ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ 2 ಕಡೆ ಅಗ್ನಿ ದುರಂತ; ಅಂಗಡಿಗಳೆಲ್ಲ ಆಹುತಿ, ಅಗ್ನಿಶಾಮಕದಳದ 6 ಮಂದಿಗೆ ಗಾಯ

ಮೊದಲು ದೆಹಲಿಯ ಆಜಾದ್ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮೂರು ಕಟ್ಟಡಗಳು, ಐದು ಅಂಗಡಿಗಳು ಬೆಂಕಿಗೆ ಆಹುತಿಯಾಗಿ ಅಪಾರ ಪ್ರಮಾಣದ ನಷ್ಟವಾಗಿದೆ. 

ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ 2 ಕಡೆ ಅಗ್ನಿ ದುರಂತ; ಅಂಗಡಿಗಳೆಲ್ಲ ಆಹುತಿ, ಅಗ್ನಿಶಾಮಕದಳದ 6 ಮಂದಿಗೆ ಗಾಯ
ದೆಹಲಿಯ ಆಜಾದ್​ ಮಾರ್ಕೆಟ್​ನಲ್ಲಿ ಬೆಂಕಿ
Edited By:

Updated on: Apr 09, 2022 | 9:00 AM

ದೆಹಲಿಯ ಆನಂದ್​ ಪರ್ಬತ್ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಇಂದು ಮುಂಜಾನೆ ಬೆಂಕಿ ಹೊತ್ತಿಕೊಂಡಿತ್ತು. ಈ ದುರ್ಘಟನೆಯಲ್ಲಿ ಅದೃಷ್ಟವಶಾತ್ ಯಾರ ಪ್ರಾಣವೂ ಹೋಗಿಲ್ಲ. ಆದರೆ ಅಗ್ನಿಶಾಮಕದಳದ ಆರು ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಬಿ ಎಲ್​ ಕಪೂರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅಲ್ಲಿ ಬೆಂಕಿ ನಂದಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ.

ಇದಕ್ಕೂ ಮೊದಲು ದೆಹಲಿಯ ಆಜಾದ್ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮೂರು ಕಟ್ಟಡಗಳು, ಐದು ಅಂಗಡಿಗಳು ಬೆಂಕಿಗೆ ಆಹುತಿಯಾಗಿ ಅಪಾರ ಪ್ರಮಾಣದ ನಷ್ಟವಾಗಿದೆ.  ಸುಮಾರು ಅಗ್ನಿಶಾಮಕದಳದ ಸುಮಾರು 20 ಫೈರ್​ ಎಂಜಿನ್​​ಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ ಎಂದು ಫೈರ್​ ವಿಭಾಗೀಯ ಅಧಿಕಾರಿ ರಾಜೇಂದರ್​ ಅಟಾವಲ್​ ಹೇಳಿದ್ದಾಗಿ ಎಎನ್​ಐ ವರದಿ ಮಾಡಿದೆ. ದೆಹಲಿಯಲ್ಲಿ ಇಂದು ಮುಂಜಾನೆ ಎರಡು ಪ್ರದೇಶಗಳಲ್ಲಿ ಅಗ್ನಿ ದುರಂತ ಉಂಟಾಗಿದ್ದು, ಬೆಂಕಿ ಹೊತ್ತಿಕೊಳ್ಳಲು ಕಾರಣ ತಿಳಿದುಬಂದಿಲ್ಲ. ಯಾರೂ ಮೃತಪಟ್ಟಿದ್ದು ವರದಿಯಾಗಿಲ್ಲ. ಎರಡೂ ಅಗ್ನಿ ಅವಘಡ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಜನರನ್ನು ರಂಜಿಸುತ್ತಿರುವ ಉತ್ತರ ಕರ್ನಾಟಕದ ಪ್ರತಿಭೆ ವಾದಿರಾಜ

Published On - 8:59 am, Sat, 9 April 22