Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀದಿ ಓ ದೀದಿ ಎಂದು ಕರೆದ ಮೋದಿಯನ್ನೇಕೆ ಅನರ್ಹ ಮಾಡಿಲ್ಲ?, ಅವರಿಗೇನು ಬೇರೆ ಕಾನೂನು ಇದೆಯೇ?: ಟಿಎಂಸಿ

ದೀದಿ ಓ ದೀದಿ ಎಂದು ಸಿಎಂ ಅವರು ಕರೆದು ಮಹಿಳೆಯರನ್ನು ಅವಮಾನಿಸಿದ ಭಾರತದ ಪ್ರಧಾನಿಯ ಸದಸ್ಯತ್ವವನ್ನು ರದ್ದುಗೊಳಿಸಿಲ್ಲ, ಅವರ ಸದಸ್ಯತ್ವವನ್ನು ಏಕೆ ರದ್ದುಗೊಳಿಸಬಾರದು? ಅವರು ಎಲ್ಲಾ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

ದೀದಿ ಓ ದೀದಿ ಎಂದು ಕರೆದ ಮೋದಿಯನ್ನೇಕೆ ಅನರ್ಹ ಮಾಡಿಲ್ಲ?, ಅವರಿಗೇನು ಬೇರೆ ಕಾನೂನು ಇದೆಯೇ?: ಟಿಎಂಸಿ
ಅಭಿಷೇಕ್ ಬ್ಯಾನರ್ಜಿ
Follow us
ರಶ್ಮಿ ಕಲ್ಲಕಟ್ಟ
|

Updated on: Mar 29, 2023 | 7:55 PM

ಕೋಲ್ಕತ್ತಾ: ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC), ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ದೀದಿ ಓ ದೀದಿ ಎಂಬ ಹೇಳಿಕೆ ಟೀಕಿಸಿದ್ದು ಕಾನೂನಿನಲ್ಲಿ ಈ ರೀತಿ ತಾರತಮ್ಯ ಯಾಕೆ ಎಂದು ಪ್ರಶ್ನಿಸಿದೆ. ಪ್ರಧಾನಿ ಮೋದಿಯವರ ಉಪನಾಮದ ಮೇಲಿನ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿಗೆ(Rahul Gandhi) ಸೂರತ್ ನ್ಯಾಯಾಲಯದ ತೀರ್ಪನ್ನು ಪೂರ್ವನಿದರ್ಶನವಾಗಿ ತೆಗೆದುಕೊಂಡರೆ, ರಾಜ್ಯದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧವೂ ಮೊಕದ್ದಮೆ ಹೂಡಬೇಕು, ಶಿಕ್ಷೆ ವಿಧಿಸಬೇಕು ಮತ್ತು ಅನರ್ಹಗೊಳಿಸಬೇಕು ಎಂದು ಟಿಎಂಸಿ ಹೇಳಿದೆ.

ಪರಿಶಿಷ್ಟ ಜಾತಿಗೆ ಸೇರಿದ ಸಚಿವರ ವಿರುದ್ಧ ಮಾಡಿದ ಹೇಳಿಕೆಗಾಗಿ ಸುವೇಂದು ಅಧಿಕಾರಿ ವಿರುದ್ಧ ಒಂದು ತಿಂಗಳೊಳಗೆ ಪ್ರಕರಣ ದಾಖಲಿಸಬೇಕೆಂದು ಬಯಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ದೀದಿ ಓ ದೀದಿ ಲೇವಡಿ ಕೂಗು ಮೂಲಕ ಪ್ರಧಾನಿ ಮೋದಿ ಎಲ್ಲಾ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದಿದ್ದಾರೆ.

ದೀದಿ ಓ ದೀದಿ ಎಂದು ಸಿಎಂ ಅವರು ಕರೆದು ಮಹಿಳೆಯರನ್ನು ಅವಮಾನಿಸಿದ ಭಾರತದ ಪ್ರಧಾನಿಯ ಸದಸ್ಯತ್ವವನ್ನು ರದ್ದುಗೊಳಿಸಿಲ್ಲ, ಅವರ ಸದಸ್ಯತ್ವವನ್ನು ಏಕೆ ರದ್ದುಗೊಳಿಸಬಾರದು? ಅವರು ಎಲ್ಲಾ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

ಕಳೆದ ವರ್ಷ ಪರಿಶಿಷ್ಟ ಜಾತಿಗೆ ಸೇರಿದ ತೃಣಮೂಲ ಶಾಸಕರೊಬ್ಬರ ಬಗ್ಗೆ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯವರ ಹೇಳಿಕೆಯನ್ನು ಬ್ಯಾನರ್ಜಿ ಬಿಜೆಪಿಗೆ ನೆನಪಿಸಿದ್ದಾರೆ.

ಇದನ್ನೂ ಓದಿ:Mamata Banerjee: ರಾಷ್ಟ್ರಗೀತೆಗೆ ಅಗೌರವ ಪ್ರಕರಣ: ಹೈಕೋರ್ಟ್​ನಲ್ಲಿ ಮಮತಾಗಿಲ್ಲ ರಿಲೀಫ್

ನವೆಂಬರ್‌ನಲ್ಲಿ ಟಿಎಂಸಿ ಈ ಬಗ್ಗೆ ವಿಡಿಯೊ ಟ್ವೀಟ್ ಮಾಡಿದ್ದು. ಅದರಲ್ಲಿ ಸುವೇಂದು ಅಧಿಕಾರಿ ತೃಣಮೂಲ ಶಾಸಕ ದೇಬನಾಥ್ ಹನ್ಸ್ಡಾ ಮತ್ತು ಸಚಿವ ಬಿರ್ಬಹಾ ಹನ್ಸ್ಡಾ ಅವರು ತಮ್ಮ ಬೂಟುಗಳ ಕೆಳಗೆ ಉಳಿದಿರುವ ಮಕ್ಕಳು ಎಂದು ಹೇಳಿದ್ದರು.

‘ಮೋದಿ ಓ ಮೋದಿ’ ಒಬಿಸಿ ಭಾವನೆಗಳಿಗೆ ಧಕ್ಕೆ ತಂದರೆ ಮತ್ತು ರಾಹುಲ್ ಗಾಂಧಿಗೆ ಎರಡು ವರ್ಷ ಶಿಕ್ಷೆಯಾದರೆ, ವಿರೋಧ ಪಕ್ಷದ ನಾಯಕನಿಗೆ ಯಾಕೆ ಎರಡು ವರ್ಷ ಏಕೆ ಶಿಕ್ಷೆ ವಿಧಿಸಬಾರದು? ಎಂದು ಬ್ಯಾನರ್ಜಿ ಕೇಳಿದ್ದಾರೆ.

ನಿಮಗೇನು ಪ್ರತ್ಯೇಕ ಕಾನೂನು ಇದೆಯೇ? ನಾನು ತೃಣಮೂಲ ಕಾಂಗ್ರೆಸ್ ಆಗಿರುವುದರಿಂದ ಕಾನೂನು ನನಗೆ ಬೇರೆ, ನೀವು ಬಿಜೆಪಿಯೊಂದಿಗೆ ಇರುವುದರಿಂದ ನಿಮಗೆ ಬೇರೆ ಇದೆಯೇ? ನಾನು ನಮ್ಮ ಕಾನೂನು ಘಟಕವನ್ನು ಕೇಳಲು ಬಯಸುತ್ತೇನೆ, ವಿಶೇಷವಾಗಿ ವಕೀಲರಾಗಿರುವವರು ಈ ಸೂರತ್ ಕೋರ್ಟ್ ತೀರ್ಪನ್ನು ಅಸ್ತ್ರವಾಗಿ ಬಳಸಬೇಕೆಂದು ನಾನು ಬಯಸುತ್ತೇನೆ. ಈ ಕುರಿತು ಒಂದು ತಿಂಗಳಲ್ಲಿ ಅರ್ಜಿ ಸಲ್ಲಿಸುವೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು