿ ನೀತಿ ನಿರೂಪಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯದ ಪರವಾಗಿಯೇ ಇದ್ದರು. 2000 ಇಸವಿಯಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ, ಸಂಸತ್ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳಾ ಮೀಸಲಾತಿಯ ಬೇಡಿಕೆಯನ್ನು ಬೆಂಬಲಿಸುವಲ್ಲಿ ಮೋದಿ ಮುಂಚೂಣಿಯಲ್ಲಿದ್ದರು. 2000 ರಲ್ಲಿ ಮಸೂದೆಯು ಇನ್ನೂ ಸಮಿತಿಗಳಲ್ಲಿ ಚರ್ಚೆಯಾಗಿದ್ದರೂ ಮತ್ತು ಒಮ್ಮತವಿರಲಿಲ್ಲ. ಆದರೆ ಮೋದಿ ತೆಗೆದುಕೊಂಡ ನಿಲುವು ಅಚಲವಾಗಿತ್ತು. ಅಂತಿಮವಾಗಿ, ಮಸೂದೆಯು 23 ವರ್ಷಗಳ ನಂತರ, ಸಂಸತ್ತಿನ ಎರಡೂ ಸದನಗಳಲ್ಲಿ ಸರ್ವಾನುಮತದಿಂದ ಅಂಗೀಕರಿಸಿಲ್ಪಟ್ಟಿತು ಎಂಬ ಬರಹದೊಂದಿಗೆ ಪತ್ರಿಕೆಯ ಸುದ್ದಿ ಶೇರ್ ಮಾಡಲಾಗಿದೆ.

ಸಂಸತ್​​ನ ಕಾಯಿದೆಯು 33 ಪ್ರತಿಶತ ಸ್ಥಾನಗಳನ್ನು ಮೀಸಲಿಡುವವರೆಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ನಡೆಯುವ ಚುನಾವಣೆಯಲ್ಲಿ ಕನಿಷ್ಠ ಸಂಖ್ಯೆಯ ಮಹಿಳೆಯರನ್ನು ಕಣಕ್ಕಿಳಿಸಲು ರಾಜಕೀಯ ಪಕ್ಷಗಳು ಒಮ್ಮತವನ್ನು ರೂಪಿಸಬೇಕು ಎಂದು ಮೋದಿ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಸುದ್ದಿಯನ್ನು ಎಕ್ಸ್ ನಲ್ಲಿ ಶೇರ್ ಮಾಡಲಾಗಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ನರೇಂದ್ರ ಮೋದಿ ಅವರು ಮುಖ್ಯ ಚುನಾವಣಾ ಆಯೋಗದ (ಸಿಇಸಿ) ಎಂಎಸ್ ಗಿಲ್ ಅವರ ಈ ಸಲಹೆಯನ್ನು ಅನುಮೋದಿಸಿದ್ದಾರೆ. ಸಿಇಸಿ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ವಿವಿಧ ಪಕ್ಷಗಳು ಇದನ್ನು ಒಪ್ಪುತ್ತವೆ ಎಂದು ಆಶಿಸಿದ್ದಾರೆ.ಮಹಿಳಾ ಮೀಸಲಾತಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ನೀಡಲಾಗಿದೆ ಎಂದು ಅವರು ಹೇಳಿದರು ಎಂದು ಸುದ್ದಿಯಲ್ಲಿದೆ.

ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅಲ್ಲಿಯವರೆಗೆ ದೇಶದ ಜನಸಂಖ್ಯೆಯ ಶೇಕಡಾ 50 ರಷ್ಟಿದ್ದ ಮಹಿಳೆಯರನ್ನು ಒಳಗೊಳ್ಳಲು ಇದು ಅತ್ಯುತ್ತಮ ವ್ಯವಸ್ಥೆಯಾಗಿತ್ತು. ಆದಾಗ್ಯೂ, ನಾಗರಿಕ ಸಂಸ್ಥೆಗಳು ಮತ್ತು ಪಂಚಾಯತ್‌ಗಳಲ್ಲಿ ಈಗಿರುವ ಶೇಕಡಾ 33 ರ ಮೀಸಲಾತಿಯನ್ನು ಮುಂದುವರಿಸಬೇಕು ಎಂದು ಮೋದಿ ಪ್ರತಿಪಾದಿಸಿದರು ಎಂದು ಈ ಸುದ್ದಿಯಲ್ಲಿದೆ.

ಇಂದ್ರಜಿತ್ ವರದಿಯನ್ನು ಸಂಪೂರ್ಣವಾಗಿ ಸ್ವೀಕರಿಸಿ ಎಂದು ಬಿಜೆಪಿ ನಾಯಕ ಮೋದಿ ಹೇಳಿರುವುದು ಇನ್ನೊಂದು ಸುದ್ದಿ. ಮಹಿಳಾ ಮೀಸಲಾತಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಯು ಪರಿಗಣಿಸಿ ಅದರ ಫಲಿತಾಂಶಗಳನ್ನು ನೀಡುವವರೆಗೆ ಮಹಿಳೆಯರಿಗೆ ಕನಿಷ್ಠ ಮೀಸಲಾತಿ ಮತ್ತು ಅದರ ಅನುಷ್ಠಾನದ ಕುರಿತು ಎಲ್ಲಾ ಮಾನ್ಯತೆ ಪಡೆದ ಪಕ್ಷಗಳೊಂದಿಗೆ ಮಧ್ಯಂತರ ಒಪ್ಪಂದಕ್ಕೆ ಬಿಜೆಪಿಯ ಹಿರಿಯ ನಾಯಕ ನರೇಂದ್ರ ಮೋದಿ ಬಲವಾಗಿ ಒಲವು ತೋರಿದ್ದಾರೆ ಎಂದು ಈ ಸುದ್ದಿಯಲ್ಲಿದೆ.

ಎಲ್ಲಾ ಪಕ್ಷಗಳ ಚುನಾವಣಾ ಸುಧಾರಣೆಗಳ ಕುರಿತಾದ ಇಂದ್ರಜಿತ್ ಸಮಿತಿಯ ವರದಿಯ ಶಿಫಾರಸುಗಳನ್ನು ಅಂಗೀಕರಿಸುವ ಪರವಾಗಿಯೂ ಮೋದಿ ಇದ್ದಾರೆ ಎಂದು ಸುದ್ದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಕೆನಡಾದಲ್ಲಿ ಭಾರತದ ರಾಷ್ಟ್ರಧ್ವಜ ಸುಟ್ಟು, ಮೋದಿ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು ಸಿಖ್ಖರ ಪ್ರತಿಭಟನೆ

ಬಿಜೆಪಿಯ ಪಂಜಾಬ್ ಘಟಕದ ಸಾಂಸ್ಥಿಕ ಸಭೆಯಲ್ಲಿ ಭಾಗವಹಿಸಿದ ನಂತರ ದಿ ಸ್ಟೇಟ್ಸ್‌ಮನ್ ಜೊತೆಗಿನ ಸಂವಾದದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಮೋದಿ, ಚುನಾವಣೆಗಳಿಗೆ ರಾಜ್ಯ ಹಣ ಮತ್ತು ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆಯ ಬಗ್ಗೆ ವರದಿಯಲ್ಲಿ ಪ್ರಮುಖ ಸಲಹೆಗಳಿವೆ ಎಂದು ಹೇಳಿದರು. ಈ ಸಲಹೆಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು, ಚುನಾವಣಾ ಸುಧಾರಣೆಗಳ ಕುರಿತು ಭವಿಷ್ಯದ ಯಾವುದೇ ಪ್ರವಚನಕ್ಕೆ ಇವು ಆಧಾರವಾಗಬಲ್ಲವು. ಸಂಸತ್ತಿನ ಚುನಾವಣೆಯ ಸಂದರ್ಭದಲ್ಲಿ ತಮ್ಮ ಪಕ್ಷಗಳಲ್ಲಿ ಮಹಿಳೆಯರಿಗೆ ಕನಿಷ್ಠ ಮೀಸಲಾತಿಯನ್ನು ನಿರ್ದಿಷ್ಟಪಡಿಸುವ ಬಗ್ಗೆ ಒಮ್ಮತವನ್ನು ತರಬೇಕು ಎಂದು ಎಲ್ಲಾ ಪಕ್ಷಗಳಿಗೆ ಇಸಿಯ ಸಲಹೆಯು ಯೋಗ್ಯವಾಗಿದೆ ಎಂದು ಮೋದಿ ಹೇಳಿರುವುದಾಗಿ ಸುದ್ದಿಯಲ್ಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ