ಶೀತಗಾಳಿಗೆ ಥಂಡಾ ಹೊಡೆದ ರಾಷ್ಟ್ರ ರಾಜಧಾನಿ, ಚಳಿ ಜೊತೆ ಮಳೆಯ ಆತಂಕ!

ದೆಹಲಿ: ಶೀತಗಾಳಿ ಎಲ್ಲೆಲ್ಲೂ ಬೀಸುತ್ತಿದೆ. ಚಳಿಯ ಅಬ್ಬರಕ್ಕೆ ದಕ್ಷಿಣ ಭಾರತ ಮಾತ್ರವಲ್ಲ, ಉತ್ತರ ಭಾರತವು ನಲುಗಿಹೋಗಿದೆ. ಬೆಳ್ಳಂಬೆಳಗ್ಗೆ ಮನೆ ಹೊರಗೆ ಕಾಲಿಡೋದು ಬಿಡಿ, ಹಾಸಿಗೆಯಿಂದ ಎದ್ದೇಳೋದಕ್ಕೂ ಜನರು ಯೋಚನೆ ಮಾಡುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಹಾಗಾದ್ರೆ, ಅಲ್ಲಿನ ಪರಿಸ್ಥಿತಿ ಹೇಗಿದೆ, ಜನಜೀವನ ಹೇಗಿದೆ ಅನ್ನೋದನ್ನ ನೋಡೋಣ ಬನ್ನಿ. ಮಂಜು ಮುಸುಕಿದ ವಾತಾವರಣ. ಮೇಲೆ ಏಳೋಕೂ ಯೋಚನೆ ಮಾಡುವಷ್ಟು ಬಿಗಡಾಯಿಸಿರುವ ಪರಿಸ್ಥಿತಿ. ಅಂದಹಾಗೆ ಇದು ಅಂಟಾರ್ಟಿಕದ್ದೋ, ಹಿಮಾಲಯದ್ದೋ ಪರಿಸ್ಥಿತಿ ಅಲ್ಲ. ಉತ್ತರದಲ್ಲಿ ಬೀಸುತ್ತಿರುವ ಶೀತಗಾಳಿಯ ಪರಿಣಾಮ ಇದು. ರಾಷ್ಟ್ರ ರಾಜಧಾನಿಯ […]

ಶೀತಗಾಳಿಗೆ ಥಂಡಾ ಹೊಡೆದ ರಾಷ್ಟ್ರ ರಾಜಧಾನಿ, ಚಳಿ ಜೊತೆ ಮಳೆಯ ಆತಂಕ!
ಸಾಧು ಶ್ರೀನಾಥ್​

Updated on: Dec 28, 2019 | 12:12 PM

ದೆಹಲಿ: ಶೀತಗಾಳಿ ಎಲ್ಲೆಲ್ಲೂ ಬೀಸುತ್ತಿದೆ. ಚಳಿಯ ಅಬ್ಬರಕ್ಕೆ ದಕ್ಷಿಣ ಭಾರತ ಮಾತ್ರವಲ್ಲ, ಉತ್ತರ ಭಾರತವು ನಲುಗಿಹೋಗಿದೆ. ಬೆಳ್ಳಂಬೆಳಗ್ಗೆ ಮನೆ ಹೊರಗೆ ಕಾಲಿಡೋದು ಬಿಡಿ, ಹಾಸಿಗೆಯಿಂದ ಎದ್ದೇಳೋದಕ್ಕೂ ಜನರು ಯೋಚನೆ ಮಾಡುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಹಾಗಾದ್ರೆ, ಅಲ್ಲಿನ ಪರಿಸ್ಥಿತಿ ಹೇಗಿದೆ, ಜನಜೀವನ ಹೇಗಿದೆ ಅನ್ನೋದನ್ನ ನೋಡೋಣ ಬನ್ನಿ.

ಮಂಜು ಮುಸುಕಿದ ವಾತಾವರಣ. ಮೇಲೆ ಏಳೋಕೂ ಯೋಚನೆ ಮಾಡುವಷ್ಟು ಬಿಗಡಾಯಿಸಿರುವ ಪರಿಸ್ಥಿತಿ. ಅಂದಹಾಗೆ ಇದು ಅಂಟಾರ್ಟಿಕದ್ದೋ, ಹಿಮಾಲಯದ್ದೋ ಪರಿಸ್ಥಿತಿ ಅಲ್ಲ. ಉತ್ತರದಲ್ಲಿ ಬೀಸುತ್ತಿರುವ ಶೀತಗಾಳಿಯ ಪರಿಣಾಮ ಇದು.

ರಾಷ್ಟ್ರ ರಾಜಧಾನಿಯ ತಾಪಮಾನ 2.4 ಡಿಗ್ರಿ..!
ರಾಷ್ಟ್ರ ರಾಜಧಾನಿ ತೀವ್ರ ಚಳಿಗೆ ತತ್ತರಿಸಿದೆ. ಶೀತಗಾಳಿ ಪರಿಣಾಮ ಜನ ಮನೆಯಿಂದ ಹೊರ ಬರೋದಕ್ಕೂ ಚಿಂತೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟುದಿನ ಮಾಲಿನ್ಯದಿಂದ ತತ್ತರಿಸಿದ್ದ ದೆಹಲಿಯಲ್ಲಿ ಚಳಿ ಆರ್ಭಟ ಬಲು ಜೋರಾಗಿದೆ. ದೆಹಲಿಯಲ್ಲಿ ಇಂದು ಕನಿಷ್ಠ ತಾಪಮಾನ 2.4 ಡಿಗ್ರಿಗೆ ತಲುಪುವ ಮುಖೇನ, ರಾಷ್ಟ್ರ ರಾಜಧಾನಿಯ ನಿವಾಸಿಗಳು ಗಡಗಡ ನಡುಗುವಂತಾಗಿತ್ತು.

ಚಳಿ ಜೊತೆ ಶುರುವಾಯ್ತು ಭಾರಿ ಮಳೆ ಆತಂಕ..!
ಇದೀಗ ಶೀತಗಾಳಿ ಜೊತೆಯಲ್ಲೇ, ದೆಹಲಿಯಲ್ಲಿ ಭಾರಿ ಮಳೆಯ ಆತಂಕ ಶುರುವಾಗಿದೆ. ಅಂದಹಾಗೆ ಪಶ್ಚಿಮ ಹಿಮಾಲಯದಿಂದ ಮಳೆ ಮಾರುತ ಬೀಸಲಿದ್ದು, ಡಿಸೆಂಬರ್ 31ರಿಂದ ಜನವರಿ 1ರ ನಡುವೆ ದೆಹಲಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ, ಎಚ್ಚರಿಕೆಯಿಂದ ಇರುವಂತೆ ಜನರಿಗೆ ಮುನ್ಸೂಚನೆಯನ್ನೂ ನೀಡಲಾಗಿದೆ.

ಒಟ್ನಲ್ಲಿ ತೀವ್ರವಾದ ವಾಯುಮಾಲಿನ್ಯ ಹಾಗೂ ಕೆಲ ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ತತ್ತರಿಸಿದ್ದ ದೆಹಲಿ ನಿವಾಸಿಗಳಿಗೆ ಹೊಸ ತಲೆನೋವು ಶುರುವಾಗಿದೆ. ಎದೆ ನಡುಗಿಸುವ ಶೀತಗಾಳಿಯಿಂದ ಜನರು ಬೆಚ್ಚಿಬಿದ್ದಿದ್ದು, ಮುಂದಿನ ಪರಿಸ್ಥಿತಿಗೆ ಹೇಗೆ ಅನ್ನೋ ಚಿಂತೆ ಶುರುವಾಗಿದೆ. ಇದಕ್ಕೆಲ್ಲಾ ಆ ಪ್ರಕೃತಿ ಮಾತೆಯೇ ಉತ್ತರ ನೀಡಬೇಕಿದೆ.

Published On - 7:43 am, Sat, 28 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us