AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್​​ನಲ್ಲಿರುವ ನನ್ನ ಹೆತ್ತವರ ಬಗ್ಗೆ ಚಿಂತೆಯಾಗುತ್ತಿದೆ, ಪ್ಲೀಸ್ ಯುದ್ಧ ನಿಲ್ಲಿಸಿ; ಪ್ರಧಾನಿ ಮೋದಿಗೆ ಮನವಿ ಮಾಡಿದ ಕಾಶ್ಮೀರದ ಸೊಸೆ

ಇವರ ಮೂಲ ಹೆಸರು ಅಲಿಜಾ ಎಂದಾಗಿದ್ದು, ಉಕ್ರೇನ್​ನವರು. ಟ್ರಾಲ್​​ ಯುವಕನನ್ನು ಮದುವೆಯಾಗಿ, ಇಸ್ಲಾಂಗೆ ಮತಾಂತರಗೊಂಡಿದ್ದು, ಇಲ್ಲಿಯೇ ಇದ್ದಾರೆ. ಹೆಸರನ್ನು ಆಸಿಯಾ ಎಂದು ಬದಲಿಸಿಕೊಂಡಿರುವ ಇವರೀಗ ಇಬ್ಬರು ಮಕ್ಕಳ ತಾಯಿ.

ಉಕ್ರೇನ್​​ನಲ್ಲಿರುವ ನನ್ನ ಹೆತ್ತವರ ಬಗ್ಗೆ ಚಿಂತೆಯಾಗುತ್ತಿದೆ, ಪ್ಲೀಸ್ ಯುದ್ಧ ನಿಲ್ಲಿಸಿ; ಪ್ರಧಾನಿ ಮೋದಿಗೆ ಮನವಿ ಮಾಡಿದ ಕಾಶ್ಮೀರದ ಸೊಸೆ
ಯುದ್ಧ ನಿಲ್ಲಿಸಿ ಎಂದು ಮನವಿ ಮಾಡುತ್ತಿರುವ ಮಹಿಳೆ (ಮಗುವನ್ನು ಎತ್ತಿಕೊಂಡಿರುವವರು)
TV9 Web
| Updated By: Lakshmi Hegde|

Updated on: Mar 05, 2022 | 8:53 AM

Share

ಉಕ್ರೇನ್​​ನಲ್ಲಿ ರಷ್ಯಾ (Russia-Ukraine War) ಪ್ರಾರಂಭಿಸಿರುವ ಯುದ್ಧ ಸದ್ಯಕ್ಕಂತೂ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಯುದ್ಧ ನಿಲ್ಲಿಸುವಂತೆ ಯಾರೆಷ್ಟೇ ರಷ್ಯಾಕ್ಕೆ ಆಗ್ರಹ, ಮನವಿ ಮಾಡಿದರೂ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ ಕಿವಿಗೊಡುತ್ತಿಲ್ಲ. ಇನ್ನೊಂದೆಡೆ, ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಕೂಡ ತಾವು ರಷ್ಯಾಕ್ಕೆ ತಲೆಬಾಗುವ ಪ್ರಶ್ನೆಯೇ ಇಲ್ಲ ಎಂದುಬಿಟ್ಟಿದ್ದಾರೆ. ಈ ಮಧ್ಯೆ ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿರುವ ಟ್ರಾಲ್​​ನಲ್ಲಿ ಇರುವ ಉಕ್ರೇನಿಯನ್​ ಮಹಿಳೆಯೊಬ್ಬರು, ಹೇಗಾದರೂ ಸರಿ ಯುದ್ಧ ನಿಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

ಇವರ ಮೂಲ ಹೆಸರು ಅಲಿಜಾ ಎಂದಾಗಿದ್ದು, ಉಕ್ರೇನ್​ನವರು. ಟ್ರಾಲ್​​ ಯುವಕನನ್ನು ಮದುವೆಯಾಗಿ, ಇಸ್ಲಾಂಗೆ ಮತಾಂತರಗೊಂಡಿದ್ದು, ಇಲ್ಲಿಯೇ ಇದ್ದಾರೆ. ಹೆಸರನ್ನು ಆಸಿಯಾ ಎಂದು ಬದಲಿಸಿಕೊಂಡಿರುವ ಇವರೀಗ ಇಬ್ಬರು ಮಕ್ಕಳ ತಾಯಿ. ಉಕ್ರೇನ್​ನಲ್ಲಿ ನನ್ನ ಹೆತ್ತವರು ಇದ್ದಾರೆ. ಈ ಭೀಕರ ಯುದ್ಧದ ಮಧ್ಯೆ ಅವರ ಯೋಗಕ್ಷೇಮದ ಬಗ್ಗೆ ನನಗೆ ಆತಂಕವಾಗುತ್ತಿದೆ. ಹೇಗಾದರೂ ನೀವು ಮುಂದಾಗಿ ಯುದ್ಧ ನಿಲ್ಲುವಂತೆ ಮಾಡಿ ಎಂದು ಪ್ರಧಾನಿ ಮೋದಿಯವರಿಗೆ ವಿನಂತಿಸಿದ್ದಾರೆ.

ಆಸಿಯಾ ಕಾಶ್ಮೀರದ ಉದ್ಯಮಿ ಬಿಲಾಲ್​ ಅಹ್ಮದ್​​ರನ್ನು ವಿವಾಹವಾಗಿ ಐದು ವರ್ಷವಾಗಿದೆ. ಅಂದಿನಿಂದಲೂ ಟ್ರಾಲ್​ನಲ್ಲಿಯೇ ಪತಿಯೊಂದಿಗೆ ವಾಸವಾಗಿದ್ದಾರೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಷ್ಯಾ ಮತ್ತು ಉಕ್ರೇನ್​​ ಮಧ್ಯೆ ಹೇಗಾದರೂ ರಾಜಿ ಮಾಡಿಸಲು ಮುಂದಾಗಬೇಕು.  ಈ ಯುದ್ಧ ನಿಲ್ಲಲಿ ಎಂದು ಹೇಳಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿದೆ.

ಇದನ್ನೂ ಓದಿ:  ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ: ರಷ್ಯಾ ಉಕ್ರೇನ್​ ಯುದ್ಧದ ಬಗ್ಗೆ ಬಾಬಾ ವಂಗಾ ಭವಿಷ್ಯ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?