AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಪ್ರದೇಶದಿಂದ ಕಳವಾಗಿ ಇಂಗ್ಲೆಂಡ್​ ಸೇರಿದ್ದ ಯೋಗಿನಿ ವಿಗ್ರಹ ಸಂಕ್ರಾಂತಿಯಂದೇ ಭಾರತಕ್ಕೆ ವಾಪಸ್​; ಖಾಸಗಿ ನಿವಾಸದ ಬಳಿ ಸಿಕ್ಕಿತ್ತು ಈ ಶಿಲ್ಪ

ಉತ್ತರಪ್ರದೇಶದ ಬಂದಾ ಜಿಲ್ಲೆಯ ಲೋಖಾರಿ ದೇವಸ್ಥಾನದಲ್ಲಿದ್ದ ವಿಗ್ರಹ ಇದು ಎನ್ನಲಾಗಿದೆ. ಮರಳುಗಲ್ಲಿನಲ್ಲಿ ಸುಂದರವಾಗಿ ಕೆತ್ತಲಾದ ಶಿಲ್ಪವನ್ನು ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ರವಾನಿಸಲಾಗುತ್ತದೆ. 

ಉತ್ತರಪ್ರದೇಶದಿಂದ ಕಳವಾಗಿ ಇಂಗ್ಲೆಂಡ್​ ಸೇರಿದ್ದ ಯೋಗಿನಿ ವಿಗ್ರಹ ಸಂಕ್ರಾಂತಿಯಂದೇ ಭಾರತಕ್ಕೆ ವಾಪಸ್​; ಖಾಸಗಿ ನಿವಾಸದ ಬಳಿ ಸಿಕ್ಕಿತ್ತು ಈ ಶಿಲ್ಪ
ಕಳವಾಗಿದ್ದ ಮೇಕೆ ಮುಖದ ಯೋಗಿನಿ
TV9 Web
| Edited By: |

Updated on: Jan 15, 2022 | 3:54 PM

Share

ಇಂಗ್ಲೆಂಡ್​​ನ ಖಾಸಗಿ ನಿವಾಸವೊಂದರ ಉದ್ಯಾನವನದಲ್ಲಿ ಇತ್ತೀಚೆಗೆ ಸಿಕ್ಕಿದ್ದ ಪ್ರಾಚೀನ ಭಾರತದ ದೇವಿ ವಿಗ್ರಹವೊಂದನ್ನು ಶುಕ್ರವಾರ ಮಕರ ಸಂಕ್ರಾಂತಿ ದಿನದಂದು ಭಾರತಕ್ಕೆ ಮರಳಿಸಲಾಗಿದೆ. ಮೇಖೆ ಮುಖವುಳ್ಳ ಯೋಗಿಣಿಯ ವಿಗ್ರಹ ಇದಾಗಿದ್ದು, ಯುಕೆಯ ಕ್ರಿಸ್​ ಮರಿನೆಲ್ಲೋ ಆಫ್ ಆರ್ಟ್​ ರಿಕವರಿ ಇಂಟರ್​ನ್ಯಾಷನಲ್​ ಎಂಬ ಸಂಸ್ಥೆಯು ಭಾರತಕ್ಕೆ ಹಸ್ತಾಂತರಿಸಲು ಎಲ್ಲ ರೀತಿಯ ಸಹಾಯ ಮಾಡಿದೆ. ಹಾಗೇ, ಲಂಡನ್​​ನಲ್ಲಿರುವ ಭಾರತದ ಹೈಕಮಿಷನ್​ ಕಚೇರಿಯಲ್ಲಿ, ಇಂಗ್ಲೆಂಡ್​​ನ ಭಾರತೀಯ ಹೈಕಮಿಷನರ್​ ಗಾಯತ್ರಿ ಇಸ್ಸಾರ್ ಕುಮಾರ್​ಗೆ ಈ ಶಿಲ್ಪವನ್ನು ಹಸ್ತಾಂತರ ಮಾಡಲಾಗಿದೆ.  

ಉತ್ತರಪ್ರದೇಶದ ಬಂದಾ ಜಿಲ್ಲೆಯ ಲೋಖಾರಿ ದೇವಸ್ಥಾನದಲ್ಲಿದ್ದ ವಿಗ್ರಹ ಇದು ಎನ್ನಲಾಗಿದೆ. ಮರಳುಗಲ್ಲಿನಲ್ಲಿ ಸುಂದರವಾಗಿ ಕೆತ್ತಲಾದ ಶಿಲ್ಪವನ್ನು ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ರವಾನಿಸಲಾಗುತ್ತದೆ.   ವಿಗ್ರಹ ಸ್ವೀಕಾರ ಮಾಡಿದ ಗಾಯತ್ರಿ ಇಸ್ಸಾರ್ ಕುಮಾರ್​ ಮಾತನಾಡಿ, ಮಕರ ಸಂಕ್ರಾಂತಿಯಂದೇ ಈ ಯೋಗಿನಿಯ ವಿಗ್ರಹವನ್ನು ಸ್ವೀಕಾರಮಾಡುತ್ತಿರುವುದು ತುಂಬ ಸಂತೋಷ ತಂದ ವಿಚಾರ ಎಂದು ಹೇಳಿದ್ದಾರೆ. ಈ ವಿಗ್ರಹ ಇರುವುದು 2021ರ ನವೆಂಬರ್​​ನಲ್ಲಿಯೇ ಭಾರತೀಯ ಹೈಕಮಿಷನ್​​ಗೆ ತಿಳಿಯಿತು. ಆಗಿನಿಂದಲೇ ಹಸ್ತಾಂತರ ಪ್ರಕ್ರಿಯೆಯಗಳು ಶುರುವಾಗಿದ್ದವು. ಇದೀಗ ನಾವು ಪುರಾತತ್ವ ಇಲಾಖೆಗೆ ವಿಗ್ರಹ ಕಳಿಸುವುದಷ್ಟೇ ಬಾಕಿ ಇದೆ. ಈ ವಿಗ್ರಹವನ್ನು ನ್ಯಾಷನಲ್​ ಮ್ಯೂಸಿಯಂನಲ್ಲಿ ಇಡುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.

ಇದೇ ಗಾಯತ್ರಿ ಕುಮಾರ್​ ಅವರು ಪ್ಯಾರಿಸ್​ನಲ್ಲಿ ರಾಜತಾಂತ್ರಿಕ ಅಧಿಕಾರಿಯಾಗಿದ್ದಾಗ ಕೋಣನ ತಲೆಯ ಯೋಗಿನಿ ಶಿಲ್ಪವೊಂದನ್ನು ಭಾರತಕ್ಕೆ ತರಲಾಗಿತ್ತು. ಆ ಪುರಾತನ ಶಿಲ್ಪ ಕೂಡ ಲೋಖಾರಿಯ ಇದೇ ದೇಗುಲದಿಂದಲೇ ಕಳವಾಗಿತ್ತು. 2013ರಲ್ಲಿ ಅದನ್ನು ವಾಪಸ್ ಭಾರತಕ್ಕೆ ತರಲಾಗಿದ್ದು, ಸದ್ಯ ಇಲ್ಲಿನ ನ್ಯಾಷನಲ್ ಮ್ಯೂಸಿಯಂನಲ್ಲಿ ಇಡಲಾಗಿದೆ. ಅದರಂತೆ ಈಗ ಮೇಕೆ ತಲೆಯ ಯೋಗಿನಿಯನ್ನೂ ಅಲ್ಲೇ ಇಡಬಹುದು ಎಂಬ ನಿರೀಕ್ಷೆ ಇದೆ. ಅಂದಹಾಗೆ, ಈ ಯೋಗಿನಿಯರು ತಾಂತ್ರಿಕ ಪೂಜಾ ವಿಧಾನಕ್ಕೆ ಸಂಬಂಧಪಟ್ಟ ಶಕ್ತಿಶಾಲಿ ಸ್ತ್ರೀ ದೇವತೆಗಳಾಗಿದ್ದಾರೆ. 64 ಯೋಗಿನಿಯರ ಗುಂಪಿದ್ದು, ಅವರ ಶಕ್ತಿ ಅನಂತ, ಅಪರಿಮಿತ ಎಂದೇ ನಂಬಲಾಗಿದೆ.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಟಿಬಿ ಜಯಚಂದ್ರ ಹಾಗೂ ಕೆಲ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?