ಟಿಪ್ಪು ಸುಲ್ತಾನ್ ಬಗ್ಗೆ ನಮಗೆ ಗೊತ್ತಿದೆ, ಬಿಜೆಪಿಯಿಂದ ಕಲಿಯಬೇಕಾಗಿಲ್ಲ: ಸಂಜಯ್ ರಾವತ್

| Updated By: ರಶ್ಮಿ ಕಲ್ಲಕಟ್ಟ

Updated on: Jan 27, 2022 | 12:24 PM

ರಾಜ್ಯ ಸರ್ಕಾರವು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹೊಸ ಇತಿಹಾಸ ಬರೆಯಬೇಡಿ. ನೀವು ದೆಹಲಿಯಲ್ಲಿ ಇತಿಹಾಸವನ್ನು ಬದಲಾಯಿಸುವ ಪ್ರಯತ್ನವನ್ನು ಮುಂದುವರಿಸಬಹುದು ಆದರೆ ನೀವು ಯಶಸ್ವಿಯಾಗುವುದಿಲ್ಲ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಟಿಪ್ಪು ಸುಲ್ತಾನ್ ಬಗ್ಗೆ ನಮಗೆ ಗೊತ್ತಿದೆ, ಬಿಜೆಪಿಯಿಂದ ಕಲಿಯಬೇಕಾಗಿಲ್ಲ: ಸಂಜಯ್ ರಾವತ್
ಸಂಜಯ್ ರಾವತ್
Follow us on

18ನೇ ಶತಮಾನದ ಮೈಸೂರು ರಾಜ  ಟಿಪ್ಪು ಸುಲ್ತಾನ್ (Tipu Sultan) ಅವರ ಹೆಸರನ್ನು ಮುಂಬೈನಲ್ಲಿ ನವೀಕರಿಸಿದ ಕ್ರೀಡಾ ಸಂಕೀರ್ಣಕ್ಕೆ ಮರುನಾಮಕರಣ ಮಾಡುವ ಕ್ರಮದ ವಿರುದ್ಧ ಬಿಜೆಪಿ ಮತ್ತು ಬಜರಂಗದಳದ ಪ್ರತಿಭಟನೆಯ ನಡೆಸಿದೆ. ಇದಕ್ಕೆ ಗುರುವಾರ ಪ್ರತಿಕ್ರಿಯಿಸಿದ ಶಿವಸೇನಾ ಸಂಸದ ಸಂಜಯ್ ರಾವತ್ (Sanjay Raut) ಅವರಿಗೆ ಮಾತ್ರ ಇತಿಹಾಸದ ಜ್ಞಾನವನ್ನು ಇದೆ ಎಂದು ಬಿಜೆಪಿ ಭಾವಿಸುತ್ತದೆ. ಎಲ್ಲರೂ ಹೊಸ ಇತಿಹಾಸ ಬರೆಯಲು ಕುಳಿತಿದ್ದಾರೆ, ಇತಿಹಾಸವನ್ನು ಬದಲಾಯಿಸಲು ಈ ಇತಿಹಾಸಕಾರರು ಬಂದಿದ್ದಾರೆ. ಟಿಪ್ಪು ಸುಲ್ತಾನ್ ಬಗ್ಗೆ ನಮಗೆ ತಿಳಿದಿದೆ, ಬಿಜೆಪಿಯಿಂದ ಕಲಿಯಬೇಕಾಗಿಲ್ಲ ಎಂದು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ರಾವತ್ ಹೇಳಿದ್ದಾರೆ. ಅದಕ್ಕೆ ಟಿಪ್ಪು ಎಂದು ಹೆಸರಿಟ್ಟರೆ ನಾವು ಅದನ್ನು ಮಾಡುತ್ತೇವೆ ಇದನ್ನು ಮಾಡುತ್ತೇವೆ ಎಂದು ಅವರು ಹೇಳುತ್ತಾರೆ. ಅದನ್ನು ಅವರು ಬಿಡಬೇಕು, ಅದು ಅವರಿಗೆ ಸರಿ ಹೊಂದುವುದಿಲ್ಲ. ರಾಜ್ಯ ಸರ್ಕಾರವು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹೊಸ ಇತಿಹಾಸ ಬರೆಯಬೇಡಿ. ನೀವು ದೆಹಲಿಯಲ್ಲಿ ಇತಿಹಾಸವನ್ನು ಬದಲಾಯಿಸುವ ಪ್ರಯತ್ನವನ್ನು ಮುಂದುವರಿಸಬಹುದು ಆದರೆ ನೀವು ಯಶಸ್ವಿಯಾಗುವುದಿಲ್ಲ ಎಂದು ಸಂಜಯ್ ರಾವತ್ ಹೇಳಿದ್ದಾರೆ. ರಾಷ್ಟ್ರಪತಿ ಕೋವಿಂದ್ ಅವರು ಕರ್ನಾಟಕಕ್ಕೆ ತೆರಳಿ ಟಿಪ್ಪು ಸುಲ್ತಾನ್ ಒಬ್ಬ ಐತಿಹಾಸಿಕ ಯೋಧ, ಸ್ವಾತಂತ್ರ್ಯ ಹೋರಾಟಗಾರ ಎಂದು ಹೊಗಳಿದ್ದರು. ಹಾಗಾದರೆ ಅಧ್ಯಕ್ಷರ ರಾಜೀನಾಮೆಯನ್ನೂ ಕೇಳುತ್ತೀರಾ? ಈ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕು. ಇದು ನಾಟಕ ಎಂದಿದ್ದಾರೆ  ರಾವತ್.

ಏನಿದು ವಿವಾದ?

ಮುಂಬೈ ಗಾರ್ಡಿಯನ್ ಸಚಿವ ಅಸ್ಲಾಂ ಶೇಖ್ ಅನುದಾನದಲ್ಲಿ ಮಲ್ವಾನಿಯಲ್ಲಿ ನವೀಕರಿಸಿದ ಕ್ರೀಡಾ ಸಂಕೀರ್ಣವನ್ನು ಉದ್ಘಾಟಿಸಿದ ನಂತರ ಬಿಜೆಪಿ ಮತ್ತು ಬಜರಂಗದಳ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಕ್ರೀಡಾ ಸಂಕೀರ್ಣಕ್ಕೆ ಮೈಸೂರು ರಾಜ ಟಿಪ್ಪು ಸುಲ್ತಾನ್ ಹೆಸರು ಮರುನಾಮಕರಣ ವಿರೋಧಿಸಿ ಈ ಪ್ರತಿಭಟನೆ ನಡೆದಿದೆ.

ಆದಾಗ್ಯೂ, ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಆದಿತ್ಯ ಠಾಕ್ರೆ ಅವರು, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಉದ್ಯಾನವನ್ನು ಟಿಪ್ಪು ಸುಲ್ತಾನ್ ಹೆಸರನ್ನು ಮರುನಾಮಕರಣ ಮಾಡುವ ಯಾವುದೇ ಪ್ರಸ್ತಾವನೆಯನ್ನು ಅಂಗೀಕರಿಸಿಲ್ಲ ಎಂದು ಹೇಳಿದ್ದಾರೆ.

“ಯಾವುದೇ ಮರುನಾಮಕರಣ ನಡೆದಿಲ್ಲ. ಬಿಎಂಸಿ ಈ ವಿಷಯಗಳ ಬಗ್ಗೆ ಅಧಿಕಾರವನ್ನು ಹೊಂದಿದೆ ಮತ್ತು ಬಿಎಂಸಿ ಮುಂದೆ ಮರುನಾಮಕರಣದ ಯಾವುದೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿಲ್ಲ ಎಂದು ನಾವು ಹೇಳುತ್ತಿದ್ದೇವೆ” ಎಂದು ಅವರು ಹೇಳಿದರು. ಮಲಾಡ್ ಪಶ್ಚಿಮದಲ್ಲಿರುವ ಮಾಲ್ವಾನಿಯಲ್ಲಿರುವ ಈ ಸ್ಥಳವು ಟಿಪ್ಪು ಸುಲ್ತಾನ್ ಮೈದಾನ ಎಂದು ಜನಪ್ರಿಯವಾಗಿದೆ.

ಮಲ್ವಾನಿ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ಅಸ್ಲಂ ಶೇಖ್ ಅವರು ತಮ್ಮ ಶಾಸಕರ ಅಭಿವೃದ್ಧಿ ನಿಧಿಯ ಮೂಲಕ ಮೈದಾನದಲ್ಲಿ ನವೀಕರಣ ಮತ್ತು ಸೌಲಭ್ಯಗಳ ವಿಸ್ತರಣೆಯನ್ನು ಕೈಗೊಂಡಿದ್ದರು. ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು, ಅವರು ಬುಧವಾರ ಅದನ್ನು ಉದ್ಘಾಟಿಸಿದ್ದರು.

ಆದರೆ, ಟಿಪ್ಪು ಸುಲ್ತಾನ್ ಹೆಸರನ್ನು ” ಮರುನಾಮಕರಣ ಮಾಡಲು” ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ತನ್ನ ಪ್ರತಿಭಟನೆ ನಡೆಸಿದೆ. “ಹೆಚ್ಚಿನ ಸಂಖ್ಯೆಯ ಹಿಂದೂಗಳ ಸಾವಿಗೆ ಕಾರಣವಾದ ವ್ಯಕ್ತಿಯ ಹೆಸರನ್ನು ಮೈದಾನಕ್ಕೆ ಹೆಸರಿಸಲು ನಾವು ಅನುಮತಿಸುವುದಿಲ್ಲ” ಎಂದು ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಎಂವಿಎ ಸರ್ಕಾರ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ಹೇಳಿದರು. ಇಂತಹ ಕೃತ್ಯವನ್ನು ಬಿಜೆಪಿ ಸಹಿಸುವುದಿಲ್ಲ. ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಪೊಲೀಸ್ ರಕ್ಷಣೆ ನೀಡಿದ ರೀತಿ ದಿಗಿಲು ಹುಟ್ಟಿಸುವಂತಿದೆ. ಆದರೆ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಮತ್ತು ಬಜರಂಗದಳ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ’ ಎಂದು ಹೇಳಿದ್ದಾರೆ.

ಹೆಚ್ಚಿನ ಸಂಖ್ಯೆಯ ಬಿಜೆಪಿ, ವಿಎಚ್‌ಪಿ ಮತ್ತು ಬಜರಂಗದಳ ಕಾರ್ಯಕರ್ತರು ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಸೌಲಭ್ಯದ ಹೊರಗೆ ಜಮಾಯಿಸಿದರು. ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ಎರಡು ಬಸ್‌ಗಳ ಟೈರ್‌ಗಳನ್ನು ಪಂಕ್ಚರ್ ಮಾಡಿದರು.

ಸಂಸದ ಗೋಪಾಲ್ ಶೆಟ್ಟಿ, ಶಾಸಕ ಮತ್ತು ಉದ್ಯಮಿ ಮಂಗಲ್ ಪ್ರಭಾತ್ ಲೋಧಾ, ಶಾಸಕ ಅತುಲ್ ಭಟ್ಕಳಕರ್ ಮತ್ತು ಬಿಜೆಪಿ ಕಾರ್ಪೊರೇಟರ್‌ಗಳು ರಿದಂತೆ ಬಜರಂಗದಳ ಮತ್ತು ಬಿಜೆಪಿಯ 64 ಜನರ ವಿರುದ್ಧ “ಕಾನೂನುಬಾಹಿರ ಸಭೆ, ಗಲಭೆ, ಅಕ್ರಮ ಸಂಯಮ ಮತ್ತು ಕೊವಿಡ್ -19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ” ಎರಡು ಎಫ್‌ಐಆರ್‌ಗಳನ್ನು ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಅವರು ಎರಡು ಬೆಸ್ಟ್ ಬಸ್‌ಗಳ ಟೈರ್‌ಗಳನ್ನು ಪಂಕ್ಚರ್ ಮಾಡಿದರು ಮತ್ತು ರಸ್ತೆಯನ್ನು ತಡೆದು ಚಾರ್ಕೋಪ್ ಜಂಕ್ಷನ್‌ನಲ್ಲಿ ಜನರಿಗೆ ತೊಂದರೆ ಉಂಟುಮಾಡಿದರು. ಪ್ರತಿಭಟನಾಕಾರರನ್ನು ಬಂಧಿಸಲಾಯಿತು. ಅವರಿಗೆ ನೋಟಿಸ್ ನೀಡಿ ಅಲ್ಲಿಂದ ತೆರಳಲು ಅವಕಾಶ ನೀಡಲಾಯಿತು. ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಪ್ರತಿಭಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ದಿ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಂಬೈ ಬಿಜೆಪಿ ಅಧ್ಯಕ್ಷ ಮಂಗಲ್ ಪ್ರಭಾತ್ ಲೋಧಾ, ಇದು ಮುಸ್ಲಿಂ ಓಲೈಕೆಯಲ್ಲದೆ ಬೇರೇನೂ ಅಲ್ಲ. ಸಾರ್ವಜನಿಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾ ಸಂಕೀರ್ಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಅವಕಾಶ ನೀಡಬಾರದು ಎಂದು ನಾವು ರಾಜ್ಯ ಸರ್ಕಾರವನ್ನು ಪದೇ ಪದೇ ಒತ್ತಾಯಿಸುತ್ತಿದ್ದೇವೆ. ಅವರು ಬೇರೆ ಹೆಸರನ್ನು ಏಕೆ ಯೋಚಿಸುವುದಿಲ್ಲ? ”

ಇದು ಹಿಂದೂಗಳನ್ನು ಮಾಲ್ವಾನಿಯಿಂದ ಓಡಿಸುವ ತಂತ್ರವಾಗಿದೆ ಎಂದು ಆರೋಪಿಸಿದರು. ಇದು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ. ಈ ಪ್ರದೇಶದಲ್ಲಿ ಹಿಂದೂಗಳ ಜನಸಂಖ್ಯೆಯು ಕುಗ್ಗುತ್ತಿದೆ.
ಏತನ್ಮಧ್ಯೆ, ಈ ಸ್ಥಳವನ್ನು ಈಗಾಗಲೇ ಟಿಪ್ಪು ಸುಲ್ತಾನ್ ಮೈದಾನ ಎಂದು ಕರೆಯಲಾಗುತ್ತದೆ ಮತ್ತು ಅದನ್ನು ಮರುನಾಮಕರಣ ಮಾಡುವ ಯಾವುದೇ ಅಧಿಕೃತ ಕ್ರಮವಿಲ್ಲ ಎಂದು ಶೇಖ್ ಹೇಳಿದರು. “ಇದೀಗ ಹಲವು ವರ್ಷಗಳಿಂದ ಟಿಪ್ಪು ಸುಲ್ತಾನ್ ಮೈದಾನ ಎಂದು ಜನಪ್ರಿಯವಾಗಿ ಉಲ್ಲೇಖಿಸಲಾಗಿದೆ. ಈ ಹಿಂದೆ ಕಾರ್ಯಾರಂಭ ಮಾಡಿರುವ ಮತ್ತು ಈಗ ಪೂರ್ಣಗೊಂಡಿರುವ ಹೊಸ ಸೌಲಭ್ಯಗಳ ಉದ್ಘಾಟನೆಗೆ ಮಾತ್ರ ನಾನು ಬಂದಿದ್ದೆ ಎಂದು ಹೇಳಿದ ಅವರು, ”ಬಿಜೆಪಿಯು ಸಮಸ್ಯೆಗೆ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದರು.

ಮೈದಾನಕ್ಕೆ ಟಿಪ್ಪು ಸುಲ್ತಾನ್ ಹೆಸರನ್ನು ಇಡಲು ಬಿಎಂಸಿ ತನ್ನ ಅನುಮೋದನೆಯನ್ನು ನೀಡಿದೆಯೇ ಎಂದು ಕೇಳಿದಾಗ ಈ ಉದ್ಯಾನವನದ ಹೆಸರು ಟಿಪ್ಪು ಸುಲ್ತಾನ್‌ನೊಂದಿಗೆ ಹೇಗೆ ಸಂಬಂಧಿಸಿದೆ ಎಂಬುದರ ಬಗ್ಗೆ ತನಗೆ ತಿಳಿದಿಲ್ಲ ಎಂದು ಶೇಖ್ ಹೇಳಿದ್ದಾರೆ. ಬಿಎಂಸಿ ಒಂದು ನೀತಿಯನ್ನು ಹೊಂದಿದೆ ಅದರ ಪ್ರಕಾರ ಅದು ಜನಪ್ರಿಯ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿರುವ ಸ್ಥಳಗಳ ಹೆಸರನ್ನು ಬದಲಾಯಿಸುವುದಿಲ್ಲ. ಸಾಮಾನ್ಯವಾಗಿ, ಸ್ಥಳೀಯ ನಿವಾಸಿಗಳು ಕೆಲವು ಹಂತದಲ್ಲಿ ಈ ಸ್ಥಳಗಳಿಗೆ ಹೆಸರಿಸಿದ್ದಾರೆ ಎಂದು ಅವರು ಹೇಳಿದರು.

ಈ ಹಿಂದೆ ಬಿಜೆಪಿಯ ಹಲವಾರು ಕಾರ್ಪೊರೇಟರ್‌ಗಳು ಟಿಪ್ಪು ಸುಲ್ತಾನ್ ಹೆಸರನ್ನು ಸ್ಥಳಗಳಿಗೆ ಹೆಸರಿಸುವುದನ್ನು ಅನುಮೋದಿಸಿ ಪತ್ರಗಳನ್ನು ಬರೆದಿದ್ದಾರೆ. ಏನು ಬದಲಾಗಿದೆ ಎಂದು ನಮಗೆ ಖಚಿತವಿಲ್ಲ. ಟಿಪ್ಪು ಸುಲ್ತಾನ್ ಹೆಸರನ್ನು ಇಡುವುದನ್ನು ಅನುಮೋದಿಸಿದ ತನ್ನ ನಾಯಕನಿಗೆ ಈಗ ರಾಜೀನಾಮೆ ನೀಡುವಂತೆ ಬಿಜೆಪಿ ಕೇಳುತ್ತದೆಯೇ? ಈ ಹಿಂದೆಯೂ ಬಿಜೆಪಿ ಕಾರ್ಪೊರೇಟರ್‌ಗಳು ಸಾರ್ವಜನಿಕ ಸ್ಥಳಗಳಿಗೆ ಟಿಪ್ಪು ಸುಲ್ತಾನ್ ಹೆಸರಿಟ್ಟಿದ್ದರು ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಹೇಳಿದ್ದಾರೆ.

2001ರ ಏಪ್ರಿಲ್‌ನಲ್ಲಿ ಬಿಜೆಪಿಯ ಮಾಜಿ ಕಾರ್ಪೊರೇಟರ್ ವಿಠ್ಠಲ್ ಖರತ್ಮೋಲ್ ಅವರು ಅಂಧೇರಿ ಪಶ್ಚಿಮದಲ್ಲಿರುವ ಭವಾನ್ಸ್ ಕಾಲೇಜಿನಿಂದ ಸಿ ಡಿ ಬರ್ಫಿವಾಲಾ ಲೇನ್‌ವರೆಗಿನ ರಸ್ತೆಗೆ ‘ಶೇರ್-ಎ-ಮೈಸೂರು ಟಿಪ್ಪು ಸುಲ್ತಾನ್ ಮಾರ್ಗ’ ಎಂದು ಹೆಸರಿಸುವಂತೆ ಮನವಿ ಮಾಡಿದ್ದರು ಎಂದು ಪೆಡ್ನೇಕರ್ ಹಂಚಿಕೊಂಡ ದಾಖಲೆಗಳು ತೋರಿಸುತ್ತವೆ. ಯಾವುದೇ ವಿರೋಧವಿಲ್ಲದೆ ಪೌರಸಭೆಯಲ್ಲಿ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿತ್ತು.
“ಬಿಜೆಪಿ ಈಗ ಏಕೆ ಮೌನವಾಗಿದೆ? ಈ ಹಿಂದೆ ಎರಡೂ ಪ್ರಸ್ತಾಪಗಳನ್ನು ಪಕ್ಷವು ಮುಂದೆ ಬಂದು ಬೆಂಬಲಿಸಿತ್ತು. ಈಗ ಅವರು ಶಿವಸೇನೆಗೆ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲದಿರುವುದು ಕೂಡ ಇದಕ್ಕೆ ಕಾರಣ’ ಎಂದು ಪೆಡ್ನೇಕರ್ ಆರೋಪಿಸಿದರು.

ಕಳೆದ ವರ್ಷ, ಪೂರ್ವ ಮುಂಬೈನ ಉಪನಗರವಾದ ಗೋವಂಡಿಯಲ್ಲಿರುವ ಉದ್ಯಾನವನಕ್ಕೆ ಟಿಪ್ಪು ಸುಲ್ತಾನ್ ಅವರ ಹೆಸರನ್ನು ಇಡಲು ನಿರ್ಧರಿಸಿದಾಗ ಬಿಜೆಪಿ ಪ್ರತಿಭಟಿಸಿತ್ತು.

ಇದನ್ನೂ ಓದಿ: ಮೊದಲ ಭಾರತ-ಮಧ್ಯ ಏಷ್ಯಾ ಶೃಂಗಸಭೆ ಇಂದು; ವರ್ಚುವಲ್ ಆಗಿ ಸಭೆ ಆಯೋಜಿಸಲಿದ್ದಾರೆ ನರೇಂದ್ರ ಮೋದಿ

Published On - 12:07 pm, Thu, 27 January 22