AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀತಗಾಳಿಗೆ ಥಂಡಾ ಹೊಡೆದ ರಾಷ್ಟ್ರ ರಾಜಧಾನಿ, ಚಳಿ ಜೊತೆ ಮಳೆಯ ಆತಂಕ!

ದೆಹಲಿ: ಶೀತಗಾಳಿ ಎಲ್ಲೆಲ್ಲೂ ಬೀಸುತ್ತಿದೆ. ಚಳಿಯ ಅಬ್ಬರಕ್ಕೆ ದಕ್ಷಿಣ ಭಾರತ ಮಾತ್ರವಲ್ಲ, ಉತ್ತರ ಭಾರತವು ನಲುಗಿಹೋಗಿದೆ. ಬೆಳ್ಳಂಬೆಳಗ್ಗೆ ಮನೆ ಹೊರಗೆ ಕಾಲಿಡೋದು ಬಿಡಿ, ಹಾಸಿಗೆಯಿಂದ ಎದ್ದೇಳೋದಕ್ಕೂ ಜನರು ಯೋಚನೆ ಮಾಡುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಹಾಗಾದ್ರೆ, ಅಲ್ಲಿನ ಪರಿಸ್ಥಿತಿ ಹೇಗಿದೆ, ಜನಜೀವನ ಹೇಗಿದೆ ಅನ್ನೋದನ್ನ ನೋಡೋಣ ಬನ್ನಿ. ಮಂಜು ಮುಸುಕಿದ ವಾತಾವರಣ. ಮೇಲೆ ಏಳೋಕೂ ಯೋಚನೆ ಮಾಡುವಷ್ಟು ಬಿಗಡಾಯಿಸಿರುವ ಪರಿಸ್ಥಿತಿ. ಅಂದಹಾಗೆ ಇದು ಅಂಟಾರ್ಟಿಕದ್ದೋ, ಹಿಮಾಲಯದ್ದೋ ಪರಿಸ್ಥಿತಿ ಅಲ್ಲ. ಉತ್ತರದಲ್ಲಿ ಬೀಸುತ್ತಿರುವ ಶೀತಗಾಳಿಯ ಪರಿಣಾಮ ಇದು. ರಾಷ್ಟ್ರ ರಾಜಧಾನಿಯ […]

ಶೀತಗಾಳಿಗೆ ಥಂಡಾ ಹೊಡೆದ ರಾಷ್ಟ್ರ ರಾಜಧಾನಿ, ಚಳಿ ಜೊತೆ ಮಳೆಯ ಆತಂಕ!
ಸಾಧು ಶ್ರೀನಾಥ್​
|

Updated on:Dec 28, 2019 | 12:12 PM

Share

ದೆಹಲಿ: ಶೀತಗಾಳಿ ಎಲ್ಲೆಲ್ಲೂ ಬೀಸುತ್ತಿದೆ. ಚಳಿಯ ಅಬ್ಬರಕ್ಕೆ ದಕ್ಷಿಣ ಭಾರತ ಮಾತ್ರವಲ್ಲ, ಉತ್ತರ ಭಾರತವು ನಲುಗಿಹೋಗಿದೆ. ಬೆಳ್ಳಂಬೆಳಗ್ಗೆ ಮನೆ ಹೊರಗೆ ಕಾಲಿಡೋದು ಬಿಡಿ, ಹಾಸಿಗೆಯಿಂದ ಎದ್ದೇಳೋದಕ್ಕೂ ಜನರು ಯೋಚನೆ ಮಾಡುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಹಾಗಾದ್ರೆ, ಅಲ್ಲಿನ ಪರಿಸ್ಥಿತಿ ಹೇಗಿದೆ, ಜನಜೀವನ ಹೇಗಿದೆ ಅನ್ನೋದನ್ನ ನೋಡೋಣ ಬನ್ನಿ.

ಮಂಜು ಮುಸುಕಿದ ವಾತಾವರಣ. ಮೇಲೆ ಏಳೋಕೂ ಯೋಚನೆ ಮಾಡುವಷ್ಟು ಬಿಗಡಾಯಿಸಿರುವ ಪರಿಸ್ಥಿತಿ. ಅಂದಹಾಗೆ ಇದು ಅಂಟಾರ್ಟಿಕದ್ದೋ, ಹಿಮಾಲಯದ್ದೋ ಪರಿಸ್ಥಿತಿ ಅಲ್ಲ. ಉತ್ತರದಲ್ಲಿ ಬೀಸುತ್ತಿರುವ ಶೀತಗಾಳಿಯ ಪರಿಣಾಮ ಇದು.

ರಾಷ್ಟ್ರ ರಾಜಧಾನಿಯ ತಾಪಮಾನ 2.4 ಡಿಗ್ರಿ..! ರಾಷ್ಟ್ರ ರಾಜಧಾನಿ ತೀವ್ರ ಚಳಿಗೆ ತತ್ತರಿಸಿದೆ. ಶೀತಗಾಳಿ ಪರಿಣಾಮ ಜನ ಮನೆಯಿಂದ ಹೊರ ಬರೋದಕ್ಕೂ ಚಿಂತೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟುದಿನ ಮಾಲಿನ್ಯದಿಂದ ತತ್ತರಿಸಿದ್ದ ದೆಹಲಿಯಲ್ಲಿ ಚಳಿ ಆರ್ಭಟ ಬಲು ಜೋರಾಗಿದೆ. ದೆಹಲಿಯಲ್ಲಿ ಇಂದು ಕನಿಷ್ಠ ತಾಪಮಾನ 2.4 ಡಿಗ್ರಿಗೆ ತಲುಪುವ ಮುಖೇನ, ರಾಷ್ಟ್ರ ರಾಜಧಾನಿಯ ನಿವಾಸಿಗಳು ಗಡಗಡ ನಡುಗುವಂತಾಗಿತ್ತು.

ಚಳಿ ಜೊತೆ ಶುರುವಾಯ್ತು ಭಾರಿ ಮಳೆ ಆತಂಕ..! ಇದೀಗ ಶೀತಗಾಳಿ ಜೊತೆಯಲ್ಲೇ, ದೆಹಲಿಯಲ್ಲಿ ಭಾರಿ ಮಳೆಯ ಆತಂಕ ಶುರುವಾಗಿದೆ. ಅಂದಹಾಗೆ ಪಶ್ಚಿಮ ಹಿಮಾಲಯದಿಂದ ಮಳೆ ಮಾರುತ ಬೀಸಲಿದ್ದು, ಡಿಸೆಂಬರ್ 31ರಿಂದ ಜನವರಿ 1ರ ನಡುವೆ ದೆಹಲಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ, ಎಚ್ಚರಿಕೆಯಿಂದ ಇರುವಂತೆ ಜನರಿಗೆ ಮುನ್ಸೂಚನೆಯನ್ನೂ ನೀಡಲಾಗಿದೆ.

ಒಟ್ನಲ್ಲಿ ತೀವ್ರವಾದ ವಾಯುಮಾಲಿನ್ಯ ಹಾಗೂ ಕೆಲ ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ತತ್ತರಿಸಿದ್ದ ದೆಹಲಿ ನಿವಾಸಿಗಳಿಗೆ ಹೊಸ ತಲೆನೋವು ಶುರುವಾಗಿದೆ. ಎದೆ ನಡುಗಿಸುವ ಶೀತಗಾಳಿಯಿಂದ ಜನರು ಬೆಚ್ಚಿಬಿದ್ದಿದ್ದು, ಮುಂದಿನ ಪರಿಸ್ಥಿತಿಗೆ ಹೇಗೆ ಅನ್ನೋ ಚಿಂತೆ ಶುರುವಾಗಿದೆ. ಇದಕ್ಕೆಲ್ಲಾ ಆ ಪ್ರಕೃತಿ ಮಾತೆಯೇ ಉತ್ತರ ನೀಡಬೇಕಿದೆ.

Published On - 7:43 am, Sat, 28 December 19

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ