
ನವದೆಹಲಿ, ನವೆಂಬರ್ 05: ‘ಮೇರಾ ಬೂತ್ ಸಬ್ಸೆ ಮಜಬೂತ್’ ಕಾರ್ಯಕ್ರಮದ ಭಾಗವಾಗಿ ಬಿಹಾರ ಬಿಜೆಪಿಯ ಮಹಿಳಾ ಮುಖಂಡರೊಂದಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಸಂವಾದ ನಡೆಸಿದರು. ಪ್ರಧಾನಿ ಮೋದಿ ಮಾತನಾಡಿ, ನಾನು ಈ ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ, ಎನ್ಡಿಎ ಈ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸುತ್ತಿದೆ. ಎನ್ಡಿಎ ಗೆಲುವಿನ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಬೇಗುಸರಾಯ್ನಲ್ಲಿರುವ ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ಡಾ. ರೇಖಾ ರಾಮ್, ಅನಾರೋಗ್ಯ ಪೀಡಿತರನ್ನು ಮತಗಟ್ಟೆಗಳಿಗೆ ಸಾಗಿಸಲು ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಹೇಳಿದರು. ತಮ್ಮ ಪ್ರದೇಶದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ನಿಮ್ಮ ಯೋಜನೆ ಏನು ಎಂದು ಪ್ರಧಾನಿ ಮೋದಿ ಕೇಳಿದ್ದರು.
ಅನಾರೋಗ್ಯ ಪೀಡಿತರನ್ನು ಮತಗಟ್ಟೆಗಳಿಗೆ ಸಾಗಿಸಲು ಚುನಾವಣಾ ಆಯೋಗ ವ್ಯವಸ್ಥೆ ಮಾಡುತ್ತದೆ ಎಂದು ಅವರು ಮಹಿಳೆಗೆ ತಿಳಿಸಿದರು. ಮಹಿಳೆಯರು ಬೂತ್ ಮಟ್ಟದಲ್ಲಿ ಈ ಕೆಲಸವನ್ನು ಮಾಡುತ್ತಿದ್ದರೆ, ಅದು ಗಮನಾರ್ಹ ಸಾಧನೆಯಾಗಿದೆ.
ಮತ್ತಷ್ಟು ಓದಿ: ಆಪರೇಷನ್ ಸಿಂಧೂರ್ ವೇಳೆ ಪ್ರಧಾನಿ ಮೋದಿ ನಮಗೆ ಪೂರ್ತಿ ಸ್ವಾತಂತ್ರ್ಯ ನೀಡಿದ್ದರು; ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ
ಕಳೆದ 10 ವರ್ಷಗಳಲ್ಲಿ ಆರೋಗ್ಯ ಪರಿಸ್ಥಿತಿ ಗಮನಾರ್ಹವಾಗಿ ಬದಲಾಗಿದೆ ಎಂದು ಮಹಿಳೆಯರು ಹೇಳಿದರು. ಹಲವಾರು ಏಮ್ಸ್ಗಳನ್ನು ನಿರ್ಮಿಸಲಾಗಿದೆ. ಸ್ಥಳೀಯ ಆರೋಗ್ಯ ಕೇಂದ್ರಗಳು ಸಕ್ರಿಯವಾಗಿವೆ, ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತವೆ. ಆದ್ದರಿಂದ, ಮಹಿಳೆಯರು ಬೇರೆಲ್ಲಿಗೂ ಪ್ರಯಾಣಿಸಬೇಕಾಗಿಲ್ಲ.
ಸುಧಾರಿತ ರಸ್ತೆಯ ಬಗ್ಗೆ ಉಲ್ಲೇಖಿಸುತ್ತಾ, ಬೇಗುಸರೈನಿಂದ ದರ್ಭಂಗಾಗೆ ಪ್ರಯಾಣಿಸಲು ಹಿಂದಿನ ಹಲವಾರು ಗಂಟೆಗಳಿಗೆ ಹೋಲಿಸಿದರೆ ಈಗ ಕೇವಲ ಎರಡು ಗಂಟೆಗಳು ಬೇಕಾಗುತ್ತದೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಅವರು ಬಿಹಾರದ ಜನರ ಉತ್ಸಾಹವನ್ನು ನೋಡಿದ್ದೇನೆ, ಬಿಹಾರದ ಜನರು ತಮ್ಮ ನಿಧರ್ಧರದಲ್ಲಿ ದೃಢವಾಗಿದ್ದಾರೆ.ಈ ಬಾರಿ, ಇಂಡಿ ಮಹಾ ಮೈತ್ರಿಕೂಟವು ಅತ್ಯಂತ ಹೀನಾಯ ಸೋಲನ್ನು ಎದುರಿಸಲಿದೆ, ಕಳೆದ 20 ವರ್ಷಗಳ ದಾಖಲೆಯನ್ನು ಮುರಿಯಲಿದೆ.
ಲಾಲು-ರಾಬ್ರಿಯವರ 15 ವರ್ಷಗಳ ಜಂಗಲ್ ರಾಜ್ನಲ್ಲಿ ಒಂದೇ ಒಂದು ವೈದ್ಯಕೀಯ ಕಾಲೇಜು ನಿರ್ಮಿಸಲಾಗಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಈಗ 10 ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಇನ್ನೂ 10 ಕ್ಕೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸ್ಥಳೀಯ ಮಟ್ಟದಲ್ಲಿ ಮಹಿಳೆಯರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸುವುದಾಗಿ ಮಹಿಳೆಯರು ವಿವರಿಸಿದರು.
ಬಿಹಾರದಲ್ಲಿ ಚುನಾವಣಾ ಪ್ರಚಾರದ ಆರಂಭದ ಸಂದರ್ಭದಲ್ಲಿ, ಭಾರತ ರತ್ನ ಕರ್ಪೂರಿ ಠಾಕೂರ್ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬವನ್ನು ಭೇಟಿಯಾಗಿದ್ದಾಗಿ ಪ್ರಧಾನಿ ಮೋದಿ ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ