AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಕಿಪುರ, ಡಾಟಿಯಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು ಏಕೆ?; ಪ್ರಶಾಂತ್ ಕಿಶೋರ್ ಗೆಲುವಿಗೆ ಕಾರಣವೇನು?

ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಇಂದು ಬಿಹಾರದ ಬಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ, ಬಿಜೆಪಿಯ ದೀರ್ಘಕಾಲದ ಭದ್ರಕೋಟೆಯನ್ನು ತನ್ನ ವಶಕ್ಕೆ ಪಡೆದು ಅತ್ಯದ್ಭುತ ಚುನಾವಣಾ ಪದಾರ್ಪಣೆ ಮಾಡಿದ್ದಾರೆ. ಮಧ್ಯಪ್ರದೇಶದ ಡಾಟಿಯಾ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಹಿರಿಯ ನಾಯಕ ಘನ್‌ಶ್ಯಾಮ್ ಸಿಂಗ್ ಜಯಭೇರಿ ಬಾರಿಸಿದ್ದಾರೆ. ಮತ್ತೊಂದೆಡೆ, ಗುಜರಾತ್‌ನ ಮಂಜಲ್ಪುರ ಕ್ಷೇತ್ರದಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಸತೀಶ್ ಪಟೇಲ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಯನ್ನು 30,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.

ಬಂಕಿಪುರ, ಡಾಟಿಯಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು ಏಕೆ?; ಪ್ರಶಾಂತ್ ಕಿಶೋರ್ ಗೆಲುವಿಗೆ ಕಾರಣವೇನು?
Prashant Kishor Ghanshyam SinghImage Credit source: TV9
ಸುಷ್ಮಾ ಚಕ್ರೆ
|

Updated on: Aug 03, 2026 | 9:53 PM

Share

ನವದೆಹಲಿ, ಆಗಸ್ಟ್ 3: ಇಂದು 3 ರಾಜ್ಯಗಳ 3 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆದಿದ್ದು, ಬಿಜೆಪಿ ಕೇವಲ ಒಂದು ಸ್ಥಾನವನ್ನು ಮಾತ್ರ ಗೆದ್ದಿದೆ. ಬಿಹಾರದ ಬಂಕಿಪುರದಲ್ಲಿ ಬಿಜೆಪಿಯ ನೀರಜ್ ಸಿನ್ಹಾ ಸೋತರು, ಜನ ಸುರಾಜ್‌ನ ಪ್ರಶಾಂತ್ ಕಿಶೋರ್ (Prashant Kishor) ಗೆದ್ದರು. ಮಧ್ಯಪ್ರದೇಶದ ಡಾಟಿಯಾದಲ್ಲಿ ಕಾಂಗ್ರೆಸ್‌ನ ಘನಶ್ಯಾಮ್ ಸಿಂಗ್ ಬಿಜೆಪಿಯ ಅಶುತೋಷ್ ತಿವಾರಿ ಅವರನ್ನು ಸೋಲಿಸಿದರು. ಬಿಜೆಪಿ ಗುಜರಾತ್‌ನ ಮಂಜಲ್​ಪುರದಲ್ಲಿ ಮಾತ್ರ ಗೆಲುವು ಕಂಡಿದೆ. ಅಲ್ಲಿ ಬಿಜೆಪಿಯ ಸತೇಂದ್ರಭಾಯಿ ಪಟೇಲ್ ಮಂಜಲ್‌ಪುರದಲ್ಲಿ ಕಾಂಗ್ರೆಸ್‌ನ ಭಿಖಾಭಾಯ್ ರಬಾರಿ ಅವರನ್ನು ಭಾರೀ ಅಂತರದಿಂದ ಸೋಲಿಸಿದರು. ಈ ಉಪಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜನಸುರಾಜ್ ತಲಾ ಒಂದು ಸ್ಥಾನವನ್ನು ಗೆದ್ದಿವೆ.

ಡಾಟಿಯಾ ಚುನಾವಣಾ ಫಲಿತಾಂಶ:

ಮಧ್ಯಪ್ರದೇಶದ ಡಾಟಿಯಾ ವಿಧಾನಸಭಾ ಉಪಚುನಾವಣೆಯ ಫಲಿತಾಂಶಗಳು ಮಧ್ಯಪ್ರದೇಶ ರಾಜಕೀಯಕ್ಕೆ ಮಹತ್ವದ ಸಂದೇಶವನ್ನು ರವಾನಿಸಿವೆ. ಈ ಚುನಾವಣೆಯು ಕೇವಲ ಒಂದು ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಾಗಿರಲಿಲ್ಲ. ಇದು ಸ್ಥಳೀಯ ನಾಯಕತ್ವ, ಸಂಘಟನೆ, ಅಭ್ಯರ್ಥಿ ಆಯ್ಕೆಯ ಪರೀಕ್ಷೆಯೂ ಆಗಿತ್ತು. ಬಿಜೆಪಿ ಅನಿರೀಕ್ಷಿತ ಸೋಲನ್ನು ಅನುಭವಿಸಿದರೆ, ಒಗ್ಗಟ್ಟಿನ ತಂತ್ರ ಮತ್ತು ಬಲಿಷ್ಠ ಸ್ಥಳೀಯ ನಾಯಕನ ಕಾರಣದಿಂದಾಗಿ ಕಾಂಗ್ರೆಸ್ ಬಹುನಿರೀಕ್ಷಿತ ಗೆಲುವು ಸಾಧಿಸಿತು.

ಇದನ್ನೂ ಓದಿ: 30 ವರ್ಷದ ಕೋಟೆ 30 ದಿನಗಳಲ್ಲಿ ಕುಸಿಯಿತು’; ಬಿಜೆಪಿಯ ಭದ್ರಕೋಟೆ ಬಂಕಿಪುರದಲ್ಲಿ ಜಯ ಸಾಧಿಸಿದ ಪ್ರಶಾಂತ್ ಕಿಶೋರ್ ಲೇವಡಿ

ಮಾಜಿ ಗೃಹ ಸಚಿವ ಮತ್ತು ಈ ಪ್ರದೇಶದ ಪ್ರಭಾವಿ ನಾಯಕ ಡಾ. ನರೋತ್ತಮ್ ಮಿಶ್ರಾ ಅವರಿಗೆ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದ್ದು ಇಲ್ಲಿ ಬಿಜೆಪಿ ಸೋಲಲು ದೊಡ್ಡ ಕಾರಣ ಎನ್ನಲಾಗಿದೆ. ನರೋತ್ತಮ್ ಮಿಶ್ರಾ ಹಲವು ವರ್ಷಗಳಿಂದ ಡಾಟಿಯಾ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ.

ಬಂಕಿಪುರ ಕ್ಷೇತ್ರದ ಚುನಾವಣಾ ಫಲಿತಾಂಶ:

ಬಂಕಿಪುರ ಕ್ಷೇತ್ರದಲ್ಲಿ ಬಿಜೆಪಿಯ ಸೋಲಿನ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ, ಏಕೆಂದರೆ ಇಂದು ಬಿಜೆಪಿ ಬಂಕಿಪುರ ಸ್ಥಾನವನ್ನು ಕಳೆದುಕೊಂಡಿದೆ. ಆ ಸ್ಥಾನವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಕೆಲವೇ ತಿಂಗಳುಗಳ ಹಿಂದೆ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು. ಬಿಹಾರದ ಬಂಕಿಪುರ ವಿಧಾನಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಜನ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಇಂದು ಭಾರೀ ಗೆಲುವು ಸಾಧಿಸಿದ್ದಾರೆ. ಇದು ಬಿಜೆಪಿಯ ಭದ್ರಕೋಟೆಯಾಗಿದ್ದು, 1995ರಿಂದ ಬಿಜೆಪಿ ಈ ಸ್ಥಾನವನ್ನು ಕಳೆದುಕೊಂಡಿಲ್ಲ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯಿತು.

ಪ್ರಶಾಂತ್ ಕಿಶೋರ್ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ನೀರಜ್ ಕುಮಾರ್ ಸಿನ್ಹಾ ಅವರನ್ನು 19,324 ಮತಗಳಿಂದ ಸೋಲಿಸಿದರು. ಕಿಶೋರ್ 64,151 ಮತಗಳನ್ನು ಪಡೆದರೆ, ನೀರಜ್ ಕುಮಾರ್ ಸಿನ್ಹಾ 44,827 ಮತಗಳನ್ನು ಪಡೆದರು. ಆರ್‌ಜೆಡಿ ಕೂಡ ಕಳಪೆ ಪ್ರದರ್ಶನ ನೀಡಿತು. ಆರ್‌ಜೆಡಿ ಅಭ್ಯರ್ಥಿ ರೇಖಾ ಕುಮಾರಿ ಕೇವಲ 14,273 ಮತಗಳನ್ನು ಪಡೆದು, ಪ್ರಶಾಂತ್ ಕಿಶೋರ್ ವಿರುದ್ಧ 49,878 ಮತಗಳ ಅಂತರದಿಂದ ಸೋತರು. ಈ ಗೆಲುವಿನೊಂದಿಗೆ, ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಇತಿಹಾಸ ನಿರ್ಮಿಸಿದರು. ಬಿಜೆಪಿಯ ಅಭ್ಯರ್ಥಿ ಅಭಿಷೇಕ್ ಬಂಟಿ ಅವರು ಕೌಟುಂಬಿಕ ಕಾರಣಗಳನ್ನು ನೀಡಿ ಕೊನೆಯ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದ ನಂತರ ನೀರಜ್ ಕುಮಾರ್ ಸಿನ್ಹಾ ಅವರನ್ನು ಬಿಜೆಪಿ ತರಾತುರಿಯಲ್ಲಿ ಕಣಕ್ಕಿಳಿಸಿತ್ತು.

ಇದನ್ನೂ ಓದಿ: ಬಿಹಾರ ಉಪಚುನಾವಣೆ: ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷಕ್ಕೆ ಪರೀಕ್ಷೆ: ಬಂಕಿಪುರದಲ್ಲಿ ತ್ರಿಕೋನ ಸ್ಪರ್ಧೆ

ಬಂಕಿಪುರದಲ್ಲಿ ಬಿಜೆಪಿ ಸೋಲಿಗೆ ಕಾರಣಗಳೇನು?:

ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ದೊಡ್ಡ ಕಾರಣ ಎಂದು ಪರಿಗಣಿಸಲಾಗುತ್ತಿದೆ. ನೀಟ್ ವಿದ್ಯಾರ್ಥಿ ಚಳವಳಿಯ ಪ್ರಭಾವ ಚುನಾವಣೆಯಲ್ಲಿ ಕಂಡುಬಂದಿತು. ಯುಜಿಸಿ ವಿಷಯದಲ್ಲಿ ಮೇಲ್ಜಾತಿಯವರ ಕೋಪದಿಂದಾಗಿ ಬಿಜೆಪಿ ಸೋಲು ಅನುಭವಿಸಿತು. ಭಾರತ್ ತಿವಾರಿ ಘಟನೆಯಿಂದ ಪ್ರಮುಖ ಮತದಾರರು ಕೋಪಗೊಂಡಿದ್ದರು. ಸಾಮ್ರಾಟ್ ಚೌಧರಿ ವಿರುದ್ಧ ಸೃಷ್ಟಿಯಾದ ವಾತಾವರಣದ ಪರಿಣಾಮ ಚುನಾವಣೆಯಲ್ಲಿ ಗೋಚರಿಸಿತು. ಪ್ರಶಾಂತ್ ಕಿಶೋರ್ ಅವರ ವರ್ಚಸ್ಸು ಮತ್ತು ಅವರು ಎತ್ತಿದ್ದ ವಿಷಯಗಳು ಸಾರ್ವಜನಿಕ ಬೆಂಬಲವನ್ನು ಗಳಿಸಿದವು. ಕಾಂಗ್ರೆಸ್ ಮತ್ತು ಆರ್‌ಜೆಡಿಯ ಮತಗಳು ಪ್ರಶಾಂತ್ ಕಿಶೋರ್ ಪರವಾಗಿ ಬಿದ್ದವು. ಚುನಾವಣೆಗಳಲ್ಲಿ ಜಾತಿ ಸಮೀಕರಣಗಳ ಬದಲು ವಿಷಯಗಳು ಮತ್ತು ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಯಿತು. ಬಿಜೆಪಿಯ ಅಭ್ಯರ್ಥಿ ಆಯ್ಕೆ ದುರ್ಬಲವಾಗಿತ್ತು, ಇದು ಸೋಲಿಗೆ ಕಾರಣವಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us