AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್​​ನಲ್ಲಿರುವ ನನ್ನ ಹೆತ್ತವರ ಬಗ್ಗೆ ಚಿಂತೆಯಾಗುತ್ತಿದೆ, ಪ್ಲೀಸ್ ಯುದ್ಧ ನಿಲ್ಲಿಸಿ; ಪ್ರಧಾನಿ ಮೋದಿಗೆ ಮನವಿ ಮಾಡಿದ ಕಾಶ್ಮೀರದ ಸೊಸೆ

ಇವರ ಮೂಲ ಹೆಸರು ಅಲಿಜಾ ಎಂದಾಗಿದ್ದು, ಉಕ್ರೇನ್​ನವರು. ಟ್ರಾಲ್​​ ಯುವಕನನ್ನು ಮದುವೆಯಾಗಿ, ಇಸ್ಲಾಂಗೆ ಮತಾಂತರಗೊಂಡಿದ್ದು, ಇಲ್ಲಿಯೇ ಇದ್ದಾರೆ. ಹೆಸರನ್ನು ಆಸಿಯಾ ಎಂದು ಬದಲಿಸಿಕೊಂಡಿರುವ ಇವರೀಗ ಇಬ್ಬರು ಮಕ್ಕಳ ತಾಯಿ.

ಉಕ್ರೇನ್​​ನಲ್ಲಿರುವ ನನ್ನ ಹೆತ್ತವರ ಬಗ್ಗೆ ಚಿಂತೆಯಾಗುತ್ತಿದೆ, ಪ್ಲೀಸ್ ಯುದ್ಧ ನಿಲ್ಲಿಸಿ; ಪ್ರಧಾನಿ ಮೋದಿಗೆ ಮನವಿ ಮಾಡಿದ ಕಾಶ್ಮೀರದ ಸೊಸೆ
ಯುದ್ಧ ನಿಲ್ಲಿಸಿ ಎಂದು ಮನವಿ ಮಾಡುತ್ತಿರುವ ಮಹಿಳೆ (ಮಗುವನ್ನು ಎತ್ತಿಕೊಂಡಿರುವವರು)
TV9 Web
| Edited By: |

Updated on: Mar 05, 2022 | 8:53 AM

Share

ಉಕ್ರೇನ್​​ನಲ್ಲಿ ರಷ್ಯಾ (Russia-Ukraine War) ಪ್ರಾರಂಭಿಸಿರುವ ಯುದ್ಧ ಸದ್ಯಕ್ಕಂತೂ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಯುದ್ಧ ನಿಲ್ಲಿಸುವಂತೆ ಯಾರೆಷ್ಟೇ ರಷ್ಯಾಕ್ಕೆ ಆಗ್ರಹ, ಮನವಿ ಮಾಡಿದರೂ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ ಕಿವಿಗೊಡುತ್ತಿಲ್ಲ. ಇನ್ನೊಂದೆಡೆ, ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಕೂಡ ತಾವು ರಷ್ಯಾಕ್ಕೆ ತಲೆಬಾಗುವ ಪ್ರಶ್ನೆಯೇ ಇಲ್ಲ ಎಂದುಬಿಟ್ಟಿದ್ದಾರೆ. ಈ ಮಧ್ಯೆ ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿರುವ ಟ್ರಾಲ್​​ನಲ್ಲಿ ಇರುವ ಉಕ್ರೇನಿಯನ್​ ಮಹಿಳೆಯೊಬ್ಬರು, ಹೇಗಾದರೂ ಸರಿ ಯುದ್ಧ ನಿಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

ಇವರ ಮೂಲ ಹೆಸರು ಅಲಿಜಾ ಎಂದಾಗಿದ್ದು, ಉಕ್ರೇನ್​ನವರು. ಟ್ರಾಲ್​​ ಯುವಕನನ್ನು ಮದುವೆಯಾಗಿ, ಇಸ್ಲಾಂಗೆ ಮತಾಂತರಗೊಂಡಿದ್ದು, ಇಲ್ಲಿಯೇ ಇದ್ದಾರೆ. ಹೆಸರನ್ನು ಆಸಿಯಾ ಎಂದು ಬದಲಿಸಿಕೊಂಡಿರುವ ಇವರೀಗ ಇಬ್ಬರು ಮಕ್ಕಳ ತಾಯಿ. ಉಕ್ರೇನ್​ನಲ್ಲಿ ನನ್ನ ಹೆತ್ತವರು ಇದ್ದಾರೆ. ಈ ಭೀಕರ ಯುದ್ಧದ ಮಧ್ಯೆ ಅವರ ಯೋಗಕ್ಷೇಮದ ಬಗ್ಗೆ ನನಗೆ ಆತಂಕವಾಗುತ್ತಿದೆ. ಹೇಗಾದರೂ ನೀವು ಮುಂದಾಗಿ ಯುದ್ಧ ನಿಲ್ಲುವಂತೆ ಮಾಡಿ ಎಂದು ಪ್ರಧಾನಿ ಮೋದಿಯವರಿಗೆ ವಿನಂತಿಸಿದ್ದಾರೆ.

ಆಸಿಯಾ ಕಾಶ್ಮೀರದ ಉದ್ಯಮಿ ಬಿಲಾಲ್​ ಅಹ್ಮದ್​​ರನ್ನು ವಿವಾಹವಾಗಿ ಐದು ವರ್ಷವಾಗಿದೆ. ಅಂದಿನಿಂದಲೂ ಟ್ರಾಲ್​ನಲ್ಲಿಯೇ ಪತಿಯೊಂದಿಗೆ ವಾಸವಾಗಿದ್ದಾರೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಷ್ಯಾ ಮತ್ತು ಉಕ್ರೇನ್​​ ಮಧ್ಯೆ ಹೇಗಾದರೂ ರಾಜಿ ಮಾಡಿಸಲು ಮುಂದಾಗಬೇಕು.  ಈ ಯುದ್ಧ ನಿಲ್ಲಲಿ ಎಂದು ಹೇಳಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿದೆ.

ಇದನ್ನೂ ಓದಿ:  ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ: ರಷ್ಯಾ ಉಕ್ರೇನ್​ ಯುದ್ಧದ ಬಗ್ಗೆ ಬಾಬಾ ವಂಗಾ ಭವಿಷ್ಯ

Follow Us
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು