AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಷಿಯಲ್​ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ಒಂದು ಫೋಟೋ ಮತ್ತು ಕಮೆಂಟ್​; ಸಹಪಾಠಿ ಯುವತಿಯನ್ನು ಗುಂಡಿಕ್ಕಿ ಕೊಂದ ಯುವಕ

ಘಟನೆ ನಡೆದ ಸ್ಥಳದಲ್ಲಿ ಇದ್ದವರನ್ನು ವಿಚಾರಣೆ ನಡೆಸಿದಾಗ ಸಿಕ್ಕ ಮಾಹಿತಿ ಆಧಾರದ ಮೇಲೆ ಪೊಲೀಸ್ ತಂಡ ಆರೋಪಿ ಪತ್ತೆ ಕಾರ್ಯ ಶುರು ಮಾಡಲಾಗಿತ್ತು. ಕೆಲವೇ ಹೊತ್ತಲ್ಲಿ ಆರೋಪಿ ಆದಿತ್ಯನನ್ನು ಬಂಧಿಸಲಾಗಿದೆ.

ಸೋಷಿಯಲ್​ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ಒಂದು ಫೋಟೋ ಮತ್ತು ಕಮೆಂಟ್​; ಸಹಪಾಠಿ ಯುವತಿಯನ್ನು ಗುಂಡಿಕ್ಕಿ ಕೊಂದ ಯುವಕ
ಮೃತ ಯುವತಿ ಮತ್ತು ಆರೋಪಿ
TV9 Web
| Edited By: |

Updated on: Mar 05, 2022 | 10:40 AM

Share

ಕಾಲೇಜಿನಲ್ಲಿ ತನ್ನ ಸಹಪಾಠಿ ಯುವತಿಯನ್ನು ಕೊಂದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯಾದ ಯುವತಿಯನ್ನು ವಂಶಿಕಾ ಬನ್ಸಾಲ್​ ಎಂದು ಗುರುತಿಸಲಾಗಿದ್ದು. ಡೆಹ್ರಾಡೂನ್​​ನ ಸಿದ್ಧಾರ್ಥ ಕಾಲೇಜಿನಲ್ಲಿ ಡಿ ಫಾರ್ಮಾ ಓದುತ್ತಿದ್ದಳು. ಹಾಗೇ ಆರೋಪಿಯ ಹೆಸರು ಆದಿತ್ಯ ತೋಮರ್​ ಎಂದಾಗಿದ್ದು, ವಂಶಿಕಾ ತನ್ನ ಸ್ನೇಹಿತೆಯರೊಂದಿಗೆ ಹೊರಗೆ ಹೋಗಿದ್ದ ಸಂದರ್ಭ ನೋಡಿಕೊಂಡು ಆಕೆಯನ್ನು ಕೊಂದಿದ್ದಾನೆ. ಇವಳು ರಾಯ್​ಪುರ ಠಾಣೆ ವ್ಯಾಪ್ತಿಯ ದಾದಾ ನಗರದಲ್ಲಿ ಹಾಸ್ಟೆಲ್​​ವೊಂದರಲ್ಲಿ ವಾಸವಾಗಿದ್ದಳು.

ಈ ಬಗ್ಗೆ ಡೆಹ್ರಾಡೂನ್​ ಎಸ್​ಎಸ್​ಪಿ ಜನ್​ಮೇಜಯ್​ ಖಾದುರಿ ಮಾಹಿತಿ ನೀಡಿದ್ದು, ವಿದ್ಯಾರ್ಥಿನಿ ವಂಶಿಕಾ ಬನ್ಸಾಲ್ ಡೂನ್​​ನಲ್ಲಿರುವ ಕಾಲೇಜು ಹಾಸ್ಟೇಲ್​​ನಲ್ಲಿ ವಾಸವಾಗಿದ್ದಳು. ಗುರುವಾರ ಸಂಜೆ ಆಕೆ ತನ್ನ ಸ್ನೇಹಿತೆ ಮಮತಾ ಎಂಬಾಕೆಯೊಂದಿಗೆ ಕಾಲೇಜು ಹಾಸ್ಟೆಲ್​​​ನ ಬಳಿಯೇ ಇರುವ ಒಂದು ಅಂಗಡಿಯಲ್ಲಿ ನಿಂತಿದ್ದಳು. ಆಗ ಅಲ್ಲಿಗೆ ಈ ಆದಿತ್ಯ ತೋಮರ್​ ಬೈಕ್​​ನಲ್ಲಿ ಬಂದಿದ್ದಾನೆ. ಈತ ಉತ್ತರಾಖಂಡ್​​ನ ಸುಂದರ್​ವಾಲಾ ರಾಯ್​​ಪುರದ ನಿವಾಸಿ. ಬೈಕ್​​ನಲ್ಲಿ ಬಂದವನೇ ವಂಶಿಕಾಳನ್ನು ಎಳೆದಾಡಿದ್ದಾನೆ. ಅಷ್ಟೇ ಅಲ್ಲ, ಬೈಕ್​​ ಮೇಲೆ ಕುಳಿತುಕೊಳ್ಳುವಂತೆ ಬಲವಂತ ಮಾಡಿದ್ದಾನೆ. ಇದಕ್ಕೆ ವಂಶಿಕಾ ಒಪ್ಪದೆ ಇದ್ದಾಗ ಆಕೆಯ ಎದೆಗೆ ಗುಂಡು ಹೊಡೆದು ಅಲ್ಲಿಂದ ಪರಾರಿಯಾಗಿದ್ದ. ಬೈಕ್​, ಗನ್​ಗಳನ್ನೂ ಅಲ್ಲೇ ಬಿಟ್ಟು ಹೋಗಿದ್ದ. ವಂಶಿಕಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

ಘಟನೆ ನಡೆದ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಸ್ಥಳದಲ್ಲಿ ಇದ್ದವರನ್ನು ವಿಚಾರಣೆ ನಡೆಸಿದಾಗ ಸಿಕ್ಕ ಮಾಹಿತಿ ಆಧಾರದ ಮೇಲೆ ಪೊಲೀಸ್ ತಂಡ ಆರೋಪಿ ಪತ್ತೆ ಕಾರ್ಯ ಶುರು ಮಾಡಲಾಗಿತ್ತು. ಕೆಲವೇ ಹೊತ್ತಲ್ಲಿ ಆರೋಪಿ ಆದಿತ್ಯನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆದಿತ್ಯ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ತಾನ್ಯಾಕೆ ಆಕೆಯ ಮೇಲೆ ಶೂಟ್ ಮಾಡಿದೆ? ಆಕೆಯ ಮೇಲಿದ್ದ ಕೋಪವೇನು ಎಂಬ ವಿವರವನ್ನು ಬಿಚ್ಚಿಟ್ಟಿದ್ದಾನೆ.

ಈಗೊಂದು ತಿಂಗಳ ಹಿಂದೆ ವಂಶಿಕಾ ಸೋಷಿಯಲ್​ ಮೀಡಿಯಾದಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿದ್ದಳು. ಆ ಫೋಟೊಕ್ಕೆ ಆದಿತ್ಯ ಒಂದು ಕಮೆಂಟ್​ ಮಾಡಿದ್ದ. ಇದೇ ಕಮೆಂಟ್​ ವಿಚಾರಕ್ಕೆ ವಂಶಿಕಾ ಮತ್ತು ಆದಿತ್ಯ ನಡುವೆ ಗಲಾಟೆಯಾಗಿತ್ತು. ಅಷ್ಟೇ ಅಲ್ಲ, ವಂಶಿಕಾ ತನ್ನ ಸ್ನೇಹಿತರ ಬಳಿಯೂ ಈ ಬಗ್ಗೆ ದೂರು ಹೇಳಿಕೊಂಡಿದ್ದರು. ಆದಿತ್ಯ ಮತ್ತು ವಂಶಿಕಾ ಸಹಪಾಠಿಗಳಾಗಿದ್ದರಿಂದ ಸಹಜವಾಗಿ ಈಕೆಗೆ ಸ್ನೇಹಿತರಾಗಿದ್ದವರೇ ಅವನಿಗೂ ಗೊತ್ತಿರುವವರೇ ಆಗಿದ್ದರು. ವಂಶಿಕಾ ಸ್ನೇಹಿತರೆಲ್ಲ ಸೇರಿ, ಆದಿತ್ಯನ ಬಳಿ ಕ್ಷಮೆ ಕೇಳಿಸಿದ್ದರೂ. ಅದೂ ಕೂಡ ಆತ ವಂಶಿಕಾಳ ಕಾಲುಮುಟ್ಟಿ ಕ್ಷಮೆ ಕೇಳುವಂತೆ ಮಾಡಿದ್ದರು. ಇದು ತನಗೆ ಅವಮಾನ ಎಂದು ಆದಿತ್ಯ ತೋಮರ್​ ಸಿಕ್ಕಾಪಟೆ ಸಿಟ್ಟು ಮಾಡಿಕೊಂಡಿದ್ದ. ವಂಶಿಕಾ ಬಳಿ ಮತ್ತೆ ಜಗಳವಾಡಿದ್ದ. ಆ ಕೋಪದಿಂದಲೇ ಆತ ವಂಶಿಕಾ ಮೇಲೆ ಹಾಡಹಗಲೇ ಗುಂಡು ಹಾರಿಸಿದ್ದಾನೆ.

ಇದನ್ನೂ ಓದಿ:  ‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲವೇ ಇಲ್ಲ’: ನೇರವಾಗಿ ಹೇಳಿದ ಜನಾರ್ದನ ರೆಡ್ಡಿ ಪುತ್ರ ಕಿರೀಟಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?