AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಬರ್ ಅಪರಾಧ ತಡೆಗೆ ಸೈಬರ್ ಪೊಲೀಸರಿಗೆ ಆಧುನಿಕ ವಿಶೇಷ ಕ್ರಮಗಳು ಬೇಕಾಗಿವೆ: ಡಾ. ರವಿಕಿರಣ್

ಸೈಬರ್ ಶಬ್ದ ಎಲ್ಲರನ್ನು ಈಗಾಗಲೇ ಆವರಿಸಿದೆ. ಅದರಲ್ಲೂ ನಗದುರಹಿತ ವಹಿವಾಟು ಪ್ರಾರಂಭವಾದ ನಂತರ ಈ ಶಬ್ದದ ಅವಶ್ಯಕತೆ ಹಾಗೂ ಅದರ ಪೊಲೀಸರ ಅವಶ್ಯಕತೆ ಹೆಚ್ಚಾಗಿದೆ.

ಸೈಬರ್ ಅಪರಾಧ ತಡೆಗೆ ಸೈಬರ್ ಪೊಲೀಸರಿಗೆ ಆಧುನಿಕ  ವಿಶೇಷ ಕ್ರಮಗಳು ಬೇಕಾಗಿವೆ: ಡಾ. ರವಿಕಿರಣ್
Dr Ravikiran Patwardhan
TV9 Web
| Edited By: |

Updated on:Oct 09, 2022 | 11:23 AM

Share

ಸೈಬರ್ ಶಬ್ದ ಎಲ್ಲರನ್ನು ಈಗಾಗಲೇ ಆವರಿಸಿದೆ. ಅದರಲ್ಲೂ ನಗದುರಹಿತ ವಹಿವಾಟು ಪ್ರಾರಂಭವಾದ ನಂತರ ಈ ಶಬ್ದದ ಅವಶ್ಯಕತೆ ಹಾಗೂ ಅದರ ಪೊಲೀಸರ ಅವಶ್ಯಕತೆ ಹೆಚ್ಚಾಗಿದೆ. ದಯಮಾಡಿ ಸರ್ಕಾರದ ನಿರ್ದೇಶನದಂತೆ, RBI ನಿರ್ದೇಶನಂತೆ ಯಾವುದೇ OTP ಯನ್ನು, CVVಯನ್ನು ,ಅಧಿಕೃತ ಕಾರ್ಡುಗಳ ವಿವರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಬೇಡ.

ಈ ರೀತಿಯ ಅಪರಾಧದ ತಡೆಗೆ ವಿಜ್ಞಾಪನೆಯನ್ನು ಮಾನ್ಯ ಶ್ರೀಅಮಿತಾಭ್ ಬಚ್ಚನ್ ಅವರು ಮಾಡಿ ಮಾಡಿ ದಣಿದಿದ್ದಾರೆ. ಆದರೆ ಆಘಾತಕರ ಸಂಗತಿ ಎಂದರೆ ಈ ತಪ್ಪನ್ನು ಮಾಡುತ್ತಿದ್ದವರು ಅತ್ಯಂತ ಗರಿಷ್ಠ ಶಿಕ್ಷಣವನ್ನು ಹೊಂದಿದವರು! ಎನ್ನುವುದು ವಿಶೇಷ ಬೇಸರದ ಸಂಗತಿಯಾಗಿದೆ.

“ಈ ರೀತಿಯ ಅಪರಾಧಿಗಳನ್ನು ಬೇಟೆಯಾಡಲು ಒಂದಿಷ್ಟು ವಿಶೇಷ ಕ್ರಮಗಳು ಹಾಗೂ ವಿಶೇಷ ಸವಲತ್ತುಗಳು ಈ ಸೈಬರ್ ಕ್ರೈಂ ಪೊಲೀಸರಿಗೆ ಬೇಕು.” 1 ಮುಖ್ಯವಾಗಿ ಸೈಬರ್ ಠಾಣೆಗಳನ್ನು ಪ್ರತಿ ತಾಲೂಕಿಗೆ ಒಂದರಂತೆ ಮಾಡಬೇಕು.

2 ಸೈಬರ್ ಅಪರಾಧ ತಡೆಗೆ ಸೈಬರ್ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಬೇಕು.

3 ಸೈಬರ್ ಪೊಲೀಸರು ಅಂತರ್ – ರಾಜ್ಯ ಪ್ರಯಾಣಕ್ಕೆ ಬಸ್ಸು ಅಥವಾ ರೈಲಿನ ಮೇಲೆ ಹೋಗುವ ಬದಲಿಗೆ ವಿಮಾನದಲ್ಲೂ ಇವರಿಗೆ ಪ್ರಯಾಣಿಸುವ ಅಧಿಕಾರ ನೀಡಬೇಕು.

4 ಆಯಾರಾಜ್ಯದ ಸಿಬ್ಬಂದಿ ಇನ್ನೊಂದು ರಾಜ್ಯಕ್ಕೆ ತೆರಳಿ ಅಲ್ಲಿ ಅಪರಾಧಿಯನ್ನು ಹಿಡಿಯುವಂತಹ ನೀತಿಗಿಂತ; ಇಲ್ಲಿಯ ಮಾಹಿತಿಯನ್ನು ಆಧಾರವಾಗಿರಿಸಿ ಕೊಂಡು, ಇತರ ರಾಜ್ಯದ ಸೈಬರ್ ಪೊಲೀಸರು ತಕ್ಷಣ ಅಪರಾಧಿಯನ್ನು ಹುಡುಕುವ ಮತ್ತು ಬಂಧಿಸುವ ನೀತಿ ಜಾರಿಗೆ ಬರಬೇಕು.

5 ಇತರ ರಾಜ್ಯದ ಪೊಲೀಸರು ಸಂಪೂರ್ಣ ಸಹಕಾರ ನೀಡುವುದನ್ನು ಕಡ್ಡಾಯಗೊಳಿಸಬೇಕು.

6 ಅಂತರ್ ರಾಜ್ಯ ವ್ಯಕ್ತಿಗಳಲ್ಲಿ ಬ್ಯಾಂಕ್-ವ್ಯವಹಾರ ನಡೆದಾಗ ಮೊಬೈಲ್ಗಳಿಗೆ ಎಚ್ಚರದ ಸಂದೇಶ ಅಥವಾ ಕರೆ ಬರುವ ವ್ಯವಸ್ಥೆಯನ್ನು RBI ಕಡ್ಡಾಯಗೊಳಿಸಬೇಕು.

7 ನಿರಂತರವಾಗಿ ಹಣತೆಗೆಯಲು ಬಳಸುವ ಎಟಿಎಂ ಬಿಟ್ಟು, ಇತರ ಲೊಕೇಶನ್ ಗಳಲ್ಲಿ ಹಣ ತೆಗೆದದ್ದು ಕಂಡು ಬಂದಾಗಲೂ ವಿಶೇಷ ಮೊಬೈಲ್ ಸಂದೇಶವೋ, ಕರೆಯೋ ಬರುವಂತೆ ಮಾಡಬೇಕಿದೆ.

8 ಸೈಬರ್ ಅಪರಾಧಿಗಳಿಗೆ ಈಗಾಗಲೇ ಇರುವ ಶಿಕ್ಷೆಯ ಪ್ರಮಾಣವನ್ನು 3 ವರ್ಷದಿಂದ ಗರಿಷ್ಠ 10 ವರ್ಷಕ್ಕಾದರೂ ಏರಿಕೆ ಮಾಡಬೇಕು.

9 ಸೈಬರ್ ಅಪರಾಧದ ನ್ಯಾಯ ನಿರ್ವಹಣಾ ಕ್ರಮಗಳನ್ನು ಆರು ತಿಂಗಳ ಒಳಗಾಗಿ ಮುಗಿಸುವ ವಿಶೇಷ ನೀತಿ ಜಾರಿಗೆ ಬರಬೇಕು.

10 ಮೊಬೈಲ್ ಸಿಮ್ ವಿತರಣೆ ಮಾಡುವಾಗ ದಾಖಲೆಗಳನ್ನು ಸ್ವೀಕರಿಸಿಯೇ ಕೊಡಬೇಕು. ಈ ಕಡ್ಡಾಯವನ್ನು ಕೇಂದ್ರ ಮಟ್ಟದಿಂದ ನಿಖರ ಆದೇಶ ಹೊರಡಿಸಿ ಮಾಡಬೇಕು. ಕೆಲವು ರಾಜ್ಯಗಳಲ್ಲಿ ದಾಖಲೆ ರಹಿತವಾಗಿ ಪ್ರಸಾದ ಹಂಚಿದಂತೆ ಸಿಮ್ಮುಗಳನ್ನು ಹಂಚುತ್ತಿದ್ದಾರೆ ಎಂಬ ಸುದ್ದಿ ಇದೆ.

11 RBI small Bank account (basic account) [ವಲಸೆ ಜನರಿಗಾಗಿ ಮಾಡಿದಂತಹ ಖಾತೆ] ಯನ್ನು ತಕ್ಷಣದಿಂದಲೇ ನಿಲ್ಲಿಸಬೇಕು. ಈ ಅಪರಾಧಿಗಳಿಗೆ ಹಣವರ್ಗಾಯಿಸಲು ಈ ಖಾತೆಗಳ ಬಳಕೆ ಹೆಚ್ಚಾಗಿ ಆಗುತ್ತದೆ ಎಂದು ಸುದ್ದಿ ಇದೆ.

13 ಈ ರೀತಿ ಸೈಬರ್ ಅಪರಾಧಗಳು ತಿಂಗಳ 2ನೇ ಮತ್ತು 4ನೇ ವಾರದ ಬುಧವಾರ ಗುರುವಾರ ಆಗುವ ಸಾಧ್ಯತೆ ಹೆಚ್ಚು! ಎಂಬ ಅಂಶ ಗಮನಾರ್ಹ ಅಥವಾ ಸಾಲು ಸಾಲು ಸರಕಾರಿ ರಜೆಗಳು ಬಂದಾಗ ಇವುಗಳ ಸಾಧ್ಯತೆ ಹೆಚ್ಚಾಗುತ್ತದೆಯಂತೆ.

ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಆಗಿದ್ದರೂ ಕೂಡ ಈ ಸೈಬರ್ ಅಪರಾಧದ ಅಪರಾಧಿಗಳ ಮೂಲ ದೆಹಲಿ, ಉತ್ತರ ಪ್ರದೇಶ್, ಬಿಹಾರ್, ಪಶ್ಚಿಮ ಬಂಗಾಳ ರಾಜ್ಯಗಳೇ ಆಗಿವೆ ಎಂಬ ಅಂಬೋಣ ಸೈಬರ್ ತಜ್ಞರದ್ದು.

Published On - 11:08 am, Sun, 9 October 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ