AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ 19 ಕಾರಣಕ್ಕೆ ಬಂದ್​ ಆಗಿದ್ದ ರಾಷ್ಟ್ರಪತಿ ಭವನ ಮ್ಯೂಸಿಯಂ ವೀಕ್ಷಣೆ ಮತ್ತೆ ಪ್ರಾರಂಭ; ಇಲ್ಲಿದೆ ಸಮಯ, ಸ್ಲಾಟ್​​ ಬಗ್ಗೆ ಮಾಹಿತಿ

ರಾಷ್ಟ್ರಪತಿ ಭವನಕ್ಕೆ ಮಾರ್ಚ್​ 12ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿದೆ. ಇಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ವೀಕ್ಷಣೆಗೆ ಅವಕಾಶ ಇದೆ. ಇದೆರಡು ದಿನದಲ್ಲೇ ಯಾವುದಾದರೂ ಗೆಜೆಟೆಡ್​ ರಜಾದಿನ ಬಂದರೆ ಅಂದು ಕ್ಲೋಸ್ ಇರಲಿದೆ.

ಕೊವಿಡ್​ 19 ಕಾರಣಕ್ಕೆ ಬಂದ್​ ಆಗಿದ್ದ ರಾಷ್ಟ್ರಪತಿ ಭವನ ಮ್ಯೂಸಿಯಂ ವೀಕ್ಷಣೆ ಮತ್ತೆ ಪ್ರಾರಂಭ; ಇಲ್ಲಿದೆ ಸಮಯ, ಸ್ಲಾಟ್​​ ಬಗ್ಗೆ ಮಾಹಿತಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Mar 05, 2022 | 1:21 PM

Share

ಕೊವಿಡ್​ 19 ಮೂರನೇ ಅಲೆ (Covid 19 3rd Wave) ಹಿನ್ನೆಲೆಯಲ್ಲಿ ಜನವರಿ 1ರಿಂದಲೇ ಬಂದ್​ ಆಗಿದ್ದ ರಾಷ್ಟ್ರಪತಿ ಭವನ, ರಾಷ್ಟ್ರಪತಿ ಭವನ ಮ್ಯೂಸಿಯಂ ಪ್ರವಾಸ ಮಾರ್ಚ್​ 8ರಿಂದ ಮತ್ತೆ ಪ್ರಾರಂಭವಾಗಲಿದೆ. ಅಂದರೆ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಳ್ಳಲಿದೆ. ಹಾಗೇ, ಕೊವಿಡ್​ 19 ಕಾರಣಕ್ಕೆ ಚೇಂಜ್​ ಆಫ್​ ಗಾರ್ಡ್ ಸಮಾರಂಭ (ಇದು ಮಿಲಿಟರಿ ಸಂಪ್ರದಾಯ. ಪ್ರಸಿದ್ಧ ಸ್ಥಳಗಳು, ಕೋಟೆಗಳು, ರಕ್ಷಣಾ ಸಂಸ್ಥೆಗಳಲ್ಲಿ ನಿಯೋಜಿಸಲಾಗುವ ರಕ್ಷಣಾ ಸಿಬ್ಬಂದಿಯನ್ನು ನಿಯಮಿತವಾಗಿ ಬದಲಾವಣೆ ಮಾಡುವ ಒಂದು ಕಾರ್ಯಕ್ರಮ)ವೂ ಸ್ಥಗಿತಗೊಂಡಿತ್ತು. ಇದೂ ಕೂಡ ಮುಂದಿನ ವಾರ ನಡೆಯಲಿದೆ.

ರಾಷ್ಟ್ರಪತಿ ಭವನ ಸಂಕೀರ್ಣ ಸಾರ್ವಜನಿಕರ ವೀಕ್ಷಣೆಗೆ ಮಾರ್ಚ್​ 8ರಿಂದ ತೆರೆಯಲಿದ್ದು, ವಾರದಲ್ಲಿ ಆರು ದಿನ ಅಂದರೆ ಮಂಗಳವಾರದಿಂದ ಭಾನುವಾರದವರೆಗೆ ಸಾರ್ವಜನಿಕರು ವೀಕ್ಷಣೆಗೆ ಇಲ್ಲಿಗೆ ಬರಬಹುದಾಗಿದೆ. ಗೆಜೆಟೆಡ್​ ರಜಾದಿನಗಳಲ್ಲಿ ವೀಕ್ಷಣೆ ಇರುವುದಿಲ್ಲ ಎಂದು ರಾಷ್ಟ್ರಪತಿ ಭವನ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಿನಕ್ಕೆ ನಾಲ್ಕು ಸ್ಲಾಟ್​ಗಳಿದ್ದು, ಇಲ್ಲಿಗೆ ಆಗಮಿಸುವವರು ಮೊದಲೇ ಬುಕ್ ಮಾಡಿಟ್ಟುಕೊಳ್ಳಬೇಕು. ಒಂದು ಸ್ಲಾಟ್​​ನಲ್ಲಿ 50 ಪ್ರವಾಸಿಗರಿಗೆ ಮಾತ್ರ ಅವಕಾಶ. ಮೊದಲ ಸ್ಲಾಟ್​​ ಅವಧಿ ಬೆಳಗ್ಗೆ 9.30-11 ಗಂಟೆ, ಎರಡನೇ ಸ್ಲಾಟ್​ 11.30ರಿಂದ ಮಧ್ಯಾಹ್ನ 1, ಮೂರನೇ ಸ್ಲಾಟ್​ 13.30-3 ಮತ್ತು ನಾಲ್ಕನೇ ಸ್ಲಾಟ್​​ 15.30ರಿಂದ ಸಂಜೆ 5ಗಂಟೆವರೆಗೆ ಇರಲಿದೆ.

ರಾಷ್ಟ್ರಪತಿ ಭವನಕ್ಕೆ ಮಾರ್ಚ್​ 12ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿದೆ. ಇಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ವೀಕ್ಷಣೆಗೆ ಅವಕಾಶ ಇದೆ. ಇದೆರಡು ದಿನದಲ್ಲೇ ಯಾವುದಾದರೂ ಗೆಜೆಟೆಡ್​ ರಜಾದಿನ ಬಂದರೆ ಅಂದು ಕ್ಲೋಸ್ ಇರಲಿದೆ. ರಾಷ್ಟ್ರಪತಿ ಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಮೂರು ಸ್ಲಾಟ್​​ನಲ್ಲಿ ಸಮಯ ನಿಗದಿ ಮಾಡಲಾಗಿದೆ.  ಬೆಳಗ್ಗೆ 10 ಗಂಟೆಯಿಂದ 11.30 ಮೊದಲೇ ಸ್ಲಾಟ್​, 12.30-13-30ರವರೆಗೆ ಎರಡನೇ ಮತ್ತು 14.30ರಿಂದ 15.30ರವರೆಗೆ ಮೂರನೇ ಸ್ಲಾಟ್​ ಇರಲಿದೆ. ಒಂದು ಸ್ಲಾಟ್​​ನಲ್ಲಿ ಗರಿಷ್ಠ 25 ಜನರಿಗಷ್ಟೇ ಅವಕಾಶ. ಈ ಬಾರಿ ರಾಷ್ಟ್ರಪತಿ ಭವನ ಪ್ರವಾಸದಲ್ಲಿ ಹೊಸದಾಗಿ ಅಭಿವೃದ್ಧಿಯಾಗಿ ಆರೋಗ್ಯ ವನಂ ವೀಕ್ಷಣೆಯೂ ಇರಲಿದೆ. ಇನ್ನು ಚೇಂಜ್​ ಆಫ್ ಗಾರ್ಡ್​ ಸಮಾರಂಭ ಮಾರ್ಚ್​ 12ರಿಂದ ಪ್ರತಿ ಶನಿವಾರ (ಗೆಜೆಟೆಡ್​ ರಜಾದಿನ ಹೊರತು ಪಡಿಸಿ) ಬೆಳಗ್ಗೆ 8ಗಂಟೆಯಿಂದ 9ಗಂಟೆವರೆಗೆ ಇರುತ್ತದೆ.

ಇದನ್ನೂ ಓದಿ: Breaking: ಮಾನವೀಯ ಕಾರಿಡಾರ್​ಗಳನ್ನು ತೆರೆಯಲು ಕದನ ವಿರಾಮ ಘೋಷಿಸಿದ ರಷ್ಯಾ

Published On - 1:18 pm, Sat, 5 March 22

Follow Us
Web contact
Web contact

TV9 Kannada

Read More
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ