AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cyclones: ಚಂದದ ಹೆಸರಿಟ್ಟುಕೊಂಡು ಅಪ್ಪಳಿಸುವ ಚಂಡಮಾರುತಗಳಿಗೆ ಹೆಸರಿಡುವವರಾರು? ಆ ಚಂದದ ಹೆಸರುಗಳಾವವು?

Cyclone Name and Origin: ಭಾರತೀಯ ಮೆಟ್ರೊಲಾಜಿಕಲ್​ ಡಿಪಾರ್ಟ್​ಮೆಂಟ್​ (IMD) 169 ಸೈಕ್ಲೋನ್​ಗಳಿಗೆ ವಿವಿಧ ಹೆಸರುಗಳಿಂದ ಗುರುತಿಸುವ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಿಂದ ಬರುವ ಸೈಕ್ಲೋನ್​ಗಳ ಹೆಸರೂ ಕೂಡಾ ಇದೆ.

Cyclones: ಚಂದದ ಹೆಸರಿಟ್ಟುಕೊಂಡು ಅಪ್ಪಳಿಸುವ ಚಂಡಮಾರುತಗಳಿಗೆ ಹೆಸರಿಡುವವರಾರು? ಆ ಚಂದದ ಹೆಸರುಗಳಾವವು?
ಚಂಡಮಾರುತ (ಸಂಗ್ರಹ ಚಿತ್ರ)
Follow us
shruti hegde
| Updated By: Digi Tech Desk

Updated on:Jan 20, 2023 | 12:49 PM

ಪ್ರತೀ ವರ್ಷ ಒಂದಲ್ಲಾ ಒಂದು ಚಂಡಮಾರುತದ ಅಬ್ಬರದ ಸುದ್ದಿಯನ್ನು ಕೆಳುತ್ತೇವೆ. ಕೆಲವೊಂದು ಅತಿ ಭೀಕರತೆ ಸೃಷ್ಟಿಸಿದ್ದರೂ ಇನ್ನು ಕೆಲವು ಚಿಕ್ಕ-ಪುಟ್ಟ ಚಂಡ ಮಾರುತಗಳು. ವಿವಿಧ ಹೆಸರುಗಳಿಂದ ಅಪ್ಪಳಿಸುವ ಚಂಡಮಾರುತಗಳಿಗೆ ಹೆಸರಿಡುವವರು ಯಾರು? ಎಂಬ ಕುತೂಹಲ ಇದ್ದೇ ಇದೆ ಅಲ್ವೇ?. ಭಾರತೀಯ ಹವಾಮಾನ ಇಲಾಖೆ (IMD) 169 ಸೈಕ್ಲೋನ್​ಗಳಿಗೆ (ಚಂಡಮಾರುತ) ವಿವಿಧ ಹೆಸರುಗಳಿಂದ ಗುರುತಿಸುವ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಿಂದ ಬರುವ ಸೈಕ್ಲೋನ್​ಗಳ ಹೆಸರೂ ಕೂಡಾ ಇದೆ.

ಪ್ರತಿ ಸೈಕ್ಲೋನ್​ಗಳೂ ಕೂಡಾ ಸಮುದ್ರವನ್ನು ದಾಟಿಯೇ ಬರುತ್ತದೆ. ಹೀಗಾಗಿ ಪ್ರಾದೇಶಿಕ ಹವಾಮಾನ ಇಲಾಖೆ (RSMCs), ಉಷ್ಣವಲಯ ಚಂಡಮಾರುತ ಎಚ್ಚರಿಕೆ ಕೆಂದ್ರಗಳು​ (TCWCs), ಭಾರತೀಯ ಹವಾಮಾನ ಇಲಾಖೆ (IMP) ಹಾಗೂ 5 TCWCs ಸೇರಿ ಸೈಕ್ಲೋನ್​ಗಳಿಗೆ ಹೆಸರನ್ನು ಸೂಚಿಸುತ್ತವೆ.

ಹೊರಡಿಸಲಾದ ಸೈಕ್ಲೋನ್​ಗಳ ವಿವಿಧ ಹೆಸರಿನ ಪಟ್ಟಿಯಲ್ಲಿ 13 ದೇಶಗಳಿಂದ ಸಲಹೆಗಳನ್ನು ಪಡೆದುಕೊಂಡಿದ್ದು, ‘ಅಂಫಾನ್​’ ಎಂಬ ಹೊಸ ಸೈಕ್ಲೋನ್​ ಹೆಸರೂ ಕೂಡಾ ಸೇರಿಕೊಂಡಿದೆ. ಈ ಸೈಕ್ಲೋನ್​ ಬಂಗಾಳಕೊಲ್ಲಿಯಿಂದ ಬಂದು ಅಂಡಮಾನ್​ ಸಮುದ್ರಕ್ಕೆ ಸೇರಿಕೊಳ್ಳುತ್ತದೆ.

ನೆನಪಿಟ್ಟಿಕೊಳ್ಳಲು ಸುಲಭವಾಗುವಂತೆ ಸೈಕ್ಲೋನ್​ಗಳಿಗೆ ಹೆಸರನ್ನು ಇಡಲಾಗಿದೆ. ಹಾಗೆಯೇ ಮಾಧ್ಯಮ, ವಿಜ್ಞಾನ- ಸಂಸ್ಥೆಗಳಿಗೂ ವಿವಿಧ ಹೆಸರಿನ ಸೈಕ್ಲೋನ್​ಗಳ ಪಟ್ಟಿ ಸಹಾಕಯವಾಗುತ್ತದೆ. ಒಂದು ಸೈಕ್ಲೋನ್​ ಇದ್ದರೆ ಅದಕ್ಕೆ ಹೆಸರು ನೀಡುವುದು ಸುಲಭ. ಆದರೆ ಅದರ ಜೊತೆಗೆ ಇನ್ನೊಂದು ಸೈಕ್ಲೋನ್​ ಸೇರಿಕೊಂಡರೆ ಅದಕ್ಕೆ ಹೆಸರು ನೀಡಲು ಗೊಂದಲ ಉಂಟಾಗುತ್ತದೆ.

ಹೆಸರಿಡುವುದು ಏಕೆ? ಅಷ್ಟಕ್ಕೂ ಚಂಡಮಾರುತಗಳಿಗೆ ಹೆಸರುಗಳನ್ನು ಏಕೆ ನೀಡಬೆಕು ಎಂಬುದಕ್ಕೆ ಕೆವೊಂದಿಷ್ಟು ಕಾರಣಗಳು ಇವೆ. ಆಯಾ ಪ್ರದೇಶದಲ್ಲಿ ಬೇರೆ ಬೇರೆ ಕಾಲಘಟ್ಟದಲ್ಲಿ ಅಪ್ಪಳಿಸುವ ಚಂಡಮಾರುತಗಳನ್ನು ಗುರುತಿಸಲು ಸುಭವಾಗಬೇಕು. ಆ ನಿರ್ದಿಷ್ಟ ಹೆಸರಿನಿಂದ ಸೂಚಿಸಲಾದ ಚಂಡಮಾರುತದ ಹಾನಿಯ ಕುರಿತಾಗಿ ಜನರಿಗೆ ಸುಲಭದಲ್ಲಿ ಅರ್ಥೈಸಬಹುದು. ಜನರಿಗೆ ವಿವಿಧ ಸೈಕ್ಲೋನ್​ಗಳ ಕುರಿತಾದ ಸಂಪೂರ್ಣ ತಿಳುವಳಿಕೆ ಮತ್ತು ಅರಿವು ಮೂಡಿಸಲು ಬೇರೆ ಬೇರೆ ಹೆಸರುಗಳನ್ನು ಸೂಚಿಸಲಾಗುತ್ತದೆ. ಸೈಕ್ಲೋನ್​ ಹೆಸರಿಸುವುದಕ್ಕೆ ಕೆಲವು ನಿಯಮಗಳಿವೆ. ಅವುಗಳ ಆಧಾರದ ಮೇಲೆ ಸೈಕ್ಲೋನ್​ಗಳಿಗೆ ನಿರ್ದಿಷ್ಟ ಹೆಸರನ್ನು ಸೂಚಿಸಲಾಗುತ್ತದೆ.

ಸೈಕ್ಲೋನ್​ಗಳಿಗೆ ಸೂಚಿಸುವ ಹೆಸರು ರಾಜಕೀಯಕ್ಕೆ ಸಂಬಂಧಿಸಿರಬಾರದು ಯಾವುದೇ ಮತ ಹಾಗೂ ಭಾವನೆಗಳಿಗೆ ಧಕ್ಕೆಯಾಗುವಂತಿರಬಾರದು ಹೆಸರು ಹೇಳಲು ಸುಲಭವಾಗಿರಬೇಕು ಮತ್ತು ಚಿಕ್ಕದಾಗಿರಬೇಕು ಹೆಸರು ಕ್ರೂರತೆಯನ್ನು ಸೂಚಿಸಬಾರದು ಗರಿಷ್ಠ 8 ಅಕ್ಷರಗಳ ಒಳಗಿರಬೇಕು ಒಂದು ಸೈಕ್ಲೋನ್​ಗೆ ಇಟ್ಟ ಹೆಸರು ಪುನರಾವರ್ತನೆಯಾಗಬಾರದು

ಈ ಕುರಿತಂತೆ ಭಾರತವು ಕೆಲವು ಹೆಸರುಗಳನ್ನು ಸೂಚಿಸಿದ್ದು, ವಿವಿಧ ದೇಶಗಳು ವಿವಿಧ ಹೆಸರುಗಳನ್ನು ಸೂಚಿಸಿದೆ.  ಹೆಸರುಗಳನ್ನು ಅಂತಿಮಗೊಳಿಸಲು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸಮಿತಿಯನ್ನು ರಚಿಸಲಾಗುತ್ತದೆ.

Published On - 1:34 pm, Fri, 14 May 21

ರಚಿತಾ ರಾಮ್ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷರು ಗರಂ; ಕಾರಣ ಏನು?
ರಚಿತಾ ರಾಮ್ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷರು ಗರಂ; ಕಾರಣ ಏನು?
ಇಸ್ರೇಲ್‌ನಲ್ಲಿ ಇರಾನಿನ ಕ್ಷಿಪಣಿ ದಾಳಿಯ ಭೀಕರ ದೃಶ್ಯ ಇಲ್ಲಿದೆ
ಇಸ್ರೇಲ್‌ನಲ್ಲಿ ಇರಾನಿನ ಕ್ಷಿಪಣಿ ದಾಳಿಯ ಭೀಕರ ದೃಶ್ಯ ಇಲ್ಲಿದೆ
ಗವಾಸ್ಕರ್ ಎಷ್ಟೇ ಕೇಳಿಕೊಂಡರು ಜಗ್ಗದ ರಿಷಭ್ ಪಂತ್
ಗವಾಸ್ಕರ್ ಎಷ್ಟೇ ಕೇಳಿಕೊಂಡರು ಜಗ್ಗದ ರಿಷಭ್ ಪಂತ್
ಕೃಷ್ಣ ಭೈರೇಗೌಡ, ಹೆಚ್ ಕೆ ಪಾಟೀಲರನ್ನೂ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ
ಕೃಷ್ಣ ಭೈರೇಗೌಡ, ಹೆಚ್ ಕೆ ಪಾಟೀಲರನ್ನೂ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ
ರಾಜಕೀಯ ಪಿತೂರಿ, ಉಳಿದ ಸಂಗತಿಗಳ ಬಗ್ಗೆ ಈಗ್ಲೇ ಮಾತಾಡಲ್ಲ: ಡಿಕೆ ಸುರೇಶ್
ರಾಜಕೀಯ ಪಿತೂರಿ, ಉಳಿದ ಸಂಗತಿಗಳ ಬಗ್ಗೆ ಈಗ್ಲೇ ಮಾತಾಡಲ್ಲ: ಡಿಕೆ ಸುರೇಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ