ಎಂಎಸ್‌ಪಿ ಕುರಿತು ಸ್ವಾಮಿನಾಥನ್ ಸಲಹೆಯನ್ನು ಯುಪಿಎ ತಿರಸ್ಕರಿಸಿತ್ತು: ಶಿವರಾಜ್ ಸಿಂಗ್ ಚೌಹಾಣ್

ಚೌಹಾಣ್ ಹೇಳಿಕೆಗೆ ಗುಡುಗಿದ ವಿಪಕ್ಷ, ಸಚಿವರು "ನೇರವಾದ" ಪ್ರಶ್ನೆಯನ್ನು ವಿಷಯಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಚೌಹಾಣ್, ಎಂಎಸ್‌ಪಿ ಕೃಷಿ ವೆಚ್ಚದ ಮೇಲೆ 50% ಆದಾಯವನ್ನು ನೀಡಬೇಕು ಎಂಬ ಸ್ವಾಮಿನಾಥನ್ ಆಯೋಗದ ಶಿಫಾರಸನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ತಿರಸ್ಕರಿಸಿತ್ತು ಎಂದಿದ್ದಾರೆ.

ಎಂಎಸ್‌ಪಿ ಕುರಿತು ಸ್ವಾಮಿನಾಥನ್ ಸಲಹೆಯನ್ನು ಯುಪಿಎ ತಿರಸ್ಕರಿಸಿತ್ತು: ಶಿವರಾಜ್ ಸಿಂಗ್ ಚೌಹಾಣ್
ಶಿವರಾಜ್ ಸಿಂಗ್ ಚೌಹಾಣ್
Follow us
|

Updated on: Jul 26, 2024 | 8:45 PM

ದೆಹಲಿ ಜುಲೈ 26: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಕುರಿತ ಸಮಿತಿಯ ವರದಿಗಾಗಿ ಸರ್ಕಾರ ಇನ್ನೂ ಕಾಯುತ್ತಿದೆ. ಅದರ ಅಭಿಪ್ರಾಯಗಳನ್ನು ಸ್ವೀಕರಿಸಿದ ನಂತರ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಶುಕ್ರವಾರ ರಾಜ್ಯಸಭೆಗೆ ತಿಳಿಸಿದರು. ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಎಂಎಸ್‌ಪಿಗಳಿಗೆ ಕಾನೂನು ಖಾತರಿ ನೀಡಲು ಕೇಂದ್ರವು ಕಾನೂನನ್ನು ತರುತ್ತದೆಯೇ ಎಂಬ ಸಮಾಜವಾದಿ ಪಕ್ಷದ (SP) ರಾಮ್‌ಜಿ ಲಾಲ್ ಸುಮನ್ ಅವರ ಪ್ರಶ್ನೆಗೆ ಚೌಹಾಣ್ ಈ ಉತ್ತರ ನೀಡಿದ್ದಾರೆ.

ಮೋದಿ ನೇತೃತ್ವದ ಹಿಂದಿನ ಸರ್ಕಾರವು 2020-21ರಲ್ಲಿ ಎಂಎಸ್ ಪಿಗಾಗಿ ಒತ್ತಾಯಿಸಿ ರೈತರ ಒಂದು ವರ್ಷದ ಆಂದೋಲನದ ನಂತರ ಎಂಎಸ್‌ಪಿ ಸಮಿತಿಯನ್ನು ಸ್ಥಾಪಿಸಿತ್ತು. MSP ಎನ್ನುವುದು ಫೆಡರಲ್-ನಿಗದಿತ ನೆಲದ ಬೆಲೆಯಾಗಿದ್ದು, ರೈತರಿಂದ ಸಂಕಷ್ಟದ ಮಾರಾಟವನ್ನು ತಪ್ಪಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. “ನಿರ್ದಿಷ್ಟ ಉದ್ದೇಶಗಳೊಂದಿಗೆ ಸಮಿತಿಯನ್ನು ರಚಿಸಲಾಗಿದೆ. ಇದು ರೈತರಿಗೆ ಎಂಎಸ್‌ಪಿಯನ್ನು ಖಾತ್ರಿಪಡಿಸುವುದುಅಲ್ಲದೆ, ಕೃಷಿ ವೆಚ್ಚಗಳು ಮತ್ತು ಬೆಲೆಗಳಿಗಾಗಿ ಆಯೋಗಕ್ಕೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಲು ಮತ್ತು ಹೆಚ್ಚಿನ ಮಾರುಕಟ್ಟೆ ಬೆಲೆ ಸಿಗುವಂತೆ ಸಹಾಯ ಮಾಡುತ್ತದೆ ಎಂದಿದ್ದಾರೆ ಚೌಹಾಣ್.

ಚೌಹಾಣ್ ಹೇಳಿಕೆಗೆ ಗುಡುಗಿದ ವಿಪಕ್ಷ, ಸಚಿವರು “ನೇರವಾದ” ಪ್ರಶ್ನೆಯನ್ನು ವಿಷಯಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಚೌಹಾಣ್, ಎಂಎಸ್‌ಪಿ ಕೃಷಿ ವೆಚ್ಚದ ಮೇಲೆ 50% ಆದಾಯವನ್ನು ನೀಡಬೇಕು ಎಂಬ ಸ್ವಾಮಿನಾಥನ್ ಆಯೋಗದ ಶಿಫಾರಸನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ತಿರಸ್ಕರಿಸಿತ್ತು ಎಂದಿದ್ದಾರೆ.

ಜುಲೈ 28, 2007 ರಿಂದ ಕ್ಯಾಬಿನೆಟ್ ಟಿಪ್ಪಣಿಯನ್ನು ಉಲ್ಲೇಖಿಸಿದ ಚೌಹಾಣ್, ಕಾಂಗ್ರೆಸ್ ನೇತೃತ್ವದ ಸರ್ಕಾರವು ಎಂಎಸ್ ಪಿ ಸಲಹೆಯನ್ನು ಜಾರಿಗೆ ತರಲು ನಿರಾಕರಿಸಿತು.

ಸ್ವಾಮಿನಾಥನ್ ವರದಿಯ ಶಿಫಾರಸಿನ ಮೇರೆಗೆ ಎಂಎಸ್‌ಪಿ ವೆಚ್ಚದ ಮೇಲೆ 50% ಆದಾಯವನ್ನು ನೀಡಬೇಕು, ಯುಪಿಎ (ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್) ಸರ್ಕಾರವು ಸ್ಪಷ್ಟವಾಗಿ ಹೇಳಿದೆ. ಈ ಸಲಹೆಯನ್ನು ಅನುಷ್ಠಾನಗೊಳಿಸುವುದರಿಂದ ಮಾರುಕಟ್ಟೆ ಅಲ್ಲೋಲಕಲ್ಲೋಲವಾಗಬಹುದು ಎಂದು ನಾನು ಕ್ಯಾಬಿನೆಟ್ ಟಿಪ್ಪಣಿಗಳನ್ನು ಉಲ್ಲೇಖಿಸುತ್ತಿದ್ದೇನೆ ಎಂದಿದ್ದಾರೆ ಚೌಹಾಣ್.

ಸ್ವಾಮಿನಾಥನ್ ಸಮಿತಿಯ ಶಿಫಾರಸಿನ ಪ್ರಕಾರ ಕೇಂದ್ರವು ಎಂಎಸ್‌ಪಿಗಳಿಗೆ ಕಾನೂನು ಖಾತರಿ ನೀಡಲು ಹೊರಟಿದೆಯೇ ಎಂದು ಶಾಸಕ ಸುಮನ್ ಅವರ ಪ್ರಶ್ನೆಯಲ್ಲಿ ಕೇಳಿದಾಗ ಸ್ವಾಮಿನಾಥನ್ ವರದಿಯನ್ನು ಚೌಹಾಣ್ ಉಲ್ಲೇಖಿಸಿದ್ದಾರೆ.

ಆದಾಗ್ಯೂ, ಸ್ವಾಮಿನಾಥನ್ ಸಮಿತಿಯು ಎಂಎಸ್‌ಪಿಗಳನ್ನು ಬೆಂಬಲಿಸುವ ಕಾನೂನನ್ನು ಎಂದಿಗೂ ಉಲ್ಲೇಖಿಸಲಿಲ್ಲ. ಆದರೆ ಎಂಎಸ್ ಪಿ ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50% ಹೆಚ್ಚು ಇರಬೇಕು ಎಂದು ಶಿಫಾರಸು ಮಾಡಿದೆ. 2018-19 ರ ಬಜೆಟ್‌ನಲ್ಲಿ, ಮೋದಿ ಸರ್ಕಾರವು ಎಂಎಸ್‌ಪಿ ನಿಗದಿಪಡಿಸುವುದಾಗಿ ಘೋಷಿಸಿತು, ಅಂದರೆ ಕೃಷಿಕರು 50% ಆದಾಯವನ್ನು ಪಡೆಯುತ್ತಾರೆ.

ಇದನ್ನೂ ಓದಿ: ಯುಪಿ ಉಪಮುಖ್ಯಮಂತ್ರಿ ಕೇಶವ್ ಮೌರ್ಯ ‘ದಾಳ’: ಅಖಿಲೇಶ್ ಯಾದವ್

ಸಚಿವರು ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸುವ ಬದಲು ವಿಷಯಾಂತರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರತಿಭಟಿಸಿದ್ದಾರೆ. “ಎಂಎಸ್‌ಪಿ ಸಮಿತಿಗಾಗಿ ನೀವು ಎಷ್ಟು ದಿನ ಕಾಯುತ್ತೀರಿ? ನೀವು ಕಾನೂನು ಖಾತರಿ ನೀಡುತ್ತೀರಾ ಅಥವಾ ಇಲ್ಲವೇ? ಎಂದು ಸುಮನ್ ಕೇಳಿದಾಗ ಕೇಂದ್ರ ಸಚಿವರು, “ರೈತರು ನಮಗೆ ದೇವರಿದ್ದಂತೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ನಮ್ಮ ಸರ್ಕಾರವು ಕೃಷಿ ಆದಾಯವನ್ನು ಸುಧಾರಿಸಲು ಮತ್ತು ಅವುಗಳನ್ನು ದ್ವಿಗುಣಗೊಳಿಸಲು ಪ್ರಯತ್ನಿಸುತ್ತದೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್