Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಳ್ಳತನ ಮಾಡಲು ಗೋಡೆ ಕೊರೆದು ಮದ್ಯದಂಗಡಿಗೆ ನುಗ್ಗಿದ ಕಳ್ಳರು ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದ ವಿಡಿಯೋ ವೈರಲ್

ಮದ್ಯದಂಗಡಿಯನ್ನು ಪ್ರವೇಶಿಸಲು ಗೋಡೆಗೆ ದೊಡ್ಡ ರಂಧ್ರವನ್ನು ಕೊರೆದ ಕಳ್ಳರು ಒಳಗೆ ಹೋದ ನಂತರ ಅಂಗಡಿಯಲ್ಲಿ ಇಟ್ಟಿದ್ದ ಮದ್ಯವನ್ನು ಕುಡಿಯಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ಅವರು ಪ್ರಜ್ಞೆಯನ್ನು ಕಳೆದುಕೊಂಡರು.

Viral Video: ಕಳ್ಳತನ ಮಾಡಲು ಗೋಡೆ ಕೊರೆದು ಮದ್ಯದಂಗಡಿಗೆ ನುಗ್ಗಿದ ಕಳ್ಳರು ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದ ವಿಡಿಯೋ ವೈರಲ್
ಕಳ್ಳತನ ಮಾಡಲು ಗೋಡೆ ಕೊರೆದು ಮದ್ಯದಂಗಡಿಗೆ ನುಗ್ಗಿದ ಕಳ್ಳರು
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Sep 05, 2022 | 3:47 PM

ಚೆನ್ನೈ: ಏನೇನೋ ಮಾಸ್ಟರ್ ಪ್ಲಾನ್ ಮಾಡಿ ಕಳ್ಳತನ ಮಾಡುವ ಎಷ್ಟೋ ಕಳ್ಳರಿದ್ದಾರೆ. ಆದರೆ, ತಮಿಳುನಾಡಿನ ತಿರುವಳ್ಳೂರಿನಲ್ಲಿ ಕುಡಿತದ ನಶೆಯಲ್ಲಿ ಮೈಮರೆತು ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಕಳ್ಳರು ಮದ್ಯದಂಗಡಿಯ ಗೋಡೆ ಕೊರೆದು, ಒಳಗೆ ನುಗ್ಗಿ ಅಲ್ಲಿದ್ದ ಮದ್ಯ ಸೇವಿಸಿದ್ದಾರೆ. ಕೊನೆಗೆ ಮೈಮೇಲೆ ಪ್ರಜ್ಞೆಯೇ ಇಲ್ಲದಂತೆ ಬಿದ್ದಿದ್ದ ಅವರನ್ನು ತಮಿಳುನಾಡಿನ ಪೊಲೀಸರು ಹೊರಗೆ ಎಳೆದು ತಂದಿದ್ದಾರೆ.

ಕದಿಯಲು ಹೋಗಿ, ಕುಡಿಯುತ್ತಾ ಕುಳಿತು ಸಿಕ್ಕಿಬಿದ್ದ ಈ ಇಬ್ಬರು ಕಳ್ಳರನ್ನು ಪಳ್ಳಿಕರಣೈ ನಿವಾಸಿ ಸತೀಶ್ ಮತ್ತು ವಿಲುಪುರಂ ಮೂಲದ ಮುನಿಯನ್ ಎಂದು ಗುರುತಿಸಲಾಗಿದೆ. ಇವರಿಬ್ಬರಿಂದ 14,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಕವರಾಯಪೆಟ್ಟೈನಲ್ಲಿರುವ ಸರ್ಕಾರಿ ಟಾಸ್ಮಾಕ್ ಮದ್ಯದ ಅಂಗಡಿಯ ಬಾಗಿಲು ಮುಚ್ಚಿದ ನಂತರ ಇಬ್ಬರು ಕಳ್ಳರು ಗೋಡೆ ಕೊರೆದು ಅದರೊಳಗೆ ಪ್ರವೇಶಿಸಿದ್ದರು.

ಇದನ್ನೂ ಓದಿ: ವೈರಲ್ ವಿಡಿಯೋ: ರೆಸ್ಟೊರೆಂಟ್ ನಲ್ಲಿ ಪ್ರೇಮ ನಿವೇದನೆ.. ಹುಡುಗಿ ರಿಜೆಕ್ಟ್ ಮಾಡಿದಾಗ ಹುಡುಗ ಮಾಡಿದ್ದೇನು? ಗೊತ್ತಾದ್ರೆ ನೀವು ಶಾಕ್ ಆಗ್ತೀರಾ!

ಮದ್ಯದಂಗಡಿಯನ್ನು ಪ್ರವೇಶಿಸಲು ಗೋಡೆಗೆ ದೊಡ್ಡ ರಂಧ್ರವನ್ನು ಕೊರೆದ ಕಳ್ಳರು ಒಳಗೆ ಹೋದ ನಂತರ ಅಂಗಡಿಯಲ್ಲಿ ಇಟ್ಟಿದ್ದ ಮದ್ಯವನ್ನು ಕುಡಿಯಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ಅವರು ಪ್ರಜ್ಞೆಯನ್ನು ಕಳೆದುಕೊಂಡರು. ಅಷ್ಟರಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಗೋಡೆಯ ದೊಡ್ಡ ರಂಧ್ರ ಮತ್ತು ಒಳಗೆ ಮದ್ಯದ ಬಾಟಲಿಗಳೊಂದಿಗೆ ಕುಳಿತಿದ್ದ ಕಳ್ಳರಿಬ್ಬರನ್ನು ನೋಡಿ ಆಘಾತಕ್ಕೊಳಗಾದರು. ನಂತರ ಅವರಿಬ್ಬರನ್ನೂ ಅದೇ ರಂಧ್ರದ ಮೂಲಕ ಹೊರಗೆ ಎಳೆದುಕೊಂಡು ಬರಲಾಯಿತು.

ಕಳ್ಳರನ್ನು ಪಳ್ಳಿಕರಣೈ ನಿವಾಸಿ ಸತೀಶ್ ಮತ್ತು ವಿಲುಪುರಂ ನಿವಾಸಿ ಮುನಿಯನ್ ಎಂದು ಗುರುತಿಸಲಾಗಿದೆ. ಮದ್ಯದಂಗಡಿ ಪ್ರದೇಶದ ಬಳಿಯೇ ಉಳಿದುಕೊಂಡು ಅವರಿಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳರು ಗೋಡೆಗೆ ದೊಡ್ಡ ರಂಧ್ರ ಮಾಡಿ ನಗದನ್ನು ದೋಚಲು ಮುಂದಾಗಿದ್ದರು ಎಂಬುದು ವೈರಲ್ ಆಗಿರುವ ವಿಡಿಯೋಗಳಿಂದ ತಿಳಿದು ಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Mon, 5 September 22

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ