AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vehicle Scrappage Policy: ವಾಹನಗಳ ‘ಗುಜರಿ’ ನೀತಿ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು

ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರ ಲೋಕಸಭೆಯಲ್ಲಿ ಗುಜರಿ ನೀತಿ ಘೋಷಣೆ ಮಾಡಿದ್ದಾರೆ. ಇದರಿಂದ ಎಲ್ಲ ವರ್ಗದ ಮೇಲೂ ಪರಿಣಾಮ ಆಗುತ್ತದೆ. ಏನಿದು ಹೊಸ ನೀತಿ, ನಿಯಮ ಎಂಬುದನ್ನು ತಿಳಿದುಕೊಳ್ಳಿ.

Vehicle Scrappage Policy: ವಾಹನಗಳ 'ಗುಜರಿ' ನೀತಿ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು
ಸಾಂದರ್ಭಿಕ ಚಿತ್ರ
Srinivas Mata
| Edited By: |

Updated on:Mar 19, 2021 | 1:21 PM

Share

ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರದಂದು ಲೋಕಸಭೆಯಲ್ಲಿ ವಾಹನಗಳ ಗುಜರಿ ನೀತಿ ಘೋಷಣೆ ಮಾಡಿದ್ದಾರೆ. ಇದು ಬಹು ನಿರೀಕ್ಷಿತವಾದ ನೀತಿಯಾಗಿದ್ದು. ಇದರ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

– ನಿಮ್ಮ ಬಳಿ ಇರುವ 15 ವರ್ಷ ಪೂರ್ಣಗೊಳಿಸಿದ ವಾಣಿಜ್ಯ (ಕಮರ್ಷಿಯಲ್) ವಾಹನಗಳಿಗೆ ಫಿಟ್​ನೆಸ್ ಪ್ರಮಾಣಪತ್ರ ಇಲ್ಲ ಎಂದಾದಲ್ಲಿ ನೋಂದಣಿ ತಾನಾಗಿಯೇ ರದ್ದಾಗುತ್ತದೆ. – ಇನ್ನು ಖಾಸಗಿ ವಾಹನಗಳ ನೋಂದಣಿ 20 ವರ್ಷಗಳ ಅವಧಿಗೆ ಆಗಿರುತ್ತದೆ. ಆ ನಂತರ ರಿನೀವಲ್​ಗೆ (ನವೀಕರಣಕ್ಕೆ) ಫಿಟ್​ನೆಸ್ ಪ್ರಮಾಣಪತ್ರ ಒದಗಿಸಬೇಕು. – ನೋಂದಾಯಿತ ಕೇಂದ್ರಗಳ ಮೂಲಕವಾಗಿ ಹಳೇ ವಾಹನಗಳನ್ನು ಸ್ಕ್ರಾಪ್ ಮಾಡುವ ಮಾಲೀಕರಿಗೆ ಪ್ರೋತ್ಸಾಹಧನ ನೀಡುವುದಕ್ಕೆ ಸರ್ಕಾರ ಯೋಜನೆ ರೂಪಿಸುತ್ತಿದೆ. – ಗುಜರಿ ನೀತಿ ರೂಪಿಸಿರುವ ಕಾರಣ ಏನೆಂದರೆ, ಮಾಲಿನ್ಯ ಕಡಿಮೆ ಮಾಡಬಹುದು, ನೋಂದಾಯಿತ ಗುಜರಿ ಕೇಂದ್ರಗಳ ಮೂಲಕವಾಗಿ ಉದ್ಯೋಗ ಸೃಷ್ಟಿಸಬಹುದು, ಹೊಸ ವಾಹನಗಳಿಗೆ ಬೇಡಿಕೆ ಸೃಷ್ಟಿಸಬಹುದು. – ಹೊಸ ಗುಜರಿ ನೀತಿಯ ಮೂಲಕವಾಗಿ 10,000 ಕೋಟಿ ರೂಪಾಯಿ ಹೊಸ ಬಂಡವಾಳ ಹರಿದು ಬರುವ ಹಾಗೂ 35000 ಉದ್ಯೋಗ ಸೃಷ್ಟಿಯಾಗುವ ಅಂದಾಜಿದೆ. – ಗುಜರಿ ಕೇಂದ್ರಗಳಿಂದ ಹಳೇ ವಾಹನಗಳಿಗೆ ಗುಜರಿ ಮೌಲ್ಯದ ಲೆಕ್ಕಾಚಾರದಲ್ಲಿ ಪ್ರೋತ್ಸಾಹಧನ ಎಂದು ನೀಡಲಾಗುತ್ತದೆ. ಅದು ಹೊಸ ವಾಹನದ ಬೆಲೆಯ ಶೇಕಡಾ 4ರಿಂದ 6ರಷ್ಟಾಗಿರುತ್ತದೆ. ಇನ್ನು ರಸ್ತೆ ತೆರಿಗೆ ಮೇಲೆ ವೈಯಕ್ತಿಕ ವಾಹನಗಳಿಗೆ ಶೇಕಡಾ 25ರ ತನಕ ಹಾಗೂ ವಾಣಿಜ್ಯ ವಾಹನಗಳಿಗೆ ಶೇ 15ರಷ್ಟು ವಿನಾಯಿತಿ ಮತ್ತು ಗುಜರಿ ಪ್ರಮಾಣಪತ್ರದ ಮೇಲೆ ಶೇ 5ರಷ್ಟು ರಿಯಾಯಿತಿ ಸಿಗಲಿದೆ. – ಫಿಟ್​ನೆಸ್ ಪರೀಕ್ಷೆ ಮತ್ತು ಗುಜರಿ ಕೇಂದ್ರಗಳು ಈ ವರ್ಷದ ಅಕ್ಟೋಬರ್​ನಿಂದ ಜಾರಿಗೆ ಬರುತ್ತವೆ. ಪಿಎಸ್​ಯು ವಾಹನಗಳು 15 ವರ್ಷಕ್ಕಿಂತ ಹಳೆಯದಾಗಿದ್ದಲ್ಲಿ ಕಡ್ಡಾಯ ಸ್ಕ್ರಾಪಿಂಗ್ ಏಪ್ರಿಲ್ 1, 2022ರಿಂದ ಜಾರಿಯಾಗುತ್ತದೆ. ಇನ್ನು ಭಾರೀ ವಾಣಿಜ್ಯ ವಾಹನಗಳಿಗೆ ಏಪ್ರಿಲ್ 1, 2023ರಿಂದ ಹಾಗೂ ಇತರ ವಾಹನಗಳಿಗೆ ಏಪ್ರಿಲ್ 1, 2024ರಿಂದ ಫಿಟ್​ನೆಸ್ ಪರೀಕ್ಷೆ ಕಡ್ಡಾಯವಾಗುತ್ತದೆ. ಇದರ ಜತೆಗೆ ಹಳೇ ವಾಹನಗಳಿಗೆ ಫಿಟ್​ನೆಸ್ ಪ್ರಮಾಣಪತ್ರ ಪಡೆಯುವುದಕ್ಕೆ ಶುಲ್ಕ ಹೆಚ್ಚಿಸುವ ಪ್ರಸ್ತಾವ ಕೂಡ ಮಾಡಲಾಗಿದೆ.

ಇದನ್ನೂ ಓದಿ: ದೋಷಪೂರಿತ ವಾಹನ ತಯಾರಿಸಿದ ಕಂಪೆನಿಗಳಿಗೆ ಬೀಳಲಿದೆ ಭಾರೀ ಜುಲ್ಮಾನೆ

Published On - 12:03 pm, Fri, 19 March 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ