AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

91 ಸಾವಿರ ಜನರಿಗೆ ಉದ್ಯೋಗಾವಕಾಶ! ನಾಲ್ಕು ಐಟಿ ಕಂಪನಿಗಳಿಂದ ಕ್ಯಾಂಪಸ್ ಸೆಲೆಕ್ಷನ್​ಗೆ ಸಿದ್ಧತೆ..

ಇನ್ನು ವಿಪ್ರೋ ಕೂಡ ದೊಡ್ಡ ಸಂಖ್ಯೆಯಲ್ಲಿ ಫ್ರೆಶರ್​ ಸೆಲೆಕ್ಷನ್​ ಮಾಡಲು ಮುಂದಾಗಿದೆ. ಬೇಡಿಕೆ ಅನುಗುಣವಾಗಿ ಈಗಾಗಲೇ ಪ್ರತಿಭಾವಂತರ ಆಯ್ಕೆ ಪ್ರಕ್ರಿಯೆ ಶುರು ಮಾಡಿದ್ದೇವೆ ಎಂದು ವಿಪ್ರೋ ಎಚ್​ಆರ್ ಡಿಪಾರ್ಟ್​ಮೆಂಟ್ ಮುಖ್ಯಸ್ಥ ಸೌರಭ್​ ಗೋವಿಲ್ ತಿಳಿಸಿದ್ದಾರೆ.

91 ಸಾವಿರ ಜನರಿಗೆ ಉದ್ಯೋಗಾವಕಾಶ! ನಾಲ್ಕು ಐಟಿ ಕಂಪನಿಗಳಿಂದ ಕ್ಯಾಂಪಸ್ ಸೆಲೆಕ್ಷನ್​ಗೆ ಸಿದ್ಧತೆ..
Lakshmi Hegde
| Updated By: ಸಾಧು ಶ್ರೀನಾಥ್​|

Updated on: Jan 19, 2021 | 3:44 PM

Share

ನವದೆಹಲಿ: ದೇಶದ ನಾಲ್ಕು ಐಟಿ ದಿಗ್ಗಜ ಕಂಪನಿಗಳಾದ ಟಿಸಿಎಸ್​, ಇನ್ಫೋಸಿಸ್​, ಎಚ್​ಸಿಎಲ್​ ಟೆಕ್ನಾಲಜೀಸ್ ಮತ್ತು ವಿಪ್ರೋಗಳು ಮುಂದಿನ ಹಣಕಾಸು ವರ್ಷದಲ್ಲಿ (2021-22) ಒಟ್ಟಾರೆ 91 ಸಾವಿರ ಜನರನ್ನು ಕ್ಯಾಂಪಸ್ ಸೆಲೆಕ್ಷನ್​ ಮಾಡಿಕೊಳ್ಳಲು ಯೋಜನೆ ರೂಪಿಸಿವೆ. ಲಾಕ್​ಡೌನ್ ಮುಕ್ತಾಯವಾದ ಬೆನ್ನಲ್ಲೇ ಕ್ಯಾಂಪಸ್ ಸೆಲೆಕ್ಷನ್​ ಮಾಡಲು ಯೋಜನೆ ರೂಪಿಸುತ್ತಿದ್ದು, ಈ ನಾಲ್ಕೂ ಕಂಪನಿಗಳಿಂದ ಒಟ್ಟಾರೆ 91 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ.

ಲಾಕ್​ಡೌನ್ ಮುಗಿದ ಬೆನ್ನಲ್ಲೇ ಗ್ರಾಹಕ ಬೇಡಿಕೆಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪನಿಗಳು ಉತ್ಪಾದನೆ ಪ್ರಕ್ರಿಯೆಯನ್ನೂ ಚುರುಕುಗೊಳಿಸಿವೆ. ಇದಕ್ಕಾಗಿ 2021-22ರ ಅವಧಿಗೆ ನಾಲ್ಕೂ ಕಂಪನಿಗಳಿಂದ ಒಟ್ಟು 91 ಸಾವಿರ ಜನರನ್ನು ಕ್ಯಾಂಪಸ್​ ಸೆಲೆಕ್ಷನ್ ಮಾಡುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ತುಸು ಹೆಚ್ಚಾಗಿದೆ.

ಟಿಸಿಎಸ್​ ಎಕ್ಸಿಕ್ಯೂಟಿವ್​ ವೈಸ್​ ಪ್ರೆಸಿಡೆಂಟ್​ಮತ್ತು ಗ್ಲೋಬಲ್​ ಎಚ್​ಆರ್​ ಮುಖ್ಯಸ್ಥರಾಗಿರುವ ಮಿಲಿಂದ್​ ಲಕ್ಕದ್​ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮ ಕಂಪನಿ ಕಳೆದ ವರ್ಷ ಕ್ಯಾಂಪಸ್​ನಿಂದ 40,000 ಹೊಸಬರನ್ನು ಆಯ್ಕೆ ಮಾಡಿಕೊಂಡಿತ್ತು. ಈ ಬಾರಿಯೂ ಅಷ್ಟೇ, ಅಂದರೆ 40,000 ಜನರನ್ನು ಆಯ್ಕೆ ಮಾಡಿಕೊಳ್ಳುವ ಯೋಜನೆ ಇದೆ ಎಂದಿದ್ದಾರೆ.

ಹಾಗೇ ಇನ್ಫೋಸಿಸ್​ ಮುಂಬರುವ ಹಣಕಾಸು ವರ್ಷದಲ್ಲಿ 24,000 ಪದವೀಧರರನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದೆ. ಈ ಕಂಪನಿ ಪ್ರಸಕ್ತ ಅಂದರೆ 2020-21ರ ಆರ್ಥಿಕ ವರ್ಷದಲ್ಲಿ 15,000 ಫ್ರೆಶರ್ಸ್ ಅ​ನ್ನು ಮಾತ್ರ ನೇಮಕ ಮಾಡಿಕೊಂಡಿತ್ತು.

ಇನ್ನು ಎಚ್​ಸಿಎಲ್ ಕಂಪನಿ 15000 ಹೊಸಬರನ್ನು ಭಾರತದಲ್ಲಿ ಕ್ಯಾಂಪಸ್ ಸೆಲೆಕ್ಷನ್​ ಮಾಡಲಿದೆ. ಉಳಿದ 1500-2000ರಷ್ಟು ಬೇರೆ ದೇಶದವರಿಗೆ ಅವಕಾಶ ನೀಡಲಾಗುವುದು. ಕಳೆದ ವರ್ಷ ಶೇ. 70ರಷ್ಟು ಭಾರತದಲ್ಲಿ, ಶೇ. 30ರಷ್ಟು ಹೊರದೇಶಗಳಲ್ಲಿ ಆಯ್ಕೆಯಾಗಿತ್ತು. ಈ ಬಾರಿ ಅದು ಶೇ. 90-ಶೇ. 10ಆಗಿದೆ ಎಂದು ಕಂಪನಿಯ ಟೆಕ್ನಾಲಜಿ ಮುಖ್ಯಸ್ಥ ಅಪ್ಪಾರಾವ್ ವಿವಿ ತಿಳಿಸಿದ್ದಾರೆ.

ಇನ್ನು ವಿಪ್ರೋ ಕೂಡ ದೊಡ್ಡ ಸಂಖ್ಯೆಯಲ್ಲಿ ಫ್ರೆಶರ್​ ಸೆಲೆಕ್ಷನ್​ ಮಾಡಲು ಮುಂದಾಗಿದೆ. ಬೇಡಿಕೆಗೆ ಅನುಗುಣವಾಗಿ ಈಗಾಗಲೇ ಪ್ರತಿಭಾವಂತರ ಆಯ್ಕೆ ಪ್ರಕ್ರಿಯೆ ಶುರು ಮಾಡಿದ್ದೇವೆ ಎಂದು ವಿಪ್ರೋ ಎಚ್​ಆರ್ ಡಿಪಾರ್ಟ್​ಮೆಂಟ್ ಮುಖ್ಯಸ್ಥ ಸೌರಭ್​ ಗೋವಿಲ್ ತಿಳಿಸಿದ್ದಾರೆ.

ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ