AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UP Police: ಸತ್ತ ಪಾತಕಿಯ ಮಗಳ ಮದುವೆ ಮಾಡಿದ ಯುಪಿ ಪೊಲೀಸ್; ಎನ್​ಕೌಂಟರ್ ಮಾಡಿದ್ದ ತಂಡದ ಸದಸ್ಯರಿಂದಲೇ ಮದುವೆ ಕಾರ್ಯ

Marriage of Criminal's Daughter: ಕಳೆದ ವರ್ಷ ಪೊಲೀಸರ ಎನ್​ಕೌಂಟರ್​ನಲ್ಲಿ ಕೊಲ್ಲಲ್ಪಟ್ಟಿದ್ದ ಪಾತಕಿಯೊಬ್ಬನ ಮಗಳ ಮದುವೆಯನ್ನು ಪೊಲೀಸರೇ ಅದ್ಧೂರಿಯಾಗಿ ನೆರವೇರಿಸಿದ ಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮದುವೆಯಾದ ಹುಡುಗಿಗೆ ಅಪ್ಪನ ಅನುಪಸ್ಥಿತಿ ಕಾಡದ ರೀತಿಯಲ್ಲಿ ಮದುವೆಯ ಎಲ್ಲಾ ಜವಾಬ್ದಾರಿಯನ್ನು ಉ.ಪ್ರ.ದ ಜಲೌನ್ ಪೊಲೀಸರೇ ವಹಿಸಿ ನೆರವೇರಿಸಿದ್ದಾರೆ.

UP Police: ಸತ್ತ ಪಾತಕಿಯ ಮಗಳ ಮದುವೆ ಮಾಡಿದ ಯುಪಿ ಪೊಲೀಸ್; ಎನ್​ಕೌಂಟರ್ ಮಾಡಿದ್ದ ತಂಡದ ಸದಸ್ಯರಿಂದಲೇ ಮದುವೆ ಕಾರ್ಯ
ಶಿವಾನಿ ರಾಯ್ ಮದುವೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 04, 2024 | 4:17 PM

Share

ಜಾಲೌನ್, ಉ.ಪ್ರ., ಮಾರ್ಚ್ 4: ಪೊಲೀಸರೆಂದರೆ ಕ್ರಿಮಿನಲ್​ಗಳನ್ನು ಹೆಡೆಮುರಿ ಕಟ್ಟಿ ಬೀಳಿಸುವುದೇ ಕಾಯಕವಾಗಿರಬಹುದು. ಅದನ್ನೂ ಮೀರಿ ಪೊಲೀಸರಿಂದ ಸಾಕಷ್ಟು ಮಾನವೀಯ ಕಾರ್ಯಗಳು ನಡೆಯುತ್ತಿರುತ್ತವೆ. ಉತ್ತರಪ್ರದೇಶದ ಪೊಲೀಸರು ಅಪರಾಧಿಯೊಬ್ಬನ ಮಗಳ ಮದುವೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಕ್ರಿಮಿನಲ್​ನ ಮಗಳ ಮದುವೆ ಮಾಡುವುದು ಅದ್ಯಾವ ಒಳ್ಳೆಯತನ ಎನ್ನಬಹುದು. ಆದರೆ, ಆ ಅಪರಾಧಿ ಹಿಂದೆ ಉ.ಪ್ರ. ಪೊಲೀಸರ ಎನ್​ಕೌಂಟರ್​ನಲ್ಲಿ ಸತ್ತವ. ಪೊಲೀಸ್ ಕಾನ್ಸ್​ಟೆಬಲ್ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿದ್ದ ರಮೇಶ್ ಎಂಬಾತನನ್ನು ಪೊಲೀಸರು ಎನ್​ಕೌಂಟರ್ ಮಾಡಿದ್ದರು. ಇದೀಗ ಜಾಲೌನ್​ನಲ್ಲಿ (Jalaun, Uttar Pradesh) ಆ ವ್ಯಕ್ತಿಯ ಹಿರಿಯ ಮಗಳ ಮದುವೆಯನ್ನು ಪೊಲೀಸರೇ ನಿಂತು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಮೇ 10, 2023 ರಂದು, ಉರೈ ಕೊತ್ವಾಲಿ ಪ್ರದೇಶದ ಹೆದ್ದಾರಿ ಪೋಸ್ಟ್ ಬಳಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಭೇದಜಿತ್ ಸಿಂಗ್ ಅವರನ್ನು ಶಿರಚ್ಛೇದ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ನಾಲ್ಕು ದಿನಗಳ ನಂತರ ಪೊಲೀಸರು ಪ್ರಮುಖ ಆರೋಪಿ ರಮೇಶ್ ರಾಯಕ್ವಾರ್ ಮತ್ತು ಕಲ್ಲು ಅಹಿರ್ವಾರ್ ಅವರನ್ನು ಎನ್‌ಕೌಂಟರ್‌ನಲ್ಲಿ ಕೊಂದಿದ್ದಾರೆ. ಇದರ ನಂತರ, ಪಾತಕಿ ರಮೇಶ್ ರಾಯಕ್ವಾರ್‌ನ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನ ಪಾಲನೆ ಮತ್ತು ಮದುವೆಯ ಜವಾಬ್ದಾರಿಯನ್ನು ಜಲೌನ್ ಪೊಲೀಸರೇ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಿವೃತ್ತ ಸೈನಿಕನ ಮಗ ಅಪ್ಪನ ಹಣ-ಜಾಗಕ್ಕಾಗಿ ಅಮ್ಮನನ್ನು ಹೊಡೆದು ಸಾಯಿಸಿಬಿಟ್ಟ! ಆ ಮೇಲೆ…

ಶನಿವಾರ ರಾತ್ರಿ (ಮಾ. 2) ರಮೇಶ್ ರಾಯಕ್ವಾರ್ ಅವರ ಹಿರಿಯ ಮಗಳು ಶಿವಾನಿ ರಾಯ್​ಳ ಮದುವೆಯನ್ನು ಪೊಲೀಸರು ಅದ್ಧೂರಿಯಾಗಿ ನೆರವೇರಿಸಿದರು. ಝಾನ್ಸಿ ಜಿಲ್ಲೆಯ ಮಾಂತ್ ಪೊಲೀಸ್ ಠಾಣೆ ವ್ಯಾಪ್ತಿಯ ಮಗ್ರೌರಾ ಗ್ರಾಮದ ನಿವಾಸಿ ಮಲ್ಖಾನ್ ಅವರ ಮಗ ಮೋನು ರಾಯಕ್ವಾರ್ ಅವರನ್ನು ಶಿವಾನಿ ರಾಯ್ ವರಿಸಿದ್ದಾಳೆ. ಈ ಸಂದರ್ಭದಲ್ಲಿ, ಪಾತಕಿ ರಮೇಶ್​ನ ಎನ್​ಕೌಂಟರ್ ಮಾಡಿದ ತಂಡದಲ್ಲಿದ್ದ ಸಿಒ ಗಿರ್ಜಾ ಶಂಕರ್ ತ್ರಿಪಾಠಿ, ಕೊತ್ವಾಲ್ ಶಿವಕುಮಾರ್ ರಾಥೋಡ್, ಕಾನ್‌ಸ್ಟೆಬಲ್ ಅಮಿತ್ ದುಬೆ ಹಾಗು ಇತರ ಸದಸ್ಯರು ಹಾಜರಿದ್ದರು. ವಿವಾಹ ಸಮಾರಂಭದಲ್ಲಿ ಊಟ-ಪಾನೀಯಗಳ ಎಲ್ಲಾ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಸಂಪ್ರದಾಯದ ಪ್ರಕಾರ, ಪೊಲೀಸರು ವರನ ಕಡೆಯವರಿಗೆ ಮೋಟಾರ್ ಸೈಕಲ್, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಟಿವಿ, ಕೂಲರ್, ಬೀರು, ಸೋಫಾ, ಬೆಡ್, ಬೀರು, ಗ್ಯಾಸ್ ಸ್ಟೌ, 51 ಪಾತ್ರೆಗಳು, ಮೊಬೈಲ್ ಮತ್ತು ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷ.

ಪೊಲೀಸರ ಈ ಔದಾರ್ಯ ಮತ್ತು ಮಾನವೀಯತೆಯು ರಮೇಶ್ ಕುಟುಂಬದವರಿಗೆ ಖುಷಿ ತಂದಿದೆ. ತನ್ನ ತಂದೆ ಮಾಡಿದ ತಪ್ಪಿಗೆ ಅವರಿಗೆ ಶಿಕ್ಷೆಯಾಗಿದೆ. ತಂದೆಯ ಅನುಪಸ್ಥಿತಿ ನಮಗೆ ಕಾಡದಂತೆ ಪೊಲೀಸರು ಎಲ್ಲವನ್ನೂ ವಹಿಸಿ ಈ ಮದುವೆ ಮಾಡಿಸಿದ್ದಾರೆ. ಅಪ್ಪ ಇಲ್ಲ ಎಂದು ಯೋಚನೆ ಬರದಂತೆ ನೋಡಿಕೊಂಡಿದ್ದಾರೆ ಎಂದು ರಮೇಶ್​ನ ಪತ್ನಿ ತಾರಾ ಮತ್ತು ಎರಡನೆ ಮಗಳು ಶಿವಾಂಗಿ ರಾಯ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ