AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಹೇಳಿದ್ದೆಲ್ಲ ಸುಳ್ಳು.. ಪ್ರತಿಭಟನಾಕಾರರು ನನಗೆ ಹೊಡೆದು, ಬಲವಂತವಾಗಿ ಹೀಗೆ ಹೇಳಿಸಿದರು.. ಪೊಲೀಸರೆದುರು ಆರೋಪಿ ಉಲ್ಟಾ ಹೇಳಿಕೆ

ನವದೆಹಲಿ: ನಿನ್ನೆ ತಡರಾತ್ರಿ ಮುಖವನ್ನೆಲ್ಲ ಮುಚ್ಚಿಕೊಂಡ ವ್ಯಕ್ತಿಯೋರ್ವನನ್ನು ಕೂರಿಸಿಕೊಂಡು ಸಿಂಘು ಗಡಿಯಲ್ಲಿನ ಪ್ರತಿಭಟನಾ ನಿರತ ರೈತರು ಸುದ್ದಿಗೋಷ್ಠಿ ನಡೆಸಿದ್ದರು. ಜ. 26ರಂದು ಟ್ರ್ಯಾಕ್ಟರ್ ಱಲಿಯ ದಿನ ಈ ವ್ಯಕ್ತಿ ಹಾಗೂ ಇವರೊಂದಿಗೆ ಇನ್ನೂ 9 ಜನರು ಸೇರಿ ಹಿಂಸಾಚಾರ ನಡೆಸುವ ಪಿತೂರಿ ನಡೆಸಿದ್ದರು. ಅಲ್ಲದೆ, ನಾಲ್ವರು ರೈತ ಮುಖಂಡರ ಹತ್ಯೆಗೂ ಸಂಚು ರೂಪಿಸಿದ್ದರು ಎಂದು ಅವರು ಆರೋಪಿಸಿದ್ದರು. ಹಾಗೇ, ಸಿಕ್ಕಿಬಿದ್ದಿದ್ದಾನೆ ಎನ್ನಲಾದ ವ್ಯಕ್ತಿಯೂ ಸಹ, ನಮಗೆ ಹಿಂಸಾಚಾರ ನಡೆಸುವಂತೆ ಹೇಳಿದ್ದು ಪೊಲೀಸ್​. ಹಣಕ್ಕಾಗಿ ಈ ಕೆಲಸ ಮಾಡಲು […]

ನಾನು ಹೇಳಿದ್ದೆಲ್ಲ ಸುಳ್ಳು.. ಪ್ರತಿಭಟನಾಕಾರರು ನನಗೆ ಹೊಡೆದು, ಬಲವಂತವಾಗಿ ಹೀಗೆ ಹೇಳಿಸಿದರು.. ಪೊಲೀಸರೆದುರು ಆರೋಪಿ ಉಲ್ಟಾ ಹೇಳಿಕೆ
ಸಂಚು ರೂಪಿಸಿದ್ದನ್ನು ಒಪ್ಪಿಕೊಂಡು ಈಗ ಉಲ್ಟಾ ಹೊಡೆದ ವ್ಯಕ್ತಿ
Lakshmi Hegde
|

Updated on:Jan 23, 2021 | 5:25 PM

Share

ನವದೆಹಲಿ: ನಿನ್ನೆ ತಡರಾತ್ರಿ ಮುಖವನ್ನೆಲ್ಲ ಮುಚ್ಚಿಕೊಂಡ ವ್ಯಕ್ತಿಯೋರ್ವನನ್ನು ಕೂರಿಸಿಕೊಂಡು ಸಿಂಘು ಗಡಿಯಲ್ಲಿನ ಪ್ರತಿಭಟನಾ ನಿರತ ರೈತರು ಸುದ್ದಿಗೋಷ್ಠಿ ನಡೆಸಿದ್ದರು. ಜ. 26ರಂದು ಟ್ರ್ಯಾಕ್ಟರ್ ಱಲಿಯ ದಿನ ಈ ವ್ಯಕ್ತಿ ಹಾಗೂ ಇವರೊಂದಿಗೆ ಇನ್ನೂ 9 ಜನರು ಸೇರಿ ಹಿಂಸಾಚಾರ ನಡೆಸುವ ಪಿತೂರಿ ನಡೆಸಿದ್ದರು. ಅಲ್ಲದೆ, ನಾಲ್ವರು ರೈತ ಮುಖಂಡರ ಹತ್ಯೆಗೂ ಸಂಚು ರೂಪಿಸಿದ್ದರು ಎಂದು ಅವರು ಆರೋಪಿಸಿದ್ದರು.

ಹಾಗೇ, ಸಿಕ್ಕಿಬಿದ್ದಿದ್ದಾನೆ ಎನ್ನಲಾದ ವ್ಯಕ್ತಿಯೂ ಸಹ, ನಮಗೆ ಹಿಂಸಾಚಾರ ನಡೆಸುವಂತೆ ಹೇಳಿದ್ದು ಪೊಲೀಸ್​. ಹಣಕ್ಕಾಗಿ ಈ ಕೆಲಸ ಮಾಡಲು ಒಪ್ಪಿಕೊಂಡಿದ್ದೇವೆ. ನಾವ್ಯಾರನ್ನು ಹತ್ಯೆ ಮಾಡಬೇಕೋ, ಆ ರೈತ ಮುಖಂಡರ ಫೋಟೋ ಕೂಡ ಇಟ್ಟುಕೊಂಡಿದ್ದೇವೆ ಎಂದಿದ್ದ. ಅದಾದ ಬಳಿಕ ಆತನನ್ನು ಪೊಲೀಸರ ವಶಕ್ಕೆ ನೀಡಲಾಗಿತ್ತು.

ಆದರೆ ಈಗ ಆತ ಉಲ್ಟಾ ಹೊಡೆದಿದ್ದಾನೆ. ವ್ಯಕ್ತಿಯನ್ನು ಯೋಗೇಶ್​ (19) ಎಂದು ಗುರುತಿಸಲಾಗಿದ್ದು, ಸೋನಿಪತ್​ ನಿವಾಸಿಯಾಗಿದ್ದಾನೆ. ಹರ್ಯಾಣ ಪೊಲೀಸರ ಬಳಿ ತಾನು ಹೇಳಿದ್ದೆಲ್ಲ ಸುಳ್ಳು. ನಾವು ಹಿಂಸಾಚಾರ ನಡೆಸಲು ಯಾವುದೇ ಸಂಚು ರೂಪಿಸಿರಲಿಲ್ಲ ಎಂದಿದ್ದಾನೆ. ಅಷ್ಟೇ ಅಲ್ಲ, ರೈತರು ನನ್ನನ್ನು ಅಪಹರಿಸಿ, ಈ ಸುಳ್ಳುಗಳನ್ನು ಬಲವಂತವಾಗಿ ಹೇಳಿಸಿದ್ದಾರೆ ಎಂಬುದನ್ನೂ ತಿಳಿಸಿದ್ದಾನೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲವರು ನನ್ನನ್ನು ಮನಬಂದಂತೆ ಥಳಿಸಿದರು. ಮೈ ಕಪ್ಪಾಗುವಷ್ಟು ಹೊಡೆದ ಬಳಿಕ, ಬಲವಂತದಿಂದ ಮದ್ಯ ಕುಡಿಸಿದರು. ನಾವು ನಿನ್ನನ್ನು ಕೊಂದು ಹಾಕಿದರೂ, ಅದು ಹೊರಗಿನ ಯಾರಿಗೂ ಗೊತ್ತಾಗುವುದಿಲ್ಲ ಎಂದು ಬೆದರಿಸಿದರು ಎಂದು ಯೋಗೇಶ್​ ಹರ್ಯಾಣ ಪೊಲೀಸರಿಗೆ ಹೇಳಿದ್ದಾಗಿ ವರದಿಯಾಗಿದೆ.

ರೈತ ಮುಖಂಡರಾದ ಬಲ್​ಬೀರ್​ ಸಿಂಗ್ ರಾಜೇವಾಲ್​, ಬಲದೇವ್​ ಸಿಂಗ್ ಸಿರ್ಸಾ, ಕುಲದೀಪ್​ ಸಂಧು ಮತ್ತು ಜಗಜೀತ್​ ಸಿಂಗ್​​ರ ಫೋಟೋ ಇದ್ದ ಈತನ ಮೊಬೈಲ್​ನ್ನೂ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜ. 26ರಂದು 4 ರೈತ ಮುಖಂಡರ ಹತ್ಯೆಗೆ ಸಂಚು.. ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಪ್ರತಿಭಟನಾ ರೈತರು

Published On - 5:24 pm, Sat, 23 January 21

ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು