ಭುವನೇಶ್ವರದ ಐಎಚ್ಎಸ್ ಶಿಕ್ಷಣ ಸಂಸ್ಥೆಗೆ ಭೇಟಿ; ಇದು ಸ್ಮರಣೀಯ ದಿನ ಎಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಸಂಸ್ಥೆಯ ವಿದ್ಯಾರ್ಥಿಗಳು, ತರಬೇತುದಾರರು ಮತ್ತು ಅಧ್ಯಾಪಕರೊಂದಿಗೆ ಕಳೆದದ್ದು ಸ್ಮರಣೀಯ ದಿನ. ಹೆಚ್ಚು ಸಮಾನ ಮತ್ತು ಅಂತರ್ಗತ ಜಗತ್ತನ್ನು ನಿರ್ಮಿಸುವುದಕ್ಕಾಗಿ ಭುವನೇಶ್ವರ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ ಎಲ್ಲಾ ತರಬೇತುದಾರರು ಮತ್ತು ಅಧ್ಯಾಪಕರ ಬದ್ಧತೆಗೆ ನಾನು ನಮಿಸುತ್ತೇನೆ ಎಂದು ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.

ಭುವನೇಶ್ವರದ ಐಎಚ್ಎಸ್ ಶಿಕ್ಷಣ ಸಂಸ್ಥೆಗೆ ಭೇಟಿ; ಇದು ಸ್ಮರಣೀಯ ದಿನ ಎಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್
ರಶ್ಮಿ ಕಲ್ಲಕಟ್ಟ

Updated on: Jul 08, 2023 | 8:55 PM

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಭುವನೇಶ್ವರದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ (Institute of Health Sciences) ಎಂಬ ವಿಶೇಷಚೇತನರ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಸಚಿವರು, ಸಂಸ್ಥೆಯ ವಿದ್ಯಾರ್ಥಿಗಳು, ತರಬೇತುದಾರರು ಮತ್ತು ಅಧ್ಯಾಪಕರೊಂದಿಗೆ ಕಳೆದದ್ದು ಸ್ಮರಣೀಯ ದಿನ. ಹೆಚ್ಚು ಸಮಾನ ಮತ್ತು ಅಂತರ್ಗತ ಜಗತ್ತನ್ನು ನಿರ್ಮಿಸುವುದಕ್ಕಾಗಿ ಭುವನೇಶ್ವರ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ ಎಲ್ಲಾ ತರಬೇತುದಾರರು ಮತ್ತು ಅಧ್ಯಾಪಕರ ಬದ್ಧತೆಗೆ ನಾನು ನಮಿಸುತ್ತೇನೆ ಎಂದು ಹೇಳಿದ್ದಾರೆ.

ಸಂಸ್ಥೆಯು ತನ್ನ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಉಪಕ್ರಮಗಳ ಮೂಲಕ ಅಂಗವೈಕಲ್ಯವಿರುವವರ ಪುನರ್ವಸತಿಗಾಗಿ, ಅವರ ಅಭಿವೃದ್ಧಿಗೆ ಮತ್ತು ವಿಶೇಷ ಅಗತ್ಯತೆಗಳಿರುವ ಜನರಿಗೆ ಅವಕಾಶಗಳ ಅಡೆತಡೆಗಳನ್ನು ನಿವಾರಿಸಲು ಶ್ಲಾಘನೀಯ ಕೆಲಸವನ್ನು ಮಾಡುತ್ತಿದೆ.


ಯುಜಿಸಿ IHS ಗೆ ಸ್ವಾಯತ್ತ ಸ್ಥಾನಮಾನ ನೀಡುವ ಮೂಲಕ ವಿಶೇಷ ಚೇತನರ ಸಬಲೀಕರಣಕ್ಕಾಗಿ ಹೊಸ ಮಾರ್ಗಗಳ ಸೃಷ್ಟಿಗೆ ದಾರಿ ಮಾಡಿಕೊಟ್ಟಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಚೆನ್ನೈನ ಐಸಿಎಫ್‌ಗೆ ಭೇಟಿ ನೀಡಿ ವಂದೇ ಭಾರತ್ ರೈಲು ಪರಿಶೀಲಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಇನ್ನೊಂದು ಟ್ವೀಟ್ ನಲ್ಲಿ ಸಚಿವರು, ನಾನು ಭುವನೇಶ್ವರದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್​​ಸ್ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ, ನಾನು ವಿಕಲಚೇತನ ಮಕ್ಕಳ ಮಾದರಿ ಕೇಂದ್ರ, ಸಮಗ್ರ ಪುನರ್ವಸತಿ ಕೇಂದ್ರ, ಕ್ಲಿನಿಕ್ ಬ್ಲಾಕ್, ಶೈಕ್ಷಣಿಕ ಬ್ಲಾಕ್, ಬಲ್ಮುಕುಂದ್ ರೆಹ್ಯಾಬ್ ಆಸ್ಪತ್ರೆಗೆ ಭೇಟಿ ನೀಡಿ ಕ್ಯಾಂಪಸ್‌ನಲ್ಲಿರುವ ವಿಕಲಚೇತನ ವಿದ್ಯಾರ್ಥಿಗಳು ಮತ್ತು ತರಬೇತುದಾರರನ್ನು ಭೇಟಿ ಮಾಡಿದ್ದೇನೆ. ಇಂದು ನನ್ನ ಪಾಲಿಗೆ ಸ್ಮರಣೀಯ ದಿನ. ಶಿಕ್ಷಣ ಸಂಸ್ಥೆಗಳ ಅನುಕೂಲಕರ ಕಲಿಕೆಯ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ವಿವಿಧ ಚಿಕಿತ್ಸೆಗಳು ಮತ್ತು ಚಿಕಿತ್ಸೆಗಳೊಂದಿಗೆ ಸಮಾಜದ ಮುಖ್ಯವಾಹಿನಿಗೆ ವಿಶೇಷಚೇತನರನ್ನು ಸೇರಿಸುವ ಪ್ರಯತ್ನಗಳು ಹೆಚ್ಚು ಶ್ಲಾಘನೀಯ ಎಂದು  ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us