Bikanervala success story: ಬಿಕಾನೇರ್ ಸಿಹಿತಿಂಡಿಗಳ ರುಚಿ ನೀಡಿದ ವ್ಯಕ್ತಿ ಕೇದಾರನಾಥ್ ಅಗರ್ವಾಲ್ ನಿಧನ

ರಾಜಸ್ಥಾನದ ಬಿಕಾನೇರ್‌ನಲ್ಲಿ ಜನಿಸಿದ ಕೇದಾರನಾಥ ಅಗರ್ವಾಲ್ ಅವರ ಕುಟುಂಬವು 1905 ರಿಂದ ಬಿಕಾನೇರ್‌ನಲ್ಲಿ ಸಿಹಿತಿಂಡಿ ಅಂಗಡಿಯನ್ನು ಹೊಂದಿತ್ತು. ಅದರ ಹೆಸರು ಬಿಕಾನೆರ್ ಸ್ವೀಟ್ ಸ್ಟೋರ್. ಅಲ್ಲಿ ತಿಂಡಿ ಮತ್ತು ಸಿಹಿತಿಂಡಿಗಳನ್ನು ಮಾರಾಟ ಮಾಡಲಾಗುತ್ತಿತ್ತು. 1955 ರ ಆರಂಭದಲ್ಲಿ, ಕೇದಾರನಾಥ ಅಗರ್ವಾಲ್ ಅವರು ತಮ್ಮ ಹಿರಿಯ ಸಹೋದರ ಸತ್ಯನಾರಾಯಣ ಅಗರ್ವಾಲ್ ಅವರೊಂದಿಗೆ ದೆಹಲಿ ತಲುಪಿದರು

Bikanervala success story: ಬಿಕಾನೇರ್ ಸಿಹಿತಿಂಡಿಗಳ ರುಚಿ ನೀಡಿದ ವ್ಯಕ್ತಿ ಕೇದಾರನಾಥ್ ಅಗರ್ವಾಲ್ ನಿಧನ
ಕೇದಾರನಾಥ್ ಅಗರ್ವಾಲ್
ರಶ್ಮಿ ಕಲ್ಲಕಟ್ಟ

Updated on: Nov 14, 2023 | 2:20 PM

ದೆಹಲಿ ನವೆಂಬರ್ 14: ಬಿಕನೇರ್‌ವಾಲಾ (Bikanervala)-ದೇಶಾದ್ಯಂತ ಸಿಹಿತಿಂಡಿಗಳು ಮತ್ತು ನಮ್‌ಕೀನ್‌ಗಳಿಗೆ ಪ್ರಸಿದ್ಧ ಬ್ರಾಂಡ್ . ಇದನ್ನು ಪ್ರಾರಂಭಿಸಿದ್ದು ಲಾಲಾ ಕೇದಾರನಾಥ್ ಅಗರ್ವಾಲ್ (Kedarnath Aggarwal). ಅಗರ್ವಾಲ್ (86) ಅವರು ಸೋಮವಾರ ನಿಧನರಾಗಿದ್ದಾರೆ. ಆರಂಭದಲ್ಲಿ ಇವರು  ಹಳೆ ದೆಹಲಿಯ (Delhi) ಬೀದಿಗಳಲ್ಲಿ ರಸಗುಲ್ಲಾ ಮತ್ತು ಭುಜಿಯಾವನ್ನು ಬಕೆಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದರು. ಕಾಕಾಜಿ ಎಂದೇ ಖ್ಯಾತರಾಗಿದ್ದ ಲಾಲಾ ಕೇದಾರನಾಥ ಅಗರ್‌ವಾಲ್ ಅವರ ನಿಧನದೊಂದಿಗೆ ಒಂದು ಯುಗ ಅಂತ್ಯಗೊಂಡಿದೆ ಎಂದು ಬಿಕನೇರ್‌ವಾಲಾ ಹೇಳಿಕೆಯಲ್ಲಿ ತಿಳಿಸಿದೆ.ಅವರ ಯಶಸ್ಸಿನ ಕತೆ ಇಲ್ಲಿದೆ

ದೇಶ ವಿದೇಶಗಳಲ್ಲಿ ವ್ಯಾಪಾರ

ಬಿಕನೇರ್‌ವಾಲಾ ಜನರ ಮನಸ್ಸಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ. ಇದು ದೇಶ ಮತ್ತು ವಿದೇಶಗಳಲ್ಲಿ ಅನೇಕ ಮಳಿಗೆಗಳನ್ನು ಹೊಂದಿದೆ. ಭಾರತವೊಂದರಲ್ಲೇ ಅವರು 60ಕ್ಕೂ ಹೆಚ್ಚು ಅಂಗಡಿಗಳನ್ನು ಹೊಂದಿದ್ದಾರೆ. ಇದರೊಂದಿಗೆ ನೇಪಾಳ, ಯುನೈಟೆಡ್ ಅರಬ್ ಎಮಿರೇಟ್ಸ್, ನ್ಯೂಜಿಲೆಂಡ್, ಅಮೇರಿಕಾ ಮತ್ತು ಸಿಂಗಾಪುರದಂತಹ ದೇಶಗಳಲ್ಲಿಯೂ ಅವರು ತಮ್ಮ ವ್ಯಾಪಾರವನ್ನು ಮಾಡುತ್ತಿದ್ದಾರೆ.

ಕಾಕಾಜಿ ದೇಶದ ಬಿಕನೇರ್‌ವಾಲಾ ಆಗಿದ್ದು ಹೇಗೆ?

ರಾಜಸ್ಥಾನದ ಬಿಕಾನೇರ್‌ನಲ್ಲಿ ಜನಿಸಿದ ಕೇದಾರನಾಥ ಅಗರ್ವಾಲ್ ಅವರ ಕುಟುಂಬವು 1905 ರಿಂದ ಬಿಕಾನೇರ್‌ನಲ್ಲಿ ಸಿಹಿತಿಂಡಿ ಅಂಗಡಿಯನ್ನು ಹೊಂದಿತ್ತು. ಅದರ ಹೆಸರು ಬಿಕಾನೆರ್ ಸ್ವೀಟ್ ಸ್ಟೋರ್. ಅಲ್ಲಿ ತಿಂಡಿ ಮತ್ತು ಸಿಹಿತಿಂಡಿಗಳನ್ನು ಮಾರಾಟ ಮಾಡಲಾಗುತ್ತಿತ್ತು. 1955 ರ ಆರಂಭದಲ್ಲಿ, ಕೇದಾರನಾಥ ಅಗರ್ವಾಲ್ ಅವರು ತಮ್ಮ ಹಿರಿಯ ಸಹೋದರ ಸತ್ಯನಾರಾಯಣ ಅಗರ್ವಾಲ್ ಅವರೊಂದಿಗೆ ದೆಹಲಿ ತಲುಪಿದರು. ಸಹೋದರರಿಬ್ಬರೂ ಹಳೆ ದೆಹಲಿಯ ಬೀದಿಗಳಲ್ಲಿ ರಸಗುಲ್ಲಾ ಮತ್ತು ಭುಜಿಯಾವನ್ನು ಬಕೆಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದರು.

ಜನಮೆಚ್ಚುಗೆ ಗಳಿಸಿದ ಹೊಸ ರುಚಿ

ಅಗರ್ವಾಲ್ ಸಹೋದರರ ಕಠಿಣ ಪರಿಶ್ರಮ ಮತ್ತು ಅನನ್ಯ ಅಭಿರುಚಿಯಿಂದಾಗಿ, ಅವರು ಪ್ರಸಿದ್ಧರಾದರು. ಇದಾದ ಬಳಿಕ ಚಾಂದಿನಿ ಚೌಕ್ ನಲ್ಲಿ ಅಂಗಡಿ ಆರಂಭಿಸಿದರು. ಇದರ ನಂತರ, ಜನರು ಅವನ ರುಚಿಯನ್ನು ಮೆಚ್ಚಲು ಪ್ರಾರಂಭಿಸಿದರು ಮತ್ತು ಅವರ ನಮ್ಕೀನ್ ಮತ್ತು ಸಿಹಿತಿಂಡಿಗಳು ದೇಶದಾದ್ಯಂತ ಇಷ್ಟವಾಗಲು ಪ್ರಾರಂಭಿಸಿದವು. ದೆಹಲಿಗೆ ಮೂಂಗ್ ದಾಲ್ ಹಲ್ವಾ ರುಚಿಯನ್ನು ಪರಿಚಯಿಸಿದರು ಎಂದು ಹೇಳಲಾಗುತ್ತದೆ. ಇಂದು ಹೊಸ ತಲೆಮಾರಿನವರು ವ್ಯಾಪಾರದ ಹಿಡಿತವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಪೃಥ್ವಿರಾಜ್ ಸಿಂಗ್ ಓಬೇರಾಯ್ ನಿಧನ; ಓಬೇರಾಯ್ ಹೋಟೆಲ್​ಗಳಿಗೆ ಹೊಸ ಎತ್ತರ ಕಲ್ಪಿಸಿದ ಧೀಮಂತ

130 ಕ್ಕೂ ಹೆಚ್ಚು ಜನರ ಕುಟುಂಬವು ಒಟ್ಟಿಗೆ ವ್ಯಾಪಾರ

ಬಿಕನೇರ್‌ವಾಲಾ ಅವರ ಕುಟುಂಬದ 130 ಕ್ಕೂ ಹೆಚ್ಚು ಜನರು ಇದೇ ವ್ಯಾಪಾರ ಮಾಡುತ್ತಿದ್ದಾರೆ. ಸಂಸಾರವನ್ನು ಜೊತೆಯಲ್ಲಿಟ್ಟ ಕೀರ್ತಿಯೂ ಕಾಕಾಜಿಯವರಿಗೆ ಸಲ್ಲುತ್ತದೆ.

ಕಂಪನಿಯು IPO ಪ್ರಾರಂಭಿಸಲು ತಯಾರಿ ನಡೆಸುತ್ತಿದೆ

ಬಿಕನೇರ್‌ವಾಲಾ ಕಂಪನಿಯ ಐಪಿಒ ತರಲು ಸಿದ್ಧತೆ ನಡೆಸಲಾಗುತ್ತಿದೆ. 2030ರ ವೇಳೆಗೆ 600 ಮಳಿಗೆಗಳನ್ನು ತೆರೆದು 10 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿ ಹೊಂದಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us