AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿದಿನ ನೀವೂ ಕೂಡ ಈ ತಪ್ಪುಗಳನ್ನು ಮಾಡುತ್ತಿದ್ದರೆ ಕಿವಿ ಕೇಳಿಸದಿರಬಹುದು ಎಚ್ಚರ!

ದೇಹದ ಇತರ ಭಾಗಗಳಂತೆ, ಕಿವಿಗಳ ಆರೋಗ್ಯದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಆದರೆ ಪ್ರತಿದಿನ ನಮಗರಿವಿಲ್ಲದಂತೆ ಮಾಡುವ ಕೆಲವು ತಪ್ಪುಗಳು ಕಿವಿಯ ಆರೋಗ್ಯಕ್ಕೆ ಹಾನಿ ಉಂಟುಮಾಡಿ, ಕೇಳುವ ಸಾಮರ್ಥ್ಯ ಅಥವಾ ಶ್ರವಣ ನಷ್ಟಕ್ಕೆ ಕಾರಣವಾಗಬಹುದು. ಹಾಗಾಗಿ ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಅಂತಹ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದರೆ ಅದನ್ನು ಇಂದೇ ಬಿಟ್ಟುಬಿಡಿ. ಜೊತೆಗೆ ತಜ್ಞರು ನೀಡಿರುವ ಕೆಲವು ಪ್ರಮುಖ ಸಲಹೆಗಳನ್ನು ಅನುಸರಿಸಿ. ಈ ಕುರಿತ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಪ್ರತಿದಿನ ನೀವೂ ಕೂಡ ಈ ತಪ್ಪುಗಳನ್ನು ಮಾಡುತ್ತಿದ್ದರೆ ಕಿವಿ ಕೇಳಿಸದಿರಬಹುದು ಎಚ್ಚರ!
Protect Your Hearing: Avoid These HabitsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Mar 05, 2026 | 9:25 PM

Share

ದೇಹದ ಇತರ ಅಂಗಗಳಂತೆ ಕಿವಿಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಕೂಡ ಬಹಳ ಮುಖ್ಯ. ಆದರೆ ಪ್ರತಿದಿನ ನಮಗರಿವಿಲ್ಲದಂತೆ ಮಾಡುವ ಕೆಲವು ತಪ್ಪುಗಳು ಕಿವಿಯ ಆರೋಗ್ಯಕ್ಕೆ ಹಾನಿ ಉಂಟುಮಾಡಿ, ಕೇಳುವ ಸಾಮರ್ಥ್ಯ ಅಥವಾ ಶ್ರವಣ ನಷ್ಟಕ್ಕೆ (Hearing Loss) ಕಾರಣವಾಗಬಹುದು. ಹೌದು, ಇದು ಆಶ್ಚರ್ಯ ಉಂಟು ಮಾಡಿದರೂ ಕೂಡ ಸತ್ಯ. ಬಹುತೇಕರು ಕಿವಿಯಲ್ಲಿ ಕಾಣಿಸಿಕೊಳ್ಳುವ ಸಣ್ಣ ಸಮಸ್ಯೆಗಳನ್ನೂ ದೀರ್ಘಕಾಲ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇದರಿಂದ ಕಿವಿಗೆ ಗಂಭೀರ ಹಾನಿಯಾಗಬಹುದು. ಹಾಗಾಗಿ ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಅಂತಹ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದರೆ ಅದನ್ನು ಇಂದೇ ಬಿಟ್ಟುಬಿಡಿ. ಜೊತೆಗೆ ತಜ್ಞರು ನೀಡಿರುವ ಕೆಲವು ಪ್ರಮುಖ ಸಲಹೆಗಳನ್ನು ಅನುಸರಿಸಿ. ಈ ಕುರಿತ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಕಾಟನ್ ಬಡ್ ಅನ್ನು ಕಿವಿಯ ಒಳಗೆ ಹಾಕಬೇಡಿ:

ಕಿವಿಯಲ್ಲಿ ತುರಿಕೆ ಉಂಟಾದಾಗ ಹಲವರು ಕಾಟನ್ ಬಡ್ ಬಳಸಿ ಕಿವಿ ಸ್ವಚ್ಛಗೊಳಿಸುತ್ತಾರೆ. ಆದರೆ ಕಾಟನ್ ಬಡ್ ಅನ್ನು ಕಿವಿಯ ಒಳಗೆ ಹಾಕುವುದು ತಪ್ಪು. ಇದರಿಂದ ಕಿವಿಯೊಳಗಿನ ವ್ಯಾಕ್ಸ್ (ear wax) ಹೊರಬರುವ ಬದಲು ಒಳಗೆ ತಳ್ಳಲ್ಪಟ್ಟು, ಕಿವಿಯಲ್ಲಿ ಬ್ಲಾಕೇಜ್ ಅಥವಾ ಸೋಂಕು ಉಂಟಾಗುವ ಸಾಧ್ಯತೆ ಇದೆ. ಅದೇ ರೀತಿ ಕಡ್ಡಿ, ಹೇರ್ ಪಿನ್ ಮುಂತಾದ ವಸ್ತುಗಳನ್ನು ಕಿವಿಯೊಳಗೆ ಹಾಕುವುದೂ ಕೂಡ ಅಪಾಯಕಾರಿ. ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯ ಇಎನ್‌ಟಿ ವಿಭಾಗದ ಹಿರಿಯ ಸಲಹೆಗಾರರಾದ ಡಾ. ಸುವೇನ್ ಕಲ್ರಾ ಅವರ ಪ್ರಕಾರ, ಕಾಟನ್ ಬಡ್ ಅನ್ನು ಕೇವಲ ಕಿವಿಯ ಹೊರಭಾಗ ಸ್ವಚ್ಛಗೊಳಿಸಲು ಮಾತ್ರ ಬಳಸಬೇಕು. ಕಿವಿಯಲ್ಲಿ ವ್ಯಾಕ್ಸ್ ಹೆಚ್ಚು ಬರುತ್ತಿದ್ದರೆ ಇಎನ್‌ಟಿ ತಜ್ಞರಿಂದಲೇ ಸ್ವಚ್ಛಗೊಳಿಸಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ: ಮಗು ಹುಟ್ಟುವ ಮುನ್ನವೇ ಶ್ರವಣ ಸಾಮರ್ಥ್ಯ ಪತ್ತೆಹಚ್ಚಲು ಏಮ್ಸ್‌ನ ಹೊಸ ಪ್ರಯತ್ನ!

ವೈದ್ಯರ ಸಲಹೆ ಇಲ್ಲದೆ ಕಿವಿಗೆ ಎಣ್ಣೆ ಹಾಕಬೇಡಿ:

ಕೆಲವರು ಕಿವಿಯಲ್ಲಿ ಎಣ್ಣೆ ಹಾಕುವುದು ಆರೋಗ್ಯಕರ ಅಭ್ಯಾಸ ಎಂದು ನಂಬುತ್ತಾರೆ. ಆದರೆ ವೈದ್ಯರ ಪ್ರಕಾರ ಇದು ತಪ್ಪು. ಕಿವಿಯಲ್ಲಿ ಎಣ್ಣೆ ಹಾಕುವುದರಿಂದ ಫಂಗಲ್ ಅಥವಾ ಬ್ಯಾಕ್ಟೀರಿಯಾ ಸೋಂಕು ಉಂಟಾಗಬಹುದು. ಕೆಲ ಪ್ರಕರಣಗಳಲ್ಲಿ ಎಣ್ಣೆ ಹಾಕಿದ ಕಾರಣದಿಂದಲೇ ಕಿವಿಯಲ್ಲಿ ಇನ್ಫೆಕ್ಷನ್ ಕಂಡುಬಂದಿದೆ. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಯಾವುದೇ ದ್ರವವನ್ನು ಹಾಕಬಾರದು.

ಹೆಚ್ಚು ಸಮಯ ಜೋರಾದ ಶಬ್ದ ಕೇಳಬೇಡಿ

ಮದುವೆ, ಸಮಾರಂಭಗಳಲ್ಲಿ ಡಿಜೆ ಸಂಗೀತ ಅಥವಾ ಹೆಡ್‌ಫೋನ್, ಇಯರ್‌ಫೋನ್ ಮೂಲಕ ಜೋರಾಗಿ ಸಂಗೀತ ಕೇಳುವುದು ಕಿವಿಗೆ ಹಾನಿ ಮಾಡಬಹುದು. ಇಯರ್‌ಫೋನ್ ಅಥವಾ ಇಯರ್‌ಬಡ್ ಬಳಸುವಾಗ 60 ನಿಮಿಷಕ್ಕೊಮ್ಮೆ ವಿರಾಮ ತೆಗೆದುಕೊಳ್ಳಬೇಕು ಮತ್ತು ಶಬ್ದದ ಮಟ್ಟವನ್ನು 60 ಡೆಸಿಬೆಲ್‌ಗಿಂತ ಹೆಚ್ಚು ಇರಿಸಬಾರದು.

ಸ್ವಯಂ ಔಷಧಿ ಮಾಡಬೇಡಿ

ಕಿವಿಯಲ್ಲಿ ನೋವು, ಸೋಂಕು ಅಥವಾ ಕಿವಿಯಿಂದ ದ್ರವ ಹೊರಬರುವ ಸಮಸ್ಯೆ ಇದ್ದರೆ ಸ್ವಯಂ ಔಷಧಿಗಳನ್ನು ತೆಗೆದುಕೊಳ್ಳಬಾರದು. ಯಾವುದೇ ಪೇನ್ ಕಿಲ್ಲರ್ ಅಥವಾ ಔಷಧಿ ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ಒಮ್ಮೆಲೇ ಕೇಳುವ ಸಾಮರ್ಥ್ಯ ಕಡಿಮೆಯಾಗುವುದು ಅಥವಾ ತಲೆ ಸುತ್ತುವುದು (ವೆರ್ಟಿಗೋ) ಕಿವಿಯ ಒಳಭಾಗದಲ್ಲಿ ಸಮಸ್ಯೆಯ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ