ತೆಲಂಗಾಣ ಶಾಸಕರ ಖರೀದಿಗೆ ಬಿಜೆಪಿ ಯತ್ನ ಆರೋಪ ಪ್ರಕರಣ ಸಿಬಿಐಗೆ ವರ್ಗಾಯಿಸಿದ ಹೈಕೋರ್ಟ್; ಕೆಸಿಆರ್​​ಗೆ ಹಿನ್ನಡೆ

| Updated By: ರಶ್ಮಿ ಕಲ್ಲಕಟ್ಟ

Updated on: Dec 26, 2022 | 6:06 PM

Poachgate case ಈ ತಿಂಗಳ ಆರಂಭದಲ್ಲಿ ಶಾಸಕರನ್ನು ಖರೀದಿಸಲು ಯತ್ನ ನಡೆದಿದೆ ಎಂಬ ಆರೋಪದ ತನಿಖೆಗಾಗಿ ರಚಿಸಿದ್ದ ಏಳು ಸದಸ್ಯರ ಎಸ್‌ಐಟಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ತೆಲಂಗಾಣ ಶಾಸಕರ ಖರೀದಿಗೆ ಬಿಜೆಪಿ ಯತ್ನ ಆರೋಪ ಪ್ರಕರಣ ಸಿಬಿಐಗೆ ವರ್ಗಾಯಿಸಿದ ಹೈಕೋರ್ಟ್; ಕೆಸಿಆರ್​​ಗೆ ಹಿನ್ನಡೆ
ಕೆ. ಚಂದ್ರಶೇಖರ್ ರಾವ್
Follow us on

ಹೈದರಾಬಾದ್: ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿಯ (BRS) ನಾಲ್ವರು ಶಾಸಕರನ್ನು ಬಿಜೆಪಿ ಖರೀದಿಸಲು ಯತ್ನ ನಡೆಸಿದೆ ಎಂಬ ಆರೋಪದ ಬಗ್ಗೆ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್ ಸೋಮವಾರ ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ವರ್ಗಾಯಿಸಿದ್ದು, ಕೆ ಚಂದ್ರಶೇಖರ ರಾವ್ (KCR) ನೇತೃತ್ವದ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈ ತಿಂಗಳ ಆರಂಭದಲ್ಲಿ ಶಾಸಕರನ್ನು ಖರೀದಿಸಲು ಯತ್ನ ನಡೆದಿದೆ ಎಂಬ ಆರೋಪದ ತನಿಖೆಗಾಗಿ ರಚಿಸಿದ್ದ ಏಳು ಸದಸ್ಯರ ಎಸ್‌ಐಟಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಬಿಜೆಪಿ ಮುಖಂಡ ಹಾಗೂ ವಕೀಲ ರಾಮ್ ಚಂದರ್ ರಾವ್ ಅವರು ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ್ದಾರೆ. ಬಿಆರ್‌ಎಸ್ ಶಾಸಕರ ಖರೀದಿ ಯತ್ನ ಪ್ರಕರಣವನ್ನು ಹೈಕೋರ್ಟ್ ಸಿಬಿಐಗೆ ವರ್ಗಾಯಿಸಿದೆ. ಹೈಕೋರ್ಟ್ ಕೂಡ ಎಸ್‌ಐಟಿಯನ್ನು ರದ್ದುಗೊಳಿಸಿದೆ. ನಾವು ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ. ತೆಲಂಗಾಣದ ಮೊಯಿನಾಬಾದ್‌ನಲ್ಲಿರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ ಎರಡು ತಿಂಗಳ ನಂತರ ತಲಾ ₹ 100 ಕೋಟಿಗೆ ನಾಲ್ವರು ಶಾಸಕರನ್ನು ‘ಖರೀದಿ’ ಮಾಡುವ ಮೂಲಕ ಆಡಳಿತಾರೂಢ ಬಿಆರ್‌ಎಸ್ ಸರ್ಕಾರವನ್ನು ಉರುಳಿಸುವ ಪಿತೂರಿಯನ್ನು ಸೈಬರಾಬಾದ್ ಪೊಲೀಸರು ಬಹಿರಂಗಪಡಿಸಿದ್ದಾರೆ ಎಂದು ಹೇಳಿದ್ದಾರೆ. ಶಾಸಕರ ಖರೀದಿ ಪ್ರಕರಣದ ನಾಲ್ವರು ದೂರುದಾರರಲ್ಲಿ ಒಬ್ಬರಾದ ಬಿಆರ್‌ಎಸ್ ಶಾಸಕ ರೋಹಿತ್ ರೆಡ್ಡಿ, ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮಾ, ನಂದು ಕುಮಾರ್ ಮತ್ತು ಸಿಂಹಯಾಜಿ ಸ್ವಾಮಿ ಎಂಬ ಮೂವರು ವ್ಯಕ್ತಿಗಳು ತಮಗೆ ದಲ್ಲಾಳಿಗಳು 100 ಕೋಟಿ ರೂ.ಗಳನ್ನು ನೀಡಿದ್ದರು. ಅದಕ್ಕೆ ಪ್ರತಿಯಾಗಿ ಶಾಸಕರು ಬಿಆರ್‌ಎಸ್ ತೊರೆಯಬೇಕು ಎಂದು ಕೇಳಿದ್ದರು ಎಂದು ಆರೋಪಿಸಿದ್ದಾರೆ.

ಅಕ್ಟೋಬರ್ 26 ರಂದು ತಾಂಡೂರಿನ ಶಾಸಕ ರೋಹಿತ್ ರೆಡ್ಡಿ ಮತ್ತು ಇತರ ಮೂವರು ಬಿಆರ್‌ಎಸ್ ಶಾಸಕರು ಈ ವಿಷಯಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದ್ದರು. ಇದರ ನಂತರ, ಆರೋಪಿಗಳನ್ನು ಬಂಧಿಸಲಾಯಿತು. ನಂತರ ತೆಲಂಗಾಣ ಹೈಕೋರ್ಟ್ ಇವರಿಗೆ  ಜಾಮೀನು ನೀಡಿತು.

ಎಫ್‌ಐಆರ್ ದಾಖಲಿಸಿರುವ ಪ್ರಕಾರ, ಆರೋಪಿಗಳು ಬಿಜೆಪಿಗೆ ಸೇರಲು ತಲಾ 50 ಕೋಟಿ ರೂಪಾಯಿ ನೀಡುವ ಮೂಲಕ ಇನ್ನೂ ಕೆಲವು ಬಿಆರ್‌ಎಸ್ ಶಾಸಕರನ್ನು ಕರೆತರುವಂತೆ ರೆಡ್ಡಿಗೆ ಕೇಳಿದ್ದಾರೆ.

ಇದನ್ನೂ ಓದಿ:Nirmala Sitharaman: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಏಮ್ಸ್​ ಆಸ್ಪತ್ರೆಗೆ ದಾಖಲು

ರೆಡ್ಡಿಗೆ ನಂತರ ಜಾರಿ ನಿರ್ದೇಶನಾಲಯದಿಂದ ನೋಟಿಸ್ ನೀಡಲಾಯಿತು. ಇದಾದ ನಂತರ ಬಿಆರ್‌ಎಸ್ ಶಾಸಕರು ಎರಡು ಬಾರಿ ಏಜೆನ್ಸಿಯ ಮುಂದೆ ಹಾಜರಾಗಿದ್ದರು. ಕಳೆದ ಸೋಮವಾರ, ಇಡಿ ಅಧಿಕಾರಿಗಳು ತನ್ನ ವಿವರಗಳು ಮತ್ತು ಬಯೋ-ಡೇಟಾದ ಬಗ್ಗೆ ಕೇಳಿದರು. ಆದರೆ ಅವರು ಸಮನ್ಸ್ ಅನ್ನು ಏಕೆ ಹೊರಡಿಸಿದರು ಎಂದು ತಿಳಿಸಲಿಲ್ಲ ಎಂದು ಅವರು ಹೇಳಿದರು.

ದೇಶದಲ್ಲಿ ಬಿಜೆಪಿಯೇತರ ಆಡಳಿತವಿರುವ ರಾಜ್ಯ ಸರ್ಕಾರಗಳನ್ನು ಕಿತ್ತೊಗೆಯುವುದು ಬಿಜೆಪಿಯ ಮುಖ್ಯ ಧ್ಯೇಯವಾಗಿದೆ ಎಂದು ಮುಖ್ಯಮಂತ್ರಿ ಕೆಸಿಆರ್ ಕೂಡ ಆರೋಪಿಸಿದ್ದರು. ನಾಲ್ವರು ಆಡಳಿತಾರೂಢ ಶಾಸಕರನ್ನು 100 ಕೋಟಿ ರೂ ಸಿವಿಲ್ ಕಾಂಟ್ರಾಕ್ಟ್‌ಗಳು ಮತ್ತು ಪ್ಲಮ್ ಪೋಸ್ಟ್‌ಗಳನ್ನು ಬದಲಾಯಿಸಲು ಆಮಿಷವೊಡ್ಡುವ ಪ್ರಯತ್ನದಲ್ಲಿ ಬಿಜೆಪಿಯಿಂದ ಮಧ್ಯವರ್ತಿಗಳನ್ನು ಕಳುಹಿಸಲಾಗಿದೆ ಎಂಬುದಕ್ಕೆ ಪುರಾವೆಗಳನ್ನು ಒಳಗೊಂಡ ಮೂರು ಗಂಟೆಗಳ ಅವಧಿಯ ವಿಡಿಯೊಗಳನ್ನು ತಾನು ಕಳುಹಿಸಿದ್ದೇನೆ ಎಂದು ನವೆಂಬರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೆಸಿಆರ್ ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Mon, 26 December 22