AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Explainer: ಪ್ರಶ್ನೆಗಾಗಿ ನಗದು ಆರೋಪದಿಂದ ಹಿಡಿದು ಮಹುವಾ ಮೊಯಿತ್ರಾ ಉಚ್ಛಾಟನೆವರೆಗೆ ಏನೇನಾಯ್ತು?

Mahua Moitra Expelled: ಸಂಸತ್​​ನಲ್ಲಿ ಪ್ರಶ್ನೆ ಕೇಳುವುದಕ್ಕಾಗಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನೈತಿಕ ಸಮಿತಿ ಸಲ್ಲಿಸಿದ ವರದಿ ಆಧರಿಸಿ, ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಏನೇನಾಯ್ತು?, ಇಲ್ಲಿದೆ ಟೈಮ್​​ಲೈನ್

Explainer: ಪ್ರಶ್ನೆಗಾಗಿ ನಗದು ಆರೋಪದಿಂದ ಹಿಡಿದು ಮಹುವಾ ಮೊಯಿತ್ರಾ ಉಚ್ಛಾಟನೆವರೆಗೆ ಏನೇನಾಯ್ತು?
ಮಹುವಾ ಮೊಯಿತ್ರಾ
Follow us
ರಶ್ಮಿ ಕಲ್ಲಕಟ್ಟ
|

Updated on: Dec 08, 2023 | 6:38 PM

ದೆಹಲಿ ಡಿಸೆಂಬರ್ 08: ಸರ್ಕಾರವನ್ನು ಟೀಕಿಸುವುದಕ್ಕಾಗಿ ಲಂಚ ಪಡೆದ ಆರೋಪದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ (Mahua Moitra) ಅವರನ್ನು ಇಂದು (ಶುಕ್ರವಾರ) ಲೋಕಸಭೆಯಿಂದ (Lok Sabha) ಉಚ್ಚಾಟಿಸಲಾಗಿದೆ. 49ರ ಹರೆಯದ ಸಂಸದೆ, ನರೇಂದ್ರ ಮೋದಿ(Narendra Modi) ಸರಕಾರವನ್ನು ಋಣಾತ್ಮಕವಾಗಿ ಚಿತ್ರಿಸಿ, ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ನಗದು ಮತ್ತು ಐಷಾರಾಮಿ ಉಡುಗೊರೆಗಳನ್ನು ಪಡೆದ ಆರೋಪವನ್ನು ಎದುರಿಸುತ್ತಿದ್ದಾರೆ.

ಪ್ರಶ್ನೆಗಾಗಿ ನಗದು ಪ್ರಕರಣದ ಟೈಮ್‌ಲೈನ್: ಎಲ್ಲಿಂದ ಶುರುವಾಗಿದ್ದು?

ಅಕ್ಟೋಬರ್ 14 ರಂದು ಸುಪ್ರೀಂಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಅವರು ಕೇಂದ್ರೀಯ ತನಿಖಾ ದಳಕ್ಕೆ (CBI) ದೂರು ಸಲ್ಲಿಸಿದರು. ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಯನ್ನು ಪರಿಹರಿಸಲು ಕೋರಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪ್ರತಿಯನ್ನು ರವಾನಿಸಲಾಗಿತ್ತು. ಮೊಯಿತ್ರಾ ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದರು, ದೇಹದ್ರಾಯ್ ಅವರನ್ನು ” jilted ex” ಎಂದು ಕರೆದಿದ್ದರು ಮೊಯಿತ್ರಾ . ಇದಕ್ಕೆ ಪ್ರತಿಕ್ರಿಯೆಯಾಗಿ, ದೇಹದ್ರಾಯ್ ಅವರು ದೆಹಲಿ ಪೊಲೀಸರಿಗೆ ಪತ್ರ ಬರೆದು, ತಮ್ಮ ದೂರಿನಿಂದಾಗಿ ಜೀವಕ್ಕೆ ಬಹಳ ಗಂಭೀರವಾದ ಬೆದರಿಕೆ ಇದೆ. ದೂರು ಹಿಂತೆಗೆದುಕೊಳ್ಳುವಂತೆ ಬಲವಂತಪಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ಮೊಯಿತ್ರಾ ಅವರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಕೋರಿದ್ದಾರೆ. ಪಿಎಂ ಮೋದಿ ಮತ್ತು ಅದಾನಿ ಗ್ರೂಪ್ ಅನ್ನು ಟೀಕಿಸಲು ಸಂಸತ್ ನಲ್ಲಿ ಪ್ರಶ್ನೆಗಳನ್ನು ಕೇಳುವುದಕ್ಕಾಗಿ ಮೊಯಿತ್ರಾ ಅವರು ಹಿರಾನಂದಾನಿಯಿಂದ ಲಂಚವನ್ನು ಸ್ವೀಕರಿಸಿದ್ದಾರೆ ಎಂದು ದುಬೆ ಆರೋಪಿಸಿದ್ದಾರೆ. ಈ ಕ್ರಮಗಳು, ಸಂಸದೀಯ ಸವಲತ್ತುಗಳ ಉಲ್ಲಂಘನೆ, ಸದನದ ಅವಹೇಳನ ಮತ್ತು ಸಂಭಾವ್ಯ ಕ್ರಿಮಿನಲ್ ಪಿತೂರಿಯಾಗಿದೆ ಎಂದಿದ್ದರು ದುಬೆ.

ದುಬೆಯವರ ದೂರಿನ ಮೇರೆಗೆ ಸಂಸತ್​​ನ ನೈತಿಕ ಸಮಿತಿ ವಿಚಾರಣೆ ನಡೆಸಿದ್ದು,ವಿಚಾರಣೆಗಾಗಿ ಮೊಯಿತ್ರಾ,ದುಬೆ ಮತ್ತು ದೇಹದ್ರಾಯ್ ಅವರನ್ನು ಕರೆಸಿತ್ತು.

ದರ್ಶನ್ ಹಿರಾನಂದಾನಿ ಆರೋಪ

ಏತನ್ಮಧ್ಯೆ, ಅದಾನಿ ಗ್ರೂಪ್ ಅನ್ನು ಗುರಿಯಾಗಿಟ್ಟುಕೊಂಡು ಪ್ರಶ್ನೆಗಳನ್ನು ರೂಪಿಸಲು ಮತ್ತು ಪೋಸ್ಟ್ ಮಾಡಲು ಅನುಕೂಲವಾಗುವಂತೆ ಮೊಯಿತ್ರಾ ಅವರು ತಮ್ಮ ಸಂಸದೀಯ ರುಜುವಾತುಗಳನ್ನು ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಹಿರಾನಂದಾನಿ ಅವರು ಅಫಿಡವಿಟ್ ಸಲ್ಲಿಸಿದರು, ಇದು ಪ್ರಧಾನಿ ಮೋದಿಯನ್ನು ತಲುಪಲು “ಏಕೈಕ ಮಾರ್ಗ” ಎಂದು ಅವರು ಗ್ರಹಿಸಿದ್ದಾರೆ. ದುಬೈನಿಂದ ಪ್ರಶ್ನೆಗಳನ್ನು ಪೋಸ್ಟ್ ಮಾಡಲು ತೃಣಮೂಲ ಸಂಸದೆ ಸಂಸದೀಯ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ನೀಡಿದ್ದರು.ಇದನ್ನು ಮಹುವಾ ಕೂಡಾ ಒಪ್ಪಿಕೊಂಡಿದ್ದಾರೆ.

ಮೊಯಿತ್ರಾ ಅವರು ತಮ್ಮ ಸಂಸದೀಯ ಲಾಗಿನ್ ರುಜುವಾತುಗಳನ್ನು ಹಿರಾನಂದನಿ ಅವರೊಂದಿಗೆ ಹಂಚಿಕೊಳ್ಳಲು ಒಪ್ಪಿಕೊಂಡರು. ಅವನಿಂದ ಉಡುಗೊರೆಗಳ ಸ್ವೀಕೃತಿಯನ್ನು ಅಂಗೀಕರಿಸುವಾಗ, ಅವರು “ಒಂದು ಸ್ಕಾರ್ಫ್, ಕೆಲವು ಲಿಪ್ ಸಸ್ಟಿಕ್ ಮತ್ತು ಐಶ್ಯಾಡೋ ಸೇರಿದಂತೆ ಇತರ ಮೇಕಪ್ ವಸ್ತುಗಳು ಮೊದಲಾದ ವಸ್ತುಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದ್ದಾರೆ. ಆದಾಗ್ಯೂ,ಮೊಯಿತ್ರಾ, ಯಾವುದೇ ಲಂಚ ಸ್ವೀಕರಿಸಿಲ್ಲ ಎಂದು ಹೇಳಿದ್ದು ಉದ್ಯಮಿಯನ್ನು ಕ್ರಾಸ್ ಕ್ವೆಶ್ಚನ್ ಮಾಡಬೇಕು ಎಂದು ಒತ್ತಾಯಿಸಿದ್ದರು.

ಮಹುವಾ ಮೊಯಿತ್ರಾ ಪ್ರತಿಭಟನೆ

ಅಕ್ಟೋಬರ್ 31 ರಂದು ಹಾಜರಾಗಲು ಎಥಿಕ್ಸ್ ಕಮಿಟಿಯ ಆರಂಭಿಕ ಸಮನ್ಸ್ ಅನ್ನು ಮೊಯಿತ್ರಾ ಧಿಕ್ಕರಿಸಿದರು. ಅವರು 7:20 pm ಕ್ಕೆ ಇಮೇಲ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಸ್ವೀಕರಿಸುವ ಮೊದಲು ಸಮಿತಿಯ ಅಧ್ಯಕ್ಷರು ನೇರ ದೂರದರ್ಶನದಲ್ಲಿ ತನ್ನ ಸಮನ್ಸ್ ಅನ್ನು ಸಾರ್ವಜನಿಕವಾಗಿ ಘೋಷಿಸಿದ್ದಾರೆ ಎಂದು ಮಹುವಾ ಹೇಳಿದ್ದರು. ತನ್ನ ಮುಂದೆ ಇರುವ ಎಲ್ಲಾ ದೂರುಗಳು ಮತ್ತು ಅಫಿಡವಿಟ್‌ಗಳನ್ನು ಮೊದಲು ಮಾಧ್ಯಮಗಳಿಗೆ ನೀಡಲಾಗುತ್ತಿದೆ. ಅದಾನಿ ಗ್ರೂಪ್ ಅನ್ನು ಪ್ರಶ್ನಿಸುವ ಧೈರ್ಯವಿರುವ ಯಾವುದೇ ರಾಜಕಾರಣಿಯನ್ನು ಗುರಿಯಾಗಿಸುವ ಬೇಟೆ ಇದು ಎಂದು ಆರೋಪಿಸಿದ್ದಾರೆ.

ಮಹುವಾ ಮೊಯಿತ್ರಾ ವಾಕ್ ಔಟ್

ನವೆಂಬರ್ 2 ರಂದು ಮೊಯಿತ್ರಾ ನೈತಿಕ ಸಮಿತಿಯ ಮುಂದೆ ಹಾಜರಾಗಲು ಒಪ್ಪಿಕೊಂಡಿದ್ದು ಅಲ್ಲಿ ಕೇಳಿದ ಪ್ರಶ್ನೆಗಳಿಗೆ ಇರಿಸು ಮುರಿಸು ಅನುಭವಿಸಿ ಹೊರನಡೆದಿದ್ದರು. ಈ ಬಗ್ಗೆ ಸ್ಪೀಕರ್ ಗೆ ಪತ್ರ ಬರೆದ ಅವರು ಸಮಿತಿ ವಸ್ತ್ರಾಪಹರಣದಲ್ಲಿ ತೊಡಗಿದೆ. ಅವರ ಪ್ರಶ್ನೆಯು ಪಕ್ಷಪಾತ ಮತ್ತು ಅನ್ಯಾಯದಿಂದ ಕೂಡಿತ್ತು ಎಂದು ಆರೋಪಿಸಿದ್ದಾರೆ. ಎಥಿಕ್ಸ್ ಕಮಿಟಿಯ ಮೊಯಿತ್ರಾ ಆರೋಪಗಳನ್ನು ನಿರಾಕರಿಸಿದ್ದು, ಅವರು ಸರಿಯಾಗಿ ಸಹಕರಿಸಿಲ್ಲಸ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿ ಹೊರ ನಡೆದರು ಎಂದಿತ್ತು.

ನೈತಿಕ ಸಮಿತಿಯ ವರದಿ ಸ್ಪೀಕರ್‌ಗೆ ಸಲ್ಲಿಕೆ

ನವೆಂಬರ್ 10 ರಂದು, ನೈತಿಕ ಸಮಿತಿಯು ತನ್ನ ವರದಿಯನ್ನು ಸ್ಪೀಕರ್‌ಗೆ ಸಲ್ಲಿಸಿ ಮೊಯಿತ್ರಾ ಅವರನ್ನು ಉಚ್ಛಾಟಿಸುವಂತೆ ಶಿಫಾರಸು ಮಾಡಿತು. ಹಿರಾನಂದಾನಿ ಅವರ ಪರವಾಗಿ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುವುದಕ್ಕಾಗಿ ಅವರು ಲಂಚ ಸ್ವೀಕರಿಸಿದ್ದಾರೆ ಎಂದು ವರದಿಯು ಆರೋಪಿಸಿದೆ. ನೈತಿಕ ಸಮಿತಿಯ ಹತ್ತು ಸದಸ್ಯರಲ್ಲಿ ಆರು ಮಂದಿ 479 ಪುಟಗಳ ವರದಿಯನ್ನು ಅಂಗೀಕರಿಸಲು ಮತ ಹಾಕಿದರು. ಉಳಿದ ನಾಲ್ವರು ವಿರೋಧ ಪಕ್ಷಗಳ ಸದಸ್ಯರು ಭಿನ್ನಾಭಿಪ್ರಾಯ ದಾಖಲಿಸಿದರು.

ಇದನ್ನೂ ಓದಿಲೋಕಸಭೆಯಿಂದ ಉಚ್ಛಾಟನೆ ಆದ ಬಳಿಕ ಬಿಜೆಪಿ ವಿರುದ್ಧ ಗುಡುಗಿದ ಮಹುವಾ ಮೊಯಿತ್ರಾ

ಸಂಸತ್ತಿನಲ್ಲಿ ವರದಿ ಮಂಡನೆ

ಡಿಸೆಂಬರ್ 8 ರಂದು ನೈತಿಕ ಸಮಿತಿಯ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಸಮಿತಿಯ ಅಧ್ಯಕ್ಷ ವಿನೋದ್ ಕುಮಾರ್ ಸೋಂಕರ್ ಅವರು ಮಧ್ಯಾಹ್ನದ ಅಧಿವೇಶನದಲ್ಲಿ ವರದಿಯನ್ನು ಮಂಡಿಸಿದರು. ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಮುತ್ತಿಗೆ ಹಾಕಿ, ಯಾವುದೇ ಕ್ರಮ ಕೈಗೊಳ್ಳುವ ಮೊದಲು ವರದಿಗೆ ಪ್ರವೇಶ ಮತ್ತು ಚರ್ಚೆಗೆ ಒತ್ತಾಯಿಸಿದರು. ಹಿರಿಯ ಟಿಎಂಸಿ ಸದಸ್ಯ ಕಲ್ಯಾಣ್ ಬ್ಯಾನರ್ಜಿ, ಮೊಯಿತ್ರಾ ಅವರ ಉಚ್ಚಾಟನೆಯ ಬಗ್ಗೆ ಯಾವುದೇ ಮತದಾನದ ಮೊದಲು ಚರ್ಚೆಗೆ ಒತ್ತಾಯಿಸಿದರು.

ಗದ್ದಲದ ನಡುವೆಯೇ ಸಭಾಧ್ಯಕ್ಷ ಬಿಜೆಪಿಯ ರಾಜೇಂದ್ರ ಅಗರವಾಲ್ ಅವರು ಗದ್ದಲ ತಡೆಯಲಾರದೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಮಹುವಾ ಮೊಯಿತ್ರಾ ಉಚ್ಛಾಟನೆ

ವರದಿಯ ಮಂಡನೆ ನಂತರ ಮಹುವಾ ಮೊಯಿತ್ರಾ ಅವರನ್ನು ಉಚ್ಛಾಟನೆ ಮಾಡಲಾಯಿತು. ಚರ್ಚೆಗೆ ಒತ್ತಾಯ, ಮಾತನಾಡಲು ಅವಕಾಶ ನೀಡಿ ಎಂದು ಮೊಯಿತ್ರಾ ಮತ್ತು ವಿರೋಧ ಪಕ್ಷದ ಸದಸ್ಯರು ಬೇಡಿಕ ಮಾಡಿದ್ದರೂ ಮತದಾನದ ಮೊದಲು ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಮಹುವಾ ಅವರಿಗೆ ಅವಕಾಶವನ್ನು ನೀಡಲಿಲ್ಲ. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು “ಅನೈತಿಕ ನಡವಳಿಕೆ” ಆಧಾರದ ಮೇಲೆ ಅವರ ಉಚ್ಚಾಟನೆಯ ಪ್ರಸ್ತಾಪವನ್ನು ಮಂಡಿಸಿದರು, ನಂತರ ಅದನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?