AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ 19 ಕಾರಣಕ್ಕೆ ಬಂದ್​ ಆಗಿದ್ದ ರಾಷ್ಟ್ರಪತಿ ಭವನ ಮ್ಯೂಸಿಯಂ ವೀಕ್ಷಣೆ ಮತ್ತೆ ಪ್ರಾರಂಭ; ಇಲ್ಲಿದೆ ಸಮಯ, ಸ್ಲಾಟ್​​ ಬಗ್ಗೆ ಮಾಹಿತಿ

ರಾಷ್ಟ್ರಪತಿ ಭವನಕ್ಕೆ ಮಾರ್ಚ್​ 12ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿದೆ. ಇಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ವೀಕ್ಷಣೆಗೆ ಅವಕಾಶ ಇದೆ. ಇದೆರಡು ದಿನದಲ್ಲೇ ಯಾವುದಾದರೂ ಗೆಜೆಟೆಡ್​ ರಜಾದಿನ ಬಂದರೆ ಅಂದು ಕ್ಲೋಸ್ ಇರಲಿದೆ.

ಕೊವಿಡ್​ 19 ಕಾರಣಕ್ಕೆ ಬಂದ್​ ಆಗಿದ್ದ ರಾಷ್ಟ್ರಪತಿ ಭವನ ಮ್ಯೂಸಿಯಂ ವೀಕ್ಷಣೆ ಮತ್ತೆ ಪ್ರಾರಂಭ; ಇಲ್ಲಿದೆ ಸಮಯ, ಸ್ಲಾಟ್​​ ಬಗ್ಗೆ ಮಾಹಿತಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Mar 05, 2022 | 1:21 PM

Share

ಕೊವಿಡ್​ 19 ಮೂರನೇ ಅಲೆ (Covid 19 3rd Wave) ಹಿನ್ನೆಲೆಯಲ್ಲಿ ಜನವರಿ 1ರಿಂದಲೇ ಬಂದ್​ ಆಗಿದ್ದ ರಾಷ್ಟ್ರಪತಿ ಭವನ, ರಾಷ್ಟ್ರಪತಿ ಭವನ ಮ್ಯೂಸಿಯಂ ಪ್ರವಾಸ ಮಾರ್ಚ್​ 8ರಿಂದ ಮತ್ತೆ ಪ್ರಾರಂಭವಾಗಲಿದೆ. ಅಂದರೆ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಳ್ಳಲಿದೆ. ಹಾಗೇ, ಕೊವಿಡ್​ 19 ಕಾರಣಕ್ಕೆ ಚೇಂಜ್​ ಆಫ್​ ಗಾರ್ಡ್ ಸಮಾರಂಭ (ಇದು ಮಿಲಿಟರಿ ಸಂಪ್ರದಾಯ. ಪ್ರಸಿದ್ಧ ಸ್ಥಳಗಳು, ಕೋಟೆಗಳು, ರಕ್ಷಣಾ ಸಂಸ್ಥೆಗಳಲ್ಲಿ ನಿಯೋಜಿಸಲಾಗುವ ರಕ್ಷಣಾ ಸಿಬ್ಬಂದಿಯನ್ನು ನಿಯಮಿತವಾಗಿ ಬದಲಾವಣೆ ಮಾಡುವ ಒಂದು ಕಾರ್ಯಕ್ರಮ)ವೂ ಸ್ಥಗಿತಗೊಂಡಿತ್ತು. ಇದೂ ಕೂಡ ಮುಂದಿನ ವಾರ ನಡೆಯಲಿದೆ.

ರಾಷ್ಟ್ರಪತಿ ಭವನ ಸಂಕೀರ್ಣ ಸಾರ್ವಜನಿಕರ ವೀಕ್ಷಣೆಗೆ ಮಾರ್ಚ್​ 8ರಿಂದ ತೆರೆಯಲಿದ್ದು, ವಾರದಲ್ಲಿ ಆರು ದಿನ ಅಂದರೆ ಮಂಗಳವಾರದಿಂದ ಭಾನುವಾರದವರೆಗೆ ಸಾರ್ವಜನಿಕರು ವೀಕ್ಷಣೆಗೆ ಇಲ್ಲಿಗೆ ಬರಬಹುದಾಗಿದೆ. ಗೆಜೆಟೆಡ್​ ರಜಾದಿನಗಳಲ್ಲಿ ವೀಕ್ಷಣೆ ಇರುವುದಿಲ್ಲ ಎಂದು ರಾಷ್ಟ್ರಪತಿ ಭವನ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಿನಕ್ಕೆ ನಾಲ್ಕು ಸ್ಲಾಟ್​ಗಳಿದ್ದು, ಇಲ್ಲಿಗೆ ಆಗಮಿಸುವವರು ಮೊದಲೇ ಬುಕ್ ಮಾಡಿಟ್ಟುಕೊಳ್ಳಬೇಕು. ಒಂದು ಸ್ಲಾಟ್​​ನಲ್ಲಿ 50 ಪ್ರವಾಸಿಗರಿಗೆ ಮಾತ್ರ ಅವಕಾಶ. ಮೊದಲ ಸ್ಲಾಟ್​​ ಅವಧಿ ಬೆಳಗ್ಗೆ 9.30-11 ಗಂಟೆ, ಎರಡನೇ ಸ್ಲಾಟ್​ 11.30ರಿಂದ ಮಧ್ಯಾಹ್ನ 1, ಮೂರನೇ ಸ್ಲಾಟ್​ 13.30-3 ಮತ್ತು ನಾಲ್ಕನೇ ಸ್ಲಾಟ್​​ 15.30ರಿಂದ ಸಂಜೆ 5ಗಂಟೆವರೆಗೆ ಇರಲಿದೆ.

ರಾಷ್ಟ್ರಪತಿ ಭವನಕ್ಕೆ ಮಾರ್ಚ್​ 12ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿದೆ. ಇಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ವೀಕ್ಷಣೆಗೆ ಅವಕಾಶ ಇದೆ. ಇದೆರಡು ದಿನದಲ್ಲೇ ಯಾವುದಾದರೂ ಗೆಜೆಟೆಡ್​ ರಜಾದಿನ ಬಂದರೆ ಅಂದು ಕ್ಲೋಸ್ ಇರಲಿದೆ. ರಾಷ್ಟ್ರಪತಿ ಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಮೂರು ಸ್ಲಾಟ್​​ನಲ್ಲಿ ಸಮಯ ನಿಗದಿ ಮಾಡಲಾಗಿದೆ.  ಬೆಳಗ್ಗೆ 10 ಗಂಟೆಯಿಂದ 11.30 ಮೊದಲೇ ಸ್ಲಾಟ್​, 12.30-13-30ರವರೆಗೆ ಎರಡನೇ ಮತ್ತು 14.30ರಿಂದ 15.30ರವರೆಗೆ ಮೂರನೇ ಸ್ಲಾಟ್​ ಇರಲಿದೆ. ಒಂದು ಸ್ಲಾಟ್​​ನಲ್ಲಿ ಗರಿಷ್ಠ 25 ಜನರಿಗಷ್ಟೇ ಅವಕಾಶ. ಈ ಬಾರಿ ರಾಷ್ಟ್ರಪತಿ ಭವನ ಪ್ರವಾಸದಲ್ಲಿ ಹೊಸದಾಗಿ ಅಭಿವೃದ್ಧಿಯಾಗಿ ಆರೋಗ್ಯ ವನಂ ವೀಕ್ಷಣೆಯೂ ಇರಲಿದೆ. ಇನ್ನು ಚೇಂಜ್​ ಆಫ್ ಗಾರ್ಡ್​ ಸಮಾರಂಭ ಮಾರ್ಚ್​ 12ರಿಂದ ಪ್ರತಿ ಶನಿವಾರ (ಗೆಜೆಟೆಡ್​ ರಜಾದಿನ ಹೊರತು ಪಡಿಸಿ) ಬೆಳಗ್ಗೆ 8ಗಂಟೆಯಿಂದ 9ಗಂಟೆವರೆಗೆ ಇರುತ್ತದೆ.

ಇದನ್ನೂ ಓದಿ: Breaking: ಮಾನವೀಯ ಕಾರಿಡಾರ್​ಗಳನ್ನು ತೆರೆಯಲು ಕದನ ವಿರಾಮ ಘೋಷಿಸಿದ ರಷ್ಯಾ

Published On - 1:18 pm, Sat, 5 March 22

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ