AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Village Cooking Channel: ಐತಿಹಾಸಿಕ ಸಾಧನೆ ಮಾಡಿದ ತಮಿಳು ವಿಲೇಜ್​ ಕುಕ್ಕಿಂಗ್ ಚಾನಲ್​; ಇಲ್ಲಿ ರಾಹುಲ್​ ಗಾಂಧಿಯೂ ಅಡುಗೆ ಮಾಡಿದ್ದರು !

ಈ ಹಳ್ಳಿ ಅಡುಗೆ ಚಾನಲ್​ ಶುರು ಮಾಡಿದ್ದು 75 ವರ್ಷದ ಪೆರಿಯಥಾಂಬಿ ಮತ್ತು ಅವರ ಮೊಮ್ಮಕ್ಕಳಾದ ಅಯ್ಯನಾರ್, ಮುರುಗೇಶನ್, ತಮಿಳುಸೆಲ್ವನ್, ಮುತ್ತುಮಾನಿಕಂ ಮತ್ತು ಸುಬ್ರಮಣಿಯನ್.

Tamil Village Cooking Channel: ಐತಿಹಾಸಿಕ ಸಾಧನೆ ಮಾಡಿದ ತಮಿಳು ವಿಲೇಜ್​ ಕುಕ್ಕಿಂಗ್ ಚಾನಲ್​; ಇಲ್ಲಿ ರಾಹುಲ್​ ಗಾಂಧಿಯೂ ಅಡುಗೆ ಮಾಡಿದ್ದರು !
ವಿಲೇಜ್​ ಕುಕ್ಕಿಂಗ್​ ಯೂಟ್ಯೂಬ್​ ಚಾನಲ್​ನ ಅಜ್ಜ-ಮೊಮ್ಮಕ್ಕಳು
TV9 Web
| Edited By: |

Updated on:Jul 06, 2021 | 5:25 PM

Share

ತಮಿಳುನಾಡಿನ ಹೆಸರುವಾಸಿ ವಿಲೇಜ್​ ಕುಕ್ಕಿಂಗ್​ ಚಾನಲ್​ (Village Cooking Channel-VCC) ಈಗೊಂದು ಐತಿಹಾಸಿಕ ಸಾಧನೆ ಮಾಡಿದೆ. ವಿಲೇಜ್​ ಕುಕ್ಕಿಂಗ್​ ಚಾನಲ್​ ಯಾವುದು ಅಂತ ಗೊತ್ತಾಗಿರಬೇಕಲ್ಲ..! ಅದೇ ಜನವರಿಯಲ್ಲಿ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಹೋಗಿದ್ದ ರಾಹುಲ್ ಗಾಂಧಿ, ಮಶ್ರೂಮ್​ ಬಿರ್ಯಾನಿ ಮಾಡಿದ್ದರಲ್ಲ..ಅದೇ ಅಡುಗೆ ಚಾನಲ್. ಆ ಕುಕ್ಕಿಂಗ್​ ಚಾನಲ್​ ಇದೀಗ ಯೂಟ್ಯೂಬ್​​ನಲ್ಲಿ ಬರೋಬ್ಬರಿ 1 ಕೋಟಿ ಚಂದಾದಾರರನ್ನು (subscribers) ನ್ನು ಹೊಂದಿದೆ. ಅಷ್ಟೇ ಅಲ್ಲ 1 ಕೋಟಿ ಸಬ್​ಸ್ಕ್ರೈಬರ್ಸ್​ ಹೊಂದಿದ ತಮಿಳಿನ ಮೊದಲ ಯೂಟ್ಯೂಬ್​ ಚಾನಲ್​ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಈ ಹಳ್ಳಿ ಅಡುಗೆ ಚಾನಲ್​ ಶುರು ಮಾಡಿದ್ದು 75 ವರ್ಷದ ಪೆರಿಯಥಾಂಬಿ ಮತ್ತು ಅವರ ಮೊಮ್ಮಕ್ಕಳಾದ ಅಯ್ಯನಾರ್, ಮುರುಗೇಶನ್, ತಮಿಳುಸೆಲ್ವನ್, ಮುತ್ತುಮಾನಿಕಂ ಮತ್ತು ಸುಬ್ರಮಣಿಯನ್. 2018ರ ಏಪ್ರಿಲ್​ನಿಂದ ಶುರುವಾದ ಅಡುಗೆ ಚಾನಲ್​ ಭರ್ಜರಿ ಯಶಸ್ಸುಕಂಡಿದೆ. ಕೊವಿಡ್​ 19 ವಿರುದ್ಧ ಹೋರಾಟಕ್ಕಾಗಿ ಈ ತಮಿಳು ವಿಲೇಜ್​ ಕುಕ್ಕಿಂಗ್​ ಚಾನಲ್​ನಿಂದ ಬಂದ ಆದಾಯದಲ್ಲಿ 10 ಲಕ್ಷ ರೂಪಾಯಿಯನ್ನು ತಾತ-ಮೊಮ್ಮಕ್ಕಳು ಮುಖ್ಯಮಂತ್ರಿ ಕೊವಿಡ್ 19 ಪರಿಹಾರ ನಿಧಿಗೆ ನೀಡಿದ್ದಾರೆ. ​

ಇದು ಪಕ್ಕಾ ಹಳ್ಳಿಗಳ, ಸಂಪ್ರದಾಯ ಬದ್ಧ ಅಡುಗೆ ಮಾಡಿ ತೋರಿಸುವ ಚಾನಲ್​. ಯಾವುದೇ ಮನೆಯೊಳಗೆ ಅಡುಗೆ ಮಾಡದೆ ಪುಡುಕೊಟ್ಟಾಯ್​ ಜಿಲ್ಲೆಯ ಒಂದು ಕೃಷಿ ಭೂಮಿಯಲ್ಲಿ ಇವರೆಲ್ಲ ಸೇರಿ ಸಾಂಪ್ರದಾಯಿಕ, ಹಳ್ಳಿ ಅಡುಗೆಗಳನ್ನು ಮಾಡುತ್ತಾರೆ. ವೆಜ್​, ನಾನ್​ವೆಜ್​ ಅಡುಗೆಗಳನ್ನು ತಯಾರಿಸಿ, ಅದನ್ನು ನಂತರ ಅನಾಥಾಶ್ರಮಗಳಿಗೆ, ಬಡ ಜನರಿಗೆ ಹಂಚುತ್ತಾರೆ. ಇತ್ತ ಅಡುಗೆಯೂ ಆಯಿತು, ಅತ್ತ ಸಹಾಯವೂ ಆಯಿತು ಎಂಬಂತೆ ಕೆಲಸ ಮಾಡುತ್ತಿದ್ದಾರೆ. ಪೆರಿಯಾಥಂಬಿ ಅವರು ಕಳೆದ 50 ವರ್ಷಗಳಿಂದಲೂ ಅಡುಗೆ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಹೆಸರು ತಂದುಕೊಟ್ಟಿದ್ದು ಈ ಯೂಟ್ಯೂಬ್ ಚಾನಲ್​. ಇದು ನನ್ನ ಶ್ರಮ ಮಾತ್ರವಲ್ಲ…ಎಲ್ಲ ಸಾಧ್ಯವಾಗಿದ್ದು ಮೊಮ್ಮಕ್ಕಳಿಂದಲೇ ಎನ್ನುತ್ತಾರೆ ಪೆರಿಯಾಥಂಬಿ. ನನಗೆ ಯೂಟ್ಯೂಬ್ ಚಾನಲ್​ ಎಂದರೇನು ಎಂದೇ ಗೊತ್ತಿರಲಿಲ್ಲ. ಮೊಮ್ಮಕ್ಕಳೇ ಎಲ್ಲ ವಿವರಿಸಿದರು. ಅದೀಗ ಇಷ್ಟರ ಮಟ್ಟಿಗೆ ಯಶಸ್ಸು ಕಂಡಿದೆ ಎಂದಿದ್ದಾರೆ.

ಯೂಟ್ಯೂಬ್​ ಚಾನಲ್​ ಮಾಡಿದ ಪ್ರಾರಂಭದಲ್ಲಿ ನಮಗೆ ಸುಮಾರು 1.5 ಲಕ್ಷ ರೂಪಾಯಿಯಷ್ಟು ನಷ್ಟವಾಯಿತು. ಅಷ್ಟೊಂದು ಜನರೇನೂ ಇಷ್ಟಪಡುತ್ತಿರಲಿಲ್ಲ. 2019ರಷ್ಟೊತ್ತಿಗೆ ಕೇವಲ 37 ಸಾವಿರ ಸಬ್​ಸ್ಕ್ರೈಬರ್​​ ಇದ್ದರು. ಬಳಿಕ ರೂಪುರೇಷೆಯಲ್ಲಿ ಬದಲಾವಣೆ ಮಾಡಿಕೊಂಡೆವು. ಈಗ ಇಷ್ಟರ ಮಟ್ಟಿಗೆ ಜನರು ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಪೆರಿಯಾಥಂಬಿ ಮೊಮ್ಮಕ್ಕೂ ಅಡುಗೆ ಮಾಡುವ ಜತೆ ವಿದ್ಯಾವಂತರೂ ಆಗಿದ್ದಾರೆ. ಸುಬ್ರಹ್ಮಣಿಯನ್​ ಅವರು ಕಾಮರ್ಸ್​​ನಲ್ಲಿ ಎಂಫಿಲ್​ ಮಾಡಿದ್ದಾರೆ. ವಿಡಿಯೋ ಶೂಟ್​ ಮಾಡುವುದು, ಎಡಿಟ್​ ಮಾಡುವುದು ಇವರದ್ದೇ ಜವಾಬ್ದಾರಿ. ತಮಿಳುಸೆಲ್ವನ್ ನ್ಯಾನೊತಂತ್ರಜ್ಞಾನದಲ್ಲಿ ಎಂಫಿಲ್​ ಮಾಡಿದ್ದರೆ, ಮುತ್ತುಮಾನಿಕಂ ಹೋಟೆಲ್ ಮ್ಯಾನೇಜ್​ಮೆಂಟ್​ ಓದಿದ್ದಾರೆ. ಅಯ್ಯನಾರ್​ ಅವರು ಬಿಕಾಂ ಪದವಿ ಗಳಿಸಿದ್ದಾರೆ.

Rahul Gandhi

ರಾಹುಲ್​ ಗಾಂಧಿ ಭೇಟಿಕೊಟ್ಟ ಸಂದರ್ಭ

ಫ್ರೂಟ್ ಸಲಾಡ್​ ಮಾಡುವುದನ್ನು ತೋರಿಸಿದ ವಿಧಾನ:

ಇದನ್ನೂ ಓದಿ: ರಾಖಿ ಸಾವಂತ್​ಗೆ ಪಾಠ ಕಲಿಸಿ, ಪ್ರಾಮಿಸ್​ ಮಾಡಿದ್ದ ಸಲ್ಲು; ಎಲ್ಲವನ್ನೂ ಬಾಯ್ಬಿಟ್ಟ ನಟಿ

Tamil Nadu Village Cooking Channel hits 1 crore YouTube subscribers

Published On - 5:22 pm, Tue, 6 July 21

Follow Us
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಾಕಿ ಚಾಲಕ!
ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಾಕಿ ಚಾಲಕ!
ಪೆಟ್ರೋಲ್ ಖಾಲಿ ವದಂತಿ: ಚಾಮರಾಜನಗರದಲ್ಲಿ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್ ಖಾಲಿ ವದಂತಿ: ಚಾಮರಾಜನಗರದಲ್ಲಿ ಬಂಕ್​ಗಳಿಗೆ ಮುಗಿಬಿದ್ದ ಜನ
ನಾನು ಅವರ ತೊಡೆಯ ಮೇಲೆ ಕುಳಿತು ಬೆಳದವನು, ಅದಕ್ಕೆ ಅದೃಷ್ಟವಂತ; ರವಿಚಂದ್ರನ್
ನಾನು ಅವರ ತೊಡೆಯ ಮೇಲೆ ಕುಳಿತು ಬೆಳದವನು, ಅದಕ್ಕೆ ಅದೃಷ್ಟವಂತ; ರವಿಚಂದ್ರನ್
ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?
ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಬಸ್​​ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಬಸ್​​ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?