AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Turkey Earthquake: ಭೂಕಂಪದ ಕಹಿ ಅನುಭವ ನನಗಿದೆ, ಟರ್ಕಿ ಭೂಕಂಪದ ಬಗ್ಗೆ ಭಾವುಕರಾದ ಪ್ರಧಾನಿ ಮೋದಿ

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಅಘಾತಕಾರಿ ಭೂಕಂಪದ ಬಗ್ಗೆ ಭಾವನಾತ್ಮಕ ಮಾತುಗಳನ್ನು ಹಾಡಿದ್ದಾರೆ. ಗುಜರಾತ್‌ನಲ್ಲಿ 20,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಮತ್ತು 1,50,000 ಕ್ಕೂ ಹೆಚ್ಚು ಜನರಿಗೆ ನೋವು ನೀಡಿದೆ ಎಂದು ಮೋದಿ ಹೇಳಿದ್ದಾರೆ.

Turkey Earthquake: ಭೂಕಂಪದ ಕಹಿ ಅನುಭವ ನನಗಿದೆ, ಟರ್ಕಿ ಭೂಕಂಪದ ಬಗ್ಗೆ ಭಾವುಕರಾದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
TV9 Web
| Edited By: |

Updated on:Feb 07, 2023 | 3:24 PM

Share

ದೆಹಲಿ: ಟರ್ಕಿ ಮತ್ತು ಸಿರಿಯಾದಲ್ಲಿ (Turkey quake) ಸಂಭವಿಸಿದ ಅಘಾತಕಾರಿ ಭೂಕಂಪದ ಬಗ್ಗೆ ಭಾವನಾತ್ಮಕ ಮಾತುಗಳನ್ನು ಹಾಡಿದ್ದಾರೆ. ಗುಜರಾತ್‌ನಲ್ಲಿ 20,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಮತ್ತು 1,50,000 ಕ್ಕೂ ಹೆಚ್ಚು ಜನರಿಗೆ ನೋವು ನೀಡಿದೆ, 2001 ರ ಭುಜ್ ಭೂಕಂಪವನ್ನು ನೆನಪಿಸಿಕೊಂಡರು ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಇಂದಿನ ಸಂಸತ್ ಕಲಾಪ ಆರಂಭಕ್ಕೂ ಮುನ್ನ ನಡೆದ ಸಭೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಸಭೆಯಲ್ಲಿ ಅವರು ಮಾರಣಾಂತಿಕ ಭುಜ್ ಭೂಕಂಪವನ್ನು ನೆನಪಿಸಿಕೊಂಡರು ಮತ್ತು ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದರು.

ನರೇಂದ್ರ ಮೋದಿ ಅವರು 2001 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಟರ್ಕಿಯಲ್ಲಿ ಇದೀಗ ಅದೇ ಕೆಟ್ಟ ವಿಚಾರಗಳು ನಡೆಯುತ್ತಿದೆ ಎಂದು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಎಂದು ಪ್ರಧಾನಿ ಹೇಳಿದರು. 2001ರಲ್ಲಿ ಗುಜರಾತ್‌ನ ಭುಜ್‌ನಲ್ಲಿ ಭಾರಿ ಭೂಕಂಪ ಸಂಭವಿಸಿತ್ತು. 20,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು ಮತ್ತು 1.5 ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡರು. ಭೂಕಂಪದ ಕೇಂದ್ರಬಿಂದು ಕಚ್ ಜಿಲ್ಲೆಯ ಭುಜ್‌ನಿಂದ ಈಶಾನ್ಯಕ್ಕೆ 20 ಕಿ.ಮೀ ದೂರದಲ್ಲಿದೆ. ಭೂಕಂಪವು ಎಷ್ಟು ವಿನಾಶಕಾರಿಯಾಗಿತ್ತೆಂದರೆ, ಮಧ್ಯ ಮತ್ತು ಉತ್ತರ ಭಾರತದ ಭಾಗಗಳಲ್ಲಿ, ನವದೆಹಲಿ ಮತ್ತು ಮುಂಬೈ, ಹಾಗೆಯೇ ಚೆನ್ನೈ ಮತ್ತು ಪಾಂಡಿಚೇರಿ ಮತ್ತು ಕಲ್ಕತ್ತಾದಲ್ಲಿ ಕಂಪನಗಳನ್ನು ಅನುಭವಿಸಲಾಯಿತು.

ಇದನ್ನೂ ಓದಿ:Turkey Earthquake: ಟರ್ಕಿಯಲ್ಲಿ ಎರಡು ದಿನಗಳಲ್ಲಿ 4ನೇ ಬಾರಿಗೆ ಕಂಪಿಸಿದ ಭೂಮಿ, 5.6 ತೀವ್ರತೆ ದಾಖಲು

ಎರಡು ದಿನಗಳಲ್ಲಿ ಟರ್ಕಿ ಮತ್ತು ಸಿರಿಯಾವನ್ನು ತತ್ತರಿಸಿರುವ ಐದು ಭೂಕಂಪಗಳ ನಂತರ 7.8 ರಿಕ್ಟರ್ ಮಾಪಕದಲ್ಲಿ ಅತಿ ದೊಡ್ಡದಾದ ಟರ್ಕಿಗೆ ಭಾರತವು ಮಾನವೀಯ ನೆರವು ನೀಡುತ್ತಿರುವ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದರು.

ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಸುಮಾರು 5,000 ಸಾವುಗಳು ದೃಢೀಕರಿಸಲ್ಪಟ್ಟಿವೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ. ಭಾರತವು ಸಿ-17 ವಿಮಾನವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಶೋಧ ಮತ್ತು ಪಾರುಗಾಣಿಕಾ ಸಿಬ್ಬಂದಿ, ಶ್ವಾನದಳಗಳು, ಔಷಧಗಳು ಮತ್ತು ಇತರ ಪರಿಹಾರ ಸಾಮಗ್ರಿಗಳ 50 ಸಿಬ್ಬಂದಿಗಳೊಂದಿಗೆ ನಿಯೋಜಿಸಿದೆ. 60 ವೈದ್ಯಕೀಯ ಸಿಬ್ಬಂದಿಯೊಂದಿಗೆ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್‌ಎಡಿಆರ್) ಹೊಂದಿರುವ ಇನ್ನೂ ಎರಡು ಸಿ-17 ವಿಮಾನಗಳನ್ನು ಕಳುಹಿಸಲಾಗುವುದು ಎಂದು ವರದಿ ತಿಳಿಸಿದೆ.

ಹೊಸದಿಲ್ಲಿಯಲ್ಲಿರುವ ಟರ್ಕಿಶ್ ರಾಯಭಾರ ಕಚೇರಿಯು ಟ್ವೀಟ್ ಮಾಡಿದೆ, “NDRF ನ ವಿಶೇಷ ಶೋಧ ಮತ್ತು ರಕ್ಷಣಾ ತಂಡಗಳು ಮತ್ತು ತರಬೇತಿ ಪಡೆದ ಶ್ವಾನ ದಳಗಳೊಂದಿಗೆ ಭೂಕಂಪ ಪರಿಹಾರ ಸಾಮಗ್ರಿಗಳ ಮೊದಲ ಬ್ಯಾಚ್ ಇದೀಗ ಟರ್ಕಿಗೆ ಆಗಮಿಸಿದೆ. ನಿಮ್ಮ ಬೆಂಬಲ ಮತ್ತು ಒಗ್ಗಟ್ಟಿಗಾಗಿ ಭಾರತಕ್ಕೆ ಧನ್ಯವಾದಗಳು ಎಂದು  ಹೇಳಿದೆ.

Published On - 3:20 pm, Tue, 7 February 23