AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀತಗಾಳಿಗೆ ಥಂಡಾ ಹೊಡೆದ ರಾಷ್ಟ್ರ ರಾಜಧಾನಿ, ಚಳಿ ಜೊತೆ ಮಳೆಯ ಆತಂಕ!

ದೆಹಲಿ: ಶೀತಗಾಳಿ ಎಲ್ಲೆಲ್ಲೂ ಬೀಸುತ್ತಿದೆ. ಚಳಿಯ ಅಬ್ಬರಕ್ಕೆ ದಕ್ಷಿಣ ಭಾರತ ಮಾತ್ರವಲ್ಲ, ಉತ್ತರ ಭಾರತವು ನಲುಗಿಹೋಗಿದೆ. ಬೆಳ್ಳಂಬೆಳಗ್ಗೆ ಮನೆ ಹೊರಗೆ ಕಾಲಿಡೋದು ಬಿಡಿ, ಹಾಸಿಗೆಯಿಂದ ಎದ್ದೇಳೋದಕ್ಕೂ ಜನರು ಯೋಚನೆ ಮಾಡುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಹಾಗಾದ್ರೆ, ಅಲ್ಲಿನ ಪರಿಸ್ಥಿತಿ ಹೇಗಿದೆ, ಜನಜೀವನ ಹೇಗಿದೆ ಅನ್ನೋದನ್ನ ನೋಡೋಣ ಬನ್ನಿ. ಮಂಜು ಮುಸುಕಿದ ವಾತಾವರಣ. ಮೇಲೆ ಏಳೋಕೂ ಯೋಚನೆ ಮಾಡುವಷ್ಟು ಬಿಗಡಾಯಿಸಿರುವ ಪರಿಸ್ಥಿತಿ. ಅಂದಹಾಗೆ ಇದು ಅಂಟಾರ್ಟಿಕದ್ದೋ, ಹಿಮಾಲಯದ್ದೋ ಪರಿಸ್ಥಿತಿ ಅಲ್ಲ. ಉತ್ತರದಲ್ಲಿ ಬೀಸುತ್ತಿರುವ ಶೀತಗಾಳಿಯ ಪರಿಣಾಮ ಇದು. ರಾಷ್ಟ್ರ ರಾಜಧಾನಿಯ […]

ಶೀತಗಾಳಿಗೆ ಥಂಡಾ ಹೊಡೆದ ರಾಷ್ಟ್ರ ರಾಜಧಾನಿ, ಚಳಿ ಜೊತೆ ಮಳೆಯ ಆತಂಕ!
ಸಾಧು ಶ್ರೀನಾಥ್​
|

Updated on:Dec 28, 2019 | 12:12 PM

Share

ದೆಹಲಿ: ಶೀತಗಾಳಿ ಎಲ್ಲೆಲ್ಲೂ ಬೀಸುತ್ತಿದೆ. ಚಳಿಯ ಅಬ್ಬರಕ್ಕೆ ದಕ್ಷಿಣ ಭಾರತ ಮಾತ್ರವಲ್ಲ, ಉತ್ತರ ಭಾರತವು ನಲುಗಿಹೋಗಿದೆ. ಬೆಳ್ಳಂಬೆಳಗ್ಗೆ ಮನೆ ಹೊರಗೆ ಕಾಲಿಡೋದು ಬಿಡಿ, ಹಾಸಿಗೆಯಿಂದ ಎದ್ದೇಳೋದಕ್ಕೂ ಜನರು ಯೋಚನೆ ಮಾಡುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಹಾಗಾದ್ರೆ, ಅಲ್ಲಿನ ಪರಿಸ್ಥಿತಿ ಹೇಗಿದೆ, ಜನಜೀವನ ಹೇಗಿದೆ ಅನ್ನೋದನ್ನ ನೋಡೋಣ ಬನ್ನಿ.

ಮಂಜು ಮುಸುಕಿದ ವಾತಾವರಣ. ಮೇಲೆ ಏಳೋಕೂ ಯೋಚನೆ ಮಾಡುವಷ್ಟು ಬಿಗಡಾಯಿಸಿರುವ ಪರಿಸ್ಥಿತಿ. ಅಂದಹಾಗೆ ಇದು ಅಂಟಾರ್ಟಿಕದ್ದೋ, ಹಿಮಾಲಯದ್ದೋ ಪರಿಸ್ಥಿತಿ ಅಲ್ಲ. ಉತ್ತರದಲ್ಲಿ ಬೀಸುತ್ತಿರುವ ಶೀತಗಾಳಿಯ ಪರಿಣಾಮ ಇದು.

ರಾಷ್ಟ್ರ ರಾಜಧಾನಿಯ ತಾಪಮಾನ 2.4 ಡಿಗ್ರಿ..! ರಾಷ್ಟ್ರ ರಾಜಧಾನಿ ತೀವ್ರ ಚಳಿಗೆ ತತ್ತರಿಸಿದೆ. ಶೀತಗಾಳಿ ಪರಿಣಾಮ ಜನ ಮನೆಯಿಂದ ಹೊರ ಬರೋದಕ್ಕೂ ಚಿಂತೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟುದಿನ ಮಾಲಿನ್ಯದಿಂದ ತತ್ತರಿಸಿದ್ದ ದೆಹಲಿಯಲ್ಲಿ ಚಳಿ ಆರ್ಭಟ ಬಲು ಜೋರಾಗಿದೆ. ದೆಹಲಿಯಲ್ಲಿ ಇಂದು ಕನಿಷ್ಠ ತಾಪಮಾನ 2.4 ಡಿಗ್ರಿಗೆ ತಲುಪುವ ಮುಖೇನ, ರಾಷ್ಟ್ರ ರಾಜಧಾನಿಯ ನಿವಾಸಿಗಳು ಗಡಗಡ ನಡುಗುವಂತಾಗಿತ್ತು.

ಚಳಿ ಜೊತೆ ಶುರುವಾಯ್ತು ಭಾರಿ ಮಳೆ ಆತಂಕ..! ಇದೀಗ ಶೀತಗಾಳಿ ಜೊತೆಯಲ್ಲೇ, ದೆಹಲಿಯಲ್ಲಿ ಭಾರಿ ಮಳೆಯ ಆತಂಕ ಶುರುವಾಗಿದೆ. ಅಂದಹಾಗೆ ಪಶ್ಚಿಮ ಹಿಮಾಲಯದಿಂದ ಮಳೆ ಮಾರುತ ಬೀಸಲಿದ್ದು, ಡಿಸೆಂಬರ್ 31ರಿಂದ ಜನವರಿ 1ರ ನಡುವೆ ದೆಹಲಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ, ಎಚ್ಚರಿಕೆಯಿಂದ ಇರುವಂತೆ ಜನರಿಗೆ ಮುನ್ಸೂಚನೆಯನ್ನೂ ನೀಡಲಾಗಿದೆ.

ಒಟ್ನಲ್ಲಿ ತೀವ್ರವಾದ ವಾಯುಮಾಲಿನ್ಯ ಹಾಗೂ ಕೆಲ ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ತತ್ತರಿಸಿದ್ದ ದೆಹಲಿ ನಿವಾಸಿಗಳಿಗೆ ಹೊಸ ತಲೆನೋವು ಶುರುವಾಗಿದೆ. ಎದೆ ನಡುಗಿಸುವ ಶೀತಗಾಳಿಯಿಂದ ಜನರು ಬೆಚ್ಚಿಬಿದ್ದಿದ್ದು, ಮುಂದಿನ ಪರಿಸ್ಥಿತಿಗೆ ಹೇಗೆ ಅನ್ನೋ ಚಿಂತೆ ಶುರುವಾಗಿದೆ. ಇದಕ್ಕೆಲ್ಲಾ ಆ ಪ್ರಕೃತಿ ಮಾತೆಯೇ ಉತ್ತರ ನೀಡಬೇಕಿದೆ.

Published On - 7:43 am, Sat, 28 December 19

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ