AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಪ್ರದೇಶದಿಂದ ಕಳವಾಗಿ ಇಂಗ್ಲೆಂಡ್​ ಸೇರಿದ್ದ ಯೋಗಿನಿ ವಿಗ್ರಹ ಸಂಕ್ರಾಂತಿಯಂದೇ ಭಾರತಕ್ಕೆ ವಾಪಸ್​; ಖಾಸಗಿ ನಿವಾಸದ ಬಳಿ ಸಿಕ್ಕಿತ್ತು ಈ ಶಿಲ್ಪ

ಉತ್ತರಪ್ರದೇಶದ ಬಂದಾ ಜಿಲ್ಲೆಯ ಲೋಖಾರಿ ದೇವಸ್ಥಾನದಲ್ಲಿದ್ದ ವಿಗ್ರಹ ಇದು ಎನ್ನಲಾಗಿದೆ. ಮರಳುಗಲ್ಲಿನಲ್ಲಿ ಸುಂದರವಾಗಿ ಕೆತ್ತಲಾದ ಶಿಲ್ಪವನ್ನು ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ರವಾನಿಸಲಾಗುತ್ತದೆ. 

ಉತ್ತರಪ್ರದೇಶದಿಂದ ಕಳವಾಗಿ ಇಂಗ್ಲೆಂಡ್​ ಸೇರಿದ್ದ ಯೋಗಿನಿ ವಿಗ್ರಹ ಸಂಕ್ರಾಂತಿಯಂದೇ ಭಾರತಕ್ಕೆ ವಾಪಸ್​; ಖಾಸಗಿ ನಿವಾಸದ ಬಳಿ ಸಿಕ್ಕಿತ್ತು ಈ ಶಿಲ್ಪ
ಕಳವಾಗಿದ್ದ ಮೇಕೆ ಮುಖದ ಯೋಗಿನಿ
Follow us
TV9 Web
| Updated By: Lakshmi Hegde

Updated on: Jan 15, 2022 | 3:54 PM

ಇಂಗ್ಲೆಂಡ್​​ನ ಖಾಸಗಿ ನಿವಾಸವೊಂದರ ಉದ್ಯಾನವನದಲ್ಲಿ ಇತ್ತೀಚೆಗೆ ಸಿಕ್ಕಿದ್ದ ಪ್ರಾಚೀನ ಭಾರತದ ದೇವಿ ವಿಗ್ರಹವೊಂದನ್ನು ಶುಕ್ರವಾರ ಮಕರ ಸಂಕ್ರಾಂತಿ ದಿನದಂದು ಭಾರತಕ್ಕೆ ಮರಳಿಸಲಾಗಿದೆ. ಮೇಖೆ ಮುಖವುಳ್ಳ ಯೋಗಿಣಿಯ ವಿಗ್ರಹ ಇದಾಗಿದ್ದು, ಯುಕೆಯ ಕ್ರಿಸ್​ ಮರಿನೆಲ್ಲೋ ಆಫ್ ಆರ್ಟ್​ ರಿಕವರಿ ಇಂಟರ್​ನ್ಯಾಷನಲ್​ ಎಂಬ ಸಂಸ್ಥೆಯು ಭಾರತಕ್ಕೆ ಹಸ್ತಾಂತರಿಸಲು ಎಲ್ಲ ರೀತಿಯ ಸಹಾಯ ಮಾಡಿದೆ. ಹಾಗೇ, ಲಂಡನ್​​ನಲ್ಲಿರುವ ಭಾರತದ ಹೈಕಮಿಷನ್​ ಕಚೇರಿಯಲ್ಲಿ, ಇಂಗ್ಲೆಂಡ್​​ನ ಭಾರತೀಯ ಹೈಕಮಿಷನರ್​ ಗಾಯತ್ರಿ ಇಸ್ಸಾರ್ ಕುಮಾರ್​ಗೆ ಈ ಶಿಲ್ಪವನ್ನು ಹಸ್ತಾಂತರ ಮಾಡಲಾಗಿದೆ.  

ಉತ್ತರಪ್ರದೇಶದ ಬಂದಾ ಜಿಲ್ಲೆಯ ಲೋಖಾರಿ ದೇವಸ್ಥಾನದಲ್ಲಿದ್ದ ವಿಗ್ರಹ ಇದು ಎನ್ನಲಾಗಿದೆ. ಮರಳುಗಲ್ಲಿನಲ್ಲಿ ಸುಂದರವಾಗಿ ಕೆತ್ತಲಾದ ಶಿಲ್ಪವನ್ನು ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ರವಾನಿಸಲಾಗುತ್ತದೆ.   ವಿಗ್ರಹ ಸ್ವೀಕಾರ ಮಾಡಿದ ಗಾಯತ್ರಿ ಇಸ್ಸಾರ್ ಕುಮಾರ್​ ಮಾತನಾಡಿ, ಮಕರ ಸಂಕ್ರಾಂತಿಯಂದೇ ಈ ಯೋಗಿನಿಯ ವಿಗ್ರಹವನ್ನು ಸ್ವೀಕಾರಮಾಡುತ್ತಿರುವುದು ತುಂಬ ಸಂತೋಷ ತಂದ ವಿಚಾರ ಎಂದು ಹೇಳಿದ್ದಾರೆ. ಈ ವಿಗ್ರಹ ಇರುವುದು 2021ರ ನವೆಂಬರ್​​ನಲ್ಲಿಯೇ ಭಾರತೀಯ ಹೈಕಮಿಷನ್​​ಗೆ ತಿಳಿಯಿತು. ಆಗಿನಿಂದಲೇ ಹಸ್ತಾಂತರ ಪ್ರಕ್ರಿಯೆಯಗಳು ಶುರುವಾಗಿದ್ದವು. ಇದೀಗ ನಾವು ಪುರಾತತ್ವ ಇಲಾಖೆಗೆ ವಿಗ್ರಹ ಕಳಿಸುವುದಷ್ಟೇ ಬಾಕಿ ಇದೆ. ಈ ವಿಗ್ರಹವನ್ನು ನ್ಯಾಷನಲ್​ ಮ್ಯೂಸಿಯಂನಲ್ಲಿ ಇಡುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.

ಇದೇ ಗಾಯತ್ರಿ ಕುಮಾರ್​ ಅವರು ಪ್ಯಾರಿಸ್​ನಲ್ಲಿ ರಾಜತಾಂತ್ರಿಕ ಅಧಿಕಾರಿಯಾಗಿದ್ದಾಗ ಕೋಣನ ತಲೆಯ ಯೋಗಿನಿ ಶಿಲ್ಪವೊಂದನ್ನು ಭಾರತಕ್ಕೆ ತರಲಾಗಿತ್ತು. ಆ ಪುರಾತನ ಶಿಲ್ಪ ಕೂಡ ಲೋಖಾರಿಯ ಇದೇ ದೇಗುಲದಿಂದಲೇ ಕಳವಾಗಿತ್ತು. 2013ರಲ್ಲಿ ಅದನ್ನು ವಾಪಸ್ ಭಾರತಕ್ಕೆ ತರಲಾಗಿದ್ದು, ಸದ್ಯ ಇಲ್ಲಿನ ನ್ಯಾಷನಲ್ ಮ್ಯೂಸಿಯಂನಲ್ಲಿ ಇಡಲಾಗಿದೆ. ಅದರಂತೆ ಈಗ ಮೇಕೆ ತಲೆಯ ಯೋಗಿನಿಯನ್ನೂ ಅಲ್ಲೇ ಇಡಬಹುದು ಎಂಬ ನಿರೀಕ್ಷೆ ಇದೆ. ಅಂದಹಾಗೆ, ಈ ಯೋಗಿನಿಯರು ತಾಂತ್ರಿಕ ಪೂಜಾ ವಿಧಾನಕ್ಕೆ ಸಂಬಂಧಪಟ್ಟ ಶಕ್ತಿಶಾಲಿ ಸ್ತ್ರೀ ದೇವತೆಗಳಾಗಿದ್ದಾರೆ. 64 ಯೋಗಿನಿಯರ ಗುಂಪಿದ್ದು, ಅವರ ಶಕ್ತಿ ಅನಂತ, ಅಪರಿಮಿತ ಎಂದೇ ನಂಬಲಾಗಿದೆ.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಟಿಬಿ ಜಯಚಂದ್ರ ಹಾಗೂ ಕೆಲ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ

Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ