Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮಮಂದಿರ ಕಾರ್ಯಕ್ರಮದ ಬಗ್ಗೆ ಡಿಎಂಕೆ ಸಂಸದರ ಹೇಳಿಕೆಗೆ ತೆಲಂಗಾಣ ಗವರ್ನರ್ ಕಿಡಿ

ಇದರಲ್ಲಿ ರಾಜಕೀಯ ಮಾಡುತ್ತಿರುವವರು ಯಾರು? ಅದಕ್ಕೆ ಯಾರು ಹಾಜರಾಗುತ್ತಿದ್ದಾರೆ (ಪ್ರಾಣಪ್ರತಿಷ್ಠೆ) ಅಥವಾ ಯಾರು ಹಾಜರಾಗುತ್ತಿಲ್ಲ? ಅವರೇಕೆ ಹಾಜರಾಗುತ್ತಿಲ್ಲ? ಯಾಕೆಂದರೆ ಇದು ರಾಜಕೀಯ ಹಬ್ಬ ಎಂದು ಅವರು ಭಾವಿಸುತ್ತಾರೆ. ದೇವರ ಹಬ್ಬ ಎಂಬ ಕಾರಣಕ್ಕೆ ಆಹ್ವಾನ ನೀಡಿದರೂ ಬರುತ್ತಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಬಹುದಿನದ ಕನಸು ಇದು ಎಂದು ಗವರ್ನರ್ ಸೌಂದರರಾಜನ್ ಹೇಳಿದ್ದಾರೆ.

ರಾಮಮಂದಿರ ಕಾರ್ಯಕ್ರಮದ ಬಗ್ಗೆ ಡಿಎಂಕೆ ಸಂಸದರ ಹೇಳಿಕೆಗೆ ತೆಲಂಗಾಣ ಗವರ್ನರ್ ಕಿಡಿ
ತಮಿಳಿಸೈ ಸೌಂದರರಾಜನ್
Follow us
ರಶ್ಮಿ ಕಲ್ಲಕಟ್ಟ
|

Updated on: Jan 15, 2024 | 3:18 PM

ಹೈದರಾಬಾದ್ ಜನವರಿ  15: ತೆಲಂಗಾಣ ಗವರ್ನರ್ ತಮಿಳಿಸೈ ಸೌಂದರರಾಜನ್ (Tamilisai Soundararajan) ಅವರು  ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ‘ಪ್ರಾಣ ಪ್ರತಿಷ್ಠಾ’ ಸಮಾರಂಭವನ್ನು ‘ರಾಜಕೀಯ ಕಾರ್ಯಕ್ರಮ’ ಎಂದು ಕರೆದಿದ್ದಕ್ಕಾಗಿ ಡಿಎಂಕೆ ಸಂಸದ ಟಿಆರ್ ಬಾಲು (TR Balu )ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಪ್ರತಿಪಕ್ಷಗಳು ಕಾರ್ಯಕ್ರಮಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿರುವುದರ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ ಗವರ್ನರ್ರು, ‘ಪವಿತ್ರ ಹಬ್ಬ’ದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದರಲ್ಲಿ ರಾಜಕೀಯ ಮಾಡುತ್ತಿರುವವರು ಯಾರು? ಅದಕ್ಕೆ ಯಾರು ಹಾಜರಾಗುತ್ತಿದ್ದಾರೆ (ಪ್ರಾಣಪ್ರತಿಷ್ಠೆ) ಅಥವಾ ಯಾರು ಹಾಜರಾಗುತ್ತಿಲ್ಲ? ಅವರೇಕೆ ಹಾಜರಾಗುತ್ತಿಲ್ಲ? ಯಾಕೆಂದರೆ ಇದು ರಾಜಕೀಯ ಹಬ್ಬ ಎಂದು ಅವರು ಭಾವಿಸುತ್ತಾರೆ. ದೇವರ ಹಬ್ಬ ಎಂಬ ಕಾರಣಕ್ಕೆ ಆಹ್ವಾನ ನೀಡಿದರೂ ಬರುತ್ತಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಬಹುದಿನದ ಕನಸು ಇದು ಎಂದು ಗವರ್ನರ್ ಸೌಂದರರಾಜನ್ ಹೇಳಿದ್ದಾರೆ.

ತೆಲಂಗಾಣ ಗವರ್ನರ್ರು ದೇವಾಲಯಗಳ ನಿರ್ಮಾಣ ಮತ್ತು ಆಚರಣೆಯಲ್ಲಿ ತಮಿಳು ರಾಜರು ಮತ್ತು ಚಕ್ರವರ್ತಿಗಳ ಪಾಲ್ಗೊಳ್ಳುವಿಕೆ ಸೇರಿದಂತೆ ಐತಿಹಾಸಿಕ ಉದಾಹರಣೆಗಳನ್ನು ಉಲ್ಲೇಖಿಸಿದರು.

“ನಮ್ಮ ಪ್ರಧಾನಿ, ನಾನು ಉಲ್ಲೇಖಿಸಿದಂತೆ, ಎಲ್ಲಾ ತಮಿಳು ರಾಜರು ಮತ್ತು ಚಕ್ರವರ್ತಿಗಳು ದೇವಾಲಯಗಳನ್ನು ನಿರ್ಮಿಸಿದರು, ದೇವಾಲಯವನ್ನು ಅರ್ಚಕರು ನಿರ್ಮಿಸಿದರೂ, ಅದನ್ನು ಆಚರಿಸುವವರು ರಾಜರು, ಅವರು ಉತ್ಸವವನ್ನು ಮೊದಲು ಪ್ರಾರಂಭಿಸಿದ್ದು. ಅವರು ‘ಕುಂಭಾಭಿಷೇಕ’ವನ್ನು ಪ್ರಾರಂಭಿಸಿದರು. ತಮಿಳು ಸಂಸ್ಕೃತಿ ಹೀಗಿದೆ, ಹಾಗಾದರೆ ಪ್ರಧಾನಿ ಕಾರ್ಯಕ್ರಮಕ್ಕೆ ಹಾಜರಾಗುವುದನ್ನು ಅವರು ಯಾಕೆ ವಿರೋಧಿಸುತ್ತಾರೆ?

ಜನವರಿ 22 ರಂದು ನಡೆಯಲಿರುವ ಪ್ರಾಣಪ್ರತಿಷ್ಠಾ ಸಮಾರಂಭವನ್ನ ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಲಾಗುತ್ತಿದೆ ಎಂದ ಡಿಎಂಕೆ ಸಂಸದ ಟಿಆರ್ ಬಾಲು ಹೇಳಿದ್ದಾರೆ.

“ಅಯೋಧ್ಯೆ ರಾಮಮಂದಿರ ಉದ್ಘಾಟನೆ ಆಧ್ಯಾತ್ಮಿಕ ಕಾರ್ಯಕ್ರಮವಲ್ಲ, ಬದಲಿಗೆ ರಾಜಕೀಯವಾಗಿದೆ. ಬಿಜೆಪಿ 2014 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ತಮ್ಮ ಚುನಾವಣಾ ಭರವಸೆಗಳನ್ನು ಈಡೇರಿಸಿಲ್ಲ. ಪಕ್ಷವು ತನ್ನನ್ನು ಈಡೇರಿಸದೆ ಇರುವುದಕ್ಕೆ ಯಾವುದೇ ಸಂಕೋಚವಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ತಮ್ಮ ಸಾಧನೆ ಎಂದು ತೋರಿಸಿ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಬಾಲು ಹೇಳಿದರು.

ಇದನ್ನೂ ಓದಿ: ಆಹ್ವಾನಿತರು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಬೇಕು: ಸಂಜಯ್ ರಾವತ್

“ರಾಜಕೀಯ ಕಾರಣಗಳಿಗಾಗಿ ಭಕ್ತಿಯನ್ನು ಬಳಸುವುದು ಮತ್ತು ಮತಬ್ಯಾಂಕ್ ಭಾರತದ ಸಾರ್ವಭೌಮತ್ವ ಮತ್ತು ಸಂವಿಧಾನದ ವಿರುದ್ಧವಾಗಿದೆ, ಇದು ದೇಶದ ಭವಿಷ್ಯಕ್ಕೆ ಒಳ್ಳೆಯದಲ್ಲ, ಬಿಜೆಪಿಯು ಈ ರೀತಿಯ ದೇವಾಲಯದ ಕಾರ್ಯಕ್ರಮವನ್ನು ಬಳಸುತ್ತಿರುವುದು ಖಂಡನೀಯ ಎಂದಿದ್ದರು ಅವರು .

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
ಬಾಂಬೆ ಹೈಕೋರ್ಟ್​ ಆವರಣದಲ್ಲಿ ವಾಮಾಚಾರ?
ಬಾಂಬೆ ಹೈಕೋರ್ಟ್​ ಆವರಣದಲ್ಲಿ ವಾಮಾಚಾರ?