UP Assembly Election: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಿದ್ಧತೆ; ಯೋಗಿ ಆದಿತ್ಯನಾಥ್​​ ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರಂತೆ..

Yogi Adityanath: ಇತ್ತೀಚೆಗೆ ಪ್ರಧಾನಿ ಮೋದಿಯವರು ವಾರಾಣಸಿಗೆ ಭೇಟಿ ಕೊಟ್ಟಿದ್ದರು. ಆ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಕೊವಿಡ್​ 19 ವಿರುದ್ಧ ಹೋರಾಟಕ್ಕೆ ತೆಗೆದುಕೊಂಡ ಕ್ರಮಗಳನ್ನು ತುಂಬ ಹೊಗಳಿದ್ದರು.

UP Assembly Election: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಿದ್ಧತೆ; ಯೋಗಿ ಆದಿತ್ಯನಾಥ್​​ ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರಂತೆ..
ಯೋಗಿ ಆದಿತ್ಯನಾಥ್
Updated By: Lakshmi Hegde

Updated on: Jul 24, 2021 | 6:19 PM

ಸದ್ಯಕ್ಕಂತೂ ಭಾರತೀಯ ಜನತಾ ಪಾರ್ಟಿ (BJP) ರಾಷ್ಟ್ರಮಟ್ಟದ ನಾಯಕರ ಗಮನ ಉತ್ತರ ಪ್ರದೇಶ ಚುನಾವಣೆ(Uttar Pradesh Assembly Polls)ಯ ಮೇಲೇ ಇದೆ. ಕಳೆದ ಬಾರಿ 403 ಕ್ಷೇತ್ರಗಳಲ್ಲಿ, 312 ಸೀಟುಗಳನ್ನು ಗೆದ್ದು ಜಯಗಳಿದ್ದ ಬಿಜೆಪಿ ಈ ಬಾರಿಯೂ ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಲು ತುದಿಗಾಲಿನಲ್ಲಿ ನಿಂತಿದೆ. ಹಾಗಾಗಿ ಪ್ರಮುಖ ನಾಯಕರನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್(BJP High Command)​ ನಿರ್ಧರಿಸಿದೆ. ಸಿಎಂ ಯೋಗಿ ಆದಿತ್ಯನಾಥ್​, ಉಪಮುಖ್ಯಮಂತ್ರಿಗಳಾದ ಕೇಶವ್​ ಪ್ರಸಾದ್​ ಮೌರ್ಯ, ದಿನೇಶ್​ ಶರ್ಮಾ, ಬಿಜೆಪಿ ಪ್ರಮುಖ ನಾಯಕರಾದ ಸ್ವತಂತ್ರ ದೇವ್​ ಸಿಂಗ್​, ಮಹೇಂದ್ರ ಸಿಂಗ್​ ಅವರೆಲ್ಲ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದು ಪಕ್ಕಾ ಆಗಿದೆ.

ಸದ್ಯ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡಿರುವ ಯೋಗಿ ಆದಿತ್ಯನಾಥ್​ ಮುಂದಿನ ಚುನಾವಣೆಯಲ್ಲಿ ಗೋರಖ್​ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇದು ಅವರ ಹೋಂ ಟೌನ್​ ಕೂಡ ಹೌದು. ಹಾಗೇ, ಕೇಶವ್​ ಪ್ರಸಾದ್​ ಮೌರ್ಯ ಕೌಶಂಭಿಯ ಸಿರಾಥು ಕ್ಷೇತ್ರದಿಂದ, ದಿನೇಶ್​ ಶರ್ಮಾ ಲಖನೌದಿಂದ ಮತ್ತು ಡಾ. ಮಹೇಂದ್ರ ಸಿಂಗ್​ ಅವರು ಕುಂದ್ರಾದಿಂದ ಸ್ಪರ್ಧಿಸಲಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಪ್ರಧಾನಿ ಮೋದಿಯವರು ವಾರಾಣಸಿಗೆ ಭೇಟಿ ಕೊಟ್ಟಿದ್ದರು. ಆ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಕೊವಿಡ್​ 19 ವಿರುದ್ಧ ಹೋರಾಟಕ್ಕೆ ತೆಗೆದುಕೊಂಡ ಕ್ರಮಗಳನ್ನು ತುಂಬ ಹೊಗಳಿದ್ದರು. ಉತ್ತರ ಪ್ರದೇಶದಲ್ಲಿ ಯೋಗಿ ಕೊವಿಡ್ 19ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಮುಂದಿನ ಚುನಾವಣೆಯೊಳಗೆ ನಾಯಕತ್ವ ಬದಲಾವಣೆ ಆಗಬಹುದು ಎಂಬಿತ್ಯಾದಿ ಸುದ್ದಿಗಳು ದೊಡ್ಡಮಟ್ಟದಲ್ಲಿ ಹರಿದಾಡುತ್ತಿದ್ದ ಸಮಯದಲ್ಲಿ ನರೇಂದ್ರ ಮೋದಿಯವರು ಮೂರ್ನಾಲ್ಕು ಬಾರಿ ಯೋಗಿಯವರು ಹೊಗಳಿದ್ದಾರೆ. ಈ ಮೂಲಕ ಸಿಎಂ ಯೋಗಿ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:  2024ರೊಳಗೆ ಭಾರತೀಯ ಬ್ರಾಡ್​ಗೇಜ್ ರೈಲ್ವೆ ಮಾರ್ಗವೆಲ್ಲವೂ ವಿದ್ಯುದೀಕರಣ; ಹೊಸ ಯೋಜನೆಗೆ 21,000 ಕೋಟಿ ರೂ. ವೆಚ್ಚ

Published On - 6:19 pm, Sat, 24 July 21