AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Village Cooking Channel: ಐತಿಹಾಸಿಕ ಸಾಧನೆ ಮಾಡಿದ ತಮಿಳು ವಿಲೇಜ್​ ಕುಕ್ಕಿಂಗ್ ಚಾನಲ್​; ಇಲ್ಲಿ ರಾಹುಲ್​ ಗಾಂಧಿಯೂ ಅಡುಗೆ ಮಾಡಿದ್ದರು !

ಈ ಹಳ್ಳಿ ಅಡುಗೆ ಚಾನಲ್​ ಶುರು ಮಾಡಿದ್ದು 75 ವರ್ಷದ ಪೆರಿಯಥಾಂಬಿ ಮತ್ತು ಅವರ ಮೊಮ್ಮಕ್ಕಳಾದ ಅಯ್ಯನಾರ್, ಮುರುಗೇಶನ್, ತಮಿಳುಸೆಲ್ವನ್, ಮುತ್ತುಮಾನಿಕಂ ಮತ್ತು ಸುಬ್ರಮಣಿಯನ್.

Tamil Village Cooking Channel: ಐತಿಹಾಸಿಕ ಸಾಧನೆ ಮಾಡಿದ ತಮಿಳು ವಿಲೇಜ್​ ಕುಕ್ಕಿಂಗ್ ಚಾನಲ್​; ಇಲ್ಲಿ ರಾಹುಲ್​ ಗಾಂಧಿಯೂ ಅಡುಗೆ ಮಾಡಿದ್ದರು !
ವಿಲೇಜ್​ ಕುಕ್ಕಿಂಗ್​ ಯೂಟ್ಯೂಬ್​ ಚಾನಲ್​ನ ಅಜ್ಜ-ಮೊಮ್ಮಕ್ಕಳು
TV9 Web
| Edited By: |

Updated on:Jul 06, 2021 | 5:25 PM

Share

ತಮಿಳುನಾಡಿನ ಹೆಸರುವಾಸಿ ವಿಲೇಜ್​ ಕುಕ್ಕಿಂಗ್​ ಚಾನಲ್​ (Village Cooking Channel-VCC) ಈಗೊಂದು ಐತಿಹಾಸಿಕ ಸಾಧನೆ ಮಾಡಿದೆ. ವಿಲೇಜ್​ ಕುಕ್ಕಿಂಗ್​ ಚಾನಲ್​ ಯಾವುದು ಅಂತ ಗೊತ್ತಾಗಿರಬೇಕಲ್ಲ..! ಅದೇ ಜನವರಿಯಲ್ಲಿ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಹೋಗಿದ್ದ ರಾಹುಲ್ ಗಾಂಧಿ, ಮಶ್ರೂಮ್​ ಬಿರ್ಯಾನಿ ಮಾಡಿದ್ದರಲ್ಲ..ಅದೇ ಅಡುಗೆ ಚಾನಲ್. ಆ ಕುಕ್ಕಿಂಗ್​ ಚಾನಲ್​ ಇದೀಗ ಯೂಟ್ಯೂಬ್​​ನಲ್ಲಿ ಬರೋಬ್ಬರಿ 1 ಕೋಟಿ ಚಂದಾದಾರರನ್ನು (subscribers) ನ್ನು ಹೊಂದಿದೆ. ಅಷ್ಟೇ ಅಲ್ಲ 1 ಕೋಟಿ ಸಬ್​ಸ್ಕ್ರೈಬರ್ಸ್​ ಹೊಂದಿದ ತಮಿಳಿನ ಮೊದಲ ಯೂಟ್ಯೂಬ್​ ಚಾನಲ್​ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಈ ಹಳ್ಳಿ ಅಡುಗೆ ಚಾನಲ್​ ಶುರು ಮಾಡಿದ್ದು 75 ವರ್ಷದ ಪೆರಿಯಥಾಂಬಿ ಮತ್ತು ಅವರ ಮೊಮ್ಮಕ್ಕಳಾದ ಅಯ್ಯನಾರ್, ಮುರುಗೇಶನ್, ತಮಿಳುಸೆಲ್ವನ್, ಮುತ್ತುಮಾನಿಕಂ ಮತ್ತು ಸುಬ್ರಮಣಿಯನ್. 2018ರ ಏಪ್ರಿಲ್​ನಿಂದ ಶುರುವಾದ ಅಡುಗೆ ಚಾನಲ್​ ಭರ್ಜರಿ ಯಶಸ್ಸುಕಂಡಿದೆ. ಕೊವಿಡ್​ 19 ವಿರುದ್ಧ ಹೋರಾಟಕ್ಕಾಗಿ ಈ ತಮಿಳು ವಿಲೇಜ್​ ಕುಕ್ಕಿಂಗ್​ ಚಾನಲ್​ನಿಂದ ಬಂದ ಆದಾಯದಲ್ಲಿ 10 ಲಕ್ಷ ರೂಪಾಯಿಯನ್ನು ತಾತ-ಮೊಮ್ಮಕ್ಕಳು ಮುಖ್ಯಮಂತ್ರಿ ಕೊವಿಡ್ 19 ಪರಿಹಾರ ನಿಧಿಗೆ ನೀಡಿದ್ದಾರೆ. ​

ಇದು ಪಕ್ಕಾ ಹಳ್ಳಿಗಳ, ಸಂಪ್ರದಾಯ ಬದ್ಧ ಅಡುಗೆ ಮಾಡಿ ತೋರಿಸುವ ಚಾನಲ್​. ಯಾವುದೇ ಮನೆಯೊಳಗೆ ಅಡುಗೆ ಮಾಡದೆ ಪುಡುಕೊಟ್ಟಾಯ್​ ಜಿಲ್ಲೆಯ ಒಂದು ಕೃಷಿ ಭೂಮಿಯಲ್ಲಿ ಇವರೆಲ್ಲ ಸೇರಿ ಸಾಂಪ್ರದಾಯಿಕ, ಹಳ್ಳಿ ಅಡುಗೆಗಳನ್ನು ಮಾಡುತ್ತಾರೆ. ವೆಜ್​, ನಾನ್​ವೆಜ್​ ಅಡುಗೆಗಳನ್ನು ತಯಾರಿಸಿ, ಅದನ್ನು ನಂತರ ಅನಾಥಾಶ್ರಮಗಳಿಗೆ, ಬಡ ಜನರಿಗೆ ಹಂಚುತ್ತಾರೆ. ಇತ್ತ ಅಡುಗೆಯೂ ಆಯಿತು, ಅತ್ತ ಸಹಾಯವೂ ಆಯಿತು ಎಂಬಂತೆ ಕೆಲಸ ಮಾಡುತ್ತಿದ್ದಾರೆ. ಪೆರಿಯಾಥಂಬಿ ಅವರು ಕಳೆದ 50 ವರ್ಷಗಳಿಂದಲೂ ಅಡುಗೆ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಹೆಸರು ತಂದುಕೊಟ್ಟಿದ್ದು ಈ ಯೂಟ್ಯೂಬ್ ಚಾನಲ್​. ಇದು ನನ್ನ ಶ್ರಮ ಮಾತ್ರವಲ್ಲ…ಎಲ್ಲ ಸಾಧ್ಯವಾಗಿದ್ದು ಮೊಮ್ಮಕ್ಕಳಿಂದಲೇ ಎನ್ನುತ್ತಾರೆ ಪೆರಿಯಾಥಂಬಿ. ನನಗೆ ಯೂಟ್ಯೂಬ್ ಚಾನಲ್​ ಎಂದರೇನು ಎಂದೇ ಗೊತ್ತಿರಲಿಲ್ಲ. ಮೊಮ್ಮಕ್ಕಳೇ ಎಲ್ಲ ವಿವರಿಸಿದರು. ಅದೀಗ ಇಷ್ಟರ ಮಟ್ಟಿಗೆ ಯಶಸ್ಸು ಕಂಡಿದೆ ಎಂದಿದ್ದಾರೆ.

ಯೂಟ್ಯೂಬ್​ ಚಾನಲ್​ ಮಾಡಿದ ಪ್ರಾರಂಭದಲ್ಲಿ ನಮಗೆ ಸುಮಾರು 1.5 ಲಕ್ಷ ರೂಪಾಯಿಯಷ್ಟು ನಷ್ಟವಾಯಿತು. ಅಷ್ಟೊಂದು ಜನರೇನೂ ಇಷ್ಟಪಡುತ್ತಿರಲಿಲ್ಲ. 2019ರಷ್ಟೊತ್ತಿಗೆ ಕೇವಲ 37 ಸಾವಿರ ಸಬ್​ಸ್ಕ್ರೈಬರ್​​ ಇದ್ದರು. ಬಳಿಕ ರೂಪುರೇಷೆಯಲ್ಲಿ ಬದಲಾವಣೆ ಮಾಡಿಕೊಂಡೆವು. ಈಗ ಇಷ್ಟರ ಮಟ್ಟಿಗೆ ಜನರು ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಪೆರಿಯಾಥಂಬಿ ಮೊಮ್ಮಕ್ಕೂ ಅಡುಗೆ ಮಾಡುವ ಜತೆ ವಿದ್ಯಾವಂತರೂ ಆಗಿದ್ದಾರೆ. ಸುಬ್ರಹ್ಮಣಿಯನ್​ ಅವರು ಕಾಮರ್ಸ್​​ನಲ್ಲಿ ಎಂಫಿಲ್​ ಮಾಡಿದ್ದಾರೆ. ವಿಡಿಯೋ ಶೂಟ್​ ಮಾಡುವುದು, ಎಡಿಟ್​ ಮಾಡುವುದು ಇವರದ್ದೇ ಜವಾಬ್ದಾರಿ. ತಮಿಳುಸೆಲ್ವನ್ ನ್ಯಾನೊತಂತ್ರಜ್ಞಾನದಲ್ಲಿ ಎಂಫಿಲ್​ ಮಾಡಿದ್ದರೆ, ಮುತ್ತುಮಾನಿಕಂ ಹೋಟೆಲ್ ಮ್ಯಾನೇಜ್​ಮೆಂಟ್​ ಓದಿದ್ದಾರೆ. ಅಯ್ಯನಾರ್​ ಅವರು ಬಿಕಾಂ ಪದವಿ ಗಳಿಸಿದ್ದಾರೆ.

Rahul Gandhi

ರಾಹುಲ್​ ಗಾಂಧಿ ಭೇಟಿಕೊಟ್ಟ ಸಂದರ್ಭ

ಫ್ರೂಟ್ ಸಲಾಡ್​ ಮಾಡುವುದನ್ನು ತೋರಿಸಿದ ವಿಧಾನ:

ಇದನ್ನೂ ಓದಿ: ರಾಖಿ ಸಾವಂತ್​ಗೆ ಪಾಠ ಕಲಿಸಿ, ಪ್ರಾಮಿಸ್​ ಮಾಡಿದ್ದ ಸಲ್ಲು; ಎಲ್ಲವನ್ನೂ ಬಾಯ್ಬಿಟ್ಟ ನಟಿ

Tamil Nadu Village Cooking Channel hits 1 crore YouTube subscribers

Published On - 5:22 pm, Tue, 6 July 21

ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್