Atiq Ahmed Case: ಅತೀಕ್ ಅಹ್ಮದ್ ಆರೋಪಿಯಾಗಿರುವ ಅಪಹರಣ ಪ್ರಕರಣದ ತೀರ್ಪು ಇಂದು ಪ್ರಕಟ

ಉತ್ತರ ಪ್ರದೇಶ ಪೊಲೀಸರ ಪ್ರಕಾರ ಮಾಜಿ ಮಾಫಿಯಾ ಸದಸ್ಯ, ಈಗ ರಾಜಕಾರಣಿಯಾಗಿರುವ ಅತೀಕ್ ಅಹ್ಮದ್ ತನ್ನ ಕುಟುಂಬದ ವಿರುದ್ಧ 160 ಕ್ಕೂ ಹೆಚ್ಚು ಕ್ರಿಮಿನಲ್ ದೂರುಗಳನ್ನು ದಾಖಲಿಸಿದ್ದಾರೆ.

Atiq Ahmed Case: ಅತೀಕ್ ಅಹ್ಮದ್ ಆರೋಪಿಯಾಗಿರುವ ಅಪಹರಣ ಪ್ರಕರಣದ ತೀರ್ಪು ಇಂದು ಪ್ರಕಟ
ಅತೀಕ್ ಅಹ್ಮದ್
Follow us
|

Updated on: Mar 28, 2023 | 8:00 AM

ಸಮಾಜವಾದಿ ಪಕ್ಷದ ಮಾಜಿ ಶಾಸಕ ಮತ್ತು ಸಂಸದ ಅತೀಕ್ ಅಹ್ಮದ್(Atiq Ahmed), ಗ್ಯಾಂಗ್​​ಸ್ಟರ್ ಆಗಿದ್ದು ನಂತರ ರಾಜಕೀಯ ಪ್ರವೇಶಿಸಿದ್ದರು. ಆಗಸ್ಟ್ 10, 1962 ರಂದು ಜನಿಸಿದ ಅತೀಕ್ ಅಲಹಾಬಾದ್ ಪಶ್ಚಿಮ ಕ್ಷೇತ್ರದಿಂದ ಸತತ ಐದು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವುದು ದಾಖಲೆಯಾಗಿದೆ. ಅವರನ್ನು ಉತ್ತರ ಪ್ರದೇಶದ (Uttar pradesh) ಪ್ರಯಾಗ್‌ರಾಜ್ ಜೈಲಿಗೆ ಸ್ಥಳಾಂತರಿಸಿದ ನಂತರ ಅವರು ಪ್ರಸ್ತುತ ಸುದ್ದಿಯಲ್ಲಿದ್ದಾರೆ.ಅಪಹರಣ ಪ್ರಕರಣ ಮತ್ತು ಉಮೇಶ್ ಪಾಲ್ ಹತ್ಯೆಗೆ (Umesh Pal Murder) ಸಂಬಂಧಿಸಿದಂತೆ ಅತೀಕ್ ಅಹ್ಮದ್​​ಗೆ ಉತ್ತರಪ್ರದೇಶದ ಕೋರ್ಟ್ ಮಾರ್ಚ್ 28 ರಂದು (ಇಂದು) ತೀರ್ಪು ಪ್ರಕಟಿಸಲಿದೆ. ಅತೀಕ್ ಅಹ್ಮದ್ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಉತ್ತರಪ್ರದೇಶ ಪ್ರಯಾಗ್‌ರಾಜ್‌ಗೆ ಸ್ಥಳಾಂತರಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಲಾಗಿದೆ. 2005 ರಲ್ಲಿ ಉಮೇಶ್ ಪಾಲ್ ಹತ್ಯೆಯ ಪ್ರಮುಖ ಸಾಕ್ಷಿ ಮತ್ತು ಪ್ರಮುಖ ಆರೋಪಿ ಮಾಫಿಯಾ-ರಾಜಕಾರಣಿ ಅತೀಕ್ ಅಹ್ಮದ್ ಅವರ ಕುಟುಂಬ ಸದಸ್ಯರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಅತೀಕ್ ಅಹ್ಮದ್ ನ್ನು ಬಂಧಿಸಿದ್ದೇಕೆ?

24 ಫೆಬ್ರವರಿ 2023 ರಂದು ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ  ಅತೀಕ್ ಅಹ್ಮದ್ ಮತ್ತು ಅವರ ಗ್ಯಾಂಗ್ ಅನ್ನು ಬಂಧಿಸಲಾಯಿತು. ಉಮೇಶ್ ಪಾಲ್ ಐದು ಅವಧಿಯ ಸಂಸದರಾಗಿದ್ದರು, ಅವರು 2004 ಮತ್ತು 2009 ರ ನಡುವೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಪಕ್ಷವಾದ ಅಪ್ನಾ ದಳ ಮತ್ತು ಸಮಾಜವಾದಿ ಪಕ್ಷದಲ್ಲಿದ್ದರು. ಹತ್ಯೆ ಮತ್ತು ಅಪಹರಣಗಳಂತಹ ಹಲವಾರು ಅಪರಾಧಗಳಲ್ಲಿ ಭಾಗವಹಿಸಿದ ಆರೋಪವೂ ಇವರ ಮೇಲಿದೆ.

ರಾಜುಪಾಲ್ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಉಮೇಶ್ ಪಾಲ್​​ಗೆ ಅತೀಕ್  ಅಹ್ಮದ್ ಗ್ಯಾಂಗ್​​ನಿಂದ ಬೆದರಿಕೆ ಇತ್ತು. ಉಮೇಶ್ ಪಾಲ್ ಅವರ ಹಳೆಯ ಸ್ನೇಹಿತ ಮತ್ತು ನೆರೆಹೊರೆಯವರಾದ ಮೊಹಮ್ಮದ್ ಸಜರ್ ಅವರು ಅತೀಕ್ ಅಹ್ಮದ್ ಗ್ಯಾಂಗ್‌ಗೆ ಮಾಹಿತಿದಾರನಾಗಿದ್ದು ಇದರಿಂದ ಉಮೇಶ್ ಪಾಲ್ ಮೇಲೆ ಕಣ್ಣಿಡಲಾಗಿತ್ತು.

ಅತೀಕ್ ಅಹ್ಮದ್​​ನ್ನು ಪ್ರಯಾಗ್​​ರಾಜ್ ಜೈಲಿಗೆ ಸ್ಥಳಾಂತರಿಸಿದ್ದೇಕೆ?

ಉಮೇಶ್ ಪಾಲ್ ಪ್ರಕರಣದ ಎಲ್ಲಾ ಆರೋಪಿಗಳು ಮಾರ್ಚ್ 28 ರಂದು ತನ್ನ ಮುಂದೆ ಹಾಜರಾಗುವಂತೆ ಪ್ರಯಾಗ್ ರಾಜ್ ಕೋರ್ಟ್ ಆದೇಶ ನೀಡಿತು. ಆ ಸಮಯದಲ್ಲಿ ನ್ಯಾಯಾಲಯವು ಬಹುಶಃ 2007 ರ ಉಮೇಶ್ ಪಾಲ್ ಅಪಹರಣ ಪ್ರಕರಣದ ತೀರ್ಪು ಕೂಡಾ ನೀಡಬಹುದು. ಪ್ರಕರಣದಲ್ಲಿ ಆರೋಪಿಯಾಗಿರುವ ಹತ್ತು ಜನರ ಪೈಕಿ ಅತೀಕ್ ಅಹ್ಮದ್ ಅವರ ಸಹೋದರರಲ್ಲಿ ಒಬ್ಬರಾದ ಅಶ್ರಫ್ ಕೂಡ ಇದ್ದಾನೆ.

ಇದನ್ನೂ ಓದಿ: Atiq Ahmed: ಗ್ಯಾಂಗ್​​ಸ್ಟರ್ ಅತೀಕ್ ಅಹಮದ್‌ನ್ನು ಪ್ರಯಾಗ್‌ರಾಜ್‌ಗೆ ಕರೆತರುತ್ತಿದ್ದಾಗ ಬೆಂಗಾವಲು ವಾಹನಕ್ಕೆ ಹಸು ಡಿಕ್ಕಿ

ಯಾರು ಈ ಅತೀಕ್ ಅಹ್ಮದ್, ಈತನ ಹಿನ್ನಲೆಯೇನು?

ಉತ್ತರ ಪ್ರದೇಶ ಪೊಲೀಸರ ಪ್ರಕಾರ ಮಾಜಿ ಮಾಫಿಯಾ ಸದಸ್ಯ, ಈಗ ರಾಜಕಾರಣಿಯಾಗಿರುವ ಅತೀಕ್ ಅಹ್ಮದ್ ತನ್ನ ಕುಟುಂಬದ ವಿರುದ್ಧ 160 ಕ್ಕೂ ಹೆಚ್ಚು ಕ್ರಿಮಿನಲ್ ದೂರುಗಳನ್ನು ದಾಖಲಿಸಿದ್ದಾರೆ. ಅತೀಕ್ 100 ಪ್ರಕರಣಗಳಲ್ಲಿ ಹೆಸರಿಸಲಾಗಿದ್ದು, ಅವರ ಸಹೋದರ ಅಶ್ರಫ್ ವಿರುದ್ಧ 52 ಪ್ರಕರಣಗಳು, ಅವರ ಪತ್ನಿ ಶೈಸ್ತಾ ಪ್ರವೀಣ್ ವಿರುದ್ಧ ಮೂರು ಪ್ರಕರಣಗಳು ಮತ್ತು ಅವರ ಮಕ್ಕಳಾದ ಅಲಿ ಮತ್ತು ಉಮರ್ ಅಹ್ಮದ್ ವಿರುದ್ಧ ತಲಾ ನಾಲ್ಕು ಮತ್ತು ಒಂದು ಪ್ರಕರಣಗಳು ದಾಖಲಾಗಿವೆ.

ಅತೀಕ್ ಮತ್ತು ಅವರ ಕುಟುಂಬದ 11,684 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಅವರ 54 ಪ್ರಕರಣಗಳು ಪ್ರಸ್ತುತ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ. ಮಾಫಿಯಾಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ನಡೆಸುತ್ತಿರುವ ಪ್ರಯತ್ನದ ಫಲವಾಗಿ ಅತೀಕ್ ಮತ್ತು ಸಹೋದ್ಯೋಗಿಗಳು ವಾರ್ಷಿಕ 1,200 ಕೋಟಿ ರೂ. ಕಳೆದುಕೊಂಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು