AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಇಂದು ರಾತ್ರಿ ದಾಂಡಿಯಾ ನೈಟ್

TV9 Festival of India: ದೆಹಲಿಯಲ್ಲಿ ನಡೆಯುತ್ತಿರುವ ಟಿವಿ9ನ ಫೆಸ್ಟಿವಲ್ ಆಫ್ ಇಂಡಿಯಾ ಫ್ಯಾಷನ್, ಆಹಾರ, ಗೃಹಾಲಂಕಾರ ಮತ್ತು ಕರಕುಶಲ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುವ 250ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಈ ಉತ್ಸವದಲ್ಲಿ ಸೂಫಿ ಸಂಗೀತ, ಬಾಲಿವುಡ್ ಸಂಗೀತ ಅಥವಾ ಜಾನಪದ ಸಂಗೀತದಂತಹ ಎಲ್ಲಾ ರೀತಿಯ ಸಂಗೀತವನ್ನು ಕೇಳಲು ನಿಮಗೆ ಅವಕಾಶ ಸಿಗುತ್ತದೆ.

ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಇಂದು ರಾತ್ರಿ ದಾಂಡಿಯಾ ನೈಟ್
ಸಂಧಿ ಪೂಜೆ ಮತ್ತು ಭೋಗ್ ಆರತಿ ಮಾಡಿದ ಟಿವಿ9 ನೆಟ್‌ವರ್ಕ್ ಎಂಡಿ ಬರುಣ್ ದಾಸ್ ಮತ್ತು ಟಿವಿ9 ಸುದ್ದಿ ನಿರ್ದೇಶಕ ಹೇಮಂತ್ ಶರ್ಮಾ
ಸುಷ್ಮಾ ಚಕ್ರೆ
|

Updated on: Oct 11, 2024 | 5:48 PM

Share

ನವದೆಹಲಿ: ಟಿವಿ9 ನೆಟ್‌ವರ್ಕ್ ಮತ್ತೊಮ್ಮೆ ಈ ಬಾರಿ ದೆಹಲಿಯ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ 5 ದಿನಗಳ ಗ್ರ್ಯಾಂಡ್ ಫೆಸ್ಟಿವಲ್ ಆಫ್ ಇಂಡಿಯಾವನ್ನು ಆಯೋಜಿಸಿದೆ. ಇಂದು ಈ ಉತ್ಸವದ ಮೂರನೇ ದಿನ. ಭಾರತದ ಹಬ್ಬಗಳಲ್ಲಿ ಮುಖ್ಯವಾಗಿರುವ ನವರಾತ್ರಿಯಲ್ಲಿ ಇಂದು ಮಹಾಅಷ್ಟಮಿಯನ್ನು ಆಚರಿಸಲಾಗುತ್ತಿದೆ. ಇಂದು ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಬೆಳಗ್ಗೆ ಸಂಧಿ ಪೂಜೆ ಮತ್ತು ಭೋಗ್ ಆರತಿ ನೆರವೇರಿತು. ಇಂದು ಸಂಜೆ ನಡೆಯಲಿರುವ ದಾಂಡಿಯಾ ಮತ್ತು ಗರ್ಬಾ ನೈಟ್​ನಲ್ಲಿ ಎಲ್ಲರೂ ಪಾಲ್ಗೊಳ್ಳಬಹುದು. ಇದಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.

ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ ಮತ್ತು ಟಿವಿ9 ಸುದ್ದಿ ನಿರ್ದೇಶಕ ಹೇಮಂತ್ ಶರ್ಮಾ ಇಂದು ಬೆಳಗ್ಗೆ ಸಂಧಿ ಪೂಜೆ ಮತ್ತು ಭೋಗ್ ಆರತಿ ಮಾಡಿದರು. ಮಹಾ ಅಷ್ಟಮಿಯ ದಿನದಂದು ಸಂಧಿ ಪೂಜೆ ನಡೆಯುತ್ತದೆ. ನವರಾತ್ರಿಯ ಅಷ್ಟಮಿ ಮತ್ತು ನವಮಿಯ ನಡುವೆ ಈ ಪೂಜೆ ನಡೆಯುತ್ತದೆ. ಅಷ್ಟಮಿಯ ಕೊನೆಯಲ್ಲಿ ಮತ್ತು ನವಮಿ ತಿಥಿಯ ಆರಂಭದಲ್ಲಿ ಸಂಧಿ ಪೂಜೆ ನಡೆಯುತ್ತದೆ. ಸಂಧಿ ಪೂಜೆಯ ನಂತರ ಭೋಗ್ ಆರತಿಯೊಂದಿಗೆ ದೇವಿಗೆ ಪ್ರಸಾದವನ್ನು ಅರ್ಪಿಸಲಾಯಿತು.

ಇದನ್ನೂ ಓದಿ: ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ; ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ಆಭರಣ, ಸೀರೆ, ಸೂಟ್‌, ಕರಕುಶಲತೆಗಳ ಪ್ರದರ್ಶನ

ಇಂದು ಸಂಜೆ ದಾಂಡಿಯಾ ಮತ್ತು ಗರ್ಬಾ ನೈಟ್:

ನವರಾತ್ರಿ ಆಚರಣೆಗಳ ನಡುವೆ ಭಕ್ತರನ್ನು ರಂಜಿಸಲು ಫೆಸ್ಟಿವಲ್ ಆಫ್ ಇಂಡಿಯಾ ಹಲವಾರು ವಿಶೇಷ ಆಕರ್ಷಣೆಗಳನ್ನು ಹೊಂದಿದೆ. ಭಕ್ತಿಯ ವಾತಾವರಣದ ನಡುವೆ TV9 ನ ಫೆಸ್ಟಿವಲ್ ಆಫ್ ಇಂಡಿಯಾ ದಿನವಿಡೀ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಂಗೀತ ಕಾರ್ಯಕ್ರಮದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಯಿತು.

ಇಂದು ಸಂಜೆಯೂ ಈ ಉತ್ಸವದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ದಾಂಡಿಯಾ ಮತ್ತು ಗರ್ಬಾ ನೈಟ್ ಜೊತೆಗೆ ಧಕ್ ಮತ್ತು ಧುಂಚಿ ನೃತ್ಯ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಇಂದು ಸಂಜೆ 6.30ಕ್ಕೆ ದಾಂಡಿಯಾ ಮತ್ತು ಗರ್ಬಾ ನೈಟ್ ಆಯೋಜಿಸಲಾಗಿದೆ. ದಾಂಡಿಯಾದ ನಂತರ ಧಕ್ ಮತ್ತು ಧುನುಚಿ ನೃತ್ಯ ಸ್ಪರ್ಧೆ ಆರಂಭವಾಗಲಿದೆ. ಈ ಸ್ಪರ್ಧೆಯು ರಾತ್ರಿ 8ರಿಂದ 9.30ರವರೆಗೆ ನಡೆಯಲಿದೆ.

ಇದನ್ನೂ ಓದಿ: ಟಿವಿ9 ಫೆಸ್ಟಿವಲ್ ಆಫ್ ಇಂಡಿಯ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಿದ ಬರುನ್ ದಾಸ್

ಫೆಸ್ಟಿವಲ್ ಆಫ್ ಇಂಡಿಯಾದ 5 ದಿನಗಳ ಮೆಗಾ ಲೈಫ್‌ಸ್ಟೈಲ್ ಎಕ್ಸ್‌ಪೋದಲ್ಲಿ 250ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಹಲವು ದೇಶಗಳ ಉತ್ಪನ್ನಗಳ ಮಳಿಗೆಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಈ ಉತ್ಸವದಲ್ಲಿ ಅಂತರರಾಷ್ಟ್ರೀಯ ಪ್ರದರ್ಶನಗಳ ಜೊತೆಗೆ ರುಚಿಕರವಾದ ಆಹಾರದ ಅನೇಕ ಮಳಿಗೆಗಳನ್ನು ಸಹ ಸ್ಥಾಪಿಸಲಾಗಿದೆ. ಈ ಉತ್ಸವವು ಫ್ಯಾಷನ್, ಆಹಾರ, ಗೃಹಾಲಂಕಾರ ಮತ್ತು ಕರಕುಶಲ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸುವ 250ಕ್ಕೂ ಹೆಚ್ಚು ಮಳಿಗೆಗಳನ್ನು ಒಳಗೊಂಡಿದೆ. ಇಲ್ಲಿ ದಿನವಿಡೀ ಅನೇಕ ಸಂಗೀತಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಈ ಉತ್ಸವದಲ್ಲಿ, ಸೂಫಿ ಸಂಗೀತ, ಬಾಲಿವುಡ್ ಸಂಗೀತ ಅಥವಾ ಜಾನಪದ ಸಂಗೀತದಂತಹ ಎಲ್ಲಾ ರೀತಿಯ ಸಂಗೀತವನ್ನು ಕೇಳಲು ನಿಮಗೆ ಅವಕಾಶ ಸಿಗುತ್ತದೆ. ಟಿವಿ9 ನೆಟ್‌ವರ್ಕ್ ಆಯೋಜಿಸಿರುವ ಈ ಉತ್ಸವ ಅಕ್ಟೋಬರ್ 13ರವರೆಗೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ