ಫೇಸ್​​ಬುಕ್​ನಲ್ಲಿ ‘ನೀಲಿ ಡ್ರಮ್’ ಪೋಸ್ಟ್ ನೋಡಿ ಹೆಂಡತಿಯನ್ನು ಪ್ರೇಮಿ ಜೊತೆ ಹೋಗಲು ಬಿಟ್ಟ ಗಂಡ!

ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ತನ್ನ ಪತ್ನಿಯ 'ಸಿಮೆಂಟ್ ಮತ್ತು ಡ್ರಮ್' ಫೇಸ್‌ಬುಕ್ ಪೋಸ್ಟ್ ನೋಡಿ, ಆಕೆಯ ಸಹವಾಸವೇ ಸಾಕೆಂದು ಆಕೆಯನ್ನು ಆಕೆಯ ಪ್ರೇಮಿಯೊಂದಿಗೆ ಹೋಗಲು ಬಿಟ್ಟಿರುವ ವಿಚಿತ್ರವಾದ ಘಟನೆ ನಡೆದಿದೆ. ನನ್ನ ಹೆಂಡತಿ ನನ್ನ ಪ್ರಾಣ ತೆಗೆಯದಿದ್ದರೆ ಸಾಕು, ಆಕೆ ಯಾರ ಜೊತೆ ಬೇಕಾದರೂ ಇರಲಿ ಎಂದು ಆಕೆಯ ಗಂಡ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಫೇಸ್​​ಬುಕ್​ನಲ್ಲಿ ನೀಲಿ ಡ್ರಮ್ ಪೋಸ್ಟ್ ನೋಡಿ ಹೆಂಡತಿಯನ್ನು ಪ್ರೇಮಿ ಜೊತೆ ಹೋಗಲು ಬಿಟ್ಟ ಗಂಡ!
Rajkumar And His Wife
Image Credit source: NDTV

Updated on: Mar 19, 2026 | 10:01 PM

ಬುಲಂದ್‌ಶಹರ್, ಮಾರ್ಚ್ 19: ಉತ್ತರ ಪ್ರದೇಶದ ವ್ಯಕ್ತಿಯೊಬ್ಬರ ಹೆಂಡತಿ ಫೇಸ್​​ಬುಕ್​ನಲ್ಲಿ ಹಾಕಿದ್ದ “ಸಿಮೆಂಟ್ ಔರ್ ಡ್ರಮ್” (ಸಿಮೆಂಟ್ ಮತ್ತು ಡ್ರಮ್) ಎಂಬ ಪೋಸ್ಟ್ ಆ ವ್ಯಕ್ತಿಯನ್ನು ಎಷ್ಟು ಹೆದರಿಸಿದೆಯೆಂದರೆ ಅವರು ತನ್ನ ಹೆಂಡತಿಯನ್ನು ತನ್ನ ಪ್ರೇಮಿಯೊಂದಿಗೆ ಹೋಗಲು ಬಿಟ್ಟಿದ್ದಾರೆ. ಇದು ಉತ್ತರ ಪ್ರದೇಶದ ಬುಲಂದ್‌ಶಹರ್‌ನ ರಾಜ್‌ಕುಮಾರ್ ಅವರ ಕಥೆ. ಅವರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಪತ್ನಿಯನ್ನು ಆಕೆಯ ಪ್ರಿಯಕರನಿಗೆ (Love Story) ಬಿಟ್ಟುಕೊಟ್ಟಿದ್ದಾರೆ.

ರಾಜ್‌ಕುಮಾರ್ ಅವರ ಪತ್ನಿಗೆ ಅನೈತಿಕ ಸಂಬಂಧವಿತ್ತು. ಆಕೆ ತನ್ನ ಪ್ರೇಮಿಯೊಂದಿಗೆ ಇರಲು ಆಗಾಗ ಗಂಡನೊಂದಿಗೆ ಜಗಳವಾಡುತ್ತಿದ್ದರು. ಕಳೆದ ವರ್ಷ ಜುಲೈನಿಂದ ಅವರ ಹೆಂಡತಿ ಗಂಡ ಮತ್ತು ಅವರ 6 ತಿಂಗಳ ಮಗುವನ್ನು ಬಿಟ್ಟು ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದರು. ಅವರು 1 ತಿಂಗಳ `ಕಾಲ ತಮ್ಮ ಪ್ರೇಮಿಯೊಂದಿಗೆ ವಾಸಿಸುತ್ತಿದ್ದರು. ಆಕೆ ಬೇರೊಬ್ಬನೊಂದಿಗೆ ಸಂಬಂಧವಿಟ್ಟುಕೊಂಡಿದ್ದನ್ನು ಮನೆಯವರಿಗೆ ಹೇಳುತ್ತೇನೆ ಎಂದಾಗ ಆಕೆ ಅದಕ್ಕೆ ಸಾಕ್ಷಿಯೇನಿದೆ? ಎಂದು ಕೇಳುತ್ತಿದ್ದರು ಎಂದು ರಾಜ್‌ಕುಮಾರ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ದೇಹದ ತುಂಬ 18 ಗಾಯ; 4 ವರ್ಷದ ಮಗುವನ್ನು ಹೊಡೆದು, ಕ್ರೂರವಾಗಿ ಸುಟ್ಟು ಕೊಂದ ತಂದೆ, ಮಲತಾಯಿ

ಇತ್ತೀಚೆಗೆ, ಅವರ ಪತ್ನಿ ತನ್ನ ಪ್ರಿಯಕರನೊಂದಿಗೆ ಫೋನ್ ಮಾಡುತ್ತಿದ್ದಾಗ ರಾಜ್‌ಕುಮಾರ್ ಆಕೆಯ ಫೋನ್ ಅನ್ನು ಕಸಿದುಕೊಂಡು ಸತ್ಯವನ್ನು ಎಲ್ಲರಿಗೂ ಬಹಿರಂಗಪಡಿಸಲು ಪ್ರಯತ್ನಿಸಿದರು. ಆಕೆಯ ಫೋನ್ ಪರಿಶೀಲಿಸಿದಾಗ ಅದರಲ್ಲಿ ಕೆಲವು ನಗ್ನ ಫೋಟೋಗಳು, “ಸಿಮೆಂಟ್ ಔರ್ ಡ್ರಮ್” (ಸಿಮೆಂಟ್ ಮತ್ತು ಡ್ರಮ್) ಎಂಬ ಕ್ಯಾಪ್ಷನ್​​ನೊಂದಿಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಕೊಲೆ ಸ್ಟೋರಿಗಳು ಮತ್ತು “ನೀಲಾ ಡ್ರಮ್ ಔರ್ ಸಿಮೆಂಟ್” (ನೀಲಿ ಡ್ರಮ್ ಮತ್ತು ಸಿಮೆಂಟ್) ಎಂಬ ಕ್ಯಾಪ್ಷನ್​ ಹಾಕಿರುವ ಒಂದು ಫೋಟೋ ಇರುವುದು ಕಂಡುಬಂದಿತ್ತು. ರಾಜ್‌ಕುಮಾರ್ ಇದನ್ನು ತನ್ನನ್ನು ಕೊಲ್ಲಲು ಸಂಚು ರೂಪಿಸುವ ಗುಪ್ತ ಸಂದೇಶವೆಂದು ಭಯಭೀತರಾದರು.

“ನೀಲಿ ಡ್ರಮ್ ಮತ್ತು ಸಿಮೆಂಟ್” ಎಂಬ ಶೀರ್ಷಿಕೆ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಕೊಲೆ ಪ್ರಕರಣವನ್ನು ನೆನಪಿಸುತ್ತದೆ. ಆ ಕೊಲೆ ಪ್ರಕರಣದಲ್ಲಿ ಮಹಿಳೆ ಮುಸ್ಕಾನ್ ರಸ್ತೋಗಿ ತನ್ನ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆಗೂಡಿ ತನ್ನ ಪತಿ ಸೌರಭ್ ರಜಪೂತ್​​ನನ್ನು ಕೊಂದು, ಸೌರಭ್‌ನ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಮೀರತ್‌ನ ಬ್ರಹ್ಮಪುರಿ ಪ್ರದೇಶದ ಅವರ ಮನೆಯಲ್ಲಿ ನೀಲಿ ಡ್ರಮ್​ನೊಳಗೆ ತುಂಬಿ ಸಿಮೆಂಟ್ ಹಾಕಿ ಮುಚ್ಚಿದ್ದರು.

ಇದನ್ನೂ ಓದಿ: ರಜೆ ನೀಡದೆ ಸಂಬಳವನ್ನೂ ಕಟ್ ಮಾಡಿದ್ದಕ್ಕೆ ಬ್ಯಾಂಕ್ ಮ್ಯಾನೇಜರ್​ಗೆ ಶೂಟ್ ಮಾಡಿ ಕೊಂದ ಸೆಕ್ಯುರಿಟಿ

ಈ ಸುದ್ದಿ ಇಡೀ ದೇಶದಲ್ಲಿ ಹರಡಿದ್ದರಿಂದ ರಾಜಕುಮಾರ್​ಗೂ ಈ ಕತೆ ಗೊತ್ತಿತ್ತು. ಅವರು ಹೆಂಡತಿಯೊಂದಿಗೆ ಜಗಳವಾಡಿದಾಗ ಆಕೆ ಅವರನ್ನು ನೀಲಿ ಡ್ರಮ್‌ನಲ್ಲಿ ಪ್ಯಾಕ್ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಳು ಎಂದು ಆರೋಪಿಸಲಾಗಿದೆ. ಈ ಬಗ್ಗೆ ರಾಜ್‌ಕುಮಾರ್ ಪೊಲೀಸರಿಗೆ ದೂರು ನೀಡಿದರು. ಸಂಧಾನ ಪ್ರಕ್ರಿಯೆಯ ಸಮಯದಲ್ಲಿ, ಅವರ ಪತ್ನಿ ತನ್ನ ಪ್ರೇಮಿಯೊಂದಿಗೆ ವಾಸಿಸಲು ಬಯಸುವುದಾಗಿ ಸ್ಪಷ್ಟಪಡಿಸಿದರು. ನಂತರ ರಾಜಕುಮಾರ್ ಆಕೆ ತನ್ನ ಪ್ರಿಯಕರನ ಜೊತೆಯೇ ಇರಲಿ ಎಂದು ಹೇಳಿ ತನ್ನ ಹೆಂಡತಿಯನ್ನು ಬಿಟ್ಟುಕೊಟ್ಟರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us