AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಬ್ರೈನ್ ಟ್ಯೂಮರ್ ಸರ್ಜರಿ ವೇಳೆ ಹನುಮಾನ್ ಚಾಲೀಸಾ ಪಠಿಸಿದ ಮಹಿಳೆ; ಆಮೇಲೆ ನಡೆದಿದ್ದು ಅಚ್ಚರಿ!

Brain Tumor | ಬ್ರೈನ್ ಟ್ಯೂಮರ್​ನಿಂದ ಆಪರೇಷನ್​ಗೆ ಒಳಗಾದ ದೆಹಲಿಯ ರೋಗಿಯೊಬ್ಬರು ಆಪರೇಷನ್ ಶುರುವಾಗಿ ಮುಗಿಯುವವರೆಗೂ ಹನುಮಾನ್ ಚಾಲೀಸಾ ಪಠಿಸುತ್ತಿದ್ದರು.

Viral News: ಬ್ರೈನ್ ಟ್ಯೂಮರ್ ಸರ್ಜರಿ ವೇಳೆ ಹನುಮಾನ್ ಚಾಲೀಸಾ ಪಠಿಸಿದ ಮಹಿಳೆ; ಆಮೇಲೆ ನಡೆದಿದ್ದು ಅಚ್ಚರಿ!
ಮೆದುಳು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 24, 2021 | 9:38 PM

ನವದೆಹಲಿ: ದೇವರನ್ನು ನಂಬಿದರೆ ಎಂತಹ ಕಷ್ಟ ಕೂಡ ದೂರವಾಗುತ್ತದ ಎಂಬುದು ಹಲವರ ನಂಬಿಕೆ. ಜನರ ಜೀವ ಉಳಿಸುವ ಆಸ್ಪತ್ರೆಗಳಲ್ಲಿ ಅದೇ ಕಾರಣಕ್ಕೆ ದೇವರ ಮೂರ್ತಿಯನ್ನು ಇರಿಸಲಾಗಿರುತ್ತದೆ. ವೈದ್ಯರ ಪ್ರಯತ್ನವೆಲ್ಲ ಮಾಡಿ ಆದ ಮೇಲೆ ಕೊನೆಗೆ ದೇವರಾದರೂ ಏನಾದರೂ ಪವಾಡ ಮಾಡುತ್ತೇನೆಂಬ ನಂಬಿಕೆ ರೋಗಿಗಳದ್ದು. ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಬಹಳ ಗಂಭೀರವಾದ ಬ್ರೈನ್ ಟ್ಯೂಮರ್​ನಿಂದ ಬಳಲುತ್ತಿದ್ದ ಮಹಿಳೆಗೆ ಆಪರೇಷನ್ ಮಾಡಲು ಸಿದ್ಧತೆ ನಡೆದಿತ್ತು. ಆಪರೇಷನ್ ಥಿಯೇಟರ್​ಗೆ ಬಂದ ರೋಗಿ ಆಪರೇಷನ್ ನಡೆಯುವಾಗಲೂ ಹನುಮಾನ್ ಚಾಲೀಸಾ ಪಠಿಸುತ್ತಿದ್ದರು. ಇದನ್ನು ನೋಡಿ ಆಪರೇಷನ್​ ಮಾಡಲು ಸಿದ್ಧವಾಗಿದ್ದ ವೈದ್ಯರು ಕೂಡ ಒಂದು ಕ್ಷಣ ಬೆರಗಾದರು.

ಆಂಜನೇಯನ ಭಕ್ತೆಯಾಗಿದ್ದ ರೋಗಿ ತನಗೆ ಬ್ರೈನ್ ಟ್ಯೂಮರ್ ಇದೆ ಎಂದು ಗೊತ್ತಾದ ನಂತರ ದೇವರಿಗೆ ಹರಕೆ ಕಟ್ಟಿಕೊಂಡಿದ್ದರು. ಏಮ್ಸ್​ ಆಸ್ಪತ್ರೆಯಲ್ಲಿ ಆಕೆಗೆ ಆಪರೇಷನ್ ಮಾಡಲು ಎಲ್ಲ ಸಿದ್ಧತೆಗಳೂ ನಡೆದಿತ್ತು. ಆಪರೇಷನ್ ಥಿಯೇಟರ್​ನಲ್ಲಿ ಮಲಗಿದ ಆಕೆ ಇಡೀ ಆಪರೇಷನ್ ಮುಗಿಯುವವರೆಗೂ ಎಚ್ಚರವಾಗಿಯೇ ಇದ್ದರು. ಮೂರು ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆ ಮುಗಿಯುವವರೆಗೂ ಹನುಮಾನ್ ಚಾಲೀಸನ್ನು ಪಠಿಸುತ್ತಲೇ ಇದ್ದರು. ಆ ದೈವೀ ಭಾವನೆ ಆಪರೇಷನ್ ಥಿಯೇಟರ್​ನಲ್ಲೆಲ್ಲ ಹರಡಿದಂತೆ, ಬಹಳ ಕಠಿಣವಾದ ಆಪರೇಷನ್ ಕೂಡ ಯಶಸ್ವಿಯಾಗಿ ನೆರವೇರಿತು.

ಆ ಮಹಿಳೆಗೆ ಆಪರೇಷನ್ ಮಾಡಿರುವ ತಂಡದಲ್ಲೊಬ್ಬರಾದ ಡಾ. ದೀಪಕ್ ಗುಪ್ತಾ, ಆಪರೇಷನ್​ಗೆ ಒಳಗಾದ ಮಹಿಳೆಗೆ ಲೋಕಲ್ ಅನಸ್ತೇಷಿಯಾ ಮತ್ತು ಪೈನ್ ಕಿಲ್ಲರ್ ಕೂಡ ನೀಡಲಾಗಿತ್ತು. ಶಾಲಾ ಶಿಕ್ಷಕಿಯಾಗಿರುವ ಆ ಮಹಿಳೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿದ್ದು, ಇಂದು ಡಿಸ್ಚಾರ್ಜ್ ಆಗಿದ್ದಾರೆ.

ಇದನ್ನೂ ಓದಿ: Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

Viral Video: ಅಚ್ಚರಿಯಾದರೂ ಸತ್ಯ; ವಕೀಲನ ಮೇಲೆ ದಾಳಿ ಮಾಡಿದ 2 ನಾಯಿಗಳಿಗೆ ಮರಣದಂಡನೆ ಶಿಕ್ಷೆ!

(Viral News Woman Recites Hanuma Chalisa While Undergoing Complex Brain Tumor Surgery in AIIMS)

ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ
ಪ್ರಧಾನಿ ಮೋದಿಯವರನ್ನು ಭೇಟಿಯಾದ ವೈಭವ್ ಸೂರ್ಯವಂಶಿ
ಪ್ರಧಾನಿ ಮೋದಿಯವರನ್ನು ಭೇಟಿಯಾದ ವೈಭವ್ ಸೂರ್ಯವಂಶಿ
ಪಾಕ್​ಗೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷವೇ ಬೇಕು; ಅಮಿತ್ ಶಾ
ಪಾಕ್​ಗೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷವೇ ಬೇಕು; ಅಮಿತ್ ಶಾ
ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ, ಕ್ಷಮೆ ಕೇಳಬೇಕು: ಸಾಧುಕೋಕಿಲ
ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ, ಕ್ಷಮೆ ಕೇಳಬೇಕು: ಸಾಧುಕೋಕಿಲ
ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು