AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hair Donation: ಕೊರೊನಾ ನಂತರ ತಿರುಪತಿ ತಿಮ್ಮಪ್ಪನಿಗೆ ಭಕ್ತರಿಂದ ಹೆಚ್ಚು ಕೇಶ ಕಾಣಿಕೆ: TTD ಆದಾಯದ ಮೊತ್ತ ಎಷ್ಟು ಗೊತ್ತಾ?

ಕೊರೊನಾ ನಂತರ ಶ್ರೀವಾರಿಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದರಿಂದ ಟಿಟಿಡಿಗೆ ಕೇಶ ಕಾಣಿಕೆಯಿಂದ ಆದಾಯ ವಿಪರೀತವಾಗಿ ಏರಿಕೆಯಾಗಿದೆ. ಇದರಿಂದಾಗಿ ತಲೆಗೂದಲು ಬಾಬತ್ತಿನಲ್ಲಿ ಆದಾಯ ಹೆಚ್ಚಿದ್ದು, ಈ ವರ್ಷ ಟಿಟಿಡಿ ಮತ್ತೊಂದು ದಾಖಲೆ ಬರೆಯಲು ಹೊರಟಿದೆ. ಅಂದಾಜಿನ ಪ್ರಕಾರ ಇದುವರೆಗೆ 120 ಕೋಟಿ ರೂ.ಗೂ ಅಧಿಕ ಆದಾಯ ಬಂದಿದೆ.

Hair Donation: ಕೊರೊನಾ ನಂತರ ತಿರುಪತಿ ತಿಮ್ಮಪ್ಪನಿಗೆ ಭಕ್ತರಿಂದ ಹೆಚ್ಚು ಕೇಶ ಕಾಣಿಕೆ: TTD ಆದಾಯದ ಮೊತ್ತ ಎಷ್ಟು ಗೊತ್ತಾ?
ತಿಮ್ಮಪ್ಪನಿಗೆ ಭಕ್ತರಿಂದ ಹೆಚ್ಚು ಕೇಶ ಕಾಣಿಕೆ
Follow us
ಸಾಧು ಶ್ರೀನಾಥ್​
|

Updated on: Aug 14, 2023 | 1:47 PM

ತಿರುಪತಿ, ಆಗಸ್ಟ್ 14: ಅಪಾರ ಭಕ್ತರ ಆರಾಧ್ಯದೈವ ಶ್ರೀ ವೆಂಕಟೇಶ್ವರ ಸ್ವಾಮಿಗೆ ತಲೆಗೂದಲನ್ನು ಅರ್ಪಿಸಿ ಮುಡಿ ಕೊಡುವುದು ಭಕ್ತರ ಆಶಯವಾಗಿದೆ. ತಿರುಮಲದ ಬೆಟ್ಟದ ಮೇಲೆ ತಿಮ್ಮಪ್ಪನ ಪಾದತಲದಲ್ಲಿ ತಮ್ಮ ಕೇಶ ಕಾಣಿಕೆ ಅರ್ಪಿಸಿ, ಶಿವನನ್ನು ದರ್ಶನ ಮಾಡುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿನಿತ್ಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಲ್ಲಿ ಕೇಶ ಕಾಣಿಕೆಯನ್ನು (Hair donation) ಅರ್ಪಿಸಿ ಪೂಜೆ ಸಲ್ಲಿಸುವುದರಿಂದ (Tirumala Tirupati Devasthanam-TTD) ಆದಾಯ ಹೆಚ್ಚುತ್ತಿದೆ. ತಿರುಮಲದಲ್ಲಿ ಕಲ್ಯಾಣಕಟ್ಟೆಯಲ್ಲಿ ಗೋವಿಂದನ ಪೂಜೆ ಸಲ್ಲಿಸಿ ಭಕ್ತರು ತಲೆಗೂದಲು ಕೊಡುವುದರಿಂದ ಟಿಟಿಡಿಯ ವಾರ್ಷಿಕ ಆದಾಯ ರೂ. 120 ಕೋಟಿ ರೂಪಾಯಿಗೂ ಅಧಿಕವಾಗಿದೆ. ಐದಾರು ವರ್ಷಗಳಿಂದ ಟಿಟಿಡಿ ಇದನ್ನು ಇನ್ನಷ್ಟು ಸುವ್ಯವಸ್ಥೆಗೊಳಿಸಿದೆ. ಇದರಿಂದಾಗಿ ತಲೆಗೂದಲು ಬಾಬತ್ತಿನಲ್ಲಿ ಆದಾಯ ಹೆಚ್ಚಿದ್ದು, ಈ ವರ್ಷ ಮತ್ತೊಂದು ದಾಖಲೆ ಬರೆಯಲು ಹೊರಟಿದೆ. ಟಿಟಿಡಿ ಅಂದಾಜಿನ ಪ್ರಕಾರ ಇದುವರೆಗೆ 120 ಕೋಟಿ ರೂ.ಗೂ ಅಧಿಕ ಆದಾಯ ಬಂದಿದೆ.

ಟಿಟಿಡಿ ಪ್ರತಿ ವರ್ಷ ನಾಲ್ಕು ಬಾರಿ ಈ ಹರಾಜು ಪ್ರಕ್ರಿಯೆಯನ್ನು ನಡೆಸುತ್ತದೆ ಮತ್ತು ತಲೆಗೂದಲನ್ನು ಆಯಾ ಶ್ರೇಣಿಗಳಾಗಿ ವಿಂಗಡಿಸಿ ಮಾರಾಟ ಪ್ರಕ್ರಿಯೆ ಆಯೋಜಿಸುತ್ತದೆ. ತಲೆಗೂದಲನ್ನು 5 ಗ್ರೇಡ್‌ಗಳಾಗಿ ವಿಂಗಡಿಸಿ ಹರಾಜು ಮಾಡುತ್ತಿರುವ ಟಿಟಿಡಿ, ಮೊದಲ ಮೂರು ಗ್ರೇಡ್‌ಗಳಲ್ಲಿ ಹೇರ್​ ಡೈ ಮತ್ತು ಕಪ್ಪು ಕೂದಲನ್ನು ಪ್ರತ್ಯೇಕಿಸಿ ಎರಡು ವಿಧಗಳಾಗಿ ವಿಂಗಡಿಸುತ್ತದೆ. ತಿರುಪತಿಯ ಟಿಟಿಡಿ ಮಾರ್ಕೆಟಿಂಗ್ ಗೋಡಾನ್‌ನಲ್ಲಿ ಟಿಟಿಡಿ ತಿರುಮಲದಿಂದ 1400 ಕೆಜಿ ತಲೆಗೂದಲನ್ನು ಸಂಗ್ರಹಿಸುತ್ತಿದೆ. ತಿರುಮಲದಲ್ಲಿರುವ ಟಿಟಿಡಿ ಕಲ್ಯಾಣ ಕಟ್ಟೆ ಅತಿಥಿ ಗೃಹದಲ್ಲಿ ತಲೆಗೂದಲನ್ನು ಸಂಗ್ರಹಿಸಿ, ಮಾರಾಟ ಮಾಡುವ ವ್ಯವಸ್ಥೆ ಮಾಡಿದ್ದು, ಟಿಟಿಡಿ ಹಲವಾರು ಮುನ್ನೆಚ್ಚರಿಕೆಗಳನ್ನು ಅನುಸರಿಸುತ್ತದೆ. ಭಕ್ತರು 1400 ಕೆ.ಜಿ ಕೂದಲನ್ನು ಕಾಣಿಗೆಯ ಅಂಗವಾಗಿ ಅರ್ಪಿಸುತ್ತಾರೆ. ಅದು ಒಣಗಿದ ನಂತರ ಒಂದು ಮೆಟ್ರಿಕ್ ಟನ್ ವರೆಗೆ TTD ಗೋದಾಮಿಗೆ ತಲುಪುತ್ತದೆ. ಕರೋನಾ ನಂತರ ಶ್ರೀವಾರಿಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದರಿಂದ ಟಿಟಿಡಿಗೆ ಕೇಶ ಕಾಣಿಕೆಯಿಂದ ಆದಾಯ ವಿಪರೀತವಾಗಿ ಏರಿಕೆಯಾಗಿದೆ.

Also Read: ತಿರುಪತಿ ದೇವಸ್ಥಾನದ ಬಳಿ 6 ವರ್ಷದ ಬಾಲಕಿಯನ್ನು ಕೊಂದಿದ್ದ ಚಿರತೆಯ ಸೆರೆ

ಕಳೆದ ಐದಾರು ವರ್ಷಗಳಿಂದ ಟಿಟಿಡಿಯ ವಾರ್ಷಿಕ ಆದಾಯ 120 ಕೋಟಿ ರೂ. ಗೂ ಅಧಿಕವಾಗಿದ್ದರೆ, 2022-23ನೇ ಹಣಕಾಸು ವರ್ಷದಲ್ಲಿ ಟಿಟಿಡಿಗೆ ಈಗಾಗಲೇ 120 ಕೋಟಿ ರೂ. ದಾಟಿದೆ. 2023-24ರ ಆರ್ಥಿಕ ವರ್ಷದಲ್ಲಿ ಟಿಟಿಡಿ ಇದುವರೆಗೆ ಎರಡು ಬಾರಿ ಈ ಹರಾಜನ್ನು ನಡೆಸಿದೆ. ಇದೇ ಸಾಲಿನಲ್ಲಿ ಇನ್ನೂ ಎರಡು ಬಾರಿ ಈ ಹರಾಜು ನಡೆಸಲು ಟಿಟಿಡಿ ಸಿದ್ಧತೆ ನಡೆಸಿದ್ದು, ಈ ಆರ್ಥಿಕ ವರ್ಷದಲ್ಲಿ ತಲೆಗೂದಲು ಬಾಬತ್ತಿನಲ್ಲಿ ಆದಾಯ ಇನ್ನೂ ಅಧಿಕವಾಗುವ ಅಂದಾಜಿದೆ ಎಂದು ಟಿಟಿಡಿ ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ