ತ್ರಿಪುರಾ: ವ್ಯಕ್ತಿಯನ್ನು ಕತ್ತು ಹಿಸುಕಿ ಕೊಂದು ಫ್ರೀಜರ್​​ನಲ್ಲಿ ಶವ ತುಂಬಿಸಿಟ್ಟ ಆರೋಪಿ

ತ್ರಿಕೋನ ಪ್ರೇಮಕತೆ ಕೊಲೆಯಲ್ಲಿ ಅಂತ್ಯವಾಗಿದೆ. ವ್ಯಕ್ತಿಯೊಬ್ಬನನ್ನು ಕೊಂದು ಫ್ರೀಜರ್​​ನಲ್ಲಿ ತುಂಬಿಟ್ಟ ಘಟನೆ ತ್ರಿಪುರಾದಲ್ಲಿ ನಡೆದಿದೆ.ಪಶ್ಚಿಮ ತ್ರಿಪುರ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಕುಮಾರ್ ಮಾತನಾಡಿ, ಮೃತ ವ್ಯಕ್ತಿ 20 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದರು. ಇತ್ತೀಚೆಗೆ ನಡೆದ ಜಗಳದ ಬಳಿಕ ಇಬ್ಬರೂ ಮಾತನಾಡುವುದನ್ನು ಬಿಟ್ಟಿದ್ದರು.ಆಕೆಯ ಸೋದರ ಸಂಬಂದಿ ಈ ಸಮಯವನ್ನು ಸರಿಯಾಗಿ ಬಳಸಿಕೊಂಡಿದ್ದ.ಹೇಗಾದರೂ ಮಾಡಿ ಆಕೆಯ ಪ್ರಿಯಕರನನ್ನು ಆಕೆಯಿಂದ ದೂರ ಮಾಡಿ ತಾನು ಆಕೆಯ ಜತೆ ಇರಲು ಬಯಸಿದ್ದ.

ತ್ರಿಪುರಾ: ವ್ಯಕ್ತಿಯನ್ನು ಕತ್ತು ಹಿಸುಕಿ ಕೊಂದು ಫ್ರೀಜರ್​​ನಲ್ಲಿ ಶವ ತುಂಬಿಸಿಟ್ಟ ಆರೋಪಿ
ಕ್ರೈಂ

Updated on: Jun 12, 2025 | 7:59 AM

ತ್ರಿಪುರಾ, ಜೂನ್ 12: ತ್ರಿಕೋನ ಪ್ರೇಮಕತೆ ಕೊಲೆ(Murder)ಯಲ್ಲಿ ಅಂತ್ಯವಾಗಿದೆ. ವ್ಯಕ್ತಿಯೊಬ್ಬನನ್ನು ಕೊಂದು ಫ್ರೀಜರ್​​ನಲ್ಲಿ ತುಂಬಿಟ್ಟ ಘಟನೆ ತ್ರಿಪುರಾದಲ್ಲಿ ನಡೆದಿದೆ.ಪಶ್ಚಿಮ ತ್ರಿಪುರ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಕುಮಾರ್ ಮಾತನಾಡಿ, ಮೃತ ವ್ಯಕ್ತಿ 20 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದರು. ಇತ್ತೀಚೆಗೆ ನಡೆದ ಜಗಳದ ಬಳಿಕ ಇಬ್ಬರೂ ಮಾತನಾಡುವುದನ್ನು ಬಿಟ್ಟಿದ್ದರು.ಆಕೆಯ ಸೋದರ ಸಂಬಂದಿ ಈ ಸಮಯವನ್ನು ಸರಿಯಾಗಿ ಬಳಸಿಕೊಂಡಿದ್ದ.ಹೇಗಾದರೂ ಮಾಡಿ ಆಕೆಯ ಪ್ರಿಯಕರನನ್ನು ಆಕೆಯಿಂದ ದೂರ ಮಾಡಿ ತಾನು ಆಕೆಯ ಜತೆ ಇರಲು ಬಯಸಿದ್ದ.

ಆರೋಪಿ ಬಾಂಗ್ಲಾದೇಶದಲ್ಲಿ ಎಂಬಿಬಿಎಸ್ ಓದಿದ್ದ. ಜೂನ್ 8ರಂದು ದಕ್ಷಿಣ ಇಂದಿರಾನಗರದಲ್ಲಿರುವ ಸಂಬಂಧಿಕರ ಮನೆಗೆ ವ್ಯಕ್ತಿಯನ್ನು ಕರೆದೊಯ್ದಿದ್ದಾನೆ. ಅಲ್ಲಿ ಮೂವರ ಸಹಾಯದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಟ್ರಾಲಿ ಬ್ಯಾಗ್​ನಲ್ಲಿ ತುಂಬಿಸಿದ್ದರು. ಮರುದಿನ ಆರೋಪಿಯು ಗಂಡಚೆರಾದಿಂದ ಅಗರ್ತಲಾಕ್ಕೆ ತನ್ನ ಹೆತ್ತವರಿಗೆ ಕರೆ ಮಾಡಿ ಟ್ರಾಲಿ ಬ್ಯಾಗ್ ತೆಗೆದುಕೊಂಡು ಹೋಗುವಂತೆ ಕೇಳಿದ್ದಾನೆ.

ನಂತರ ಆತನ ಪೋಷಕರು ಬಂದು ಟ್ರಾಲಿ ಬ್ಯಾಗ್ ಅನ್ನು ಗಂಡಚೆರಾಗೆ ತೆಗೆದುಕೊಂಡು ಹೋದರು. ಅವರು ಶವವನ್ನು ತಮ್ಮ ಅಂಗಡಿಯಲ್ಲಿನ ಐಸ್ ಕ್ರೀಮ್ ಫ್ರೀಜರ್‌ನಲ್ಲಿ ಮರೆಮಾಡಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆಯ ಹಿಂದಿನ ಉದ್ದೇಶ ದುರುದ್ದೇಶಪೂರಿತವಾಗಿತ್ತು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ
ರಾಜಾ ರಘುವಂಶಿ ಕೊಲೆ ಆರೋಪಿಗೆ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಂದ ಕಪಾಳಮೋಕ್ಷ
11 ವರ್ಷಗಳಲ್ಲಿ ಭಾರತದ ಜನರ ಬದುಕನ್ನು ಕೇಂದ್ರ ಸರ್ಕಾರ ಹೇಗೆ ಬದಲಿಸಿದೆ?
ಹೊಸ ಇತಿಹಾಸ ಸೃಷ್ಟಿಯತ್ತ ಶುಭಾಂಶು ಶುಕ್ಲ; ಮುಖ್ಯಾಂಶಗಳು
ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕರು, ಐದಕ್ಕಿಂತ ಹೆಚ್ಚು ಮಂದಿ ಸಾವು

ಇತ್ತೀಚೆಗೆ ತನ್ನ ತಂದೆಯನ್ನು ಕಳೆದುಕೊಂಡ ಮಹಿಳೆಯನ್ನು ದೈಹಿಕವಾಗಿ ಶೋಷಿಸಲು ಸೋದರಸಂಬಂಧಿ ಬಯಸಿದ್ದ, ಗೆಳೆಯ ಸ್ಥಳದಲ್ಲಿ ಇರುವವರೆಗೂ ತಾನು ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಅವನಿಗೆ ತಿಳಿದಿತ್ತು, ಆದ್ದರಿಂದ ಅವನು ಅವನನ್ನು ಕೊಲ್ಲಲು ಸಂಚು ರೂಪಿಸಿದ್ದ ಎಂದು ಕುಮಾರ್ ಹೇಳಿದ್ದಾರೆ.

ಮತ್ತಷ್ಟು ಓದಿ: ಪತಿ ರಾಜಾ ರಘುವಂಶಿ ಕೊಲ್ಲಲು ಪ್ಲ್ಯಾನ್​ ಬಿ ರೆಡಿ ಮಾಡಿದ್ದ ಸೋನಮ್

ಪೂರ್ವ ಅಗರ್ತಲಾ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬಂಕುಮರಿಯಲ್ಲಿರುವ ಯುವತಿ ಮನೆಗೆ ಆರೋಪಿ ಆಗಾಗ ಭೇಟಿ ನೀಡುತ್ತಿದ್ದ. ಮೃತ ವ್ಯಕ್ತಿಯ ಕುಟುಂಬವು ತಮ್ಮ ಮಗ ಕಾಣೆಯಾಗಿದ್ದಾನೆಂದು ದೂರು ನೀಡಿದ ನಂತರ ಪೊಲೀಸರು ತನಿಖೆ ಆರಂಭಿಸಿದರು.

ಸೋದರಸಂಬಂಧಿಯನ್ನು ಮೊದಲು ಬಂಧಿಸಲಾಯಿತು, ಮತ್ತು ಆತನ ತಪ್ಪೊಪ್ಪಿಗೆಯ ಮೇರೆಗೆ ಬುಧವಾರ ಫ್ರೀಜರ್‌ನಿಂದ ಶವವನ್ನು ವಶಕ್ಕೆ ಪಡೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Loading...
Unable to load recommendations.
Follow Us