AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಪ್ರದೇಶದಿಂದ ಕಳವಾಗಿ ಇಂಗ್ಲೆಂಡ್​ ಸೇರಿದ್ದ ಯೋಗಿನಿ ವಿಗ್ರಹ ಸಂಕ್ರಾಂತಿಯಂದೇ ಭಾರತಕ್ಕೆ ವಾಪಸ್​; ಖಾಸಗಿ ನಿವಾಸದ ಬಳಿ ಸಿಕ್ಕಿತ್ತು ಈ ಶಿಲ್ಪ

ಉತ್ತರಪ್ರದೇಶದ ಬಂದಾ ಜಿಲ್ಲೆಯ ಲೋಖಾರಿ ದೇವಸ್ಥಾನದಲ್ಲಿದ್ದ ವಿಗ್ರಹ ಇದು ಎನ್ನಲಾಗಿದೆ. ಮರಳುಗಲ್ಲಿನಲ್ಲಿ ಸುಂದರವಾಗಿ ಕೆತ್ತಲಾದ ಶಿಲ್ಪವನ್ನು ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ರವಾನಿಸಲಾಗುತ್ತದೆ. 

ಉತ್ತರಪ್ರದೇಶದಿಂದ ಕಳವಾಗಿ ಇಂಗ್ಲೆಂಡ್​ ಸೇರಿದ್ದ ಯೋಗಿನಿ ವಿಗ್ರಹ ಸಂಕ್ರಾಂತಿಯಂದೇ ಭಾರತಕ್ಕೆ ವಾಪಸ್​; ಖಾಸಗಿ ನಿವಾಸದ ಬಳಿ ಸಿಕ್ಕಿತ್ತು ಈ ಶಿಲ್ಪ
ಕಳವಾಗಿದ್ದ ಮೇಕೆ ಮುಖದ ಯೋಗಿನಿ
TV9 Web
| Edited By: |

Updated on: Jan 15, 2022 | 3:54 PM

Share

ಇಂಗ್ಲೆಂಡ್​​ನ ಖಾಸಗಿ ನಿವಾಸವೊಂದರ ಉದ್ಯಾನವನದಲ್ಲಿ ಇತ್ತೀಚೆಗೆ ಸಿಕ್ಕಿದ್ದ ಪ್ರಾಚೀನ ಭಾರತದ ದೇವಿ ವಿಗ್ರಹವೊಂದನ್ನು ಶುಕ್ರವಾರ ಮಕರ ಸಂಕ್ರಾಂತಿ ದಿನದಂದು ಭಾರತಕ್ಕೆ ಮರಳಿಸಲಾಗಿದೆ. ಮೇಖೆ ಮುಖವುಳ್ಳ ಯೋಗಿಣಿಯ ವಿಗ್ರಹ ಇದಾಗಿದ್ದು, ಯುಕೆಯ ಕ್ರಿಸ್​ ಮರಿನೆಲ್ಲೋ ಆಫ್ ಆರ್ಟ್​ ರಿಕವರಿ ಇಂಟರ್​ನ್ಯಾಷನಲ್​ ಎಂಬ ಸಂಸ್ಥೆಯು ಭಾರತಕ್ಕೆ ಹಸ್ತಾಂತರಿಸಲು ಎಲ್ಲ ರೀತಿಯ ಸಹಾಯ ಮಾಡಿದೆ. ಹಾಗೇ, ಲಂಡನ್​​ನಲ್ಲಿರುವ ಭಾರತದ ಹೈಕಮಿಷನ್​ ಕಚೇರಿಯಲ್ಲಿ, ಇಂಗ್ಲೆಂಡ್​​ನ ಭಾರತೀಯ ಹೈಕಮಿಷನರ್​ ಗಾಯತ್ರಿ ಇಸ್ಸಾರ್ ಕುಮಾರ್​ಗೆ ಈ ಶಿಲ್ಪವನ್ನು ಹಸ್ತಾಂತರ ಮಾಡಲಾಗಿದೆ.  

ಉತ್ತರಪ್ರದೇಶದ ಬಂದಾ ಜಿಲ್ಲೆಯ ಲೋಖಾರಿ ದೇವಸ್ಥಾನದಲ್ಲಿದ್ದ ವಿಗ್ರಹ ಇದು ಎನ್ನಲಾಗಿದೆ. ಮರಳುಗಲ್ಲಿನಲ್ಲಿ ಸುಂದರವಾಗಿ ಕೆತ್ತಲಾದ ಶಿಲ್ಪವನ್ನು ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ರವಾನಿಸಲಾಗುತ್ತದೆ.   ವಿಗ್ರಹ ಸ್ವೀಕಾರ ಮಾಡಿದ ಗಾಯತ್ರಿ ಇಸ್ಸಾರ್ ಕುಮಾರ್​ ಮಾತನಾಡಿ, ಮಕರ ಸಂಕ್ರಾಂತಿಯಂದೇ ಈ ಯೋಗಿನಿಯ ವಿಗ್ರಹವನ್ನು ಸ್ವೀಕಾರಮಾಡುತ್ತಿರುವುದು ತುಂಬ ಸಂತೋಷ ತಂದ ವಿಚಾರ ಎಂದು ಹೇಳಿದ್ದಾರೆ. ಈ ವಿಗ್ರಹ ಇರುವುದು 2021ರ ನವೆಂಬರ್​​ನಲ್ಲಿಯೇ ಭಾರತೀಯ ಹೈಕಮಿಷನ್​​ಗೆ ತಿಳಿಯಿತು. ಆಗಿನಿಂದಲೇ ಹಸ್ತಾಂತರ ಪ್ರಕ್ರಿಯೆಯಗಳು ಶುರುವಾಗಿದ್ದವು. ಇದೀಗ ನಾವು ಪುರಾತತ್ವ ಇಲಾಖೆಗೆ ವಿಗ್ರಹ ಕಳಿಸುವುದಷ್ಟೇ ಬಾಕಿ ಇದೆ. ಈ ವಿಗ್ರಹವನ್ನು ನ್ಯಾಷನಲ್​ ಮ್ಯೂಸಿಯಂನಲ್ಲಿ ಇಡುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.

ಇದೇ ಗಾಯತ್ರಿ ಕುಮಾರ್​ ಅವರು ಪ್ಯಾರಿಸ್​ನಲ್ಲಿ ರಾಜತಾಂತ್ರಿಕ ಅಧಿಕಾರಿಯಾಗಿದ್ದಾಗ ಕೋಣನ ತಲೆಯ ಯೋಗಿನಿ ಶಿಲ್ಪವೊಂದನ್ನು ಭಾರತಕ್ಕೆ ತರಲಾಗಿತ್ತು. ಆ ಪುರಾತನ ಶಿಲ್ಪ ಕೂಡ ಲೋಖಾರಿಯ ಇದೇ ದೇಗುಲದಿಂದಲೇ ಕಳವಾಗಿತ್ತು. 2013ರಲ್ಲಿ ಅದನ್ನು ವಾಪಸ್ ಭಾರತಕ್ಕೆ ತರಲಾಗಿದ್ದು, ಸದ್ಯ ಇಲ್ಲಿನ ನ್ಯಾಷನಲ್ ಮ್ಯೂಸಿಯಂನಲ್ಲಿ ಇಡಲಾಗಿದೆ. ಅದರಂತೆ ಈಗ ಮೇಕೆ ತಲೆಯ ಯೋಗಿನಿಯನ್ನೂ ಅಲ್ಲೇ ಇಡಬಹುದು ಎಂಬ ನಿರೀಕ್ಷೆ ಇದೆ. ಅಂದಹಾಗೆ, ಈ ಯೋಗಿನಿಯರು ತಾಂತ್ರಿಕ ಪೂಜಾ ವಿಧಾನಕ್ಕೆ ಸಂಬಂಧಪಟ್ಟ ಶಕ್ತಿಶಾಲಿ ಸ್ತ್ರೀ ದೇವತೆಗಳಾಗಿದ್ದಾರೆ. 64 ಯೋಗಿನಿಯರ ಗುಂಪಿದ್ದು, ಅವರ ಶಕ್ತಿ ಅನಂತ, ಅಪರಿಮಿತ ಎಂದೇ ನಂಬಲಾಗಿದೆ.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಟಿಬಿ ಜಯಚಂದ್ರ ಹಾಗೂ ಕೆಲ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ