AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚ ರಾಜ್ಯಗಳ ಚುನಾವಣೆ ಮುಕ್ತಾಯ ಹಂತಕ್ಕೆ, ಇನ್ನು ಎಕ್ಸಿಟ್​ ಪೋಲಿನದೇ​ ರಾಜ್ಯಭಾರ! ಯಾವಾಗ ಎಕ್ಸಿಟ್​ ಪೋಲ್ ಫಲಿತಾಂಶ?

Exit Poll Result 2022: ಪಂಜಾಬ್, ಉತ್ತರಾಖಂಡ್​, ಉತ್ತರಪ್ರದೇಶ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ನಡೆದಿರುವ ವಿಧಾನಸಭೆ ಚುನಾವಣೆಗಳ ಫಲಿತಾಂಶವು ಮಾರ್ಚ್​​ 10ಕ್ಕೆ ಅಧಿಕೃತವಾಗಿ ಪ್ರಕಟವಾಗಲಿದೆ. ಅಲ್ಲಿಯವರೆಗೂ ಎಕ್ಸಿಟ್​ ಪೋಲ್ ಫಲಿತಾಂಶಗಳದ್ದೇ ಹಾರಾಟ/ ಆರ್ಭಟ. TV9 Bharatvarsh ಸಹ ಮಾರ್ಚ್​ 7ರಂದು ಸಂಜೆ 6 ಗಂಟೆಯಿಂದ ಎಕ್ಸಿಟ್​ ಪೋಲ್ ಫಲಿತಾಂಶಗಳನ್ನು ಪ್ರಸಾರ ಮಾಡಲು ಉತ್ಸುಕತೆಯಿಂದ ಕಾದಿದೆ.

ಪಂಚ ರಾಜ್ಯಗಳ ಚುನಾವಣೆ ಮುಕ್ತಾಯ ಹಂತಕ್ಕೆ, ಇನ್ನು ಎಕ್ಸಿಟ್​ ಪೋಲಿನದೇ​ ರಾಜ್ಯಭಾರ! ಯಾವಾಗ ಎಕ್ಸಿಟ್​ ಪೋಲ್ ಫಲಿತಾಂಶ?
ಪಂಚ ರಾಜ್ಯಗಳ ಚುನಾವಣೆ ಮುಕ್ತಾಯ ಹಂತಕ್ಕೆ, ಇನ್ನು ಎಕ್ಸಿಟ್​ ಪೋಲಿನದೇ​ ರಾಜ್ಯಭಾರ!
TV9 Web
| Updated By: ಸಾಧು ಶ್ರೀನಾಥ್​|

Updated on: Mar 05, 2022 | 2:33 PM

Share

ನವದೆಹಲಿ: ಉತ್ತರ ಪ್ರದೇಶ ರಾಜ್ಯದಲ್ಲಿ ಅಂತಿಮ ಹಂತದ ಅಸೆಂಬ್ಲಿ ಚುನಾವಣೆ ಮುಂದಿನ ಸೋಮವಾರ ಮಾರ್ಚ್​ 7ಕ್ಕೆ ಕೊನೆಗಾಣಲಿದೆ. ಅದರ ಜೊತೆಗೆ ಮಣಿಪುರದಲ್ಲಿ ಎರಡನೆಯ ಹಂತದ ಮತದಾನವೂ ನಡೆಯಬೇಕಿದೆ. ಇದರೊಂದಿಗೆ ಉತ್ತರದ ಪಂಚ ರಾಜ್ಯಗಳ ಚುನಾವಣೆ ಸಂಪನ್ನವಾಗಲಿದೆ. ಆದರೆ ಇನ್ನು ಎಕ್ಸಿಟ್​ ಪೋಲ್ (Exit Poll Result 2022)​ ರಾಜ್ಯಭಾರ ಶುರುವಾಗಲಿದೆ! ಯಾವಾಗ ಎಕ್ಸಿಟ್​ ಪೋಲ್ ಫಲಿತಾಂಶ? ಏನದರ ವಿವರ? ಇಲ್ಲಿದೆ ಮಾಹಿತಿ. ಒಟ್ಟಾಗಿ ಐದೂ ರಾಜ್ಯಗಳ ಚುನಾವಣೆಗಳು ಮುಗಿದ ಬಳಿಕವಷ್ಟೇ ಎಕ್ಸಿಟ್​ ಪೋಲ್ ವ್ಯವಹಾರ ಎಂದು ಚುನಾವಣೆ ಆಯೋಗ ಕಟ್ಟುನಿಟ್ಟಾಗಿ ಆದೇಶ ಹೊರಡಿಸಿದ್ದರಿಂದ ನಾಲ್ಕು ರಾಜ್ಯಗಳಲ್ಲಿ ಚುನಾವಣೆ ಮುಗಿದು ಯಾವುದೋ ಕಾಲವಾಗಿದ್ದರೂ ಎಕ್ಸಿಟ್​ ಪೋಲ್ ಫಲಿತಾಂಶ ಹೊರಬಿದ್ದಿರಲಿಲ್ಲ.

ಎಕ್ಸಿಟ್​ ಪೋಲ್ ಅಂದರೆ ಮತಗಟ್ಟೆಗಳಿಂದಲೇ ಮತದಾರರನ್ನು ಮಾತನಾಡಿಸಿ ಫಲಿತಾಂಶ ಏನಾಗಲಿದೆ ಎಂದು ಊಹಾತ್ಮಕವಾಗಿ ಪ್ರಕಟಿಸುವುದು ಮಾಧ್ಯಮಗಳು ಮಾಡಿಕೊಂಡು ಬಂದಿರುವ ಕೆಲಸ. ಹಾಗಾಗಿ ಪಂಚ ರಾಜ್ಯಗಳ ಪೈಕಿ ಕೊನೆಯ ಮತದಾನ ಸೋಮವಾರ ಮುಕ್ತಾಯವಾಗುತ್ತಿದ್ದಂತೆ ಮಾಧ್ಯಮಗಳು ಪಂದಿಂದೇ ರಾಜ್ಯದ ಎಕ್ಸಿಟ್​ ಪೋಲ್ ಫಲಿತಾಂಶ ಬಿತ್ತರಿಸತೊಡಗುತ್ತವೆ. ಏನೇ ಆದರೂ ಮತದಾರ ಪ್ರಭುವಿನ ಅಧಿಕೃತ ಆದೇಶ ಏನೆಂಬುದು ಚುನಾವಣೆ ಆಯೋಗ ಪ್ರಕಟಿಸುವ ಫಲಿತಾಂಶದ ಬಳಿಕವಷ್ಟೇ ಸತ್ಯ ಗೊತ್ತಾಗಲಿದೆ. ಪಂಜಾಬ್, ಉತ್ತರಾಖಂಡ್​, ಉತ್ತರಪ್ರದೇಶ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ನಡೆದಿರುವ ವಿಧಾನಸಭೆ ಚುನಾವಣೆಗಳ ಫಲಿತಾಂಶವು ಮಾರ್ಚ್​​ 10ಕ್ಕೆ ಅಧಿಕೃತವಾಗಿ ಪ್ರಕಟವಾಗಲಿದೆ. ಅಲ್ಲಿಯವರೆಗೂ ಎಕ್ಸಿಟ್​ ಪೋಲ್ ಫಲಿತಾಂಶಗಳದ್ದೇ ಹಾರಾಟ/ ಆರ್ಭಟ. TV9 Bharatvarsh ಸಹ ಮಾರ್ಚ್​ 7ರಂದು ಸಂಜೆ 6 ಗಂಟೆಯಿಂದ ಎಕ್ಸಿಟ್​ ಪೋಲ್ ಫಲಿತಾಂಶಗಳನ್ನು (Exit Poll Result 2022) ಪ್ರಸಾರ ಮಾಡಲು ಉತ್ಸುಕತೆಯಿಂದ ಕಾದಿದೆ.

ಎಕ್ಸಿಟ್​ ಪೋಲ್ ಮತ್ತು ಅದರ ಫಲಿತಾಂಶ ಪ್ರಕ್ರಿಯೆ ಹೇಗೆ? ಎಕ್ಸಿಟ್​ ಪೋಲ್ ಅಂದರೆ ಆಗಲೇ ಹೇಳಿದಂತೆ ಮತದಾರರು ಅಂತಿಮವಾಗಿ ತಮ್ಮ ಮತ ಚಲಾಯಿಸುವ ಪ್ರಕ್ರಿಯೆ ನಡೆಸಿದ ನಂತರ ಮಾಧ್ಯಮ ಸಂಸ್ಥೆಗಳು ನಡೆಸುವ ವೋಟ್​ ಕೌಂಟಿಂಗ್! ಇನ್ನು, ಚುನಾವಣೆಯಲ್ಲಿ ಮತದಾನಕ್ಕೂ ಮುನ್ನ ಎಲ್ಲ ಸ್ತರದ ಜನರ ಅಭಿಪ್ರಾಯ ಸಂಗ್ರಹಿಸುವ ಪೋಲ್​ ಗೆ ಒಪೀನಿಯನ್ ಪೋಲ್​ ಅಥವಾ ಎಂಟ್ರೆನ್ಸ್ ಪೋಲ್​ ಎನ್ನುತ್ತಾರೆ. ಎಕ್ಸಿಟ್​ ಪೋಲ್ ಉದ್ದೇಶವೇನೆಂದರೆ ಅಧಿಕೃತವಾಗಿ ಚುನಾವಣೆ ಆಯೋಗ ನಿಗದಿಪಡಿಸಿರುವ ಫಲಿತಾಂಶದ ದಿನಕ್ಕೂ ಮುನ್ನವೇ ಹಸಿಬಿಸಿಯಾಗಿ ಮತದಾನ ಮುಗಿಯುತ್ತಿದ್ದಂತೆ ಫಲಿತಾಂಶ ತಿಳಿದುಕೊಳ್ಳುವ ಮಾಧ್ಯಮಗಳ ಜರೂರತ್ತು ಆಗಿದೆ. ಕೆಲವು ಮಾಧ್ಯಮ ಸಂಸ್ಥೆಗಳು ಅಲ್ಲಲ್ಲಿ ತನ್ನಿಷ್ಟಾನುಸಾರ ಈ ಎಕ್ಸಿಟ್​ ಪೋಲ್​ ಪ್ರಕ್ರಿಯೆ ಮುಗಿಸಿಕೊಳ್ಳುತ್ತವೆ. ಆದರೆ ಕೆಲವು ಮಾಧ್ಯಮ ಸಂಸ್ಥೆಗಳು ವ್ಯವಸ್ಥಿತವಾಗಿ ಮತ್ತು ನಿಖರವಾಗಿ ಪ್ರಕ್ರಿಯೆ ಕೈಗೆತ್ತಿಕೊಂಡು ವಾಸ್ತವಕ್ಕೆ ಹತ್ತಿರವಾದಂತಹ ಫಲಿತಾಂಶಗಳನ್ನು ಬಹಿರಂಗಪಡಿಸುತ್ತವೆ.

ಮಾಧ್ಯಮ ಸಂಸ್ಥೆಗಳು ನಾನಾ ವಯಸ್ಸಿನವರು, ಹೆಣ್ಣು ಮತ್ತು ಗಂಡು ಮತದಾರರು, ನಾನಾ ಜಾತಿಯವರು, ನಾನಾ ಪ್ರದೇಶಗಳ ಆಧಾರದಲ್ಲಿ ಎಕ್ಸಿಟ್​ ಪೋಲ್​ ಪ್ರಕ್ರಿಯೆ ನಡೆಸುತ್ತವೆ. ಅದರ ಆಧಾರದಲ್ಲಿ ನಿಖರ ಫಲಿತಾಂಶಗಳನ್ನು ಪ್ರಸಾರ ಮಾಡುತ್ತವೆ.

Also Read: ಪಾಂಡವರ ರಾಜಧಾನಿ ಹಸ್ತಿನಾಪುರದಲ್ಲಿ ಜಯ ಸಾಧಿಸುವವರೇ ಉತ್ತರ ಪ್ರದೇಶದಲ್ಲಿ ಸದಾ ಅಧಿಕಾರಕ್ಕೆ ಬರುವುದು, ಇದು ನಿಜ!! Also Read: TV9 ಸಾಕ್ಷಾತ್​ ವರದಿ: ಮೊದಲ ಬಾರಿ ಯೋಗಿ ಆದಿತ್ಯನಾಥ್ ಅಸೆಂಬ್ಲಿ ಅಖಾಡಕ್ಕೆ! ಪ್ರತಿಷ್ಠೆಯ ಕಣವಾದ ಸಿಎಂ ತವರು ಗೋರಖಪುರ

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​